MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಹೋಟೆಲ್​ ಉದ್ಯಮಕ್ಕೆ ಕಾಲಿಟ್ಟ Bigg Boss ಉಗ್ರಂ ಮಂಜು: ಏನಿದರ ಸ್ಪೆಷ್ಯಾಲಿಟಿ? ಎಲ್ಲಿದೆ

ಹೋಟೆಲ್​ ಉದ್ಯಮಕ್ಕೆ ಕಾಲಿಟ್ಟ Bigg Boss ಉಗ್ರಂ ಮಂಜು: ಏನಿದರ ಸ್ಪೆಷ್ಯಾಲಿಟಿ? ಎಲ್ಲಿದೆ

'ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.

1 Min read
Author : Suchethana D
Published : Jul 08 2026, 08:52 PM IST
Share this Photo Gallery
  • FB
  • TW
  • Linkdin
  • Whatsapp
16
ಗುಡ್​ನ್ಯೂಸ್​ ಕೊಟ್ಟ ಉಗ್ರಂ ಮಂಜು
Image Credit : Ugram Manju Instagram

ಗುಡ್​ನ್ಯೂಸ್​ ಕೊಟ್ಟ ಉಗ್ರಂ ಮಂಜು

ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ನಟನಾಗಿ ಮಿಂಚುತ್ತಿದ್ದ ಉಗ್ರಂ ಮಂಜು, ಎಲ್ಲ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದದ್ದು ʻಬಿಗ್ ಬಾಸ್ʼ ಸೀಸನ್​ ಮೂಲಕ. ಇದೀಗ ಅವರ ಹೆಸರಿನ ಹಿಂದೆ ಬಿಗ್ ಬಾಸ್ ಖ್ಯಾತಿಯ ಎನ್ನುವ ಬಿರುದು ಸೇರಿಕೊಳ್ಳುತ್ತದೆ. ಈಚೆಗಷ್ಟೇ ಇವರ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆಯಾಗಿದೆ. ಇವೆಲ್ಲವುಗಳ ನಡುವೆ ಹೊಸದೊಂದು ಗುಡ್​ನ್ಯೂಸ್ ಕೊಟ್ಟಿದ್ದಾರೆ ಮಂಜು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸ್ನೇಹಿತೆ ಜೊತೆ ಮದುವೆ
Image Credit : Instagram

ಸ್ನೇಹಿತೆ ಜೊತೆ ಮದುವೆ

ಅಷ್ಟಕ್ಕೂ ನಟ ಉಗ್ರಂ ಮಂಜು (Bigg Boss Ugram Manju) ಕಳೆದ ಜನವರಿಯಲ್ಲಿ ತಮ್ಮ ಸ್ನೇಹಿತೆ ಸಂಧ್ಯಾ ಜೊತೆ ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದೇ ತಿಂಗಳಿಗೆ ಹೊಸ ಬಿಜಿನೆಸ್​ ಶುರು ಮಾಡಿದ್ದಾರೆ ಉಗ್ರಂ ಮಂಜು. ಅವರು ಹೋಟೆಲ್​ ಉದ್ಯಮವನ್ನು ಆರಂಭ ಮಾಡಿದ್ದಾರೆ. ಈ ಕುರಿತು ವಿಶೇಷ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

Related Articles

Related image1
ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಂಟ್​ ಆಗತ್ತೆ- ಭವ್ಯಾ ಗೌಡ ಮನವಿ
Related image2
Karna Serial ಅನಿರೀಕ್ಷಿತ ತಿರುವು: ಗಂಡನಿಗೆ ಮಾಲತಿ ಕಪಾಳಮೋಕ್ಷ- ಕಮೆಂಟಿಗರ ರಿಪ್ಲೈಗೆ ಗಂಡಸರು ಶಾಕ್​​
36
ವಿಶೇಷ ವಿಡಿಯೋ ಶೇರ್​
Image Credit : Instagram

ವಿಶೇಷ ವಿಡಿಯೋ ಶೇರ್​

ಇದರಲ್ಲಿ ಮಂಜು ಅವರೇ ಬಾಣಸಿಗನಾಗಿರುವುದನ್ನು ಕಾಣಬಹುದು. ದೊಡ್ಡ ಪಾತ್ರೆಯಲ್ಲಿ ಸೌಟು ಹಿಡಿದು ಅಡುಗೆ ಮಾಡುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಈ ಹೊಸ ಉದ್ಯಮಕ್ಕೆ ಎಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ.

46
ಪ್ರೀತಿ ಇರಲಿ
Image Credit : Instagram

ಪ್ರೀತಿ ಇರಲಿ

ನಾನು ನಿಮ್ಮ ಪ್ರೀತಿಯ ಉಗ್ರಂ ಮಂಜು. ಇಷ್ಟು ದಿನ ಕಲಾವಿದನಾಗಿ ನನಗೆ ನಿಮ್ಮ ಪ್ರೀತಿ ಕೊಟ್ಟಿದ್ದೀರಾ. ಇವಾಗ ಹೋಟೆಲ್ ಉದ್ಯಮ ಪ್ರಾರಂಭ ಮಾಡಿದ್ದೇನೆ. ಇದಕ್ಕೂ ನಿಮ್ಮ ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ" ಎಂದಿದ್ದಾರೆ.

56
ಎಲ್ಲಿದೆ ಹೋಟೆಲ್​
Image Credit : our own

ಎಲ್ಲಿದೆ ಹೋಟೆಲ್​

ಮಂಡಿಪೇಟೆ ಶೈಲಿಯ ರುಚಿಕರ ಆಹಾರಕ್ಕೆ ಫೇಮಸ್ ಆಗಿರುವುದಾಗಿ ತಿಳಿಸಲಾಗಿದೆ. ನಾಟಿ ಶೈಲಿಯ ಹಾಗೂ ಮೈಸೂರು ಶೈಲಿಯ ಪಲಾವ್ ಪ್ರಿಯರಿಗಾಗಿ ಈ ಹೋಟೆಲ್ ಮಸ್ತ್ ತಾಣವಾಗಲಿದೆ. ಅಂದಹಾಗೆ ʻಮಂಡಿಪೇಟೆ ಮೈಸೂರು ಪಲಾವ್ʼ ಹೆಸರಿನ ಈ ಹೋಟೆಲ್​ ಬೆಂಗಳೂರಿನ ತಲಘಟ್ಟಪುರ ಬ್ರಾಂಚ್ ಕನಕಪುರ ರಸ್ತೆಯಲ್ಲಿ ತೆರೆಯಲಾಗಿರುವುದಾಗಿ ನಟ ಹೇಳಿದ್ದಾರೆ.

66
ಉಗ್ರಂ ಹೆಸರು ಬಂದಿದ್ದು ಹೇಗೆ?
Image Credit : our own

ಉಗ್ರಂ ಹೆಸರು ಬಂದಿದ್ದು ಹೇಗೆ?

ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ವ್ಯವಹಾರ

Latest Videos
Recommended Stories
Recommended image1
'ಅಂತರಪಟ' ಖ್ಯಾತಿಯ ನಟಿ ರಾಧ್ಯಾ ರಾಜ್ 10 ವರ್ಷದ ಕನಸು ನನಸು: ಹೊಸ ಕಾರು ಖರೀದಿ ಬೆನ್ನಲ್ಲೇ ಭಾವುಕ ಪೋಸ್ಟ್!
Recommended image2
ಮಳೆಯಿಂದ ಹೆದ್ದಾರಿಯಲ್ಲಿ 9 ಗಂಟೆ ಟ್ರಾಫಿಕ್ ಜಾಮ್: ಪೀರಿಯಡ್ಸ್‌ ನರಕಯಾತನೆ ಬಿಚ್ಚಿಟ್ಟ ಸೀರಿಯಲ್‌ ನಟಿ
Recommended image3
RIP ಕಂದಮ್ಮ.. ಅಗಲಿದ ಮುದ್ದಿನ ನಾಯಿಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಕಿಶನ್ ಬಿಳಗಲಿ
Related Stories
Recommended image1
ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಂಟ್​ ಆಗತ್ತೆ- ಭವ್ಯಾ ಗೌಡ ಮನವಿ
Recommended image2
Karna Serial ಅನಿರೀಕ್ಷಿತ ತಿರುವು: ಗಂಡನಿಗೆ ಮಾಲತಿ ಕಪಾಳಮೋಕ್ಷ- ಕಮೆಂಟಿಗರ ರಿಪ್ಲೈಗೆ ಗಂಡಸರು ಶಾಕ್​​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved