MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸ್ವರ್ಗದಲ್ಲಿರುವ ಕ್ಯಾಪ್ಟನ್ ಹಂಸಾ ಉಸ್ತುವಾರಿಯಾಗಿ ಟಾಸ್ಕ್ ವಿಚಾರದಲ್ಲಿ ನರಕವಾಸಿಗಳಿಗೆ ಮೋಸ ಮಾಡಿದ್ರಾ!?

ಸ್ವರ್ಗದಲ್ಲಿರುವ ಕ್ಯಾಪ್ಟನ್ ಹಂಸಾ ಉಸ್ತುವಾರಿಯಾಗಿ ಟಾಸ್ಕ್ ವಿಚಾರದಲ್ಲಿ ನರಕವಾಸಿಗಳಿಗೆ ಮೋಸ ಮಾಡಿದ್ರಾ!?

ಬಿಗ್‌ಬಾಸ್‌ ಕನ್ನಡ 11 ರ ಎರಡನೇ ವಾರದ ಮೂರನೇ ದಿನ ಮೂರು ಟಾಸ್ಕ್‌ಗಳಲ್ಲಿ ನರಕ ಮತ್ತು ಸ್ವರ್ಗ ವಾಸಿಗಳ ನಡುವೆ ತೀವ್ರ ಪೈಪೋಟಿ ನಡೆಯಿತು. 'ಅಳಿವು ಉಳಿವು' ಟಾಸ್ಕ್‌ನಲ್ಲಿ ನರಕವಾಸಿಗಳು, 'ಗೊಬ್ಬರದ ಅಬ್ಬರ' ಟಾಸ್ಕ್‌ನಲ್ಲಿ ಸ್ವರ್ಗ ವಾಸಿಗಳು ಗೆಲುವು ಸಾಧಿಸಿದರು. ಮೂರನೇ ಟಾಸ್ಕ್‌ನಲ್ಲಿ ಸ್ವರ್ಗ ನಿವಾಸಿಗಳು ಮತ್ತೆ ಗೆಲುವು ಸಾಧಿಸುವ ಮೂಲಕ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

2 Min read
Gowthami K
Published : Oct 10 2024, 12:27 AM IST
Share this Photo Gallery
  • FB
  • TW
  • Linkdin
  • Whatsapp
15

ಬಿಗ್‌ಬಾಸ್‌ ಕನ್ನಡ 11 ರ ಎರಡನೇ ವಾರದ ಮೂರನೇ ದಿನ ಮನೆಯಲ್ಲಿ ಮೂರು ಟಾಸ್ಕ್‌ ಗಳನ್ನು ಆಡಲಾಯ್ತು. ಮೊದಲ ಟಾಸ್ಕ್‌ ಅಳಿವು ಉಳಿವು ನಲ್ಲಿ  ನರಕವಾಸಿಗಳು ಗೆಲುವು ಕಂಡರು. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರದ ತುಂಡುಗಳನ್ನು ತೆಗೆದುಕೊಂಡು ಮೀಸಲಿಟ್ಟ ವೇದಿಕೆಯಲ್ಲಿ ಇಡಬೇಕಿತ್ತು. ಮೂರು ರೌಂಡನ್ನು ಗೆದ್ದು ನರಕವಾಸಿಗಳು ಗೆಲುವು ಕಂಡರು. ಗೆದ್ದ ತಂಡದಲ್ಲಿ ಒಬ್ಬರನ್ನು ಸೇವ್‌ ಮಾಡುವ ಅವಕಾಶ ನಾಯಕನಾದ ಶಿಶಿರ್‌ ಶಾಸ್ತ್ರಿಗೆ ಸಿಕ್ಕಿತು. ಶಿಶಿರ್‌ ಅವರು ಸೇರಿ ಯಾರಾದರೂ ಒಬ್ಬರನ್ನು ಉಳಿಸಿಕೊಳ್ಳುವ ಅವಕಾಶ ಇತ್ತು ಆದರೆ  ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಶಿಶಿರ್‌ ಮೋಕ್ಷಿತಾ ಅವರನ್ನು ಸೇವ್‌ ಮಾಡಿದರು. ಮೋಕ್ಷಿತಾ ಜೊತೆಗೆ ತಾನು ಕೂಡ ಸೇಫ್‌ ಅಂದುಕೊಂಡರು. ಆದರೆ ಅಲ್ಲ ಒಬ್ಬರು ಮಾತ್ರ ಸೇವ್‌ ಆದರು. ಇನ್ನು ಮೋಕ್ಷಿತಾ ಅವರನ್ನು ಸೇವ್‌ ಮಾಡಿದ್ದಕ್ಕೆ ಚೈತ್ರಾ ಕುಂದಾಪುರ ಬೇಸರ ವ್ಯಕ್ತಪಡಿಸಿದರು.

25

ಎರಡನೇ ಟಾಸ್ಕ್‌ ಗೊಬ್ಬರದ ಅಬ್ಬರ ಎಂಬ ಟಾಸ್ಕ್ ನೀಡಿದರು. ಕೈಕಾಲುಗಳನ್ನು ಕಟ್ಟಿ ಇರುವ ಇಬ್ಬರು ಜೋಡಿ ಸ್ಪರ್ಧಿಗಳು ಗೊಬ್ಬರದ ತೊಟ್ಟಿಯಲ್ಲಿರುವ ಚೆಂಡುಗಳನ್ನು ತೆವಳಿಕೊಂಡೇ ತಂದು ಜೋಡಿಸಿ ತಂದು ಇಡಬೇಕಿತ್ತು.   ಇದರಲ್ಲಿ ಸ್ವರ್ಗ ವಾಸಿಗಳು ಗೆಲುವು ಕಂಡರು. ಆದರೆ ಈ ಟಾಸ್ಕ್‌ನಲ್ಲಿ ಕ್ಯಾಪ್ಟನ್‌ ಹಂಸಾ ಸರಿಯಾಗಿ ಉಸ್ತುವಾರಿ ನೋಡಿಲ್ಲವೆಂದು ಗಲಾಟೆ ನಡೆಯಿತು.  ಭವ್ಯ ಮತ್ತು ಧನ್‌ರಾಜ್ ಎರಡನೇ ಜೋಡಿಯಾಗಿ ಹೋದರು. ಧನ್‌ರಾಜ್ ಆಚಾರ್ ಅವರು ಒಂದು ಬಾರಿ ಎದ್ದು ನಿಂತು ಜಂಪ್‌ ಮಾಡಿಕೊಂಡು ಬಾಲ್‌ ಬಳಿ ನಿಂತರು. ಬಳಿಕ ಕೋರ್ಟ್ ನಿಂದ ಹೊರಬಂದು ಜಂಪ್  ಮಾಡಿಕೊಂಡೇ ಬಾಲ್‌ಗಳನ್ನು ಇಟ್ಟರು.  ಇದು ಗಲಾಟೆಗೆ ಕಾರಣವಾಯ್ತು.
 

35

ರೀ ಮ್ಯಾಚ್‌ ಆಡಿಸುವ ಬಗ್ಗೆ ಹಂಸಾ ನಿರ್ಧರಿಸಲು ಮುಂದಾದಾಗ ನರಕ ವಾಸಿಗಳು ಮತ್ತು ಬಿಗ್‌ಬಾಸ್ ಕೂಡ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಹಂಸಾ ಅವರು ಸ್ವರ್ಗ ನಿವಾಸಿಗಳು ಗೆಲುವು ಕಂಡಿದ್ದಾರೆಂದು ಘೋಷಿಸಿದರು. ಇದರಲ್ಲಿ ಹಂಸ ಅವರು ಮೋಸ ಮಾಡಿದ್ದಾರೆಂದು ನರಕವಾಸಿಗಳು ಗಲಾಟೆ ನಡೆಸಿ ಇನ್ನು ಟಾಸ್ಕ್‌ , ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತಿದರು. ಹೊಸ ರೂಲ್ ಮಾಡುವಂತಿಲ್ಲ ಎನ್ನುವುದನ್ನು ಬಿಗ್ಬಾಸ್‌ ಹೇಳಿದೆ ಅದು ಹೇಗೆ ನೀವು ಹೊಸ ರೂಲ್ ಮಾಡಿದಿರಿ ಎಂದು ಹಂಸಾಗೆ ಪ್ರಶ್ನೆ ಕೇಳಿದರು ಮತ್ತು ಖಂಡಿಸಿದರು. ಕೊನೆಗೆ ಉಸ್ತುವಾರಿಯ ನಿರ್ಧಾರದಂತೆ ಸ್ವರ್ಗ ನಿವಾಸಿಗಳು ಟಾಸ್ಕ್‌ ಗೆದ್ದಿದ್ದಾರೆಂದು ಬಿಗ್ಬಾಸ್‌ ಘೋಷಿಸಿದರು. ಇನ್ನು ತಂಡದ ನಾಯಕ ತ್ರಿವಿಕ್ರಮ್‌ ವಿಶೇಷ ಅಧಿಕಾರ ಪಡೆದುಕೊಂಡು ಉಗ್ರಂ ಮಂಜು ಅವರನ್ನು ಸೇವ್ ಮಾಡಿದರು.

45

ಮೂರನೇ ಟಾಸ್ಕ್‌ ನಲ್ಲಿ ಟೀಂ ನಾಯಕತ್ವ ಮಹಿಳಾ ಸ್ಪರ್ಧಿಗಳಾದ ಮೋಕ್ಷಿತಾ ಮತ್ತು ಗೌತಮಿ ಜಾಧವ್ ಅವರ ತೆಕ್ಕೆಗೆ ಹೋಯ್ತು. ಒಂದು ತಂಡದಿಂದ 5 ಮಂದಿ ಓರ್ವ ಎಕ್ಟ್ರಾ ಪ್ಲೇಯರ್  ಆಡಬೇಕಿತ್ತು. ನೆನಪಿನ ಶಕ್ತಿ ಚಾಕಚಕ್ಯತೆ , ದೈಹಿಕ ಶಕ್ತಿ, ಸಮನ್ವಯತೆ ಬಳಸಿ ಆಡಬೇಕಿತ್ತು. ಅದಕ್ಕೆ ಕಮಾನು ಬಿಲ್ಡಿಂಗ್ ಎಂದು ಹೆಸರಿಡಲಾಗಿತ್ತು. ಸ್ವರ್ಗದ ತಂಡದಿಂದ 5 ಜನ ಮತ್ತು ನರಕದಿಂದ 5 ಜನರನ್ನು ಮತ್ತು  ಎಕ್ಟ್ರಾ ಪ್ಲೇಯರ್ ಗಳನ್ನು ಆಯ್ಕೆ ಮಾಡಲಾಯ್ತು. ಅದರಂತೆ ಆಡಿದ ತಂಡದಲ್ಲಿ ಸ್ವರ್ಗ ನಿವಾಸಿಗಳು ಗೆದ್ದು ನರಕವಾಸಿಗಳ ವಿರುದ್ಧ 2-1 ಲೀಡ್‌ ನಲ್ಲಿದ್ದಾರೆ.
 

55

ಇಂದಿನ ಎಪಿಸೋಡ್‌ ನಲ್ಲಿ ಸ್ವರ್ಗದಿಂದ ಉಗ್ರಂ ಮಂಜು ಮತ್ತು ನರಕದಿಂದ ಮೋಕ್ಷಿತಾ ಅವರು ಸೇವ್ ಆಗಿದ್ದಾರೆ ಮೂರನೇ ಟಾಸ್ಕ್‌ ನಲ್ಲಿ ಸ್ವರ್ಗ ನಿವಾಸಿಗಳು ಗೆದ್ದಿದ್ದು ಮುಂದಿನ ಸಂಚಿಕೆಯಲ್ಲಿ ಮನೆಯಲ್ಲಿರುವ ಇಬ್ಬರು ಸದಸ್ಯರನ್ನು ನೇರವಾಗಿ ನಾಮಿನೇಟ್‌ ಮಾಡುವ ಅಧಿಕಾರ ಗೌತಮಿ ಅವರಿಗೆ ಬಂದಿದೆ. ಮನೆಯ ಮೂಲ ನಿಯಮ ಮುರಿದು ಇಡೀ ಮನೆ ನಾಮಿನೇಟ್‌ ಆಗಲು ಕಾರಣರಾದವರನ್ನು ಗೌತಮಿ ನಾಮಿನೆಟ್‌ ಮಾಡಿದಂತೆ ಕಾಣುತ್ತಿದೆ. ಆದರೆ ಇದು ಯಾವ ವಾರಕ್ಕೆ ನಾಮಿನೇಷನ್ ಎಂದು ತಿಳಿಯಲು ಮುಂದಿನ ಎಪಿಸೋಡ್ ವರೆಗೂ ಕಾಯಲೇಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಿಗ್ ಬಾಸ್ ಕನ್ನಡ

Latest Videos
Recommended Stories
Recommended image1
BBK 12: ಪಿತ್ತ ನೆತ್ತಿಗೇರಿತು; ಇದು ಸರಿಯಲ್ಲ ಎಂದು ಅಶ್ವಿನಿ ಗೌಡಗೆ ವಾರ್ನಿಂಗ್‌ ಕೊಟ್ಟ Kiccha Sudeep
Recommended image2
BBK 12: ರಕ್ಷಿತಾ ಶೆಟ್ಟಿ ಭ್ರಮೆಗೆ ಕಾವ್ಯಾ ಕೊಟ್ರು ತಿರುಗೇಟು! ಭವಿಷ್ಯ ನುಡಿದ ಬಿಗ್‌ಬಾಸ್‌ ವೀಕ್ಷಕರು
Recommended image3
ತನ್ನ ತಪ್ಪನ್ನು ಎತ್ತಿ ತೋರಿಸಿದ ಗಿಲ್ಲಿ ನಟ; ಬಾಯಿ ಮುಚ್ಚಿಸಿದ Rakshita Shetty; ಕಿಚ್ಚ ಸುದೀಪ್‌ಗೆ ಕ್ಷಮೆ ಕೇಳಿಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved