MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಗೌತಮ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮಾತಿನ ಮಲ್ಲ ಸೃಜನ್… ಭೂಪತಿ ಕಡೆಯವನಾ? ವೀಕ್ಷಕರಿಗೆ ಹೀಗೊಂದು ಸಂಶಯ!

ಗೌತಮ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮಾತಿನ ಮಲ್ಲ ಸೃಜನ್… ಭೂಪತಿ ಕಡೆಯವನಾ? ವೀಕ್ಷಕರಿಗೆ ಹೀಗೊಂದು ಸಂಶಯ!

ಅಮೃತಧಾರೆ ಧಾರಾವಾಹಿಗೆ ಹೊಸದಾಗಿ ಎಂಟ್ರಿ ಕೊಟ್ಟ ಮಾತಿನ ಮಲ್ಲ ಸೃಜನ್, ಭೂಮಿಕಾಗೆ ಇಷ್ಟೊಂದು ಕ್ಲೋಸ್ ಆಗಿರೋದು ನೋಡಿದ್ರೆ, ಇವನು ಭೂಪತಿ ಕಡೆಯವನು ಇರಬಹುದು ಎನ್ನುವ ಸಂಶಯ ವೀಕ್ಷಕರಿಗೆ ಮೂಡಿದೆ.  

2 Min read
Pavna Das
Published : Mar 28 2025, 01:36 PM IST| Updated : Mar 28 2025, 04:15 PM IST
Share this Photo Gallery
  • FB
  • TW
  • Linkdin
  • Whatsapp
17

ಅಮೃತಧಾರೆಯಲ್ಲಿ (Amruthadhaare Serial) ಹೊಸ ಪಾತ್ರವೊಂದರ ಎಂಟ್ರಿಯಾಗಿದೆ. ಭೂಮಿಕಾ, ಸುಧಾ ಮತ್ತು ಲಚ್ಚಿಯನ್ನು ರೌಡಿಗಳಿಂದ ರಕ್ಷಿಸಿ, ಮನೆಗೆ ಸೇಫ್ ಆಗಿ ಮುಟ್ಟಿಸಿದ ಕ್ಯಾಬ್ ಡೈವರ್ ಸೃಜನ್ ಸೀರಿಯಲ್ ನ ಹೊಸ ಎಂಟ್ರಿ. ಈತ ಮಾತಿನ ಮಲ್ಲ, ಮಾತಿನಲ್ಲೆ ಮನೆಕಟ್ಟುವ ಈತನನ್ನು ನೋಡಿ ಸುಧಾಗಂತೂ ಕೋಪ, ಆದರೆ ಭೂಮಿಕಾಗೆ ಈತನ ಗುಣ ಇಷ್ಟವಾಗಿದೆ. 
 

27

ಅಷ್ಟೇ ಅಲ್ಲದೇ ಭೂಮಿಕಾಗೆ ಸೃಜನ್ ಹೇಳಿದ ರೌಡಿಗಳ ಕಥೆ ಕೇಳಿ ಶಾಕ್ ಆಗಿದ್ದು, ಜೊತೆಗೆ ಸೃಜನ್, ಜಾಗರೂಕತೆ ಇರುವಂತೆಯೂ, ಮನೆಯಲ್ಲಿಯೇ ನಿಮಗೆ ದುಷ್ಮನ್ ಇದ್ದಾರೆ, ನಿಮ್ಮ ನೆರಳನ್ನು ಸಹ ನೀವು ನಂಬಬೇಡಿ ಎಂದು ಹೇಳಿದ್ದು, ಎಲ್ಲಾ ಕೇಳಿ ಬೆಚ್ಚಿ ಬಿದ್ದಿದ್ದಳು. ಕನಸಿನಲ್ಲೂ ತಮ್ಮನ್ನು ಕೊಲೆ ಮಾಡಲು ಕಾರು ಬರುವಂತಾಗಿ ಬೆಚ್ಚಿ ಎದ್ದಿದ್ದಳು ಭೂಮಿಕಾ. 
 

37

ಈಗ ಗೌತಮ್ ಬಳಿ ಹೇಳಿ ಮಾತಿನ ಮಲ್ಲ ಹಾಗೂ ತಮ್ಮನ್ನು ಅಪಾಯದಿಂದ ಕಾಪಾಡಿದ ಅಪಾದ್ಭಾಂಧವ ಸೃಜನ್ ಗೆ ಕೆಲಸ ಕೊಡಿಸಿದ್ದಾರೆ. ಆ ಖುಷಿಯಲ್ಲಿ ಮನೆಗೆ ಬಂದು ಭೂಮಿಕಾಗೆ ಸ್ವೀಟ್ ನೀಡಿ, ನಿಮ್ಮ ಪಾದದ ಧೂಳನ್ನು ಹಣೆ ಹಚ್ಚಬೇಕು. ನೀವು ನನ್ನ ಪಾಲಿನ ದೇವರು ಎಂದು ಹೇಳಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆ. 
 

47

ನಿಮ್ಮನ್ನು ಕೇವಲ ಮನೆಗೆ ಬಿಡೋದಕ್ಕೆ ಬಂದಿದ್ದು ನಾನು, ಈಗ ಕೆಲಸ ಸಿಕ್ಕಿದೆ. ನಿಮ್ಮನ್ನ ಮನೆಗೆ ಡ್ರಾಪ್ ಮಾಡೋದಕ್ಕೆ ಬಂದು ನನ್ನ ಜೀವನ ಪಿಕ್ ಅಪ್ ಆಗ್ತಿದೆ. ನಿಮ್ಮನ್ನು ಹೊಗಳದೇ ಇನ್ಯಾರನ್ನು ಹೊಗಳಲಿ ಎಂದೆಲ್ಲಾ ಹೇಳ್ತಿದ್ದಾನೆ ಸೃಜನ್. ಸೃಜನ್ ಮಾತು ಕೇಳಿ, ಭೂಮಿಗೆ ನಗು ಜೊತೆಗೆ ಅಯ್ಯೋ ಅನಿಸುತ್ತಿದೆ. ಭೂಮಿಕಾ ಜೊತೆ ವೀಕ್ಷಕರಿಗೂ ಹಾಗೆ ಅನಿಸ್ತಿದೆ. 
 

57

ಸೃಜನ್ ಮಾತು ಕೇಳಿದ ವೀಕ್ಷಕರು, ಈ ಸೀರಿಯಲ್ ನಲ್ಲಿ ಎಲ್ಲಾರೂ ಸೇರಿದ್ರೂ ಇವನಷ್ಟು ಮಾತನಾಡೋರು ಯಾರು ಇಲ್ಲಪ್ಪ ಎಂದಿದ್ದಾರೆ.  ಹೆಚ್ಚಿನ ವೀಕ್ಷಕರಿಗೆ ಇವನು ಇಷ್ಟು ಬೋಲ್ಡ್ ಆಗಿ, ವಟ ವಟ ಮಾತನಾಡೋದು ನೋಡಿ, ಇವನು ಭೂಪತಿ ಕಡೆಯವರು ಎನ್ನುವ ಸಂಶಯ ಕೂಡ ಬಂದಿದೆ. ಅದಕ್ಕಾಗಿ ಯಾರೋ ಪುಣ್ಯಾತ್ಮ ನೀನು ನೀನೇನು ನಾಟಕ ಮಾಡೋಕೆ ಬಂದಿದಿಯಪ್ಪ ಅನ್ನ ಕೊಟ್ಟ ಮನೆಗೆ ಕನ್ನ ಹಾಕ್ಬೇಡ ಅಂದಿದ್ದಾರೆ. 
 

67

ಯಾರ್ ಗುರು ಇವ್ನು 50ರೂಪಾಯಿಗೆ ಆಕ್ಟಿಂಗ್ ಮಾಡು ಅಂದ್ರೆ 500ರೂಪಾಯಿಗೆ ಆಕ್ಟಿಂಗ್ ಮಾಡತವನಲ್ಲ ಇದರಲ್ಲಿ ಏನೋ ಸಂಚ್ ಇದೆ ಅನ್ನಿಸ್ತಿದೆ  ಎಂದು ಒಬ್ಬರು ಹೇಳಿದ್ರೆ, ಇನ್ನೊಬ್ಬರು ಭೂಪತಿ ಕಡೆ ಅವ್ರು ಇರಬೇಕು ಆದಷ್ಟು ಹುಷಾರು ಭೂಮಿ ಅವ್ರೆ ಎಂದಿದ್ದಾರೆ. ಯಾಕೋ ಇವನು ವಿಲನ್ ಭೂಪತಿ (villain Bhupathi) ಕಡೆಯವನು ಅನಿಸುತ್ತೆ ಗೌತಮ್ ತಂಗಿ ಲೈಫ್ ಹಾಳು ಮಾಡೋಕ್ಕೆ ಬಂದಿರ್ಬಹುದು ಅಂತಾನೂ ಹೇಳ್ತಿದ್ದಾರೆ. 
 

77

ಇನ್ನೂ ಕೆಲವರು ಅತಿ ವಿನಯಂ ಧೂರ್ತ ಲಕ್ಷಣಂ ಅಂತಾನೂ ಹೇಳಿದ್ದಾರೆ. ಮತ್ತೆ ಕೆಲವರು ಇವನು ಒಳ್ಳೆಯವನೇ ಇರಬೇಕು, ಸುಧಾಗೆ ಜೋಡಿ ಮಾಡೋದಕ್ಕೆ ಡೈರೆಕ್ಟರ್ ಇವನ ಎಂಟ್ರಿ ಮಾಡಿಸಿದ್ದಾರೆ ಅಂತಾನೂ ಹೇಳ್ತಿದ್ದಾರೆ. ಯಾವುದಕ್ಕೂ ನಿಜಾ ಏನು ಅನ್ನೋದನ್ನು ಕಾದು ನೋಡಬೇಕು. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved