MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಆಶ್ರಮ, ಸಂಸ್ಥೆಗಳಿಗೆ ನೋಟ್​ ಬುಕ್​ ಕೊಡಲು ಮುಂದಾದ 'ಕರ್ಣ': ನಟ Kiran Raj ಹೀಗೊಂದು ಮನವಿ

ಆಶ್ರಮ, ಸಂಸ್ಥೆಗಳಿಗೆ ನೋಟ್​ ಬುಕ್​ ಕೊಡಲು ಮುಂದಾದ 'ಕರ್ಣ': ನಟ Kiran Raj ಹೀಗೊಂದು ಮನವಿ

'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್, ತಮ್ಮ ಪಾತ್ರದಂತೆಯೇ ನಿಜ ಜೀವನದಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಒಂದು ಭಾಗವನ್ನು ಬಡವರಿಗೆ, ಅನಾಥಾಶ್ರಮಗಳಿಗೆ ಮೀಸಲಿಟ್ಟು, ಆಹಾರ, ನೋಟ್‌ಬುಕ್‌ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.  

2 Min read
Author : Suchethana D
Published : Jun 22 2026, 02:00 PM IST
Share this Photo Gallery
  • FB
  • TW
  • Linkdin
  • Whatsapp
16
ಅಲ್ಲೂ ಕರ್ಣ ಇಲ್ಲೂ ಕರ್ಣ
Image Credit : Kiran Raj Instagram

ಅಲ್ಲೂ ಕರ್ಣ ಇಲ್ಲೂ ಕರ್ಣ

ಒಬ್ಬ ಮನುಷ್ಯ ಇಷ್ಟೆಲ್ಲಾ ಒಳ್ಳೆಯವನಾಗೋದು ಸಾಧ್ಯನಾ, ಇದ್ಯಾಕೋ ಸ್ವಲ್ಪ ಅತಿಯಾಯಿತು ಎನ್ನಿಸುತ್ತದೆ ಎಂದು Karna Serialನ ಕರ್ಣ ಪಾತ್ರಧಾರಿಯನ್ನು ನೋಡಿದಾಗ ಹಲವಾರು ಮಂದಿ ಕಮೆಂಟ್​ ಮಾಡಿರುವುದು ಉಂಟು. ಜೀವನದಲ್ಲಿ ಇಷ್ಟು ಒಳ್ಳೆಯವರಾಗುವುದು ಸರಿಯಲ್ಲ ಎಂದೂ, ಯಾರು ಎಷ್ಟೇ ನೋವು ಕೊಟ್ಟರೂ ಅದನ್ನು ಖುಷಿಯಿಂದ ಸ್ವೀಕರಿಸುವ ಕ್ಯಾರೆಕ್ಟರ್​ ಬಹುಶಃ ನಿಜ ಜೀವನದಲ್ಲಿ ಯಾರಿಗೂ ಇರಲು ಸಾಧ್ಯವೇ ಇಲ್ಲ ಬಿಡಿ ಇದ್ಯಾಕೋ ಸ್ವಲ್ಪ ಹೆಚ್ಚೇ ಅನ್ನಿಸ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ ಸೀರಿಯಲ್​ ಪಾತ್ರದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಅದೇ ನಿಜ ಜೀವನದಲ್ಲಿ ಅಂಥದ್ದೇ ವ್ಯಕ್ತಿತ್ವ ಇರುವುದು ತುಂಬಾ ತುಂಬಾ ಕಡಿಮೆಯೇ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕರ್ಣ ಪಾತ್ರಧಾರಿಯ ರಿಯಲ್​​ ಸ್ಟೋರಿ
Image Credit : Instagram

ಕರ್ಣ ಪಾತ್ರಧಾರಿಯ ರಿಯಲ್​​ ಸ್ಟೋರಿ

ಆದರೆ, ನಿಜ ಜೀವನದಲ್ಲಿಯೂ ಬೇರೆಯವರಿಗೆ ಬೆಳಕಾಗಿದ್ದಾರೆ ಇದೇ ಕರ್ಣ ಪಾತ್ರಧಾರಿ ನಟ ಕಿರಣ್​ ರಾಜ್​ (Kiran Raj). ಅದಕ್ಕೆ ಸಾಕ್ಷಿಯಾದದ್ದು, ಅವರ ನಿಜ ಜೀವನದ ಕಥೆ ಈ ಹಿಂದೆ ಜೀ ಕುಟುಂಬ ಅವಾರ್ಡ್​ನಲ್ಲಿ ಅನಾವರಣಗೊಂಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ನೆಚ್ಚಿನ ನಾಯಕ ಪ್ರಶಸ್ತಿ ಪಡೆದರು ಕಿರಣ್​ ರಾಜ್. ಈ ಸಂದರ್ಭದಲ್ಲಿ ​ ಅವರು ಮಾಡ್ತಿರೋ ಸೇವೆಯ ಬಗ್ಗೆ ಪ್ರಶಸ್ತಿ ನೀಡಲು ಬಂದ ಮೈಸೂರು ಮಹಾರಾಜ ಯದುವೀರ ದತ್ತ ಅವರ ಎದುರು ವಿಟಿ ಮೂಲಕ ತೋರಿಸಿದಾಗ, ವೇದಿಕೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣಿನಲ್ಲಿಯೂ ನೀರು ಬಂದಿತ್ತು.

Related Articles

Related image1
Karna serial: ಕರ್ಣ-ನಿಧಿ ಒಂದಾಗ್ತಾರಾ ಕೇಳಿದ್ರೆ ರೊಮಾನ್ಸ್​ ನಂಗೆ ಆಗಿಬರಲ್ಲ ಎನ್ನೋದಾ ನಟ Kiran Raj
Related image2
Karna: ಮಗಳನ್ನು ಮದ್ವೆ ಆಗಂತ ಒತ್ತಾಯಿಸ್ತಿದ್ದಾರೆ, ಅಪ್ಪ-ಅಮ್ಮ ಕೈಬಿಟ್ರು: ನಟ ಕಿರಣ್‌ ರಾಜ್‌ ಹೇಳಿದ್ದೇನು
36
ನೋಟ್​ಬುಕ್​ ನೀಡಲು ಮುಂದಾದ ನಟ
Image Credit : Instagram

ನೋಟ್​ಬುಕ್​ ನೀಡಲು ಮುಂದಾದ ನಟ

ಇದೀಗ ನಟ ಕಿರಣ್​ ರಾಜ್​ ಅವರು, ತಮ್ಮ ಕಿರಣ್​ ರಾಜ್​ ಫೌಂಡೇಷನ್​ ವತಿಯಿಂದ ನೋಟ್​ಬುಕ್​ ನೀಡಲು ಮುಂದಾಗಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಸರ್ಕಾರಿ ಸಂಘ- ಸಂಸ್ಥೆ ಅಥವಾ ಆಶ್ರಮಕ್ಕೆ ಅಗತ್ಯವಿದ್ದರೆ ನೋಟ್​ ಬುಕ್​ ಕೊಡುತ್ತೇನೆ. ಈ ಬಗ್ಗೆ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಅಗತ್ಯ ಇರುವವರು ಮಾತ್ರ ಹೇಳಿ, ಬಡವರಿಗೆ ಉಪಯೋಗ ಆಗಲಿ ಎಂದು ನಟ ಕಿರಣ್​ ರಾಜ್​ ತಿಳಿಸಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

46
ಸಮಾಜ ಸೇವೆಯಲ್ಲಿ ಕಿರಣ್​ ರಾಜ್​
Image Credit : social media

ಸಮಾಜ ಸೇವೆಯಲ್ಲಿ ಕಿರಣ್​ ರಾಜ್​

ನಟ ಕಿರಣ್ ರಾಜ್ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

56
ಪ್ರತಿ ತಿಂಗಳೂ ರೇಷನ್​
Image Credit : Asianet News

ಪ್ರತಿ ತಿಂಗಳೂ ರೇಷನ್​

ಅನಾಥಾಶ್ರಮ ಒಂದಕ್ಕೆ ಕಿರಣ್​ ರಾಜ್​ ಕಡೆಯಿಂದ ಪ್ರತಿತಿಂಗಳೂ ರೇಷನ್​ ಬರುತ್ತದೆ. 25 ಮಕ್ಕಳ ಸ್ಕೂಲ್​ ಫೀಸ್​ ತುಂಬುತ್ತಿದ್ದಾರೆ. ಆಶ್ರಮದ ಮಕ್ಕಳನ್ನು ಟೂರ್​ಗೂ ಕರೆದುಕೊಂಡು ಹೋಗ್ತಾರೆ. ಈ ಬಗ್ಗೆ ಖುದ್ದು ಆಶ್ರಮವಾಸಿಗಳು ಭಾವುಕರಾಗಿ ನುಡಿದಿದ್ದಾರೆ.

66
ಆ ದಿನಗಳ ನೆನೆದ ನಟ
Image Credit : our own

ಆ ದಿನಗಳ ನೆನೆದ ನಟ

ಈ ಬಗ್ಗೆ ಮಾತನಾಡಿದ ಕಿರಣ್​ ರಾಜ್ ಅವರು, ಲೈಫ್​ನಲ್ಲಿ ಒಂದು ಸನ್ನಿವೇಶ ಬಂದಿತ್ತು. ದಾರಿನೇ ಇರಲಿಲ್ಲ. ಆಗ ಅನ್ನಿಸ್ತಿತ್ತು. ದೇವರು ಕಷ್ಟ ಅರ್ಥಮಾಡಿಕೊಂಡು ನನಗೆ ಸಪೋರ್ಟ್​ ಮಾಡಿಬಿಡಲಿ ಎಂದು. ಆದರೆ ಅದು ಸಾಧ್ಯ ಆಗಲಿಲ್ಲ. ನನಗಂತೂ ಆಗಲಿಲ್ಲ. ಆದರೆ ಬೇರೆಯವರಿಗೆ ನನ್ನಿಂದ ನೆರವಾಗಲಿ ಎಂದುಕೊಂಡೆ. ಇಂದು ಆರ್ಥಿಕವಾಗಿ ಸದೃಢ ಆಗಿದ್ದೇನೆ. ಆದರೆ ಇವರ ಸ್ಲೈಲ್​ ನೋಡಿದಾಗ ಅದರ ಮುಂದೆ ಎಲ್ಲವೂ ಗೌಣವಾಗುತ್ತದೆ ಎಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಕಿರಣ್ ರಾಜ್

Latest Videos
Recommended Stories
Recommended image1
ಮಾವನ ಹೆಸರಲ್ಲ, ಸರ್‌ನೇಮ್‌ನಲ್ಲಿರೋದು ನನ್ನಪ್ಪನ ಹೆಸರು: ಗೊಂದಲಕ್ಕೆ ತೆರೆ ಎಳೆದ ಡಾನ್‌ ಜಯರಾಜ್‌ ಸೊಸೆ ಇಂಪನಾ
Recommended image2
ನಟನೆಗೆ ಮಾತ್ರವಲ್ಲ, ಡಾನ್ಸ್​ನಲ್ಲೂ ಮುಂದು Amruthadhaare ಭೂಮಿಕಾ: ಮೋರಿನಿಯಾಗಿ ಮನಗೆದ್ದ ಛಾಯಾ ಸಿಂಗ್​
Recommended image3
Fathers Day Movie: ಕನ್ನಡದ ಮೊದಲ ಬೈಕರ್‌ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಟ ಅಜಿತ್‌ ಹಂದೆ!
Related Stories
Recommended image1
Karna serial: ಕರ್ಣ-ನಿಧಿ ಒಂದಾಗ್ತಾರಾ ಕೇಳಿದ್ರೆ ರೊಮಾನ್ಸ್​ ನಂಗೆ ಆಗಿಬರಲ್ಲ ಎನ್ನೋದಾ ನಟ Kiran Raj
Recommended image2
Karna: ಮಗಳನ್ನು ಮದ್ವೆ ಆಗಂತ ಒತ್ತಾಯಿಸ್ತಿದ್ದಾರೆ, ಅಪ್ಪ-ಅಮ್ಮ ಕೈಬಿಟ್ರು: ನಟ ಕಿರಣ್‌ ರಾಜ್‌ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved