MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಭೂಮಿಕಾ ವಿರುದ್ಧವೇ ತಿರುಗಿಬಿದ್ದ ಗೌತಮ್‌; ಇದೆಲ್ಲ ದತ್ತುಪುತ್ರಿಯ ಅವಾಂತರ!

Amruthadhaare Serial: ಭೂಮಿಕಾ ವಿರುದ್ಧವೇ ತಿರುಗಿಬಿದ್ದ ಗೌತಮ್‌; ಇದೆಲ್ಲ ದತ್ತುಪುತ್ರಿಯ ಅವಾಂತರ!

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ತನ್ನೆಲ್ಲ ಆಸ್ತಿಯನ್ನು ಶಕುಂತಲಾಗೆ ತಿನ್ನೋಕೆ ಬಿಟ್ಟು ವಠಾರದಲ್ಲಿರೋದು, ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡೋದು ಭೂಮಿಕಾಗೆ ಗೊತ್ತೇ ಇಲ್ಲ. ವಠಾರದಲ್ಲಿ ಗೌತಮ್‌ ತನ್ನನ್ನು ಫಾಲೋ ಮಾಡ್ತಿದ್ದಾನೆ ಎಂದು ಅವಳು ಅಂದುಕೊಂಡಿದ್ದಾಳೆ. ಇನ್ನೊಂದು ಸಮಸ್ಯೆ ಸೃಷ್ಟಿಯಾಗಿದೆ. 

1 Min read
Padmashree Bhat
Published : Oct 21 2025, 07:47 AM IST
Share this Photo Gallery
  • FB
  • TW
  • Linkdin
  • Whatsapp
15
ತಪ್ಪು ತಿಳಿದುಕೊಂಡ ಭೂಮಿ
Image Credit : zee5

ತಪ್ಪು ತಿಳಿದುಕೊಂಡ ಭೂಮಿ

ಗೌತಮ್‌ ತನಗೆ ಸಿಕ್ಕಿದ ಮಗುವನ್ನು ದತ್ತು ತಗೊಂಡಿದ್ದಾನೆ, ಆ ಮಗುಗೆ ಕಣ್ಣಿನ ಸಮಸ್ಯೆಯೂ ಆಗಿತ್ತು. ಹೀಗಾಗಿ ಅವನು ಸ್ಪೆಕ್ಟ್‌ ಹಾಕಿಸಿ, ಶಾಲೆಗೆ ಸೇರಿಸಲು ರೆಡಿಯಾಗಿದ್ದಾನೆ. ಭೂಮಿಕಾ ಹೆಡ್‌ ಮಿಸ್‌ ಆಗಿರುವ ಸ್ಕೂಲ್‌ಗೆ ಅವನು ಬಂದಿದ್ದನು. ವಠಾರ ಆಯ್ತು, ಶಾಲೆಗೂ ಅವನು ಫಾಲೋ ಮಾಡಿಕೊಂಡು ಬಂದ ಅಂತ ಭೂಮಿ ಅಂದುಕೊಂಡಿದ್ದಾಳೆ.

25
ಪ್ರಶ್ನೆ ಮಾಡಿದ ಭೂಮಿಕಾ
Image Credit : zee5

ಪ್ರಶ್ನೆ ಮಾಡಿದ ಭೂಮಿಕಾ

ಭೂಮಿಕಾ, ಗೌತಮ್‌ ಬಳಿ, “ಇಷ್ಟು ಶ್ರೀಮಂತರಾಗಿರೋ ನೀವು ವಠಾರದಲ್ಲಿ ಬಂದು ಯಾಕಿದ್ದೀರಿ? ವಠಾರ ಆಯ್ತು, ಈಗ ಶಾಲೆಗೂ ನನ್ನನ್ನು ಯಾಕೆ ಫಾಲೋ ಮಾಡ್ಕೊಂಡು ಬಂದ್ರಿ? ನನ್ನ ಹಿಂದೆ ಬರಬೇಡಿ ಅಂತ ನಿಮಗೆ ಹೇಳಿಲ್ವಾ?” ಎಂದು ಅವಳು ಪ್ರಶ್ನೆ ಮಾಡಿದ್ದಳು. ಇದಕ್ಕೆ ಗೌತಮ್‌ ಉತ್ತರವನ್ನೇ ಕೊಡಲಿಲ್ಲ.

Related Articles

Related image1
Amruthadhaare: ವಠಾರದ ಕರೆಂಟ್​ ತೆಗೆದ ಮಲ್ಲಿ: ಕತ್ತಲಲ್ಲಿ ಕುಚ್​ ಕುಚ್​ ಆಗೋಯ್ತು- ಹೃದಯ ಬಡಿತನೂ ಜೋರಾಯ್ತು
Related image2
Amruthadhaare: 'ನಿಮ್ಮಿಂದಾಗಿ ಎಲ್ಲಾ ಕಳ್ಕೊಂಡ್​ಬಿಟ್ಟೆ ಸರ್​' ಎನ್ನುತ್ತಲೇ ಅಪ್ಪನ ಹತ್ತಿರವಾದ ಮಗ! ಮುಂದೆ ಆಗಿದ್ದೇ ಬೇರೆ
35
ಉತ್ತರ ಕೊಡೋದಿಲ್ಲ
Image Credit : zee5

ಉತ್ತರ ಕೊಡೋದಿಲ್ಲ

ಕುಶಾಲನಗರದಲ್ಲಿ ಅಷ್ಟೆಲ್ಲ ಪ್ರಶ್ನೆಗಳನ್ನು ಕೇಳಿದ್ರೂ ಕೂಡ ನೀವು ಒಂದು ಮಾತು ಹೇಳಲಿಲ್ಲ, ಉತ್ತರವನ್ನೇ ಕೊಡಲಿಲ್ಲ. ಈಗ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡೋದಿಲ್ಲ, ನಾನು ನಿಮ್ಮ ಹಿಂದೆ ಬಂದಿಲ್ಲ, ನನಗೆ ಬೇರೆ ಕೆಲಸ ಇದೆ ಎಂದು ಅವನು ಹೇಳಿದ್ದಾನೆ.

45
ಆ ಮಗು ಹೇಳಿದ್ದೇನು?
Image Credit : zee5

ಆ ಮಗು ಹೇಳಿದ್ದೇನು?

ಶಾಲೆಗೆ ಅವನು ಮಗಳು ಮಿಂಚುವನ್ನು ಕರೆದುಕೊಂಡು ಬಂದಿದ್ದಾನೆ. ಹೆಡ್‌ ಮಿಸ್‌ ಆದ ಭೂಮಿಕಾಳನ್ನು ಗೌತಮ್‌ ಭೇಟಿಯಾಗಬೇಕಿತ್ತು. ಗೌತಮ್‌ ಆ ಮಗು ಜೊತೆ ಭೂಮಿಕಾ ಇರುವ ಛೆಂಬರ್‌ಗೆ ಹೋಗಿದ್ದಾನೆ. ಅಲ್ಲಿ ಅವರಿಬ್ಬರ ಮುಖಾಮುಖಿಯಾಗಿದೆ. “ನನ್ನ ಹೆಸರು ಜಿ ಮಿಂಚು. ಗೌತಮ್‌ ನನ್ನ ತಂದೆ” ಎಂದು ಆ ಮಗು ಹೇಳಿದೆ. ನಿನ್ನ ತಾಯಿ ಹೆಸರೇನು ಎಂದು ಆ ಮಗುವಿಗೆ ಭೂಮಿ ಪ್ರಶ್ನೆ ಮಾಡಿದ್ದಾಳೆ. ಆಗ ಅವಳು, “ನನಗೆ ಅಪ್ಪ-ಅಮ್ಮ ಇಬ್ಬರೂ ಇವರೇ” ಎಂದಿದೆ.

55
ಭೂಮಿಗೆ ಚಿಂತೆ ಶುರು
Image Credit : zee5

ಭೂಮಿಗೆ ಚಿಂತೆ ಶುರು

ಭೂಮಿಗೆ ಆಗ ಚಿಂತೆ ಶುರುವಾಗಿದೆ. ಗೌತಮ್‌ ಜೊತೆ ಇರೋ ಹುಡುಗಿ ಯಾರು? ಅಪ್ಪ ಅಂತ ಬೇರೆ ಕರೆತಿದ್ಯಲ್ಲಾ ಅಂತ ಭೂಮಿ ಯೋಚನೆ ಮಾಡುತ್ತಿದ್ದಾಳೆ. ಭೂಮಿಗೆ ತುಂಬ ಪೊಸೆಸ್ಸಿವ್‌ನೆಸ್‌ ಇದೆ. ಗೌತಮ್‌ಗೆ ಮತ್ತೊಂದು ಮದುವೆ ಆಗಿದ್ಯಾ? ನನ್ನ ಕಳೆದು ಹೋದ ಮಗಳು ಇವಳೇ ಇರಬಹುದಾ ಎಂದೆಲ್ಲ ಯೋಚನೆ ಬಂದ್ರೂ ಬರಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved