MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ

Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ

ಕರ್ಣ ಧಾರಾವಾಹಿಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುವ ದೃಶ್ಯವನ್ನು ತೋರಿಸಿದ್ದಕ್ಕೆ ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿವಾದದ ನಡುವೆಯೇ, ಜೈಲು ಪಾಲಾದ ಕರ್ಣನನ್ನು ರಕ್ಷಿಸಲು ಬೇರೆ ಸೀರಿಯಲ್‌ಗಳ ನಾಯಕಿಯರು ಎಂಟ್ರಿ ಕೊಟ್ಟಿದ್ದು, ಕಥೆ ರೋಚಕ ತಿರುವು ಪಡೆದಿದೆ.

1 Min read
Author : Suchethana D
Published : Feb 21 2026, 10:32 PM IST
Share this Photo Gallery
  • FB
  • TW
  • Linkdin
  • Whatsapp
16
ಹೆಚ್ಚುತ್ತಿದೆ ಆಕ್ರೋಶ
Image Credit : Instagram

ಹೆಚ್ಚುತ್ತಿದೆ ಆಕ್ರೋಶ

ಕರ್ಣ ಸೀರಿಯಲ್​ (Karna Serial​) ವಿರುದ್ಧ ಇದೀಗ ವೀಕ್ಷಕರ ಆಕ್ರೋಶ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ, ಅಗತ್ಯಕ್ಕಿಂತ ಹೆಚ್ಚಾಗಿ ಒಳ್ಳೆಯವನಾಗಿರುವ ನಾಯಕ ಕರ್ಣ ಜೈಲಿಗೆ ಹೋದ ಅಂತಲ್ಲ, ಬದಲಿಗೆ ರೋಗಿಗಳ ಜೊತೆ ಚೆಲ್ಲಾಟ ಆಡುವಂಥ ದೃಶ್ಯಗಳನ್ನು ಪ್ರಸಾರ ಮಾಡಿರುವುದಕ್ಕಾಗಿ.

26
ಈ ದೃಶ್ಯ ಬೇಕಾ?
Image Credit : Zee Kannada Karna Serial

ಈ ದೃಶ್ಯ ಬೇಕಾ?

ಕರ್ಣನ ಮೇಲೆ ದ್ವೇಷ ಸಾಧಿಸಲು ವಿಲನ್​ಗಳಾದ ರಮೇಶ್​, ನಯನತಾರಾ ಎಲ್ಲರೂ ಸೇರಿ ಡೇಟ್​ ಬಾರ್​ ಆಗಿರುವಂಥ ಮೆಡಿಸಿನ್​ ಇಟ್ಟರು. ಅದಕ್ಕಾಗಿ ಅವರಿಗೆ ಆಸ್ಪತ್ರೆಯಲ್ಲಿಯೇ ಇರುವ ಒಬ್ಬ ಆಸಾಮಿ ಸಹಾಯ ಮಾಡಿದ. ಇದರಿಂದಾಗಿ ಮಹಿಳೆಯರು, ಮಕ್ಕಳು ಜೀವ ಕಳೆದುಕೊಳ್ಳುವ ದೃಶ್ಯವನ್ನು ಸೀರಿಯಲ್​ನಲ್ಲಿ ತೋರಿಸಲಾಯಿತು.

Related Articles

Related image1
Bigg Bossಗೆ ಎಂಟ್ರಿ ಆದಾಗ್ಲೇ ಎಲಿಮಿನೇಷನ್​ಗೂ ಸಹಿ! ಜನರ ವೋಟ್​ ಅನ್ನೋದೇ ಸುಳ್ಳು- ಕಹಿ ಅನುಭವ ತೆರೆದಿಟ್ಟ ನಟಿ ಚಿತ್ರಾಲ್​
Related image2
Naa Ninna Bidalaare ಇದೇನಿದು ಟ್ವಿಸ್ಟ್​? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!
36
ಸಿಕ್ಕಾಪಟ್ಟೆ ಗರಂ
Image Credit : Instagram

ಸಿಕ್ಕಾಪಟ್ಟೆ ಗರಂ

ಇದೇನೋ ಸೀರಿಯಲ್​. ಕಥೆ ಮುಂದೆ ಹೋಗಬೇಕು ಅಷ್ಟೇ. ಆದರೆ ಆಸ್ಪತ್ರೆಗಳ ಮೇಲೆ ಹಲವರು ವಿಶ್ವಾಸ ಇಟ್ಟಿರುತ್ತಾರೆ. ಆದರೆ ಯಾರದ್ದೋ ವೈಯಕ್ತಿಕ ಕಾರಣಗಳಿಂದ ಆಸ್ಪತ್ರೆಗಳಲ್ಲಿಯೂ ಈ ರೀತಿ ಆಗಲು ಸಾಧ್ಯ ಎನ್ನುವುದನ್ನು ನೆನಪಿಸಿಕೊಂಡೇ ಹಲವರು ಕಮೆಂಟ್​ನಲ್ಲಿ ಹಿಗ್ಗಾ ಮುಗ್ಗ ಬೈಯುತ್ತಿದ್ದಾರೆ.

46
ನಾಯಕಿಯರೆಲ್ಲಾ ಬಂದರು
Image Credit : Instagram

ನಾಯಕಿಯರೆಲ್ಲಾ ಬಂದರು

ಈಗ ಸೀರಿಯಲ್​ ಅನ್ನು ರೋಮಾಂಚನಗೊಳಿಸಲು ಕರ್ಣನನ್ನು ಜೈಲಿನಿಂದ ಬಿಡಿಸಲು ವಿವಿಧ ಸೀರಿಯಲ್​ಗಳ ನಾಯಕಿಯರು ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ, ಅಮೃತಧಾರೆ ಮಲ್ಲಿ, ಅಣ್ಣಯ್ಯ ರಾಣಿ ಎಲ್ಲರೂ ಬಂದಿದ್ದಾರೆ. ಇದು ವೀಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

56
ಮೈಮೇಲೆ ಆಹ್ವಾನಿಸಿಕೊಳ್ಳುವ ವರ್ಗ
Image Credit : Instagram

ಮೈಮೇಲೆ ಆಹ್ವಾನಿಸಿಕೊಳ್ಳುವ ವರ್ಗ

ಆದರೆ, ನಿಜ ಜೀವನದಲ್ಲಿ ಇವರನ್ನೇ ಕರೆಸ್ತೀರಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕುತಂತ್ರಗಳು ಮಾಡುವುದು ಸಿನಿಮಾ, ಸೀರಿಯಲ್​ ಎಲ್ಲವುಗಳ ಒಂದು ಭಾಗ ನಿಜ. ಆದರೆ ಧಾರಾವಾಹಿಗಳನ್ನು ಭಕ್ತಿಯಿಂದ ನೋಡುವ, ಅವುಗಳಲ್ಲಿನ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಳ್ಳುವ ದೊಡ್ಡ ವರ್ಗವೇ ಇರುವಾಗ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುವಂಥ ದೃಶ್ಯ ಮಾಡಿರುವುದಕ್ಕೆ ಸಿಕ್ಕಾಪಟ್ಟೆ ಜನರು ಬೈಯುತ್ತಿದ್ದಾರೆ.

66
ಎಲ್ಲವೂ ಅತಿ
Image Credit : Instagram

ಎಲ್ಲವೂ ಅತಿ

ನಾಯಕನ ಅತಿಯಾದ ಒಳ್ಳೆಯತನ, ವಿಲನ್​ಗಳ ಅತಿಯಾದ ಕ್ರೂರತನ ಎಲ್ಲವೂ ಅತಿಯಾಗಿ ತೋರಿಸುವುದು ಬಹುತೇಕ ಸೀರಿಯಲ್​ಗಳಲ್ಲಿ ಮಾಮೂಲಾಗಿದ್ದರೂ ಇಂಥ ಸೂಕ್ಷ್ಮ ವಿಷಯ ಬಂದಾಗ ಈ ರೀತಿ ದೃಶ್ಯಗಳನ್ನು ತೋರಿಸಬಾರದು ಎನ್ನುವುದು ಹಲವರ ಕಳಕಳಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Naa Ninna Bidalaare ಇದೇನಿದು ಟ್ವಿಸ್ಟ್​? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!
Recommended image2
ಕಾವ್ಯಾ ಜೊತೆ ತನ್ನದೇ ಮದ್ವೆ, ಮಗು ವಿಡಿಯೋ ನೋಡಿ ಗಿಲ್ಲಿ ನಟ ಫುಲ್​ ಶಾಕ್​: ಏನ್​ ಹೇಳಿದ್ರು ನೋಡಿ!
Recommended image3
ಗಿಲ್ಲಿ ನಟ ನಟಿಸಿದ ಎಲ್ಲಾ ಸಿನಿಮಾ ಫ್ಲಾಫ್; ಮುಂದೇನು ಎಂದು ಕೈಹೊತ್ತು ಕುಳಿತ ಬಿಗ್‌ ಬಾಸ್ ಚಾಂಪಿಯನ್!
Related Stories
Recommended image1
Bigg Bossಗೆ ಎಂಟ್ರಿ ಆದಾಗ್ಲೇ ಎಲಿಮಿನೇಷನ್​ಗೂ ಸಹಿ! ಜನರ ವೋಟ್​ ಅನ್ನೋದೇ ಸುಳ್ಳು- ಕಹಿ ಅನುಭವ ತೆರೆದಿಟ್ಟ ನಟಿ ಚಿತ್ರಾಲ್​
Recommended image2
Naa Ninna Bidalaare ಇದೇನಿದು ಟ್ವಿಸ್ಟ್​? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved