'ರಾಧಾ ಕಲ್ಯಾಣ' ನಟಿ ಚೈತ್ರಾ ರೈ ಅದ್ಧೂರಿ ಸೀಮಂತ ಫೋಟೋ!
ಕನ್ನಡ ಹಾಗೂ ತೆಲುಗು ಕಿರುತೆರೆಯ ಬೇಡಿಕೆಯ ನಟಿ ಚೈತ್ರಾ ರೈ ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.
'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ಚೈತ್ರಾ ರೈ.
ಕುಸುಮಾಂಜಲಿ, ಬೊಂಬೆಯಾಟವಯ್ಯ, ಬಣ್ಣದ ಬುಗುರಿ, ಪೌರ್ಣಮಿ, ನಾಗಮಣಿ ಹಾಗೂ ಯುಗಾದಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಚೈತ್ರಾ ಹಾಗೂ ಪ್ರಸನ್ನ ಶೆಟ್ಟಿ ಕುಟುಂಬಕ್ಕೆ ಹೊಸ ಅತಿಥಿ ಆಗಮನಕ್ಕೆ ಕಾಯುತ್ತಿದ್ದಾರೆ.
'ಡೌಟ್ನಲ್ಲಿದ್ದಾಗ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಿ. ವೃತ್ತಿ ಬದುಕಿನ ಬಗ್ಗೆ ಚಿಂತಿಸುವುದಕ್ಕೆ ಬಹಳ ಸಮಯ ಇರುತ್ತದೆ. ಫ್ಯಾಮಿಲಿ ಮೊದಲು. ನಾನು ಹೊಸ ಅತಿಥಿ ಬರ ಮಾಡಿಕೊಳ್ಳಲು ರೆಡಿ,' ಎಂದು ಹೇಳುವ ಮೂಲಕ ಚೈತ್ರಾ ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದ್ದರು.
'ನಮ್ಮ ಸಂಪ್ರದಾಯದ ಪ್ರಕಾರ ನಡೆದ ಸೀಮಂತ ಕಾರ್ಯಕ್ರಮವಿದು. ಕಡಿಮೆ ಜನ ಇದ್ದರೂ ನನ್ನ ಜೀವನದ ಮುಖ್ಯ ಸಂದರ್ಭದಲ್ಲಿ ಬೇಕಾದವರು ಇದ್ದರು. '
'ಕೊರೋನಾ ಪ್ಯಾಂಡಮಿಕ್ನಲ್ಲಿ ನಾನು ಕಲಿತ ಪಾಠ ಏನೆಂದರೆ ಪ್ಲಾನ್ ಮಾಡದೇ ಜೀವನ ನಡೆಸಿದ್ದರೂ ಪರ್ವಾಗಿಲ್ಲ, ಮನಸ್ಸಿಗೆ ಬಂದಂತೆಯೂ ಮಾಡಿದರೆ ಸಂತೋಷ ನೀಡುತ್ತದೆ ಎಂದು,' ಎಂದು ಬರೆದುಕೊಂಡಿದ್ದಾರೆ.
ಕೆಂಪು ಬಣ್ಣದ ಗೌನ್ ಧರಿಸಿ 'Mom to be' ಫೋಟೋ ಶೂಟ್ ಮಾಡಿಕೊಂಡಿದ್ದಾರೆ.
ಕನ್ನಡಕ್ಕಿಂತ ತೆಲುಗು ಚಿತ್ರರಂಗದಲ್ಲಿ ಚೈತ್ರಾ ಬೇಡಿಕೆಯ ನಟಿ.