MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಕೊನೆಗೂ ಕಾವೇರಿ ಮುಖವಾಡ ಕಳಚಿ ಬೀಳುತ್ತಾ?ಲಕ್ಷ್ಮಿಗೆ ಮತ್ತೆ ಸೋಲಾಗುತ್ತಾ?... ಗೋವಿಂದ ಗೋವಿಂದಾ ಅಂತಿದ್ದಾರೆ ಜನ!

ಕೊನೆಗೂ ಕಾವೇರಿ ಮುಖವಾಡ ಕಳಚಿ ಬೀಳುತ್ತಾ?ಲಕ್ಷ್ಮಿಗೆ ಮತ್ತೆ ಸೋಲಾಗುತ್ತಾ?... ಗೋವಿಂದ ಗೋವಿಂದಾ ಅಂತಿದ್ದಾರೆ ಜನ!

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೊನೆಗೂ ಕೀರ್ತಿ ಸಾವಿನ ರಹಸ್ಯ ಲಕ್ಷ್ಮೀ ಕೈ ಸೇರಿದೆ. ಎಲ್ಲರೆದುರು ಲಕ್ಷ್ಮೀ ಕಾವೇರಿಯ ಮುಖವಾಡ ಕಳಚಲು ಸಿದ್ಧಳಾಗಿದ್ದಾಳೆ. ಆದ್ರೆ ನಿಜವಾಗ್ಲೂ ಕಾವೇರಿಯ ನಾಟಕ ಬಯಲಾಗುತ್ತಾ? ಚಾನ್ಸೇ ಇಲ್ಲ ಅಂತಿದ್ದಾರೆ ಜನ.  

2 Min read
Pavna Das
Published : Oct 03 2024, 04:01 PM IST| Updated : Oct 03 2024, 05:19 PM IST
Share this Photo Gallery
  • FB
  • TW
  • Linkdin
  • Whatsapp
17

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳು ಕಂಡುಬರುತ್ತಿದೆ. ಗಣೇಶ ಚತುರ್ಥಿಯ ದಿನ ಮನೆಗೆ ಬಂದ ಮಹಾದೇವಯ್ಯನ ಕೈಯಲ್ಲಿದ್ದ ಕೀರ್ತಿಯ ಕ್ಯಾಮೆರಾ, ಈಗ ಲಕ್ಷ್ಮೀ ಕೈ ಸೇರಿದೆ. ಲಕ್ಷ್ಮೀ ಎಲ್ಲವನ್ನೂ ನೋಡಿದ್ದೂ ಆಗಿದೆ. ಕೀರ್ತಿಯ ಸಾವಿನ ರಹಸ್ಯ ಲಕ್ಷ್ಮೀ ಮುಂದೆ ಬಯಲಾಗಿದ್ದು ಆಗಿದೆ. 
 

27

ಕಾವೇರಿ ಇಲ್ಲಿವರೆಗೆ ತನಗೆ ಕೀರ್ತಿಯ ಸಾವಿಗೆ ಸಂಬಂಧವೇ ಇಲ್ಲದಂತೆ ಬದುಕುತ್ತಿದ್ದಳು. ಅವಳು ಅವತ್ತೆ ಬೆಟ್ಟದಿಂದ ಎಲ್ಲೋ ಓಡಿ ಹೋಗಿದ್ದಳು ಅಂತಾನೂ ಹೇಳಿ ಎಲ್ಲರನ್ನೂ ನಂಬಿಸಿದ್ದಳು ಕಾವೇರಿ. ಕಾವೇರಿಯ ಪಾಪ ಪ್ರಜ್ಞೆಯೇ ಅವಳನ್ನು ಭೂತವಾಗಿ ಕಾಡಿದ್ದು, ಆಯ್ತು, ಲಕ್ಷ್ಮೀ ಮೈಮೇಲೆ ಕೀರ್ತಿಯ ಭೂತ ಬಂದಂತೆ ಮಾಡಿ, ಕಾವೇರಿಯ ಬಾಯಿಂದ ಸತ್ಯ ಹೊರ ಹಾಕಲು ಅದೆಷ್ಟೋ ಪ್ರಯತ್ನ ಮಾಡಿದ್ಲು ಆದ್ರೆ ಯಾವುದೂ ಕೂಡ ನೆರವೇರಲೇ ಇಲ್ಲ. 
 

37

ಇನ್ನೊಂದೆಡೆ ಎಲ್ಲರಿಗೂ ಕೀರ್ತಿ ಮೇಲೆ ದ್ವೇಷ ಬರುವಂತೆ ಮಾಡಿದ ಕಾವೇರಿ, ಲಕ್ಷ್ಮೀಯನ್ನು ಸಹ ಹೇಗಾದರೂ ಮಾಡಿ, ಈ ಮನೆಯಿಂದ ವೈಷ್ಣವ್ ಜೀವನದಿಂದ ದೂರ ಮಾಡುವ ಯೋಚನೆಯಲ್ಲಿದ್ದಾಳೆ. ಸದ್ಯ ತನ್ನ ಬಗ್ಗೆ ಲಕ್ಷ್ಮೀಯಿಂದ ಯಾವ ವಿಷ್ಯವೂ ಮನೆಯವರಿಗೆ ತಿಳಿಯಬಾರದು ಎಂದು ಲಕ್ಷ್ಮೀ ಮತ್ತು ವೈಷ್ಣವ್ ಇಬ್ಬರನ್ನೂ ಹನಿಮೂನ್ ಹೆಸರಲ್ಲಿ ಮನೆಯಿಂದ ಕಳುಹಿಸಲು ಫ್ಯಾನ್ ಮಾಡಿದ್ದಾಳೆ ಕಾವೇರಿ. 
 

47

ಆದರೆ ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಮನೆಯಿಂದ ಬೆಳಗ್ಗೆಯೇ ಹೊರ ಹೋಗಿದ್ದ ಲಕ್ಷ್ಮೀ, ಕಾರುಣ್ಯ ಜೊತೆಗೆ ಮನೆಗೆ ವಾಪಾಸ್ ಬಂದಿದ್ದಾಳೆ. ವಿರುದ್ಧ ಮಾತನಾಡಿದವರಿಗೆ ತಿರುಗೇಟು ನೀಡಿ, ಅತ್ತೆ ಬಳಿ ಇವತ್ತು ಎಲ್ಲಾ ಸತ್ಯಾನೂ ಬಯಲಾಗುತ್ತೆ. ಇದು ಕೀರ್ತಿ ಕ್ಯಾಮೆರಾ, ಕೀರ್ತಿ ಬೆಟ್ಟದ ಮೇಲೆ ಫಿಕ್ಸ್ ಮಾಡಿದ್ದ ಕ್ಯಾಮೆರಾ ಇದು. ಇದರಲ್ಲಿ ಎಲ್ಲಾ ರೀತಿಯ ಸತ್ಯಗಳೂ ಕೂಡ ಅಡಗಿದೆ ಎನ್ನುತ್ತಾಳೆ ಲಕ್ಷ್ಮೀ, ಆವಾಗ ಕಾವೇರಿ ಭಯದಿಂದ ತತ್ತರಿಸಿ ಹೋಗ್ತಾಳೆ. 
 

57

ಎಲ್ಲವೂ ಸರಿಯಾಗಿ ನಡೆದು, ಕೊನೆಗೂ ಕಾವೇರಿಯ ಮುಖವಾಡ ಕಳಚಿ ಬೀಳುತ್ತೆ ಎನ್ನುವಂತಿದೆ ಇವತ್ತಿನ ಪ್ರೊಮೋ. ಆದರೆ ಪ್ರೊಮೋ ನೋಡಿದ ವೀಕ್ಷಕರಿಗೆ ಮಾತ್ರ ಸತ್ಯ ಗೊತ್ತಾಗೋ ಚಾನ್ಸೇ ಇಲ್ಲ, ಕಾವೇರಿ ಮುಖವಾಡ ಕಳಚಿ ಬೀಳೋದಿಲ್ಲ, ಲಕ್ಷ್ಮಿಗೆ ಗೆಲುವಾಗೋದು ಇಲ್ಲ, ಸೀರಿಯಲ್ ಕಥೆ ಗೋವಿಂದ ಗೋವಿಂದಾ ಎಂದಿದ್ದಾರೆ. ಅಂದ್ರೆ ಯಾವಾಗ್ಲಿನಂತೆ ಮತ್ತೆ ಕಾವೇರಿ ತನ್ನ ಕುತಂತ್ರದಿಂದ ಈ ಸಾಕ್ಷಿಯನ್ನು ಅಳಿಸಿ ಹಾಕ್ತಾಳಾ? 
 

67

ಹೌದು ಎನ್ನುತ್ತಾರೆ ವೀಕ್ಷಕರು. ಇಷ್ಟು ಬೇಗ ಸತ್ಯ ಗೊತ್ತು ಆಗೋಲ್ಲ ಬಿಡಿ. ಆ ವಿಡಿಯೋ ಡಿಲಿಟ್ ಆಗಿರುತ್ತೆ. ಸತ್ಯಕ್ಕೆ ಸಾವಿಲ್ಲ ಅಂತಾರೆ ಆದ್ರೆ ಈ ಸೀರಿಯಲ್ಗಳಲ್ಲಿ ಸತ್ಯನ ಸಾಯ್ಸಿ ನೋಡುಗರಿಗೆ ತುಂಬಾ ಬೇಜಾರ್ ಮಾಡ್ತಾರೆ ಗುರು. ರಾತ್ರಿ ಲಕ್ಷ್ಮೀ ನಿದ್ರೆ ಮಾಡ್ತಿರೋವಾಗ ಕಾವೇರಿ ಬಂದು ವಿಡಿಯೋ ಡಿಲೀಟ್ ಮಾಡಿರ್ತಾಳೆ ಎನ್ನುತ್ತಿದ್ದಾರೆ ವೀಕ್ಷಕರು. 
 

77

ಅಷ್ಟೇ ಅಲ್ಲ ಈ ಸಲನೂ ಲಕ್ಷ್ಮೀನ ತಪಿತಸ್ಥೆಯನ್ನಾಗಿ ಮಾಡ್ಬೇಡಿ, ವಿಡಿಯೋ ಡಿಲಿಟ್ ಆಗಿ, ಕುತಂತ್ರಿ ಕಾವೇರಿಗೆ ಗೆಲುವಾಗುವ ಹಾಗೆ ಮಾಡ್ಬೇಡಿ. ಈ ಸಲಾನು ಕಾವೇರಿ ತಪ್ಪಿಸಿಕೊಂಡ್ರೆ ನಾವು ಸೀರಿಯಲ್ ನೋಡೋದೆ ಇಲ್ಲ. ಲಕ್ಷ್ಮೀಗೆ ಅವಮಾನ ಮಾಡ್ಬೇಡಿ ಎಂದಿದ್ದಾರೆ ಜನ. ಸತ್ಯ ಆಚೆ ಬರ್ಬೇಕು ಅಂದ್ರೆ ಬೆಂಕಿ ಬಿರುಗಾಳಿ (ಲಕ್ಷ್ಮೀ ಕೀರ್ತಿ ) ಒಂದಾಗಿ ಬರ್ಬೇಕು ಎಂದು ಆಶಿಸ್ತಿದ್ದಾರೆ ಜನ. ಮುಂದಿನ ಎಪಿಸೋಡ್ ನಲ್ಲಿ ಏನಾಗುತ್ತೆ ಕಾದು ನೋಡಬೇಕು. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved