MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Puttakkana Makkalu: ಸತ್ತು ಹೋಗಿ ಚಿತೆ ಏರಿದ್ದ ಬಂಗಾರಮ್ಮ ದಿಢೀರ್​ ಜೀವಂತ! ಟ್ವಿಸ್ಟ್​ ಅಂದ್ರೆ ಇದಪ್ಪಾ

Puttakkana Makkalu: ಸತ್ತು ಹೋಗಿ ಚಿತೆ ಏರಿದ್ದ ಬಂಗಾರಮ್ಮ ದಿಢೀರ್​ ಜೀವಂತ! ಟ್ವಿಸ್ಟ್​ ಅಂದ್ರೆ ಇದಪ್ಪಾ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ, ಬಿಗ್‌ಬಾಸ್‌ಗೆ ಹೋಗಿದ್ದ ಕಾರಣಕ್ಕೆ ಸತ್ತುಹೋಗಿದ್ದ ಬಂಗಾರಮ್ಮನ ಪಾತ್ರವು ಇದೀಗ ಸುಮಾಳ ಮದುವೆಯಲ್ಲಿ ಅಚ್ಚರಿಯ ರೀತಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಕಂಠಿಯು ಆಕೆಯ ಖುರ್ಚಿಯನ್ನು ಮದುವೆ ಮಂಟಪಕ್ಕೆ ತರುವ ಮೂಲಕ,  ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

1 Min read
Suchethana D
Published : Dec 03 2025, 11:59 AM IST
Share this Photo Gallery
  • FB
  • TW
  • Linkdin
  • Whatsapp
16
ಪುಟ್ಟಕ್ಕನ ಮಕ್ಕಳು ಸರ್ಕಸ್​
Image Credit : zee Kannada

ಪುಟ್ಟಕ್ಕನ ಮಕ್ಕಳು ಸರ್ಕಸ್​

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್​ ಒಂದು ಸಮಯದಲ್ಲಿ ಟಾಪ್​ 1ನಲ್ಲಿತ್ತು. ಆದರೆ ಕ್ರಮೇಣ ಸ್ನೇಹಾ ಪಾತ್ರಧಾರಿಯಾಗಿರುವ ಸಂಜನಾ ಬುರ್ಲಿ ಸೀರಿಯಲ್​ ಬಿಟ್ಟಿದ್ದರಿಂದ ಆ ಪಾತ್ರವನ್ನು ಸಾಯಿಸಿದಾಗಲೇ ಈ ಸೀರಿಯಲ್​ ಡೌನ್​ ಆಗಲು ಶುರುವಾಯಿತು. ಕೊನೆಗೆ ಧಾರಾವಾಹಿಯಲ್ಲಿ ಏನೇನೋ ಸರ್ಕಸ್​ ನಡೆಯುತ್ತಲೇ ಇದೆ.

26
ಬಿಗ್​ಬಾಸ್​ನಿಂದ ಸೀರಿಯಲ್​ಗೆ ಪೆಟ್ಟು
Image Credit : Asianet News

ಬಿಗ್​ಬಾಸ್​ನಿಂದ ಸೀರಿಯಲ್​ಗೆ ಪೆಟ್ಟು

ಇದರ ಮಧ್ಯೆಯೇ, ಮತ್ತೊಬ್ಬ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಬಂಗಾರಮ್ಮನ ಪಾತ್ರವನ್ನೂ ಸಾಯಿಸಲಾಯಿತು. ಇದಕ್ಕೆ ಕಾರಣ, ಬಂಗಾರಮ್ಮ ಪಾತ್ರ ಮಾಡುತ್ತಿದ್ದ ಮಂಜು ಭಾಷಿಣಿ ಅವರು ಬಿಗ್​ಬಾಸ್​ 12 (Bigg Boss 12)ಗೆ ಎಂಟ್ರಿ ಕೊಟ್ಟಿದ್ದು!

Related Articles

Related image1
Karna Serial: ಮುಚ್ಚಿಟ್ಟ ಪ್ರೀತಿಯ ಸತ್ಯ ನಿತ್ಯಾ ಮುಂದೆ ರಿವೀಲ್​ ಮಾಡುವಷ್ಟರಲ್ಲಿಯೇ ಆಗಬಾರದ್ದು ಆಗೋಯ್ತು!
Related image2
Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?
36
ಬಂಗಾರಮ್ಮನ ಸಾವು
Image Credit : Instagram

ಬಂಗಾರಮ್ಮನ ಸಾವು

ಅವರು ಕೆಲವೇ ದಿನಗಳಲ್ಲಿ ಬಿಗ್​ಬಾಸ್​​ನಿಂದ ಹೊರಕ್ಕೆ ಬಂದರು. ಆದರೆ, ಅದಾಗಲೇ ಅವರ ಸಾಯುವ ಶೂಟಿಂಗ್​ ಎಲ್ಲಾ ನಡೆದಿದ್ದರಿಂದ ಅವರು ಹೊರಕ್ಕೆ ಬಂದು ವಾಪಸ್​ ಸೀರಿಯಲ್​ಗೆ ಸೇರುವ ಸಾಧ್ಯತೆ ಇದ್ದರೂ, ಎಲ್ಲ ಸೀನ್​ಗಳನ್ನು ಮೊದಲೇ ಶೂಟ್​ ಮಾಡಿದ್ದರಿಂದ ಅನಿವಾರ್ಯವಾಗಿ ಆ ಪಾತ್ರವನ್ನು ಸಾಯಿಸಲಾಯಿತು.

46
ಸುಮಾಳ ಮದುವೆ
Image Credit : Instagram

ಸುಮಾಳ ಮದುವೆ

ಇದೀಗ ಪುಟ್ಟಕ್ಕನ ಕಿರಿಯ ಮಗಳು ಸುಮಾಳ ಮದುವೆ ಸಂಭ್ರಮ ನಡೆಯುತ್ತಿದೆ. ಭರ್ಜರಿ ಟ್ವಿಸ್ಟ್​ ಒಂದು ಈ ಮದುವೆಯಲ್ಲಿ ಸಿಕ್ಕಿದೆ. ಅದೇನೆಂದರೆ, ಸತ್ತು ಚಿತೆ ಏರಿದ್ದ ಬಂಗಾರಮ್ಮ ಅರ್ಥಾತ್​ ಮಂಜು ಭಾಷಿಣಿ ಮತ್ತೊಮ್ಮೆ ಪ್ರತ್ಯಕ್ಷ ಆಗಿದ್ದಾರೆ!

56
ಬಂಗಾರಮ್ಮನ ಖುರ್ಚಿ
Image Credit : Instagram

ಬಂಗಾರಮ್ಮನ ಖುರ್ಚಿ

ಹಾಗೆಂದು ಸೀರಿಯಲ್​ನಲ್ಲಿ, ಬಂಗಾರಮ್ಮ ಜೀವಂತವಾಗಿ ಬರಲಿಲ್ಲ. ಆದರೆ ಬಂಗಾರಮ್ಮನ ಅನುಪಸ್ಥಿತಿ ಕಾಣಬಾರದು ಎನ್ನುವ ಕಾರಣಕ್ಕೆ ಆಕೆ ಬಳಸುತ್ತಿರುವ ಖುರ್ಚಿಯನ್ನು ಮದುವೆಯ ದಿನ ತಂದು ಇಟ್ಟಿದ್ದಾನೆ ಕಂಠಿ. ಆದರೆ ಅದರ ಮೇಲೆ ಬಂಗಾರಮ್ಮ ಕುಳಿತಿರುವಂತೆ ತೋರಿಸಲಾಗಿದೆ.

66
ಅಭಿಮಾನಿಗಳ ಖುಷಿ
Image Credit : Instagram

ಅಭಿಮಾನಿಗಳ ಖುಷಿ

ಒಟ್ಟಿನಲ್ಲಿ ಬಂಗಾರಮ್ಮನ ಪಾತ್ರಕ್ಕೆ ಇರುವ ತೂಕ ಕಡಿಮೆಯಾಗಬಾರದು ಎನ್ನುವ ಕಾರಣಕ್ಕೆ ಆಕೆಯ ಉಪಸ್ಥಿತಿ ಮದುವೆಯಲ್ಲಿ ಇರುವಂತೆ ತೋರಿಸಲಾಗಿದ್ದು, ಮತ್ತೊಮ್ಮೆ ನಟಿ ಮಂಜು ಭಾಷಿಣಿ ಸೀರಿಯಲ್​ನಲ್ಲಿ ಈ ರೀತಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಪ್ರೊಮೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಪುಟ್ಟಕ್ಕನ ಮಕ್ಕಳು
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಗಿಲ್ಲಿ ನಟ ಗೆದ್ರೆ ವಿಶೇಷತೆ ಇಲ್ಲ, ಆದ್ರೆ ಈ ಸ್ಪರ್ಧಿ ಗೆದ್ರೆ ಇತಿಹಾಸ ಎಂದ ಆರ್‌ಜೆ ಅಮಿತ್
Recommended image2
BBK 12: ಜಿದ್ದಾಜಿದ್ದಿನ ಆಟದಲ್ಲಿ ಬಯಲಾಯ್ತು ಗಿಲ್ಲಿ ಮೋಸದಾಟ; ಚೀಪ್ ಗಿಮಿಕ್ ಎಂದ ವೀಕ್ಷಕರು
Recommended image3
ಕೊನೆಗೂ ವಂಶದ ಕುಡಿ ಬೆನ್ನಿಗೆ ಚೂರಿ ಇರಿದ ಗಿಲ್ಲಿ ನಟ; ಕಾರಣ ಕೊಟ್ಟಿದ್ದು ಸಮಾಧಾನ ಆಯ್ತಾ?
Related Stories
Recommended image1
Karna Serial: ಮುಚ್ಚಿಟ್ಟ ಪ್ರೀತಿಯ ಸತ್ಯ ನಿತ್ಯಾ ಮುಂದೆ ರಿವೀಲ್​ ಮಾಡುವಷ್ಟರಲ್ಲಿಯೇ ಆಗಬಾರದ್ದು ಆಗೋಯ್ತು!
Recommended image2
Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved