MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ರಾಧಾ ರಮಣ ಧಾರಾವಾಹಿ ನಾಯಕ ಸ್ಕಂದ ಅಶೋಕ್ ಅಭಿಮಾನಿಗಳಿಗೆ ಭಾರೀ ಕಿರುಕುಳ!

ರಾಧಾ ರಮಣ ಧಾರಾವಾಹಿ ನಾಯಕ ಸ್ಕಂದ ಅಶೋಕ್ ಅಭಿಮಾನಿಗಳಿಗೆ ಭಾರೀ ಕಿರುಕುಳ!

ಬೆಂಗಳೂರು (ಏ.11): ಕನ್ನಡದಲ್ಲಿ 2017-18ನೇ ಸಾಲಿನಲ್ಲಿ ಅತಿಹೆಚ್ಚು  ಫೇಮಸ್ ಆಗಿದ್ದ ರಾಧಾ ರಮಣ ಧಾರಾವಾಹಿ ನಾಯಕ ಸ್ಕಂದ ಅಶೋಕ್ ಅವರ 11 ವರ್ಷದಿಂದ ಬಳಸುತ್ತಿರುವ  ಫೇಸ್‌ಬುಕ್‌ ಐಡಿ ಹಾಗೂ ಇನ್‌ಸ್ಟಾಗ್ರಾಂ ಐಡಿಯನ್ನು ಸೈಬರ್ ವಂಚಕರು ಹ್ಯಾಕ್‌ ಮಾಡಿದ್ದಾರೆ. ಅಭಿಮಾನಿಗಳಿಗೆ ತಪ್ಪು ಸಂದೇಶ ಹೋಗುವಂತೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. 

1 Min read
Sathish Kumar KH
Published : Apr 11 2024, 05:16 PM IST| Updated : Apr 11 2024, 05:25 PM IST
Share this Photo Gallery
  • FB
  • TW
  • Linkdin
  • Whatsapp
16

ರಾಧಾ ರಮಣ ಧಾರಾವಾಹಿಯ ಮೂಲಕ ಕರ್ನಾಟಕದ ಪ್ರತಿ ಮನೆ ಮನೆಗೂ ಮಾತಾದ ನಾಯಕ ಎಂದರೆ ಅದು ಸ್ಕಂದ ಅಶೋಕ್ ಅವರು. ಆದರೆ, ಎಲ್ಲರಿಗೂ ರಮಣ ಎಂತಲೇ ಪ್ರಸಿದ್ಧಿ ಆಗಿದ್ದರು.
 

26
Shwetha Skanda Ashok Radhe Shyama Radha ramana

Shwetha Skanda Ashok Radhe Shyama Radha ramana

ಒಂದೊಂದೇ ಹಂತ ದಾಟುತ್ತಾ ಬೆಳೆಯುತ್ತಿರುವ ಕನ್ನಡ ನಟ ಈಗ ತೆಲುಗು-ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟರಾಗಿದ್ದಾರೆ. ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 

36

ಸ್ಕಂದ ಅಶೋಕ್ ಕಳೆದ 11 ವರ್ಷಗಳಿಂದ ಬಳಸುತ್ತಿದ್ದ ಫೇಸ್‌ಬುಕ್‌ ಖಾತೆ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸುತ್ತಿದ್ದರು. ಆದರೆ, ಸೈಬರ್ ವಂಚಕರು ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.
 

46

ಸ್ಕಂದ ಅಶೋಕ್ ಅವರ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಅವರ ಲಕ್ಷಾಂತರ ಫಾಲೋವರ್ಸ್‌ಗಳಿಗೆ ಬೆಂಗಳೂರು, ಚೆನ್ನೈ ಹಾಗೂ ನೈಜೀರಿಯಾದಲ್ಲಿ ಕೆಲಸದ ಅವಕಾಶವಿದ್ದು, ನೋಂದಣಿ ಮಾಡಿಸಿಕೊಳ್ಳುವಂತೆ ಸಂದೇಶ ಹರಿಬಿಡುತ್ತಿದ್ದಾರೆ. 
 

56
ದಿ ವ್ಯಾಲಿ ಇಂಟರ್‌ ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ

ದಿ ವ್ಯಾಲಿ ಇಂಟರ್‌ ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂಖ್ಯೆ ಅಥವಾ ಲಿಂಕ್‌ ಅನ್ನು ಓಪನ್ ಮಾಡಿದವರಿಂದ ಹಣ ಪಾವತಿಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಸ್ಕಂದ ಅಶೋಕ್ ಅವರು ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

66

ಇನ್ನು ಸ್ಲಂದ ಅಶೋಕ್ ಅವರು ಕನ್ನಡ ಕಿರಿತೆರೆಯಿಂದ ಹೊರ ಭಾಷೆಗೆ ಕಾಲಿಟ್ಟ ನಂತರ ಅವರ ಅದೃಷ್ಟ ಕೈ ಹಿಡಿದಿದೆ. ಕೆಲವು ವರ್ಷಗಳ ಹಿಂದೆ ಮಾಲಿವುಡ್‌ನಲ್ಲಿ 'ಬೆಸ್ಟ್‌ ನ್ಯೂ ಫೇಸ್ ಆಫ್‌ ದಿ ಇಯರ್ ಅವಾರ್ಡ್' ಪಡೆದುಕೊಂಡಿದ್ದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕನ್ನಡ ಚಲನಚಿತ್ರಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved