ಬಿಗ್ಬಾಸ್ ಮನೆಯಲ್ಲಿ ಮತ್ತೆ ಬಳೆ ಸದ್ದು; ಅಂದು ವಿನಯ್ ಗೌಡ, ಇಂದು ಕಿರಣ್ ಶಾಸ್ತ್ರಿ!
ಬಿಗ್ಬಾಸ್ ಕನ್ನಡದ ಹೊಸ ಸೀಸನ್ನಲ್ಲಿ, ಟಾಸ್ಕ್ ವಿಚಾರವಾಗಿ ಕಿರಣ್ ಶಾಸ್ತ್ರಿ ಅವರು ಗಗನ್ ಅವರಿಗೆ 'ಬಳೆ ಹಾಕೊಳ್ಳಿ' ಎಂದು ಹೇಳಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಗಗನ್ ಅವರು ಕಿರಣ್ ಮಾತಿಗೆ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.

ಬಳೆ ವಿಚಾರ
ಬಿಗ್ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮತ್ತೊಮ್ಮೆ ಬಳೆ ವಿಚಾರ ಮುನ್ನಲೆಗೆ ಬಂದಿದೆ. ಗಗನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲಿ ಬಳೆ ಹಾಕೊಳ್ಳಿ ಎಂದು ವಾಗ್ದಾಳಿ ನಡೆಸುತ್ತಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಗಗನ್ ಚಿನ್ನಪ್ಪ, ಬಳೆ ಹಾಕೊಂಡ್ರೆ ಏನು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಸೀಸನ್ 10ರಲ್ಲಿ ನಡೆದ ಬಳೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು.
ಪ್ರೋಮೋದಲ್ಲಿ ಏನಿದೆ?
ಸೋಮವಾರದ ಸಂಚಿಕೆಯಲ್ಲಿ ಮನೆಯ ಪೈಲಟ್ ಆಗಲು ಬಿಗ್ಬಾಸ್ ಕಣ್ಗಾವಲು ಟಾಸ್ಕ್ ನೀಡಿದ್ದರು. ಮಂಜುನಾಥ್, ಧನುಷ್, ಕಿರಣ್ ಶಾಸ್ತ್ರಿ, ಸಂಗೀತಾ ಭಟ್ ಮತ್ತು ಸೌಂದರ್ಯಾ ಶೆಟ್ಟಿ ಆಟವಾಡಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಟಾಸ್ಕ್ ನಿರ್ವಹಣೆ ಮಾಡಿದ್ದಾರೆ. ಸ್ಪರ್ಧಿಗಳು ಆಕ್ಟಿವಿಟಿ ರೂಮ್ನಲ್ಲಿರೋ 360 ಡಿಗ್ರಿ ಆಂಗಲ್ ಸುತ್ತುವ ಕ್ಯಾಮೆರಾ ಕಣ್ತಪ್ಪಿಸಿ ಅಲ್ಲಿಯ ವಸ್ತುಗಳನ್ನು ತೆಗೆದುಕೊಂಡು ಬರಬೇಕು ಎಂದು ಸೂಚಿಸಲಾಗಿತ್ತು.
ಕಿರಣ್ ಶಾಸ್ತ್ರಿ ಕೋಪಕ್ಕೆ ಕಾರಣ ಏನು?
ಕ್ಯಾಮೆರಾ ಕಣ್ಣಿಗೆ ಅತಿಹೆಚ್ಚು ಬಾರಿ ಕಾಣಿಸಿಕೊಂಡ ಎಂಬ ಕಾರಣದಿಂದ ಕಿರಣ್ ಅವರ ತೆಗೆದುಕೊಂಡು ಬಂದ ಎಲ್ಲಾ ವಸ್ತುಗಳನ್ನು ತಾಂಡವ್ ಸೇರಿದಂತೆ ಎಲ್ಲಾ ಸದಸ್ಯರು ಮೈನಸ್ ಪಟ್ಟಿಗೆ ಸೇರಿಸಿ ಝೀರೋ ಎಂದು ಘೋಷಣೆ ಮಾಡುತ್ತಾರೆ. ಇದು ಸಹಜವಾಗಿಯೇ ಕಿರಣ್ ಶಾಸ್ತ್ರಿ ಕೋಪಕ್ಕೆ ಕಾರಣವಾಗುತ್ತದೆ. ತಾಂಡವ್ ಮತ್ತು ಗಗನ್ ವಿರುದ್ಧ ವಾಗ್ದಾಳಿ ನಡೆಸುವಾಗ ಬಳೆ ಹಾಕೊಳ್ಳಿ ಎಂದು ಕಿರಣ್ ಶಾಸ್ತ್ರಿ ಹೇಳುತ್ತಾರೆ.
ಸೀಸನ್ 10ರಲ್ಲಿ ಏನಾಗಿತ್ತು?
ಸೀಸನ್ 10ರ ಟಾಸ್ಕ್ ವೇಳೆ ಕಾರ್ತಿಕ್ ಮಹೇಶ್ ಮತ್ತು ಸಂಗೀತಾ ಶೃಂಗೇರಿ ವಿರುದ್ಧ ಆಕ್ರೋಶ ಹೊರಹಾಕೋ ಸಂದರ್ಭದಲ್ಲಿ ವಿನಯ್ ಗೌಡ, ಬಳೆ ಹಾಕೊಳ್ಳಿ ಎಂದು ಜರಿದಿದ್ದದರು. ಈ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾರ್ತಿಕ್, ಬಳೆ ಧರಿಸಿಯೇ ವಿನಯ್ ಮುಂದೆ ಬಂದು ನಿಂತಿದ್ದರು. ಇನ್ನು ಸಂಗೀತಾ ಶೃಂಗೇರಿ, ಕೈ ತುಂಬಾ ಬಳೆ ಧರಿಸಿ ವಿನಯ್ ಗೌಡಗೆ ಸವಾಲೆಸಿದಿದ್ದರು.
ಬಳೆಗೆ ಕಿಚ್ಚನ ಚಪ್ಪಾಳೆ
ಆ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್, ಬಳೆಗಳಿಗೆ ಕಿಚ್ಚನ ಚಪ್ಪಾಳೆ ನೀಡಿದ್ದರು. ನಂತರದ ಹಲವು ದಿನಗಳವರೆಗೆ ಸಂಗೀತಾ, ದೀರ್ಘಕಾಲದವರೆಗೆ ಕೈ ತುಂಬಾ ಬಳೆ ಧರಿಸಿದ್ದರು. ಇನ್ನು ಮನೆಯ ಹೊರಗಡೆ ಮಹಿಳೆಯರು, ಕೈ ತುಂಬಾ ಬಳೆ ಹಾಕಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಬಿಗ್ಬಾಸ್ ಮನೆಯಿಂದ ಹೊರಬಂದ ನಂತ್ರವೂ ಸಂಗೀತಾ ಶೃಂಗೇರಿ, ಎಲ್ಲಾ ಸಂದರ್ಶನಗಳಿಗೂ ಎರಡೂ ಕೈಗಳ ತುಂಬಾ ಬಣ್ಣ ಬಣ್ಣದ ಬಳೆ ಧರಿಸಿಯೇ ಹಾಜರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

