MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಅಮೃತಧಾರೆಯಲ್ಲಿ ಸಿಸ್ಟರ್…ಎನ್ನುತ್ತಾ ಶಕುಂತಲಾ ಕಿವಿ ಚುಚ್ಚೋ ಅಣ್ಣ ಲಕ್ಷ್ಮೀಕಾಂತ್… ನಿಜ ಜೀವನದಲ್ಲಿ ಮಹಾನ್ ಸಾಧಕ !

ಅಮೃತಧಾರೆಯಲ್ಲಿ ಸಿಸ್ಟರ್…ಎನ್ನುತ್ತಾ ಶಕುಂತಲಾ ಕಿವಿ ಚುಚ್ಚೋ ಅಣ್ಣ ಲಕ್ಷ್ಮೀಕಾಂತ್… ನಿಜ ಜೀವನದಲ್ಲಿ ಮಹಾನ್ ಸಾಧಕ !

ಅಮೃತಧಾರೆ ಧಾರಾವಾಹಿ ನೋಡೋರಿಗೆ ಲಕ್ಕಿ ಲಕ್ಷ್ಮೀ ಕಾಂತ್ ಖಂಡಿತಾ ಗೊತ್ತಿರುತ್ತೆ ಅಲ್ವಾ? ಶಕುನಿಯಂತ ಅದ್ಭುತ ಪಾತ್ರ ಮಾಡೋ ಈ ನಟನ ರಿಯಲ್ ಲೈಫ್ ಬಗ್ಗೆ ನೀವೂ ತಿಳ್ಕೊಳಿ.  

2 Min read
Pavna Das
Published : Nov 02 2024, 04:42 PM IST| Updated : Nov 04 2024, 06:15 AM IST
Share this Photo Gallery
  • FB
  • TW
  • Linkdin
  • Whatsapp
17

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಸೀರಿಯಲ್ ನಲ್ಲಿ ನಾಯಕ- ನಾಯಕಿ ಮಾತ್ರವಲ್ಲದೇ ಪ್ರತಿಯೊಂದು ಪಾತ್ರಕ್ಕೂ ನಟರು ನ್ಯಾಯ ಒದಗಿಸುತ್ತಿದ್ದಾರೆ. ಅದರಲ್ಲೂ ಲಕ್ಕಿ ಲಕ್ಷ್ಮೀಕಾಂತ್ ಪಾತ್ರ ಸದ್ಯ ಮನ ಸೆಳೆಯುತ್ತಿದೆ. 
 

27

ಲಕ್ಕಿ ಲಕ್ಷ್ಮೀಕಾಂತ್ ಅಂದ್ರೆ ಯಾರು ಗೊತ್ತಾಯ್ತಲ್ವ? ಗೌತಮ್ ದಿವಾನ್ ಮಲತಾಯಿ ಶಕುಂತಲಾ ಜೊತೆಗೆ ಯಾವಾಗ್ಲೂ ಇರುವ, ಆಕೆಯ ಕಿವಿಚುಚ್ಚುವಂತಹ ಕೆಲಸ ಮಾಡುವ, ಶಕುನಿಯಂತ ಪಾತ್ರ ಮಾಡುವ ಅಣ್ಣ ಲಕ್ಕಿ ಲಕ್ಷ್ಮೀಕಾಂತ್ (Lucky Lakshmikanth). ಕಥೆ ಮುಂದುವರೆಯೋದಕ್ಕೆ ಒಂದು ಕಾರಣ ಲಕ್ಷ್ಮೀಕಾಂತ್ ಅಂತಾನೇ ಹೇಳಬಹುದು. 
 

37

ಯಾವಾಗ್ಲೂ ಅಕ್ಕನ ಜೊತೆಯಲ್ಲಿದ್ದು, ತನ್ನ ಕುತಂತ್ರಗಳಿಂದಲೇ ಒಂದಲ್ಲ ಒಂದು ಪ್ಲ್ಯಾನ್ ಮಾಡಿ ಅಕ್ಕನನ್ನು ಗೌತಮ್ ವಿರುದ್ಧವಾಗಿ ಕೆಲಸ ಮಾಡಲು ಪ್ರೇರೇಪಿಸುವ ಈ ಅದ್ಭುತ ಕಲಾವಿದನ ನಿಜವಾದ ಹೆಸರು ಕೃಷ್ಣಮೂರ್ತಿ ಕವತ್ತಾರ್ (Krishnamurthy Kavatar). ತಮ್ಮ ಅತ್ಯದ್ಭುತ ಎನಿಸುವಂತಹ ನಟನೆಯಿಂದ ಜನಮನ ಗೆಲ್ಲುತ್ತಿರುವ ಈ ಕೃಷ್ಣಮೂರ್ತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. 
 

47

ಕೃಷ್ಣಮೂರ್ತಿ ಕವತ್ತಾರ್, ದೊಡ್ಡ ರಂಗಭೂಮಿ ಕಲಾವಿದರು.(theater artist) ಬಹಳ ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಾನ್ ನಟ ಇವರು.  ಕನ್ನಡ ಸಿನಿಮಾದ ಅನೇಕ ನಟರು ಇವರ ಆ್ಯಕ್ಟಿಂಗ್ ಗರಡಿಯಲ್ಲಿ ಪಳಗಿದವರಿದ್ದಾರೆ. ನಟ ಪ್ರಮೋದ್ ಶೆಟ್ಟಿ ಕೂಡ ಇವರ ಶಿಷ್ಯ ಆಗಿದ್ದಾರೆ. 
 

57

ಬರೋಬ್ಬರಿ ಮೂವತ್ತು ವರ್ಷಗಳಿಂದ ರಂಗಭೂಮಿಯಲ್ಲಿ ದುಡಿಯುತ್ತಿರುವ ಇವರು 250 ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಇವರು ಬರೆದಂತಹ ರಂಗಗೀತೆಗಳು ಬಹಳಷ್ಟು ಜನಪ್ರಿಯತೆ ಪಡೆದಿವೆ. 
 

67

ರಂಗಭೂಮಿ ಜೊತೆಗೆ ಧಾರಾವಾಹಿ, ಸಿನಿಮಾಗಳಲ್ಲಿಯೂ ನಟಿಸಿರುವ ಕವತ್ತಾರು `ಗೌಡ್ರ ಸೈಕಲ್' ಚಿತ್ರದಲ್ಲಿ ಗೌಡನ ಪಾತ್ರವನ್ನೇ ನಿಭಾಯಿಸಿದ್ದರು. ` ಎಡಿಯೂರು ಸಿದ್ದಲಿಂಗೇಶ್ವರ ಮಹಾತ್ಮೆ' ಧಾರಾವಾಹಿಯಲ್ಲಿ ನಟಿಸಿ ಜನಮನ ಗೆದ್ದಿದ್ದರು. `ಸಾಯುವವನೇ ಚಿರಂಜೀವಿ' ಎನ್ನುವ ಏಕವ್ಯಕ್ತಿ ಪ್ರದರ್ಶನ ದೇಶಾದ್ಯಂತ ಭಾರಿ ಜನಮನ್ನಣೆ ಗಳಿಸಿತ್ತು. 
 

77

ಅಷ್ಟೆ ಅಲ್ಲ ಈ ಮಹಾನ್ ಸಾಧಕರಿಗೆ ಶಿವರಾಮ ಕಾರಂತರೊಡನೆ ಕೂಡ ಒಡನಾಟ ಇತ್ತು, ಜೊತೆಗೆ ತೇಜಸ್ವಿ ಜೊತೆಗೂ ಕೂಡ ಕೆಲಸ ಮಾಡಿದ್ದವರು ಇವರು. ಡಾಲಿ ಧನಂಜಯ್ ಗೂ ಇವರು ನಾಟಕ ಹೇಳಿಕೊಟ್ಟಿದ್ದರು, ರವಿಚಂದ್ರನ್ ಪುತ್ರ, ಪ್ರಮೋದ್ ಶೆಟ್ಟಿ ಸೇರಿ ಹಲವಾರು ಮಹಾನ್ ನಟ ಕೂಡ ಇವರ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved