- Home
- Entertainment
- TV Talk
- ತಂದೆ ಕಳೆದುಕೊಂಡು ಖಿನ್ನತೆಗೆ ಜಾರಿದ ಕಿರುತೆರೆ ನಟಿ ರತನ್; ಕೃಷಿ ಕೈಗೆತ್ತಿಕೊಂಡಿದ್ದು ಯಾಕೆ?
ತಂದೆ ಕಳೆದುಕೊಂಡು ಖಿನ್ನತೆಗೆ ಜಾರಿದ ಕಿರುತೆರೆ ನಟಿ ರತನ್; ಕೃಷಿ ಕೈಗೆತ್ತಿಕೊಂಡಿದ್ದು ಯಾಕೆ?
ಸಂತೋಷಿ ಮಾ ಧಾರಾವಾಹಿ ನಟಿ ರತನ್ ರಜಪೂತ್ ಜೀವನದ ಸತ್ಯವೊಂದು ಹೊರ ಬಂದಿದೆ. ಖಿನ್ನತೆಯಿಂದ ಹೇಗೆ ಬರ ಬಂದ್ದರು?

ಹಿಂದಿ ಕಿರುತೆರೆ ಜನಪ್ರಿಯ ನಟಿ ರತನ್ ರಜಪೂತ್ ಹಲವು ವರ್ಷಗಳ ನಂತರ ಮತ್ತೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದ್ದಕ್ಕಿಂತ ಎಲ್ಲಾ ಬಿಟ್ಟು ದೂರ ಉಳಿಯಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ
ಹತ್ತಾರು ಹಿಂದಿ ಧಾರಾವಾಹಿಗಳಲ್ಲಿ ನಟಿಸಿರುವ ರತನ್ ರಜಪೂತ್ 2011ರಲ್ಲಿ ರತನ್ ಖೀ ರಿಷ್ತಾ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಸ್ವಯಂವರದ ರೀತಿಯಲ್ಲಿ ವಿನ್ನರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು ಆದರೆ ಮದುವೆ ಆಗಲಿಲ್ಲ.
ಈ ನಡುವೆ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಗೆ ಕಾಂಟ್ರವರ್ಸಿಗೆ ಸಿಲುಕಿಕೊಂಡರು. ಇದಾದ ನಂತರ ಹಲವು ವರ್ಷಗಳ ಕಾಲ ರತನ್ ರಜಪೂತ್ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಯಾಕೆ ಎಂದು ಈಗ ಸ್ಪಷ್ಟನೆ ಕೊಟ್ಟಿದ್ದಾರೆ.
'2018ರಲ್ಲಿ ನನ್ನ ಧಾರಾವಾಹಿ ಮುಗಿದ ನಂತರ ನನ್ನ ತಂದೆನ ಕಳೆದುಕೊಂಡೆ ಆ ಕ್ಷಣ ನನ್ನ ಜೀವನದಲ್ಲಿ ಮರೆಯಲು ಆಗುವುದಿಲ್ಲ ಕುಸಿದು ಬಿಟ್ಟೆ. ಖಿನ್ನತೆ ಒಳಗಾಗಿ ಏನೂ ಮಾಡಲು ಮನಸ್ಸು ಇರಲಿಲ್ಲ' ಎಂದು ಇಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ವೈದ್ಯರನ್ನು ಸಂಪರ್ಕಿಸಿದ್ದಾಗ ಚಿಕಿತ್ಸೆ ಜೊತೆಗೆ ಫಾರ್ಮಿಂಗ್ ಸಲಹೆ ಕೊಟ್ಟರಂತೆ ಹೀಗಾಗಿ ಮುಂಬೈ ಬಿಟ್ಟು ಊರಿನ ಕಡೆ ನಡೆದಿದ್ದಾರೆ.
'ಹಳ್ಳಿಯಲ್ಲಿ ಮೂರು ತಿಂಗಳು ಫಾರ್ಮಿಂಗ್ ಮಾಡಿದಕ್ಕೆ ಮನಸ್ಸು ಹಗುರವಾಯ್ತು. ಹಳ್ಳಿ ಜನರು ಮುಗ್ಧರು ಯಾವ ನಾಟಕ ಅಡಂಬರ ಇಲ್ಲದೆ ಜೀವನ ನಡೆಸುತ್ತಾರೆ'
'3 ತಿಂಗಳು ಜೀವನ ಎಂಜಾಯ್ ಮಾಡಿ ಅರ್ಥ ಮಾಡಿಕೊಂಡು ಮತ್ತೆ ಮುಂಬೈಗೆ ಮರಳಿರುವೆ. ನಾಲ್ಕು ವರ್ಷವಾಯ್ತು ಬಣ್ಣದ ಲೋಕದಿಂದ ಊರ ಉಳಿದುಕೊಂಡು ಹೀಗಾಗಿ ಕಮ್ ಬ್ಯಾಕ್ಗೆ ಪ್ಲ್ಯಾನ್ ಮಾಡುತ್ತಿರುವೆ' ಎಂದು ರತನ್ ಹೇಳಿದ್ದಾರೆ.