MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಕಿಚ್ಚ ಸುದೀಪ್‌ ಮುಂದೆ ತಪ್ಪೊಪ್ಪಿಕೊಂಡ ರಕ್ಷಿತಾ ಶೆಟ್ಟಿ; ಮಾನವೀಯತೆಗೆ ಸಿಗ್ತು ಚಪ್ಪಾಳೆ

BBK 12: ಕಿಚ್ಚ ಸುದೀಪ್‌ ಮುಂದೆ ತಪ್ಪೊಪ್ಪಿಕೊಂಡ ರಕ್ಷಿತಾ ಶೆಟ್ಟಿ; ಮಾನವೀಯತೆಗೆ ಸಿಗ್ತು ಚಪ್ಪಾಳೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರೇ ಕಿರಿಯ ಸ್ಪರ್ಧಿ. ಕಳೆದ ಬಾರಿ ರಘು ಅವರನ್ನು ಕಾರಣವಿಲ್ಲದೆ ನಾಮಿನೇಟ್‌ ಮಾಡಿದ್ದು, ಆಟದಲ್ಲಿ ಅತಿರೇಕ ಮಾಡಿದ್ದಕ್ಕೆ ಕಿಚ್ಚ ಸುದೀಪ್‌ ಅವರು ತರಾಟೆಗೆ ತೆಗೆದುಕೊಂಡಿದ್ದರು. ಈ ಬಾರಿ ಹೊಗಳಿದ್ದಾರೆ.

2 Min read
Padmashree Bhat
Published : Nov 23 2025, 08:39 AM IST
Share this Photo Gallery
  • FB
  • TW
  • Linkdin
  • Whatsapp
16
ಬುದ್ಧಿವಾದ ಹೇಳಿದ್ದ ಪುಟ್ಟಿ
Image Credit : colors kannada

ಬುದ್ಧಿವಾದ ಹೇಳಿದ್ದ ಪುಟ್ಟಿ

ರಘು ಹಾಗೂ ಅಶ್ವಿನಿ ಗೌಡ ನಡುವೆ ಜಗಳ ಆಗಿತ್ತು. ಅಶ್ವಿನಿ ಗೌಡಗೆ ಊಟ ಮಾಡೋಕೆ ಹೇಳಿ ಎಂದು ರಕ್ಷಿತಾ ಬುದ್ಧಿವಾದ ಹೇಳಿದ್ದರು. ಇನ್ನೊಂದು ಟಾಸ್ಕ್‌ನಲ್ಲಿ ಗಿಲ್ಲಿ ನಟ ಅವರು ಅಶ್ವಿನಿಗೆ ಪರ್ಸನಲ್‌ ಆಗಿ ಮಾತನಾಡಿದಾಗಲೂ ಕೂಡ ರಕ್ಷಿತಾ ಅದನ್ನು ವಿರೋಧಿಸಿದ್ದರು. ಅಶ್ವಿನಿ ಬಳಿ ಕ್ಷಮೆ ಕೇಳಿ ಎಂದು ಅವರು ಬುದ್ಧಿ ಹೇಳಿದ್ದರು.

26
ಸಮರ್ಥನೆ ಮಾಡಿಕೊಳ್ಳಲಿಲ್ಲ
Image Credit : colors kannada

ಸಮರ್ಥನೆ ಮಾಡಿಕೊಳ್ಳಲಿಲ್ಲ

ಕಿಚ್ಚ ಸುದೀಪ್‌ ಬೈದಾಲೂ ಕೂಡ ತನ್ನನ್ನು ಸಮರ್ಥನೆ ಮಾಡಿಕೊಳ್ಳೋಕೆ ಹೋಗದೆ, ತಪ್ಪು ಆಗಿದೆ ಅಂತ ಒಪ್ಪಿಕೊಂಡರು. ತನಗೆ ಕೊಟ್ಟ ಕೆಲಸ, ಆಟ ಎಲ್ಲವನ್ನು ಚೆನ್ನಾಗಿ ಮಾಡಿದ್ದಾರೆ. ಎಲ್ಲಿ ಎಷ್ಟು ಮಾತಾಡ್ಬೇಕು ಅಷ್ಟು ನಿಭಾಯಿಸಿಕೊಂಡು ಯಾರಿಗೂ ಬೇಜಾರಾಗೋತರ ಮಾತಾಡಿರಲಿಲ್ಲ.

Related Articles

Related image1
BBK 12: ಮಹಿಳಾ ಸ್ಪರ್ಧಿ ಕೊಟ್ಟ ಶಾಕ್‌ಗೆ ಮಕ್ಕರ್ ಆದ ಗಿಲ್ಲಿ ನಟ; ಊಹೆ ಮಾಡಿರಲಿಲ್ಲ ಮಾತಿನ ಮಲ್ಲ
Related image2
BBK 12: ಅಶ್ವಿನಿ ಅವ್ರೇ..ಎಮೋಶನ್‌ ಬ್ಲ್ಯಾಕ್‌ಮೇಲ್‌ ಮಾಡ್ತೀರಾ? ಮುಖದ್ಮೇಲೆ ಹೇಳ್ತೀನಿ: ಕಿಚ್ಚ ಸುದೀಪ್
36
ನಂಗೆ ನಾಮಿನೇಟ್‌ ಮಾಡಿದ್ದು ಸರಿ ಇದೆ
Image Credit : colors kannada

ನಂಗೆ ನಾಮಿನೇಟ್‌ ಮಾಡಿದ್ದು ಸರಿ ಇದೆ

ರಘು ಅವರು ತನಗೆ ರಿಟರ್ನ್ ನಾಮಿನೆಟ್ ಮಾಡಿದಾಗಲೂ ಕೂಡ ಬೇಜಾರಾಯಿತಾ ಅಂತ ಕೇಳಿದ್ರೆ, ಇಲ್ಲ, ಇದು ನಂಗೆ ಆಗ್ಬೇಕು, ಸ್ವಲ್ಪ ಗೊತ್ತಾಗುತ್ತೆ ಹೇಗಿರಬೇಕು ಅಂತ ತಪ್ಪು ಮಾಡೋಲ್ಲ ನೆಕ್ಸ್ಟ್, ಹಾಗಾಗಿ ನಂಗೆ ಪರವಾಗಿಲ್ಲ ಅಂತ ರಕ್ಷಿತಾ ಒಪ್ಪಿಕೊಂಡಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ.

46
ಪರ್ಸನಲ್‌ ವಿಷಯ ಮಾತನಾಡಲಿಲ್ಲ
Image Credit : colors kannada

ಪರ್ಸನಲ್‌ ವಿಷಯ ಮಾತನಾಡಲಿಲ್ಲ

ಕ್ಯಾಪ್ಟನ್ ಸೆಲೆಕ್ಟ್ ಮಾಡುವಾಗ ಸ್ವಲ್ಪ ಕೂಡ ಅಭಿಷೇಕ್‌ ಶ್ರೀಕಾಂತ್‌ ಮುಂದೆ ಪರ್ಸನಲ್ ವಿಷಯ ಮಾತಾಡದೆ, ಅವರಿಗೆ ನೋವು ಆಗೋ ತರ ಮಾತಾಡದೆ ಕೊಟ್ಟಿದ್ದ ಜವಾಬ್ದಾರಿ ನಿಭಾಯಿಸಿಕೊಂಡಿದ್ದು ತುಂಬಾ ಚೆನ್ನಾಗಿ ಇತ್ತು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

56
ಚೆನ್ನಾಗಿ ಆಟ ಆಡ್ತಿದೀರಿ, ಹಾಳಾಗಬೇಡಿ
Image Credit : colors kannada

ಚೆನ್ನಾಗಿ ಆಟ ಆಡ್ತಿದೀರಿ, ಹಾಳಾಗಬೇಡಿ

ಹೋದ ವಾರ ಕೆಲವರಿಗೆ ಅವರೇ ಅವರಿಗೆ ಮುಳ್ಳಾಗ್ತಿದ್ದಾರೆ, ಚೆನ್ನಾಗಿ ಆಟ ಆಡ್ತಿದೀರಿ, ಹಾಳಾಗಬೇಡಿ ಎಂದು ಬುದ್ಧುವಾದ ಹೇಳಿದ್ದೀನಿ. ಕಳೆದ ವಾರ ಆಟ ಎಲ್ಲೋ ಹೋಗ್ತಿದೆ, ಆಟ ಸರಿಯಾಗಿ ಆಡ್ತಿಲ್ಲ ಎಂದು ಬುದ್ಧಿವಾದ ಹೇಳಿದ್ದೆ, ಅದನ್ನು ತಿದ್ದಿಕೊಂಡು ನೀಟ್‌ ಆಗಿ ಆಟ ಆಡಿದ್ರಿ. ಮಾನವೀಯತೆಯನ್ನು ತೋರಿಸಿದ್ರಿ. ಯಾರ ಹತ್ರ ಬೈಸಿಕೊಳ್ತಿದ್ದರೋ ಅವರ ಬಳಿ ಉತ್ತಮ ಎಂದು ಹೇಳಿಸಿಕೊಳ್ತೀರಿ. ಅಶ್ವಿನಿ ಗೌಡ ಊಟ ಮಾಡಿಲ್ಲ ಅಂದಾಗ ಪದೇ ಪದೇ ಊಟ ಮಾಡಿ ಅಂತ ಹೇಳ್ತೀರಿ, ಅದನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

66
ಕ್ಷಮೆ ಕೇಳಿದ ರಕ್ಷಿತಾ
Image Credit : colors kannada

ಕ್ಷಮೆ ಕೇಳಿದ ರಕ್ಷಿತಾ

“ನಾನು ಕಳೆದ ವಾರ ಅನಗತ್ಯವಾಗಿ ಅತಿರೇಕ ಅಂತ ಅನಿಸಿತು. ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ. ಈ ವಾರ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಖುಷಿ ಆಗಿದೆ” ಎಂದು ರಕ್ಷಿತಾ ಹೇಳಿದ್ದಾರೆ. ರಕ್ಷಿತಾ ಆಟ ವೀಕ್ಷಕರಿಗೆ ಇಷ್ಟ ಆಗ್ತಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
Latest Videos
Recommended Stories
Recommended image1
BBK 12: ಕಿಚ್ಚನ ಚಪ್ಪಾಳೆ ಪಡೆದುಕೊಂಡ ರಕ್ಷಿತಾ ಶೆಟ್ಟಿಗೆ ಮಹತ್ವದ ಜವಾಬ್ದಾರಿ ನೀಡಿದ ಸುದೀಪ್!
Recommended image2
BBK 12: ಆ ಆಡಿಯೋ ಲೀಕ್‌ ಆಯ್ತು; ಕಿಚ್ಚ ಸುದೀಪ್‌ ಮುಂದೆ ಮಾತಾಡಲು ತತ್ತರಿಸಿದ ಅಶ್ವಿನಿ ಗೌಡ
Recommended image3
ಬಿಗ್ ಬಾಸ್ ಬೆನ್ನಲ್ಲೇ ಕಾಮಿಡಿ ಕಿಲಾಡಿಗಳಿಗೂ ಸಂಕಷ್ಟ, ಹಾಸ್ಯ ಶೋ-ವಾಹಿನಿ ವಿರುದ್ಧ ದೂರು ದಾಖಲು
Related Stories
Recommended image1
BBK 12: ಮಹಿಳಾ ಸ್ಪರ್ಧಿ ಕೊಟ್ಟ ಶಾಕ್‌ಗೆ ಮಕ್ಕರ್ ಆದ ಗಿಲ್ಲಿ ನಟ; ಊಹೆ ಮಾಡಿರಲಿಲ್ಲ ಮಾತಿನ ಮಲ್ಲ
Recommended image2
BBK 12: ಅಶ್ವಿನಿ ಅವ್ರೇ..ಎಮೋಶನ್‌ ಬ್ಲ್ಯಾಕ್‌ಮೇಲ್‌ ಮಾಡ್ತೀರಾ? ಮುಖದ್ಮೇಲೆ ಹೇಳ್ತೀನಿ: ಕಿಚ್ಚ ಸುದೀಪ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved