MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ವಿಜಯಾಂಬಿಕಾಗೆ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟ ಶ್ರಾವಣಿ: ಇದಪ್ಪಾ ಟ್ವಿಸ್ಟ್ ಅಂದ್ರು ವೀಕ್ಷಕರು!

ವಿಜಯಾಂಬಿಕಾಗೆ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟ ಶ್ರಾವಣಿ: ಇದಪ್ಪಾ ಟ್ವಿಸ್ಟ್ ಅಂದ್ರು ವೀಕ್ಷಕರು!

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ತನ್ನ ಕುಟುಂಬದೊಂದಿಗೆ ಮರಳಿದ್ದಾಳೆ. ಚಿಕ್ಕಮ್ಮ ವಂದನಾಳ ಸಂಕಷ್ಟದ ಬಗ್ಗೆ ತಿಳಿದುಕೊಂಡು, ವಿಜಯಾಂಬಿಕಾಳ ಆಟಕ್ಕೆ ಬ್ರೇಕ್ ಹಾಕಲು ಶ್ರಾವಣಿ ಮುಂದಾಗಿದ್ದಾಳೆ. ಇದರಿಂದ ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.

1 Min read
Mahmad Rafik
Published : May 27 2025, 02:20 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Zee Kannada

ಕಳೆದ ಕೆಲವು ವಾರಗಳಿಂದ ಮೊದಲ ಸ್ಥಾನದಲ್ಲಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಗೆ ರೋಚಕ ತಿರುವು ಪಡೆದುಕೊಂಡಿದೆ. ಅತ್ತೆ ವಿಜಯಾಂಬಿಕಾಳ ಆಟಕ್ಕೆ ಬ್ರೇಕ್ ಹಾಕಲು ಶ್ರಾವಣಿ ತವರಿಗೆ ಆಗಮಿಸಿದ್ದಾಳೆ. ಅತ್ತೆ-ಮಾವ, ಕಾಂತಮ್ಮ, ನಾದಿನಿ ಮತ್ತು ಆಕೆಯ ಮಕ್ಕಳೊಂದಿಗೆ ಶ್ರಾವಣಿ ತವರಿಗೆ ಆಗಮಿಸಿದ್ದಾಳೆ.

25
Image Credit : Zee Kannada

ಚಿಕ್ಕಮ್ಮ ವಂದನಾ ಸಂಕಷ್ಟದಲ್ಲಿರುವ ವಿಷಯ ಶ್ರಾವಣಿಗೆ ಗೊತ್ತಾಗಿದೆ. ಸುಂದರ ತನ್ನ ಪರವಾಗಿದ್ದಾನೆ ಎಂದು ನಂಬಿರುವ ವಿಜಯಾಂಬಿಕಾ ಶ್ರಾವಣಿ ಕುರಿತ ವಿಷಯಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಆದ್ರೆ ಶ್ರಾವಣಿ ಪರವಾಗಿ ಸುಂದರ ಕೆಲಸ ಮಾಡುತ್ತಿರೋದು ವಿಷಯ ಗೊತ್ತಿಲ್ಲ.

Related Articles

Related image1
40 ದಿನದಲ್ಲಿ 5ಕೆಜಿ ತೂಕ ಇಳಿಸಿದ ಶ್ರಾವಣಿ ಸುಬ್ರಮಣ್ಯದ ಪಿಂಕಿ! ವಿಡಿಯೋ ನೋಡಿ
Related image2
ಶ್ರಾವಣಿ ಸುಬ್ರಮಣ್ಯ ನಿರ್ದೇಶಕರಿಗೆ ಲಲಿತಾ ದೇವಿ ಆರೋಗ್ಯದ ಕಾಳಜಿ ಇಲ್ಲವಾ? ಅಜ್ಜಿಯೇ ಇಷ್ಟು ಗಟ್ಟಿನಾ?
35
Image Credit : Zee Kannada

ಸುಬ್ರಮಣ್ಯನನ್ನು ಮದುವೆಯಾಗಿ ಬಂದ ಶ್ರಾವಣಿ ಮನೆಯಲ್ಲಿ ಎಲ್ಲರಿಂದಲೂ ತಿರಸ್ಕೃತಳಾಗಿದ್ದಳು. ಇದೀಗ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿರುವ ಶ್ರಾವಣಿಯನ್ನು ಮನೆಯ ಸೊಸೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸುಬ್ರಮಣ್ಯ ಮನೆಯಲ್ಲಿನ ಸಮಸ್ಯೆಗಳು ನಿವಾರಣೆ ಆಗುತ್ತಿದ್ದಂತೆ ಧಾರಾವಾಹಿ ಹೊಸ ಆಯಾಮ ಪಡೆದುಕೊಳ್ಳುವ ಮೂಲಕ ಕುತೂಹಲ ಮೂಡಿಸಿದೆ.

45
Image Credit : Zee Kannada

ವಿಜಯಾಂಬಿಕಳ ಅಸಲಿ ಮುಖ ವಂದನಾಗೆ ಗೊತ್ತಾಗಿತ್ತು. ವಂದನಾಗೆ ಹುಚ್ಚು ಹಿಡಿದಿದೆ ಎಂದು ಎಲ್ಲರನ್ನು ವಿಜಯಾಂಬಿಕಾ ನಂಬಿಸಿದ್ದಾಳೆ. ವಿಜಯಾಂಬಿಕಾಳ ಮಾತು ನಂಬಿ ವೀರೇಂದ್ರ ಮತ್ತು ಸುರೇಂದ್ರ ವಂದನಾಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಮಗಳು ಪಿಂಕಿ ಭೇಟಿಗೂ ಸುರೇಂದ್ರ ಅವಕಾಶ ನೀಡುತ್ತಿಲ್ಲ. ಈ ಎಲ್ಲಾ ವಿಷಯವನ್ನು ಶ್ರಾವಣಿಗೆ ಹೇಳಲು ಪಿಂಕಿ ಪ್ರಯತ್ನಿಸಿದ್ದಕ್ಕೆ ತಂದೆಯಿಂದ ವಿರೋಧ ವ್ಯಕ್ತವಾಗಿತ್ತು.

55
Image Credit : Zee Kannada

ಮನೆಯಲ್ಲಿ ವಂದನಾ ಚಿಕ್ಕಮ್ಮ ಅಪಾಯದಲ್ಲಿರುವ ವಿಷಯ ತಿಳಿದುಕೊಂಡ ಶ್ರಾವಣಿ ತವರಿಗೆ ಬಂದಿದ್ದಾಳೆ. ಶ್ರಾವಣಿಯನ್ನು ನೋಡಿ ಶಾಕ್ ಆದ ವಿಜಯಾಂಬಿಕಾ ನಿನ್ನೊಬ್ಬಳಿಂದ ಏನು ಮಾಡಲು ಸಾಧ್ಯ ಅಂದಾಗ, ಶ್ರಾವಣಿ ತನ್ನ ಇಡೀ ಕುಟುಂಬ ಬರುತ್ತಿರೋದನ್ನು ತೋರಿಸುತ್ತಾಳೆ. ಈ ಸೀನ್ ನೋಡಿದ ವೀಕ್ಷಕರು, ಶ್ರಾವಣಿ ಫುಲ್ ಬೆಂಕಿ, ವಿಜಯಾಂಬಿಕಾ ಫುಲ್ ಥಂಡಾ ಎಂದು ಕಮೆಂಟ್ ಮಾಡುತ್ತಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜೀ ಕನ್ನಡ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved