MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi Serial: ಒಳ್ಳೆಯ ಹೆಂಡ್ತಿಗೆ ಚಿತ್ರಹಿಂಸೆ ಕೊಟ್ಟಿದ್ದಕ್ಕೆ ತಾಂಡವ್‌ ಗತಿ ಅಧೋಗತಿ!

Bhagyalakshmi Serial: ಒಳ್ಳೆಯ ಹೆಂಡ್ತಿಗೆ ಚಿತ್ರಹಿಂಸೆ ಕೊಟ್ಟಿದ್ದಕ್ಕೆ ತಾಂಡವ್‌ ಗತಿ ಅಧೋಗತಿ!

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳನ್ನು ಸಿಲುಕಿಸಬೇಕು ಎಂದು ಶ್ರೇಷ್ಠ ಮಹಾ ಪ್ಲ್ಯಾನ್‌ ಮಾಡಿದ್ದಳು. ಹೀಗಾಗಿ ಅವಳು ತಾಂಡವ್‌ಗೆ ವಿಷ ಕುಡಿಸಿದ್ದಳು. ಮೊದಲ ಹೆಂಡತಿ ಟಾರ್ಚರ್‌ ಕೊಟ್ಟಳು ಎಂದು ತಾಂಡವ್‌ ವಿಷ ಕುಡಿದಿದ್ದಾನೆ ಎಂದು ಬಿಂಬಿಸಿದ್ದಳು. 

1 Min read
Author : Padmashree Bhat
Published : Jan 09 2026, 12:35 PM IST
Share this Photo Gallery
  • FB
  • TW
  • Linkdin
  • Whatsapp
15
ಗಂಡನಿಗೆ ವಿಷ ಹಾಕಿದಳು
Image Credit : Jiohotstar

ಗಂಡನಿಗೆ ವಿಷ ಹಾಕಿದಳು

ತಾಂಡವ್‌ಗೆ, ಶ್ರೇಷ್ಠಗೆ ಭಾಗ್ಯಳನ್ನು ಕಂಡರೆ ಆಗೋದಿಲ್ಲ. ಅವಕಾಶ ಸಿಕ್ಕಾಗೆಲ್ಲ ಭಾಗ್ಯಳನ್ನು ತುಳಿಯಲು ನೋಡುತ್ತಿರುತ್ತಾರೆ. ಇನ್ನೊಂದು ಕಡೆ ಭಾಗ್ಯಳನ್ನು ಜೈಲಿಗೆ ಕಳಿಸಬೇಕು ಎಂದು ಶ್ರೇಷ್ಠ ಮಹಾ ಪ್ಲ್ಯಾನ್‌ ಮಾಡಿದ್ದಳು. ತಾಂಡವ್‌ ಊಟಕ್ಕೆ ಅವಳು ವಿಷ ಹಾಕಿದ್ದಳು, ಇದು ಅವನಿಗೆ ಗೊತ್ತೇ ಇರಲಿಲ್ಲ.

25
ನೋಡಲು ಯಾರೂ ಬರಲಿಲ್ಲ
Image Credit : Jiohotstar

ನೋಡಲು ಯಾರೂ ಬರಲಿಲ್ಲ

ಆದೀಶ್ವರ್‌ ಕಾಮತ್‌ ಹಾಗೂ ಅವನ ತಂದೆ ಸಹಾಯದಿಂದ ಭಾಗ್ಯ ನಿರಪರಾಧಿ ಎಂದು ಗೊತ್ತಾಯಿತು. ಭಾಗ್ಯ ಜೈಲಿನಿಂದ ಮನೆಗೆ ಬಂದಳು. ಆದರೆ ತಾಂಡವ್‌ ವಿಷ ಕುಡಿದ ಎಂದು ಹೇಳಿದರೂ ಕೂಡ ಯಾರೂ ಅವನ ಮನೆಯಿಂದ ನೋಡೋಕೆ ಬರಲೇ ಇಲ್ಲ.

Related Articles

Related image1
Ganesh Chaturthi: ಹೊಸ ಮನೆಯಲ್ಲಿ 'ಭಾಗ್ಯಲಕ್ಷ್ಮೀ' ಸುದರ್ಶನ್‌ ರಂಗಪ್ರಸಾದ್‌, ಸಂಗೀತಾ ಭಟ್‌ ಮೊದಲ ಹಬ್ಬ
Related image2
ʼಭಾಗ್ಯಲಕ್ಷ್ಮೀʼ ಧಾರಾವಾಹಿಗೆ ಎಂಟ್ರಿ ಕೊಟ್ಟ ಸಾವಿರಾರು ಕೋಟಿ ರೂ ಬಾಚಿದ ಸಿನಿಮಾ ನಟ! ಅವರಾರು?
35
ತಾಂಡವ್‌ಗೆ ಒಂದಲ್ಲ ಒಂದು ಕಷ್ಟ
Image Credit : Jiohotstar

ತಾಂಡವ್‌ಗೆ ಒಂದಲ್ಲ ಒಂದು ಕಷ್ಟ

ಭಾಗ್ಯ ಒಳ್ಳೆಯವಳು, ಅವಳನ್ನು ಅರ್ಥ ಮಾಡಿಕೊ, ತಪ್ಪು ತಿದ್ದಿಕೋ ಎಂದು ಬುದ್ಧಿ ಹೇಳಿದರೂ ಕೂಡ ತಾಂಡವ್‌ ಮಾತ್ರ ಯಾರು ಮಾತು ಕೇಳ್ತಿಲ್ಲ, ಶ್ರೇಷ್ಠ ಜೊತೆ ಸೇರಿಕೊಂಡು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾನೆ.

45
ಜೈಲಿಗೆ ಹೋದ ತಾಂಡವ್
Image Credit : Instagram

ಜೈಲಿಗೆ ಹೋದ ತಾಂಡವ್

ಈಗ ಕಾಮತ್‌ ಕಂಪೆನಿಯಲ್ಲಿ ಶ್ರೇಷ್ಠ ಫೋರ್ಜರಿ ಮಾಡಿದ್ದಳು. ಇದನ್ನು ಇಟ್ಟುಕೊಂಡು ಕಾಮತ್‌ ಕುಟುಂಬಸ್ಥರು ಕಂಪೆನಿಯಲ್ಲಿ ದೂರು ನೀಡಿದ್ದರು. ಹೀಗಾಗಿ ತಾಂಡವ್‌ನನ್ನು ಅರೆಸ್ಟ್‌ ಮಾಡಿದ್ದಾರೆ. ಸುಮ್ಮನಿರೋದು ಬಿಟ್ಟು, ಶ್ರೇಷ್ಠ ಸಮಸ್ಯೆ ಮಾಡಲು ಮುಂದಾದಳು, ಇದರಿಂದಲೇ ತಾಂಡವ್‌ ಜೈಲಿಗೆ ಹೋದನು. ಇದು ಕೂಡ ತಾಂಡವ್‌ಗೆ ಅರ್ಥ ಆಗಿದೆ.

55
ಮುಂದೆ ಏನಾಗುವುದು?
Image Credit : Colors Kannada Instagram

ಮುಂದೆ ಏನಾಗುವುದು?

ತಾಂಡವ್‌ ಜೈಲಿನಲ್ಲಿದ್ದಾನೆ, ಅವನನ್ನು ಬಿಡಿಸೋಕೆ ಶ್ರೇಷ್ಠ ಕೂಡ ಬಂದಿಲ್ಲ. ಆದರೆ ತಂದೆಯ ಆರೋಗ್ಯ ಕೇಳೋಣ ಎಂದು ತನ್ವಿ ಫೋನ್‌ ಮಾಡಿದ್ದಾಳೆ. ಮಗಳ ಫೋನ್‌ ಬಂದಿರೋದು ನೋಡಿ ತಾಂಡವ್‌ ಎಮೋಶನಲ್‌ ಆಗಿದ್ದಾನೆ. ಒಟ್ಟಿನಲ್ಲಿ ತಾಂಡವ್‌ಗೆ ಯಾವಾಗ ಬುದ್ಧಿ ಬರುತ್ತದೆಯೋ ಇಲ್ಲವೋ? ಇನ್ನೊಂದು ಕಡೆ ಭಾಗ್ಯ ತನ್ನ ಪ್ರೀತಿಯನ್ನು ಒಪ್ಪಿದರೆ ಮಾತ್ರ ಮದುವೆ ಆಗ್ತೀನಿ ಎಂದು ಆದೀಶ್ವರ್‌ ಕಾಮತ್‌ ಪಟ್ಟು ಹಿಡಿದು ಕೂತಿದ್ದಾನೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
BBK 12: ಹೇಳಿದ್ದು ಸುಳ್ಳಾಯ್ತು, ಅಂದ್ಕೊಂಡಿದ್ದು ನಿಜ ಆಗಲಿ: ಈಡೇರುತ್ತಾ ಅಭಿಮಾನಿಗಳ ಆಸೆ? ಸುದೀಪ್ ಏನ್ ಮಾಡ್ತಾರೆ?
Recommended image2
Oscar Awards 2026: ಪ್ರತಿಷ್ಠಿತ ಆಸ್ಕರ್‌ ಅಂಗಳಕ್ಕಿಳಿದ ಭಾರತದ ಐದು ಸಿನಿಮಾಗಳು; ಕನ್ನಡದ್ದೆಷ್ಟು?
Recommended image3
BBK 12: ಮೈತುಂಬ ಜ್ವರ, ವಾಂತಿ.. ಬೇಕಾದಾಗ ಯೂಸ್‌ ಮಾಡ್ಕೊಳ್ತಾರೆ: ಕಾವ್ಯ ವಿರುದ್ಧ ಗಿಲ್ಲಿ ಫ್ಯಾನ್ಸ್‌ ಆಕ್ರೋಶ
Related Stories
Recommended image1
Ganesh Chaturthi: ಹೊಸ ಮನೆಯಲ್ಲಿ 'ಭಾಗ್ಯಲಕ್ಷ್ಮೀ' ಸುದರ್ಶನ್‌ ರಂಗಪ್ರಸಾದ್‌, ಸಂಗೀತಾ ಭಟ್‌ ಮೊದಲ ಹಬ್ಬ
Recommended image2
ʼಭಾಗ್ಯಲಕ್ಷ್ಮೀʼ ಧಾರಾವಾಹಿಗೆ ಎಂಟ್ರಿ ಕೊಟ್ಟ ಸಾವಿರಾರು ಕೋಟಿ ರೂ ಬಾಚಿದ ಸಿನಿಮಾ ನಟ! ಅವರಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved