ಅಂದ್ಕೊಂಡಂಗೆ ಜೀವನ ನಡೆಯಲ್ಲ, ಊರು ಬಿಟ್ಟು ಬರೋದು ಒಂದೇ ತಲೆಯಲ್ಲಿತ್ತು: ಭೂಮಿ ಶೆಟ್ಟಿ
ಜೀವನದಲ್ಲಿ ಸರಿಯಾಗಿರುವ ವ್ಯಕ್ತಿಗಳ ಜೊತೆ ಇರುವುದು ಎಷ್ಟು ಮುಖ್ಯ ಅನ್ನೋದನ್ನು ಭೂಮಿ ಶೆಟ್ಟಿ ಹೇಳಿದ್ದಾರೆ.

ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ ಸರಿಯಾಗಿರುವ ಗುಂಪಿನ ಜನರು ಸಿಕ್ಕಿರಲಿಲ್ಲ ಹೀಗಾಗಿ ಬೇಡದ ವಿಚಾರಗಳಲ್ಲಿ ಇಂಟ್ರೆಸ್ಟ್ ಜಾಸ್ತಿ ಆಗಿತ್ತು.
ಆದರೆ ಪ್ರತಿ ಸಲವೂ ನಾವು concious ಆಗಿ ಇರಬೇಕು ಅನ್ನೋದನ್ನು ಕಲಿತಿರುವೆ. ಸರಿ ತಪ್ಪುಗಳನ್ನು ಹೇಳಲು ನನ್ನ ಜೊತೆ ಯಾರೂ ಇರಲಿಲ್ಲ ಎಂದು ಭೂಮಿ ಶೆಟ್ಟಿ ಪರಶು ಫಿಲ್ಮ್ ಯುಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ.
ಚಿಕ್ಕ ವಯಸ್ಸಿಗೆ ದುಡಿಯಲು ಶುರು ಮಾಡಿದ್ಯಾ ಅದರಿಂದ ಬಂದ ಹಣದಿಂದ ಏನು ಮಾಡಬೇಕು ಎಂದು ಹೇಳಲು ನನಗೆ ಯಾರೂ ಇರಲಿಲ್ಲ. ಅಲ್ಲಿ ತಪ್ಪು ಮಾಡಿದೆ ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.
ನಾನು ಯಾರ ಜೊತೆ ಇದ್ದೀನಿ ಏನು ಮಾಡುತ್ತಿದ್ದೀನಿ ಅನ್ನೋ ಆಲೋಚನೆ ಶುರುವಾಗುತ್ತದೆ. ನಾನು ಚೆನ್ನಾಗಿ ಮಜಾ ಮಾಡಿದ್ದೀನಿ ಎಂಜಾಯ್ ಅಂದ್ರೆ ಜೀವನ ಅನ್ನೋದು ರೀತಿ.
ಆದರೆ ಬಂಗಳೂರಿಗೆ ಬಂದಾಗ ನನ್ನ ಜೊತೆಗಿದ್ದ ವ್ಯಕ್ತಿಗಳು ನನ್ನ ವೃತ್ತಿ ಅಥವಾ ಜೀವನದ ಬೆಳವಣಿಗೆಗೆ ಸಹಾಯ ಮಾಡಿಲ್ಲ. ನನಗೆ ಅವರು ರೈಟ್ ಸೆಟ್ ಜನರು ಆಗಲಿಲ್ಲ.
ನನ್ನ ಸುತ್ತ ಇರುವ ಜನರು ನಮ್ಮ ಮೇಲೆ ತುಂಬಾ ಇಂಪ್ಯಾಕ್ಟ್ ಮಾಡುತ್ತಾರೆ. ನಾನು ಲೈಫ್ ಎಂಜಾಯ್ ಮಾಡುತ್ತಿದ್ದೀನಿ ಆದರೆ ಅಂದುಕೊಂಡಂತೆ ಏನೂ ನಡೆಯುವುದಿಲ್ಲ ಎಂದಿದ್ದಾರೆ ಭೂಮಿ ಶೆಟ್ಟಿ.
ನನಗೆ ಬೇಕಾದ ರೀತಿಯಲ್ಲಿ ಜೀವನ ನಡೆಸುತ್ತಿರುವೆ. ನಟಿ ಆಗದಿದ್ದರೆ ಏನಾಗುತ್ತಿದ್ದೆ ಅನ್ನೋದು ಗೊತ್ತಿಲ್ಲ ಆದರೆ ಚಿಕ್ಕ ವಯಸ್ಸಿನಲ್ಲಿ ಊರು ಬಿಟ್ಟು ಬರುವುದು ಒಂದೇ ಕನಸು ಆಗಿತ್ತು.