MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Brahmagantu Serial: ಚಿರುಗೆ ಸವಾಲು ಹಾಕಿದ ನರಸಿಂಹ... ವಿಷ್ಣುವರ್ಧನ್ ಸಿನಿಮಾ ನೆನಪಿಸಿಕೊಂಡ‌ ವೀಕ್ಷಕರು

Brahmagantu Serial: ಚಿರುಗೆ ಸವಾಲು ಹಾಕಿದ ನರಸಿಂಹ... ವಿಷ್ಣುವರ್ಧನ್ ಸಿನಿಮಾ ನೆನಪಿಸಿಕೊಂಡ‌ ವೀಕ್ಷಕರು

Brahmagantu Serial: ಜೀ ಕನ್ನಡದ ಜನಪ್ರಿಯ ಧಾರಾವಾಹಿ ಬ್ರಹ್ಮಗಂಟುವಿನಲ್ಲಿ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ದೀಪಾಳನ್ನು ಅರಸಿ ಊರಿಗೆ ಹೋಗಿರುವ ಚಿರುಗೆ, ನರಸಿಂಹ ಟಾಸ್ಕ್ ಕೊಟ್ಟಿದ್ದು, ಈ ದೃಶ್ಯ ನೋಡಿ ವೀಕ್ಷಕರು ಸಾಹಸಸಿಂಹ ವಿಷ್ಣುವರ್ಧನ್ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. 

2 Min read
Author : Pavna Das
Published : Jan 19 2026, 03:22 PM IST
Share this Photo Gallery
  • FB
  • TW
  • Linkdin
  • Whatsapp
16
ಬ್ರಹ್ಮಗಂಟು ಸೀರಿಯಲ್
Image Credit : zee kannada

ಬ್ರಹ್ಮಗಂಟು ಸೀರಿಯಲ್

ಬ್ರಹ್ಮಗಂಟು ಧಾರಾವಾಹಿ ಇದೀಗ ಬದಲಾವಣೆಯ ಹಾದಿಯಲ್ಲಿದೆ. ಇಲ್ಲಿವರೆಗೆ ದಿಶಾ, ದೀಪಾ ಕಥೆ ನಡೆಯುತ್ತಿತ್ತು, ಇನ್ನು ಮುಂದೆ ಹೊಸ ಕತೆ ತೆರೆದುಕೊಳ್ಳುವ ಹಾಗೇ ಕಾಣಿಸುತ್ತಿದೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಇದೀಗ ಏನು ನಡೆಯುತ್ತಿದೆ. ವೀಕ್ಷಕರು ಯಾಕೆ ವಿಷ್ಣುವರ್ಧನ್ ಅವರ ಸಿನಿಮಾ ನೆನಪಿಸಿಕೊಂಡರು ಎಲ್ಲಾ ಮಾಹಿತಿ ಇಲ್ಲಿದೆ.

26
ಏನಾಗ್ತಿದೆ ಧಾರಾವಾಹಿಯಲ್ಲಿ?
Image Credit : zee kannada

ಏನಾಗ್ತಿದೆ ಧಾರಾವಾಹಿಯಲ್ಲಿ?

ಸೌಂದರ್ಯ ದಿಶಾ ಬಳಿ ಚಿರುವಿಗೆ ಪ್ರಪೋಸ್ ಮಾಡಲು ಹೇಳುತ್ತಾಳೆ. ಅದರಂತೆ ಚಿರು ನಿಜವಾಗಿಯೂ ಗುಣಕ್ಕೆ ಬೆಲೆ ಕೊಡುತ್ತಾನೆಯೇ ಅಥವಾ ಸೌಂದರ್ಯಕ್ಕೆ ಬೆಲೆ ಕೊಡುತ್ತಾನೋ ಅನ್ನೋದನ್ನು ತಿಳಿಯಲು, ದೀಪಾ ದಿಶಾ ಆಗಿ ಚಿರುವಿಗೆ ಪ್ರಪೋಸ್ ಮಾಡಿಯೇ ಬಿಟ್ಟಳು. ಆದರೆ ದಿಶಾಳಲ್ಲೂ ದೀಪಾಳನ್ನೇ ಕಂಡ ಚಿರು ತಾನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಳ್ಳುತ್ತಾನೆ.

Related Articles

Related image1
ಇದು ತ್ಯಾಗವಲ್ಲ, ಮೂರ್ಖತನದ ಪರಮಾವಧಿ! ಏನು ಕಲಿಸಹೊರಟಿದೆ Brahmagantu Serial?
Related image2
Brahmagantu ದೀಪಾ ಇದೆಂಥ ನಡೆ? ದಿಶಾ ಪಯಣಕ್ಕೆ ವಿದಾಯ ಹೇಳಿ ಬಿಟ್ಟು ಹೋಗೇ ಬಿಟ್ಟಳು!
36
ದೀಪಾಗೆ ಆಘಾತ
Image Credit : zee kannada

ದೀಪಾಗೆ ಆಘಾತ

ಚಿರು ತನ್ನನ್ನು ಪ್ರೀತಿಸ್ತಾ ಇಲ್ಲ, ದಿಶಾಳನ್ನು ಪ್ರೀತಿಸುತ್ತಿದ್ದಾನೆ. ಆತನಿಗೆ ಗುಣಕ್ಕಿಂತ ಹೆಚ್ಚು ಸೌಂದರ್ಯವೇ ಮುಖ್ಯ ಎಂದು ನಂಬಿಕೊಂಡ ದೀಪಾ ಹೃದಯ ಒಡೆದು ಚೂರಾಗುತ್ತದೆ. ಗಂಡನ ಜೊತೆ ಇರಲಾರದೆ ಚಿರುಗೂ ಹೇಳದೇ ಮನೆ ಬಿಟ್ಟು ತನ್ನ ತವರು ಮನೆ ಸೇರಿದ್ದಾಳೆ.

46
ದೀಪಾ ತವರೂರಿಗೆ ಹೊರಟ ಚಿರು
Image Credit : zee kannada

ದೀಪಾ ತವರೂರಿಗೆ ಹೊರಟ ಚಿರು

ಹೆಂಡತಿಯನ್ನು ಒಂದು ನಿಮಿಷವೂ ಕಾಣದೇ ಇರಲಾರದ ಚಿರು, ಆಕೆಯನ್ನು ಹುಡುಕಿಕೊಂಡು ಮಾವನ ಮನೆಗೆ ಹೊರಟೇ ಬಿಡುತ್ತಾನೆ. ಆದರೆ ಆತನನ್ನು ತಡೆಯುವ ದೀಪಾ ಅಣ್ಣ ನರಸಿಂಹ ಚಿರುಗೆ ಸವಾಲು ಹಾಕುತ್ತಾನೆ. ನನ್ನ ತಂಗಿ ಹಳ್ಳಿ ಹುಡುಗಿ ಅಲ್ವಾ? ಅವಳಲ್ಲಿರೋ ಒಳ್ಳೆ ಗುಣ ನಿಮ್ಮಂತ ಶ್ರೀಮಂತರಿಗೆ ಇಲ್ಲ ಎನ್ನುತ್ತಾ ತಾನು ತಂಗಿಯನ್ನು ಭೇಟಿಯಾಗಲು ಬಿಡೋದೆ ಇಲ್ಲ ಎನ್ನುತ್ತಾನೆ ನರಸಿಂಹ.

56
ಸಹೋದರನ ಸವಾಲು
Image Credit : zee kannada

ಸಹೋದರನ ಸವಾಲು

ಕೊನೆಗೆ ಚಿರು ಹಾಗಿದ್ರೆ ನಿಮ್ ಪ್ರಕಾರ ನಾನು ತಪ್ಪು ಮಾಡಿದ್ದೀನಿ ಅಲ್ವಾ? ಅದನ್ನ ತಿದ್ದಿಕೊಳ್ಳೋದಕ್ಕೆ ನಾನು ಏನು ಮಾಡಬೇಕು ಹೇಳು ಎನ್ನುತ್ತಾನೆ. ಅದಕ್ಕೆ ನರಸಿಂಹ ನೀವು ಈ ಊರಿನಲ್ಲಿದ್ದು, ಯಾರ ಸಹಾಯಾನೂ ಇಲ್ಲದೇ, ದುಡಿದು ಸಂಪಾದನೆ ಮಾಡಿ ತೋರಿಸಿ ಎನ್ನುತ್ತಾನೆ. ಅದಕ್ಕೆ ಚಿರು ಒಪ್ಪಿಗೆ ಸೂಚಿಸುತ್ತಾನೆ.

66
ವಿಷ್ಣುವರ್ಧನ್ ಸಿನಿಮಾ ನೆನಪಿಸಿದ ಜನ
Image Credit : zee kannada

ವಿಷ್ಣುವರ್ಧನ್ ಸಿನಿಮಾ ನೆನಪಿಸಿದ ಜನ

ಈ ದೃಶ್ಯವನ್ನು ನೋಡಿ ವೀಕ್ಷಕರು ವಿಷ್ಣುವರ್ಧನ್ ಅವರ ‘ ನೀನೆಲ್ಲೋ ನಾನಲ್ಲೆ’ ಸಿನಿಮಾ ನೆನಪಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಕ್ಷಿತಾ ಮತ್ತು ಅನಿರುದ್ಧ ಮುಖ್ಯಪಾತ್ರದಲ್ಲಿ ನಟಿಸಿದ್ದರು. ನಾಯಕಿಗಾಗಿ ವಿದೇಶ ಬಿಟ್ಟು ಹಳ್ಳಿಗೆ ಬರುವ ನಾಯಕ, ಕೊನೆಗೆ ನಾಯಕಿಯ ಅಣ್ಣ ಅಂದ್ರೆ ವಿಷ್ಣುವರ್ಧನ್ ಹಾಕಿದ ಸವಾಲಿನಂತೆ ಊರಿನಲ್ಲಿದ್ದುಕೊಂಡು, ಯಾರ ಸಹಾಯವೂ ಇಲ್ಲದೇ ಬೆಳೆ ಬೆಳೆದು ತೋರಿಸುತ್ತಾನೆ. ಇದೀಗ ಬ್ರಹ್ಮಗಂಟು ಸೀರಿಯಲ್ ನಲ್ಲೂ ಸಹ ಅದೇ ನಡೆಯುತ್ತೆ. ಮುಂದೆ ಏನೆಲ್ಲಾ ಆಗುತ್ತೆ ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಬ್ರಹ್ಮಗಂಟು ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
BBK ಗಿಲ್ಲಿ ಮದ್ವೆಗೆ ಅಮ್ಮನ ಗ್ರೀನ್​ ಸಿಗ್ನಲ್​: ಕಾವ್ಯಾಳನ್ನು ಎತ್ತಾಕ್ಕೊಂಡು ಬಂದು ಮದ್ವೆ ಮಾಡಿಸ್ತೀವಿ ಎಂದ ಫ್ಯಾನ್ಸ್​!
Recommended image2
BBK 12: ಗಿಲ್ಲಿ-ರಕ್ಷಿತಾ ಗೆಲ್ಲೋದಕ್ಕೆ ಅಶ್ವಿನಿ ಗೌಡ ಕಾರಣ.. ಹಬ್ಬಿರುವ ಈ ಸುದ್ದಿಗೆ 'ಸಾಕ್ಷಿ' ಹೀಗಿದೆ ನೋಡಿ!
Recommended image3
BBK 12: ಆ ಗೆಟಪ್​ ಹಾಕ್ಕೊಂಡು ಗೆದ್ದಿರೋದು ಸರೀನಾ? ಗಿಲ್ಲಿಯ ಹೊಗಳುತ್ತಲೇ ತಿವಿದ Ashwini Gowda ಏನಂದ್ರು ಕೇಳಿ!
Related Stories
Recommended image1
ಇದು ತ್ಯಾಗವಲ್ಲ, ಮೂರ್ಖತನದ ಪರಮಾವಧಿ! ಏನು ಕಲಿಸಹೊರಟಿದೆ Brahmagantu Serial?
Recommended image2
Brahmagantu ದೀಪಾ ಇದೆಂಥ ನಡೆ? ದಿಶಾ ಪಯಣಕ್ಕೆ ವಿದಾಯ ಹೇಳಿ ಬಿಟ್ಟು ಹೋಗೇ ಬಿಟ್ಟಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved