MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ನಾವು ನಮ್ಮವರು ಮೂಲಕ‌ ಕಿರುತೆರೆಗೆ ಎಂಟ್ರಿ ಕೊಟ್ಟ ಅಮೂಲ್ಯ, ಶರಣ್… ಜೊತೆಯಾದ ತಾರಾ

ನಾವು ನಮ್ಮವರು ಮೂಲಕ‌ ಕಿರುತೆರೆಗೆ ಎಂಟ್ರಿ ಕೊಟ್ಟ ಅಮೂಲ್ಯ, ಶರಣ್… ಜೊತೆಯಾದ ತಾರಾ

ಝೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವ ನಾವು ನಮ್ಮವರು ಆರಂಭವಾಗಿದ್ದು ಈಗಾಗಲೇ ಪ್ರೊಮೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. 

2 Min read
Pavna Das
Published : Jul 28 2025, 05:15 PM IST| Updated : Jul 29 2025, 10:47 AM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಅತ್ಯುತ್ತಮ ಧಾರಾವಾಹಿಗಳು, ರಿಯಾಲಿಟಿ ಶೋಗಳ ಮೂಲಕ ಮನರಂಜಿಸುತ್ತಾ ಬಂದಿರುವ ಝೀ ಕನ್ನಡದಲ್ಲಿ (Zee Kannada) ಈಗಷ್ಟೇ ಭರ್ಜರಿ ಬ್ಯಾಚುಲರ್ ಕೊನೆಯಾಗಿದೆ, ಅಷ್ಟರಲ್ಲೇ ಹೊಸ ರಿಯಾಲಿಟಿ ಶೋ ಕುರಿತು ಪ್ರೊಮೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

27
Image Credit : Asianet News

ಹೌದು, ಝೀ ಕನ್ನಡ ವಾಹಿನಿಯು ಈಗ ‘ನಾವು ನಮ್ಮವರು’ ರಿಯಾಲಿಟಿ (reality show) ಶೋ ಮೂಲಕ ಜನರಿಗೆ ಮನರಂಜನೆ ನೀಡಲು ಮುಂದಾಗಿದೆ. ಸಂಬಂಧಗಳು ನಿಜವಾಗಿರೋ ಕಥೆಗಳನ್ನು ಮರೆಯಲಾಗದು! ಪ್ರೀತಿ, ನಗು, ಒಗ್ಗಟ್ಟು ಹಾಗೂ ಬಾಂಧವ್ಯದ ಕ್ಷಣಗಳನ್ನು ಹೊತ್ತು ಬರ್ತಿದೆ...ನಾವು ನಮ್ಮವರು ಎನ್ನುತ್ತಾ ಪ್ರೊಮೋ ರಿಲೀಸ್ ಮಾಡಲಾಗಿದೆ.

Related Articles

Related image1
Zee Kannada Auditions: ನಟನಾಸಕ್ತರಿಗೆ ಸುವರ್ಣಾವಕಾಶ: ಸೀರಿಯಲ್ & ರಿಯಾಲಿಟಿ ಶೋಗೆ ಆಹ್ವಾನ- ಡಿಟೇಲ್ಸ್​ ಇಲ್ಲಿದೆ...
Related image2
Zee Kannada: ಮಹಾನಟಿ ಸೀಸನ್‌ 2, ಕರ್ಣ ಧಾರಾವಾಹಿ ಪ್ರಸಾರ ಆಗೋದ್ಯಾವಾಗ? ತ್ರಿಕೋನ ಪ್ರೇಮಕಥೆಗೆ ಕಾದುಕುಳಿತ ವೀಕ್ಷಕರು!
37
Image Credit : Asianet News

ಈ ಹೊಸ ರಿಯಾಲಿಟಿ ಶೋನಲ್ಲಿ ನಟಿಯರಾದ ತಾರಾ (Tara Anuradha), ಅಮೂಲ್ಯ ಹಾಗೂ ನಟ ಶರಣ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಪ್ರೊಮೋ ಸಖತ್ ವಿಭಿನ್ನವಾಗಿದ್ದು, ಬಿಡುಗಡೆಯಾದ ಪ್ರೊಮೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ.

47
Image Credit : Asianet News

ಪ್ರೊಮೋದಲ್ಲಿ ಹುಬ್ಬಳ್ಳಿ ಸುರಂಗದ ಮೂಲಕ ಸಾಗುವ ರೈಲಿನಲ್ಲಿ ಶರಣ್ ಹಾಗೂ ತಾರಾ ತಿಂಡಿಯನ್ನು ಹಂಚಿಕೊಳ್ಳುತ್ತಾ, ಹಳೆಯ ಕಥೆಗಳನ್ನು ಹೇಳುತ್ತಾ ಸಾಗುತ್ತಾರೆ. ಮನೆಗೆ ಬಂದವರಿಗೆ ಒಂದು ತುತ್ತಾದರೂ ತಿನಿಸಬೇಕು ಎಂದು ನಮ್ಮ ಅತ್ತೆ ಯಾವಾಗಲೂ ಹೇಳುವವರು ಎನ್ನುವ ತಾರಾ, ಊರಲ್ಲಿ ದಾರಿಯಲ್ಲಿ ಸಿಕ್ಕಿದವರನ್ನೆಲ್ಲಾ ಟ್ರಾಕ್ಟರ್ ಗೆ ಹತ್ತಿಸಿ, ಹಳೆಯ ಚಿತ್ರ ಗೀತೆ ಕೇಳುತ್ತಾ, ಅಮ್ಮ ಕೊಟ್ಟ ಬುತ್ತಿ ತಿನ್ನುವ ನೆನೆಪೇ ಚೆಂದ ಎನ್ನುತ್ತಾರೆ ಶರಣ್ (Sharan).

57
Image Credit : Asianet News

ಮತ್ತೊಂದು ಸಲ ತಾರಾ ಅಜ್ಜಿಯನ್ನು ನೆನಪಿಸುತ್ತಾ ನಮ್ಮ ಅಜ್ಜಿ ತಲೆಗೆ ತುಬಾ ಹೆಣ್ಣೆ ಹಚ್ಚಿ, ಹಂಡೆ ತುಂಬಾ ಬಿಸಿ ನೀರು ಮಾಡಿ ಸ್ನಾನ ಮಾಡಿಸುತ್ತಿದ್ದರು ಎಂದರೆ, ಶರಣ ನಾವೆಲ್ಲಾ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ಜೊತೆಯಾಗಿ ಬಾವಿಗೆ ಬಿದ್ವಿ ಅಂದ್ರೆ ಅದೇ ನಮಗೆ ಸ್ನಾನ ಎಂದು ನಗುತ್ತಾರೆ. ಆವಾಗ ಎಂಟ್ರಿ ಕೊಡುವ ಅಮೂಲ್ಯ (Amulya) ಬಾಲ್ಯದಲ್ಲಿ ಮಾವನ ಮಕ್ಕಳ ಜೊತೆ ಸೇರಿ ಹೂವು ಕಟ್ಟಿದ ನೆನಪನ್ನು ಹೇಳುತ್ತಾರೆ.

67
Image Credit : Asianet News

ಈವಾಗ ಶರಣ್ ನಾವು ನಮ್ಮವರ ಜೊತೆ ಊರಲ್ಲಿ ಇದ್ದು ಬಿಟ್ರೆ ಎಷ್ಟು ಚೆಂದ ಅಲ್ವಾ? ಎನ್ನುತ್ತಾರೆ. ಕೊನೆಗೆ ಎಲ್ಲರೂ ಊರು ತಲುಪುತ್ತಾರೆ. ಸ್ಟೆಷನ್ ನಲ್ಲಿ ಅವರನ್ನು ಸ್ವಾಗತಿಸಲು ಅಜ್ಜ ಅಜ್ಜಿಯಿಂದ ಹಿಡಿದು ಪುಟ್ಟ ಮಕ್ಕಳವರೆಗೂ ನೆರೆದಿರುತ್ತಾರೆ. ಆ ಮೂಲಕ ಇದು ಸಂಬಂಧಗಳ ಸಂಭ್ರಮ ಸಾರುವ ಹಬ್ಬ ಎಂದು ತೋರಿಸಿಕೊಟ್ಟಿದ್ದಾರೆ.

77
Image Credit : Asianet News

ನಾವು ನಮ್ಮವರು (Navu Nammavaru) ರಿಯಾಲಿಟಿ ಶೋ ಇದೇ ಆಗಸ್ಟ್ 2ರಿಂದ ಆರಂಭವಾಗಲಿದ್ದು, ಯಾವ ರೀತಿ ಶೋ ಮೂಡಿ ಬರಲಿದೆ. ಈ ರಿಯಾಲಿಟಿ ಶೋಗೆ ಯಾರು ನಿರೂಪಕರಾಗಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರಿಯಾಲಿಟಿ ಶೋ
ಜೀ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved