MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ತೆಲುಗು ಝೀ ಕುಟುಂಬಂ ವೇದಿಕೆ ನೀಡಿದ ಸ್ಪೆಷಲ್ ಗಿಫ್ಟ್ ನೋಡಿ ಕಣ್ಣೀರಿಟ್ಟ ನಮ್ಮನೆ ಯುವರಾಣಿ ನಟ ರಘು

ತೆಲುಗು ಝೀ ಕುಟುಂಬಂ ವೇದಿಕೆ ನೀಡಿದ ಸ್ಪೆಷಲ್ ಗಿಫ್ಟ್ ನೋಡಿ ಕಣ್ಣೀರಿಟ್ಟ ನಮ್ಮನೆ ಯುವರಾಣಿ ನಟ ರಘು

ನಮ್ಮನೆ ಯುವರಾಣಿಯಲ್ಲಿ ಸಾಕೇತ್ ರಾಜ್ ಗುರು ಆಗಿ ಜನಪ್ರಿಯತೆ ಪಡೆದ ನಟ ರಘು ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.  ಇದೀಗ ಝೀಕುಟುಂಬ ವೇದಿಕೆ ನೀಡಿದ ವಿಶೇಷ ಉಡುಗೊರೆ ನೋಡಿ ನಟ ಭಾವುಕರಾಗಿದ್ದಾರೆ.  

2 Min read
Pavna Das
Published : Oct 17 2024, 12:15 PM IST| Updated : Oct 17 2024, 12:19 PM IST
Share this Photo Gallery
  • FB
  • TW
  • Linkdin
  • Whatsapp
18

ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಒಂದಾದ ನಮ್ಮನೆ ಯುವರಾಣಿಯಲ್ಲಿ (Nammane Yuvarani) ಸಾಕೇತ್ ರಾಜ್ ಗುರು ಆಗಿ ಜನಪ್ರಿಯತೆ ಪಡೆದ ನಟ ರಘು ಆಲಿಯಾಸ್ ರಾಘವೇಂದ್ರ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ತೆಲುಗು ಕಿರುತೆರೆಯ ಫೇವರಿಟ್ ಹೀರೋ ಕೂಡ ಆಗಿದ್ದಾರೆ. 
 

28

ರಘು ಸದ್ಯ ತೆಲುಗಿನ ಜನಪ್ರಿಯ ಧಾರಾವಾಹಿಯಾದ ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿಯಲ್ಲಿ ನಾಯಕ ಮಿತ್ರ ನಂದನ್ ಆಗಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ರಘು ತೆಲುಗು ಕಿರುತೆರೆಯ ಮೋಸ್ಟ್ ಲವಿಂಗ್ ನಾಯಕನಾಗಿ ಹೊರಹೊಮ್ಮಿದ್ದಾರೆ. 
 

38

ಕನ್ನಡದಲ್ಲಿ ಝೀ ಕುಟುಂಬ ಅವಾರ್ಡ್ಸ್ ಗೆ (Zee Kutumbam awards) ಕ್ಷಣಗಣನೆ ಆರಂಭವಾಗಿದೆ. ಅದಕ್ಕಾಗಿ ಎಲ್ಲಾ ರೀತಿಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಹಾಗೆಯೇ ತೆಲುಗಿನಲ್ಲೂ ಕೂಡ ಝೀ ಕುಟುಂಬಂ ಅವಾರ್ಡ್ ಕಾರ್ಯಕ್ರಮ ನಡೆದಿತ್ತು, ಕಾರ್ಯಕ್ರಮದ ಒಂದಿಷ್ಟು ಪ್ರೊಮೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. 
 

48

ಇತ್ತೀಚೆಗೆ ಒಂದು ಪ್ರೊಮೊವನ್ನು ಝೀ ತೆಲುಗು ಪ್ರಸಾರ ಮಾಡಿದ್ದು, ಅದರಲ್ಲಿ ನಟ ರಘುವಿಗೆ ಝೀ ಕುಟುಂಬಂ ವೇದಿಕೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಆ ಸ್ಪೆಷಲ್ ಗಿಫ್ಟ್ ನೋಡಿ ರಘು ಭಾವುಕರಾಗಿದ್ದು, ಕಣ್ಣೀರಿಟ್ಟಿದ್ದಾರೆ, ನೋಡುಗರ ಕಣ್ಣಲ್ಲೂ ನೀರು ತಂದಿದ್ದಾರೆ. 
 

58

ಅಷ್ಟಕ್ಕೂ ಝೀ ಕುಟುಂಬಂ ವೇದಿಕೆ ರಘುಗೆ ನೀಡಿದ ಗಿಫ್ಟ್ ಆದ್ರೂ ಏನು ಗೊತ್ತಾ? ರಘು ತಂದೆಯ ಪುತ್ಥಳಿ. ಹೌದು ಪ್ರಶಸ್ತಿ ಕೈಯಲ್ಲಿ ಹಿಡಿದಿರುವ ರಘುವಿನ ಬಗ್ಗೆ ಮಾತನಾಡುತ್ತಾ ಆಂಕರ್ ಹೇಳ್ತಾರೆ, ಯಾವಾಗ್ಲೂ ನಮ್ಮ ಬಗ್ಗೆ ಯೋಚನೆ ಮಾಡೋ ರಘುವಿಗೆ ನಮ್ಮ ಕಡೆಯಿಂದ ಗಿಫ್ಟ್ ಎನ್ನುತ್ತಾ, ಕಣ್ಣಿಗೆ 3ಡಿ ವಿಆರ್ ನ್ನು ಕಟ್ಟಿದ್ದಾರೆ. ಅದರಲ್ಲಿ ರಘು ತಮ್ಮ ತಂದೆಯ ಜೊತೆಗಿರುವ ಫೋಟೊಗಳು ಪ್ರಸಾರವಾಗಿವೆ. 
 

68

ಅಷ್ಟೇ ಅಲ್ಲ ರಘುವಿಗೆ ಉಡುಗೊರೆಯಾಗಿ ಅವರ ತಂದೆಯ ಪುತ್ಥಳಿಯನ್ನು ನೀಡಿದ್ದಾರೆ. ಇದನ್ನ ನೊಡಿ ಭಾವುಕರಾದ ರಘು ತಂದೆಯನ್ನು ನೆನೆಯುತ್ತಾ ತಮಗೆ ಎಷ್ಟೇ ಕಷ್ಟ ಇದ್ದರೂ ಅದನ್ನ ಎದುರಿಗೆ ತೋರಿಸದೇ ನಮ್ಮನ್ನ ನೋಡ್ಕೊಂಡಿದ್ದಾರೆ, ಅವರನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಅವರೇ ನಮ್ಮನ್ನ ಬಿಟ್ಟು ಹೋದರು ಎಂದು ಕಣ್ಣೀರಿಟ್ಟರು ರಘು. 
 

78

ಜೊತೆಗೆ ಅಪ್ಪನ ಪುತ್ಥಳಿ ಜೊತೆ ತಮಗೆ ಸಿಕ್ಕ ಪ್ರಶಸ್ತಿಯನ್ನು ಇಟ್ಟು, ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಅಪ್ಪನನ್ನು ನೆನೆದು ಭಾವುಕರಾದ ರಘುವನ್ನ ನೋಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಹಲವರು ಕಣ್ಣಲ್ಲೂ ಕಣ್ಣೀರು ಧಾರೆಯಾಗಿ ಹರಿದು ಬಂದಿತ್ತು. ಒಟ್ಟಲ್ಲಿ ಝೀ ತೆಲುಗು ಕುಟುಂಬಂ ವೇದಿಗೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. 

88

ಕನ್ನಡ ಕಿರುತೆರೆಗೆ ರಾಧಾ ಕಲ್ಯಾಣ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟ ರಘು, ಬಳಿಕ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ರಂಗೇಗೌಡರಾಗಿ ಮಿಂಚಿದ್ದರು, ಈ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸಿದ ನಟಿ ಅಮೃತಾ ರಾಮಮೂರ್ತಿ ಅವರನ್ನ ಮದುವೆಯಾದರು, ಬಳಿಕ ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಸಾಕೇತ್ ಪಾತ್ರದ ಮೂಲಕ ಜನಮನ ಗೆದ್ದರು. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved