MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಶ್ರಾವಣಿ ಸುಬ್ರಹ್ಮಣ್ಯ: ಶಿಕ್ಷಣ ಸಚಿವರಿಗೆ ಈ ವಯಸ್ಸಲ್ಲಿ ಶುರುವಾಯ್ತು ಕುಚುಕುಚು: ಮನೆಯವ್ರ ಕೈಗೆ ಸಿಕ್ಕಿಬಿದ್ರು

ಶ್ರಾವಣಿ ಸುಬ್ರಹ್ಮಣ್ಯ: ಶಿಕ್ಷಣ ಸಚಿವರಿಗೆ ಈ ವಯಸ್ಸಲ್ಲಿ ಶುರುವಾಯ್ತು ಕುಚುಕುಚು: ಮನೆಯವ್ರ ಕೈಗೆ ಸಿಕ್ಕಿಬಿದ್ರು

ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಶ್ರಾವಣಿ-ಸುಬ್ರಹ್ಮಣ್ಯ', 'ಅಮೃತಧಾರೆ', ಮತ್ತು 'ಭಾಗ್ಯಲಕ್ಷ್ಮಿ' ಮಧ್ಯವಯಸ್ಸಿನ ಪ್ರೇಮಕಥೆಗಳನ್ನು ಪ್ರದರ್ಶಿಸುತ್ತಿವೆ. ಈ ಕಥೆಗಳು ಸಮಾಜದ ಕಟ್ಟುಪಾಡುಗಳನ್ನು ಮೀರಿ, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶವನ್ನು ಸಾರುತ್ತಿದೆ.

2 Min read
Author : Suchethana D
Published : Apr 06 2026, 05:46 PM IST
Share this Photo Gallery
  • FB
  • TW
  • Linkdin
  • Whatsapp
16
ವಯಸ್ಸು ಮುಖ್ಯವಲ್ಲ!
Image Credit : Instagram

ವಯಸ್ಸು ಮುಖ್ಯವಲ್ಲ!

ವಯಸ್ಸು ಎನ್ನೋದು ಒಂದು ಸಂಖ್ಯೆ ಮಾತ್ರ. ಮನಸ್ಸು ಇದ್ದರೆ ಯಾವ ವಯಸ್ಸಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಮಾತಿದೆ. ಅದೇ ರೀತಿ ಪ್ರೀತಿಗೂ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ ಎನ್ನಲಾಗುತ್ತದೆ. ಒಂಟಿ ಜೀವನದಲ್ಲಿ ಬೇಸತ್ತಾಗ, ತನ್ನವರು ಎನ್ನುವ ಒಂದು ಆಸರೆ ಬೇಕು ಎಂದು ಯಾವ ವಯಸ್ಸಿನಲ್ಲಾದರೂ ಎನ್ನಿಸುವುದು ಉಂಟು. ಆದರೆ ಕುಟುಂಬ, ಮನೆ, ಮಕ್ಕಳು, ಸಮಾಜ ಎಂದೆಲ್ಲಾ ಅಂಜಿ ತಮ್ಮ ಆಸೆಗಳನ್ನು ಹುದುಗಿಸಿಟ್ಟುಕೊಂಡವರು ಅದೆಷ್ಟೋ ಮಂದಿ. ಆದರೆ ಈ ಎಲ್ಲಾ ಬಂಧಗಳನ್ನು ಮೀರಿ ಯಾವ ವಯಸ್ಸಿನಲ್ಲಾದರೂ ಮನಸ್ಸು ಮಾಡಿದರೆ ಲವ್​ ಮಾಡೋದು ತಪ್ಪಲ್ಲ ಎನ್ನುವುದನ್ನು ಕೆಲವು ಸೀರಿಯಲ್​ಗಳು ತೋರಿಸಿಕೊಡುತ್ತಿವೆ.

26
ಶಿಕ್ಷಣ ಸಚಿವರಿಗೆ ಕುಚುಕುಚು
Image Credit : Instagram

ಶಿಕ್ಷಣ ಸಚಿವರಿಗೆ ಕುಚುಕುಚು

ಇದೀಗ ಶ್ರಾವಣಿ- ಸುಬ್ರಹ್ಮಣ್ಯ (Shravani Subramanya Serial) ಸೀರಿಯಲ್​ನಲ್ಲಿ, ಶಿಕ್ಷಣ ಸಚಿವ ವೀರುಗೆ ಲವ್​ ಶುರುವಾಗಿದೆ. ಆತನ ಆರೋಗ್ಯವನ್ನು ನೋಡಿಕೊಳ್ಳಲು ಮಾರುವೇಷದಲ್ಲಿ ಬಂದಿದ್ದ ಪತ್ನಿ ನಂದಿನಿಯನ್ನೇ ವೀರು ಲವ್​ ಮಾಡ್ತಿದ್ದಾನೆ. ಆದರೆ ಸೀರಿಯಲ್​ನಲ್ಲಿ ಕೆಲವೊಮ್ಮೆ ವಿಚಿತ್ರ ಎನ್ನಿಸುವುದು ಉಂಟು. ಅದರಂತೆ ಇಲ್ಲಿಯೂ ವೀರುಗೆ ಅವಳು ತನ್ನ ಪತ್ನಿ ಎನ್ನುವುದು ತಿಳಿದಿಲ್ಲ. ಅವಳು ತನ್ನನ್ನು ತಾನು ಜಾನಕಿ ಎಂದು ಪರಿಚಯಿಸಿಕೊಂಡಿದ್ದಾಳೆ.

Related Articles

Related image1
Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ
Related image2
Amruthadhaare Serial: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್​ಗಳು?
36
ಜಾನಕಿ ಮೇಲೆ ಲವ್​
Image Credit : Instagram

ಜಾನಕಿ ಮೇಲೆ ಲವ್​

ಇದೀಗ ಜಾನಕಿ ತೋರುವ ಪ್ರೀತಿಗೆ ವೀರು ಫಿದಾ ಆಗಿದ್ದಾನೆ. ಅವಳ ಮೇಲೆ ಲವ್​ ಶುರುವಾಗಿದೆ. ಅವಳಿನ್ನೂ ಮಾಸ್ಕ್​ ವುಮೆನ್​ ಆಗಿಯೇ ಇದ್ದಾಳೆ. ವೀರು ತನ್ನ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದು, ತನ್ನ ಪತಿಯನ್ನೇ ಮತ್ತೆ ಸೇರುವ ಖುಷಿಯಲ್ಲಿ ಇದ್ದಾಳೆ ನಂದಿನಿ. ಈಕೆಯೇ ನಂದಿನಿ ಎಂದು ತಿಳಿದರೆ ಇನ್ನೇನು ಆಗುತ್ತದೆಯೋ ಮುಂದೆ ಸೀರಿಯಲ್​​ನಲ್ಲಿ ನೋಡಬೇಕಿದೆ ಅಷ್ಟೇ. ಒಟ್ಟಿನಲ್ಲಿ ಪ್ರೀತಿಗೆ ವಯಸ್ಸಲ್ಲ, ಮನಸ್ಸು ಮುಖ್ಯ ಎನ್ನೋದನ್ನು ತೋರಿಸಿದ್ದಾನೆ ವೀರು. ಆದರೆ ಈತನ ನಡವಳಿಕೆ ಮನೆಯವರಿಗೆ ಅನುಮಾನ ತರಿಸಿದೆ. 

46
ಒಪ್ಪಿಕೊಂಡ ಗೌತಮ್​- ಭೂಮಿಕಾ ಜೋಡಿ
Image Credit : Instagram

ಒಪ್ಪಿಕೊಂಡ ಗೌತಮ್​- ಭೂಮಿಕಾ ಜೋಡಿ

ಇದಾಗಲೇ ಅಮೃತಧಾರೆಯಲ್ಲಿ ಮಧ್ಯವಯಸ್ಸಿನ ಲವ್​ ಸ್ಟೋರಿ ತೋರಿಸಲಾಗಿದೆ. ಆದರೆ ಈ ಸೀರಿಯಲ್​ನಲ್ಲಿ ಇಬ್ಬರಿಗೂ ಮದುವೆಯಾಗಿರಲಿಲ್ಲ. ಆದ್ದರಿಂದ ಇದು ಸ್ವಲ್ಪ ಡಿಫರೆಂಟ್​ ಕಥೆ. ಮಧ್ಯ ವಯಸ್ಸಿನವರಾದರೂ ಮದುವೆಯಾದರೆ ಸುಂದರ ಸಂಸಾರ ಮಾಡಲು ಸಾಧ್ಯ ಎನ್ನುವ ಒಳ್ಳೆಯ ಸಂದೇಶವನ್ನು ಈ ಸೀರಿಯಲ್​ ಕೊಡುತ್ತಿದೆ.

56
ಶ್ರೀಮಸ್ತು ಶುಭಮಸ್ತು ತುಳಸಿ ಬಗ್ಗೆ ಕಿರಿಕ್​
Image Credit : Instagram

ಶ್ರೀಮಸ್ತು ಶುಭಮಸ್ತು ತುಳಸಿ ಬಗ್ಗೆ ಕಿರಿಕ್​

ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ತುಳಸಿ ಮತ್ತು ಮಾಧವ ಅವರ ಮದುವೆಯ ಬಗ್ಗೆ ತೋರಿಸಲಾಗಿತ್ತು. ಇದಕ್ಕೆ ಪರ- ವಿರೋಧ ನಿಲುವು ವ್ಯಕ್ತವಾಗಿತ್ತು. ಈ ವಯಸ್ಸಿನಲ್ಲಿ ಒಂಟಿತನ ಕಾಡುವಾಗ ಮದುವೆಯಾಗುವುದು ತಪ್ಪೇನಲ್ಲ, ಒಂದು ಜೀವದ ಆಸರೆ ಬೇಕು ಎನ್ನಿಸಿದಾಗ, ಹೀಗೆ ಮಾಡುವುದು ತಪ್ಪಲ್ಲ ಎಂದು ಹಲವರು ವಾದಿಸಿದ್ದರೆ, ಈ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳನ್ನು ಆಡಿಸಿಕೊಂಡು ಇರಬೇಕಾದ್ರೆ ಮದುವೆಯೆಲ್ಲಾ ಯಾಕೆ ಎನ್ನುವ ವಿರೋಧವೂ ವ್ಯಕ್ತವಾಗಿತ್ತು. ಅದಾದ ಬಳಿಕ ತುಳಸಿ ಪ್ರೆಗ್ನೆಂಟ್​ ಆದಾಗಲಂತೂ ಇನ್ನಿಲ್ಲದ ಟೀಕೆಗಳು ಬಂದಿದ್ದವು.

66
ಭಾಗ್ಯಲಕ್ಷ್ಮಿ ಸೀರಿಯಲ್​ ಸ್ಟೋರಿ
Image Credit : Jio hotstar

ಭಾಗ್ಯಲಕ್ಷ್ಮಿ ಸೀರಿಯಲ್​ ಸ್ಟೋರಿ

ಆ ಬಳಿಕ, ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಇಬ್ಬರು ಮಕ್ಕಳ ಅಮ್ಮ ಭಾಗ್ಯ, ಆದಿಯನ್ನು ಇಷ್ಟಪಟ್ಟಾಗ ಇದರ ವಿರುದ್ಧ ದೊಡ್ಡ ಆಂದೋಲನವೇ ನಡೆದು ಹೋಗಿದೆ ಸೋಷಿಯಲ್​ ಮೀಡಿಯಾದಲ್ಲಿ. ಅದರಲ್ಲಿ ಹಲವರ ಮನಸ್ಥಿತಿ ಹೇಗಿದೆ ಎಂದರೆ, ಭಾಗ್ಯಳ ಅಮ್ಮ ಸುನಂದಾ ರೀತಿ. ಗಂಡ ಎಷ್ಟೇ ಕೆಟ್ಟವನಾದರೂ, ಎಷ್ಟೇ ಅನಾಚಾರ ಮಾಡಿದರೂ, ಪತ್ನಿ ಮಕ್ಕಳನ್ನು ಬಿಟ್ಟು ಇನ್ನೊಬ್ಬಳ ಹಿಂದೆ ಹೋದರೂ, ಪತ್ನಿಯಾದವಳು ಮಾತ್ರ ಆತನನ್ನು ಕ್ಷಮಿಸಬೇಕು. ಅವಳಿಗೆ ಬದುಕುವ ಹಕ್ಕೂ ಇಲ್ಲ, ಬೇರೊಬ್ಬನನ್ನು ಪ್ರೀತಿ ಮಾಡುವ ಅಧಿಕಾರವೂ ಇಲ್ಲ ಎನ್ನುವ ಮನಸ್ಥಿತಿಯ ಕಮೆಂಟ್ಸ್​ಗಳು ಸಾಕಷ್ಟು ಬರುತ್ತಿವೆ. ಆದರೆ ಭಾಗ್ಯ ಅನುಭವಿಸಿರುವ ಹಿಂಸೆಯನ್ನು ಪ್ರತಿನಿತ್ಯ ಟಿವಿಯಲ್ಲಿ ನೋಡುವ ಇನ್ನು ಕೆಲವರು ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಮಧ್ಯ ವಯಸ್ಸಿನ ಪ್ರೀತಿಯ ಬಗ್ಗೆ ವಿಭಿನ್ನ ವಿಚಾರಧಾರೆಗಳ ಮನಸ್ಸುಗಳು ಹೇಗಿವೆ ಎನ್ನುವುದು ಈ ಸೀರಿಯಲ್​ ಮೂಲಕ ತಿಳಿಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶ್ರಾವಣಿ ಸುಬ್ರಮಣ್ಯ
ಕನ್ನಡ ಧಾರಾವಾಹಿ
ಟಿವಿ ಶೋ
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ
ಪ್ರೀತಿ

Latest Videos
Recommended Stories
Recommended image1
Amruthadhaare Serial: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್​ಗಳು?
Recommended image2
ಸೈಕೋ ಜಯಂತ್‌ಗೆ ನರಕ ತೋರಿಸಿದ ಜಾನು; ಇದು ಚಿನ್ನುಮರಿಯ 2.O ಅಧ್ಯಾಯ, ವೀಕ್ಷಕರು ಹ್ಯಾಪಿ
Recommended image3
ಪದೇ ಪದೇ ಗರ್ಭಪಾತ; ಪತ್ನಿ ಹಾಸಿಗೆ ಹಿಡಿದರೂ ಪರವಾಗಿಲ್ಲ, ಉಳಿಯಲಿ; ಪ್ರಾರ್ಥಿಸಿದ್ದ ಮಿಮಿಕ್ರಿ ಗೋಪಿ!
Related Stories
Recommended image1
Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ
Recommended image2
Amruthadhaare Serial: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್​ಗಳು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved