ಹನಿಮೂನ್ಲ್ಲಿ ಇದ್ರೂ ಬಿಡದ ಕರೋನಾ, ಚಂದನ್-ನಿವೇದಿತಾಗೆ ಹಂಗೆ ಬರಂಗಿಲ್ಲಣ್ಣ!
ಮೈಸೂರು(ಮಾ. 12) ಕನ್ನಡದ ಹೊಸ ತಲೆಮಾರಿನ ಗಾಯಕ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಬ್ಯೂಟಿ ನಿವೇದಿತಾ ಗೌಡ ಮದುವೆಯಾಗಿ ಹನಿಮೂನ್ ಗೆಂದು ವಿದೇಶಕ್ಕೆ ಹಾರಿದ್ದು ದೊಡ್ಡ ಸುದ್ದಿಯಾಗಿತ್ತು. ವಿದೇಶದಲ್ಲಿ ಅವರು ಎಂಜಾಯ್ ಮಾಡುತ್ತಿದ್ದ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈಗ ತವರಿಗೆ ವಾಪಾಸಾಗುವ ಕಾಲ ಬಂದಿದ್ದು ಅವರಿಗೂ ಕರೋನಾ ಕಾಟ ಕೊಡುತ್ತಿದೆ.
ಹನಿಮೂನ್ ಟ್ರಿಪ್ ಮುಗಿಸಿಕೊಂಡು ವಿದೇಶದಿಂದ ಭಾರತಕ್ಕೆ ಆಗಮಿಸುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಂಪತಿಗೆ ಕಡ್ಡಾಯವಾಗಿ ಕೊರೋನಾ ತಪಾಸಣೆಗೆ ಒಳಪಡಿಸನಬೇಕು ಎಂದು ಮನವಿಯೊಂದು ಸಲ್ಲಿಕೆಯಾಗಿದೆ.
ಮೈಸೂರು ಜಿಲ್ಲಾಧಿಕಾರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ ಸಂಘಟನೆ ಮನವಿ ಮಾಡಿದೆ.
ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ರಫೀಕ್ ಅಲಿ ಮನವಿ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ಈವರೆಗೆ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಮದುವೆ ನಂತರ ಹನಿಮೂನ್ಗೆ ನೆದರ್ಲೆಂಡ್, ಇಟಲಿಗೆ ಹೋಗಿದ್ದಾರೆ. ಅಲ್ಲಿ ಕರೋನಾ ಕಾಟ ಜೋರಾಗಿದೆ.
ಮೈಸೂರಿನಲ್ಲಿ ಅದ್ದೂರಿ ಮದುವೆ ಸಂಭ್ರಮ ಇತ್ತು.
ಬಿಗ್ ಬಾಸ್ ನಿಂದ ಒಂದಾದ ಜೋಡಿ
ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಅವರನ್ನು ಹಾಗೆ ಬಿಡಲು ಸಾಧ್ಯವಿಲ್ಲ. ಅವರಿಗೂ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.