MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial ಕಲಾವಿದರಿಗೆ ತಾರತಮ್ಯ; ಪೇಜ್‌ ವಿರುದ್ಧ ಸಿಡಿದೆದ್ದ ಪಾರ್ಥ ಪಾತ್ರಧಾರಿ ಕರಣ್

Amruthadhaare Serial ಕಲಾವಿದರಿಗೆ ತಾರತಮ್ಯ; ಪೇಜ್‌ ವಿರುದ್ಧ ಸಿಡಿದೆದ್ದ ಪಾರ್ಥ ಪಾತ್ರಧಾರಿ ಕರಣ್

Amruthadhaare Serial: ಧಾರಾವಾಹಿಗೆ ಅಭಿಮಾನಿಗಳ ಬಳಗ ಇದ್ದೇ ಇರುತ್ತದೆ. ಈಗಂತೂ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್‌ ಪೇಜ್‌ಗಳು ಕ್ರಿಯೇಟ್‌ ಆಗಿರುತ್ತವೆ. ಈಗ ಅಮೃತಧಾರೆ ಧಾರಾವಾಹಿಯ ಫ್ಯಾನ್‌ ಪೇಜ್‌ ಕೂಡ ಇದ್ದು, ಅಲ್ಲಿ ಪಾರ್ಥ ಪಾತ್ರವನ್ನು ಕಡೆಗಣಿಸಲಾಗಿದೆ ಎಂದು ನಟ ಕರಣ್‌ ಕೆ ಆರ್‌ ದೂರಿದ್ದಾರೆ. 

2 Min read
Author : Padmashree Bhat
Published : Jun 01 2026, 03:31 PM IST
Share this Photo Gallery
  • FB
  • TW
  • Linkdin
  • Whatsapp
15
ಫ್ಯಾನ್‌ ಪೇಜ್‌ಗಳು ಏನು ಹೇಳಿತ್ತು?
Image Credit : karan kr instagram

ಫ್ಯಾನ್‌ ಪೇಜ್‌ಗಳು ಏನು ಹೇಳಿತ್ತು?

ಇದಕ್ಕೆ ಫ್ಯಾನ್‌ ಪೇಜ್‌ ಕೂಡ ಉತ್ತರ ಕೊಟ್ಟಿದ್ದು, “ಮೊದಲನೇದಾಗಿ ಪ್ರತಿ ವರ್ಷ, ಪ್ರತಿ ಸಲ ಟೀಮ್ ಅಂತ ಬಂದಾಗ ನಾವೆಲ್ಲರನ್ನೂ ಗುರುತಿಸುತ್ತೇವೆ. ನಾವು ಏನೇ ಎಡಿಟ್ ಮಾಡಿದ್ರೂ ಅದರಲ್ಲಿ ಎಲ್ಲ ಪಾತ್ರಗಳನ್ನು ಸೇರಿಸಿ ಮಾಡುತ್ತೇವೆ. ಕಳೆದ ಮೂರು ವರ್ಷಗಳಿಂದನು ಮಾಡಿರೋ ಪ್ರತಿ ಆನಿವರ್ಸರಿ ಎಡಿಟ್‌ನಲ್ಲಿ ಎಲ್ಲರೂ ಇದ್ದಾರೆ. ಆದರೆ ಇರೋದನ್ನು ಯಾಕೆ ಗುರುತಿಸುತ್ತಿಲ್ಲ? ಯಾಕೆ ? ಅದಕ್ಕೆ ಗ್ರಾಟಿಟ್ಯೂಡ್ ಕೂಡ ತೋರ್ಸಿಲ್ಲ. ನಾವು ಅದನ್ನು ನಿರೀಕ್ಷೆ ಮಾಡೋದಿಲ್ಲ. ನಮಗೂ ಪ್ರತಿಸಲ ಒಂದೇ ತರ ಎಡಿಟ್ ಮಾಡಲು ಆಗೋದಿಲ್ಲ. ಆದ್ದರಿಂದ ಈ ಸಲ ಏನೋ ಹೊಸದಾಗಿ ಮಾಡಿದಾಗ ತುಂಬಾ ಪಾತ್ರಗಳು ಹೈಡ್ ಆಗಿದೆ. ಮೇನ್‌ ಫೋಟೋ ಹಾಕಿದಾಗ ಹಿಂದೆ ಇರೋ ಪೋಟೋಗಳು ಹೈಡ್ ಆಗೋದು ಸಹಜ. ಅದಕ್ಕೋಸ್ಕರ ಪ್ರಯತ್ನ ಹಾಕಿರೋರ್ ಮೇಲೆ ಆರೋಪ ಮಾಡೋದು ತುಂಬ ತಪ್ಪು! ವಿಷಯ ಗೊತ್ತಿಲ್ಲದೆ ಆರೋಪ ಮಾಡೋದು ತಪ್ಪು ಎಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಿಮಗೆ ಹೊಟ್ಟೆಕಿಚ್ಚು ಅಂತ ಅಂದುಕೊಳ್ಳಬಹುದಾ?
Image Credit : karan kr instagram

ನಿಮಗೆ ಹೊಟ್ಟೆಕಿಚ್ಚು ಅಂತ ಅಂದುಕೊಳ್ಳಬಹುದಾ?

ಫೋಟೋ ಎಟಿಟ್‌ ಅಲ್ಲಿ ಕಾಣಿಸ್ತಿಲ್ಲ ಅಂತ ನಿನ್ನೆಯಿಂದ ಇನ್‌ಸ್ಟಾಗ್ರಾಮ್‌ ಸ್ಟೋರಿ ಮೇಲೆ ಸ್ಟೋರಿ ಹಾಕ್ತಾ ಇರೋ ನೀವು, ಅಷ್ಟು ವರ್ಷದಿಂದ ಎಡಿಟ್ ಮಾಡಿ ಹಾಕೊಂಡ್ ಬಂದಾಗ ಎಲ್ಲಿ ಹೋಗಿದ್ರಿ? ಫೋಟೋ ಮೇಲೆ ಫೋಟೋ ಬಂದಾಗ ಕಾಣದೆ ಇರೋದು ಸಹಜ. ಒಂದರ ಮೇಲೆ ಇನ್ನೊಂದು ಫೋಟೋ ಕೂರಿಸಿದಾಗ ಹಿಂದೆ ಇರೋರ ಮುಖ ಕಾಣಿಸಲ್ಲ. ನಿಮ್ಮೊಬ್ಬರದೆ ಅಲ್ಲ ಕಾಣಿಸದೆ ಇರೋದು ತುಂಬ ಕಲಾವಿದರ ಮುಖ ಕಾಣಿಸ್ತಾ ಇಲ್ಲ. ಆದರೆ ಯಾರು ನಿಮ್ ತರ ಆಡ್ತಾ ಇಲ್ಲ!

ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮ್ಯಾಟರ್‌ ಆಗಲ್ಲ ಅಂತ ಅಂದಾಗ ನಿನ್ನೆಯಿಂದ ಸ್ಟೋರಿ ಮೇಲೆ ಸ್ಟೋರಿ ಯಾಕೆ ಹಾಕ್ತಾ ಇದ್ದೀರಾ? ನಿಮಗೆ ನೀವೇ ಕಲ್ಪನೆ ಮಾಡ್ಕೊಂಡು ನಮಗೆ ದುರಂಕಾರ, Attitude ಅಂತ ಎಲ್ಲ ಹೇಳ್ತಾ ಇದೀರಲ್ಲ! The same way ನೀವು ಕೂಡ ನಿನ್ನೆ ಮೊನ್ನೆ ಬಂದಿರೋರನ್ನು ಹಾಕಿದ್ದೀರಾ. ಮೂರು ವರ್ಷದಿಂದ ಇರೋ ನಮ್ಮನ್ನು ಹಾಕಿಲ್ಲ ಅಂತ ಹೇಳ್ತಿದೀರಿ. ಅದನ್ನು ನಾವು ನಿಮಗೆ ಹೊಟ್ಟೆಕಿಚ್ಚು ಅಂತ ಅಂದುಕೊಳ್ಳಬೇಕಾ? ಕಲಾವಿದರಾಗಿ ಏನು ಮಾತನಾಡುತ್ತಿದ್ದೇನೆ ಎನ್ನೋದನ್ನು ತಲೆಯಲ್ಲಿ ಇಟ್ಟುಕೊಂಡು ಮಾತನಾಡಬೇಕು, ಮನಸ್ಸಿಗೆ ಬಂದ ಹಾಗೆ ಮಾತನಾಡಿದ್ರೆ ನಿಮ್ಮ ಸ್ಥಾನಕ್ಕೆ ಸೆಟ್‌ ಆಗೋದಿಲ್ಲ ಎಂದು ಫ್ಯಾನ್ಸ್‌ ಪೇಜ್‌ಗಳು ಹೇಳಿವೆ.

Related Articles

Related image1
ಧಾರಾವಾಹಿಗೆ ಗುಡ್ ಬೈ ಹೇಳಿ ಹೊಸ ಬ್ಯುಸಿನೆಸ್ ಶುರು ಮಾಡಿದ ‘ಅಮೃತಧಾರೆ’ ನಟಿ
Related image2
ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?
35
ಇನ್‌ಸ್ಟಾಗ್ರಾಮ್‌ ಪೇಜ್‌ನಿಂದ ಕಲಾವಿದರು ಇಲ್ಲ!
Image Credit : karan kr instagram

ಇನ್‌ಸ್ಟಾಗ್ರಾಮ್‌ ಪೇಜ್‌ನಿಂದ ಕಲಾವಿದರು ಇಲ್ಲ!

ನಿಮ್ಮ pagesಗಳಲ್ಲಿ ಫೋಟೋ ಎಡಿಟ್ ಮಾಡಿ‌, ಪೋಸ್ಟ್‌ ಮಾಡುವುದರಿಂದಲೇ ಕಲಾವಿದರು ಗುರುತಿಸಿಕೊಂಡಿದ್ದಾರೆ ಅನ್ನೋ ಭಾವನೆ ದುರಹಂಕಾರ ಅಷ್ಟೇ. ಮೊದಲಿನಿಂದಲೂ ಪ್ರತಿ ವರ್ಷ ಅಮೃತಧಾರೆ ತಂಡವನ್ನು ಕರ್ನಾಟಕದ ಪ್ರೇಕ್ಷಕರು ಗುರುತಿಸಿದ್ದಾರೆ. ಕಲಾವಿದರನ್ನು ಗುರುತಿಸೋದು ಸೋ ಕಾಲ್ಡ್‌ ಇನ್‌ಸ್ಟಾಗ್ರಾಮ್‌ ಪೇಜ್‌ನಿಂದ ಬಂದಿಲ್ಲ. ಜೀ ಕನ್ನಡದಲ್ಲಿ ಪ್ರತಿದಿನ ನಮ್ಮನ್ನು ನೋಡಿ ಪ್ರೀತಿಸುವ ಪ್ರೇಕ್ಷಕರಿಂದ ಬಂದಿದೆ. ನಿಮ್ಮ ಪೇಜ್‌ಗಳಲ್ಲಿ ಫೋಟೋ ಎಡಿಟ್‌ ಮಾಡಿ, ಪೋಸ್ಟ್‌ ಮಾಡುವುದರಿಂದಲೇ ಕಲಾವಿದರು ಗುರುತಿಸಿಕೊಂಡಿದ್ದಾರೆ ಎನ್ನೋ ಭಾವನೆ ದುರಂಹಕಾರ ಅಷ್ಟೇ. ಅಮೃತಧಾರೆ ಅಂದರೆ ಕೇವಲ ಒಂದು ಪೋಸ್ಟರ್‌ ಅಲ್ಲ, ಅದು ಕಲಾವಿದರು, ನಿರ್ದೇಶಕರು, ಕ್ಯಾಮರಾ ಮ್ಯಾನ್‌, ಸಂಕಲನಕಾರರು, ಸಂಪೂರ್ಣ ತಂಡದ ಪರಿಶ್ರಮ. ಶೋ ಇರೋದರಿಂದ ಈ ಪೇಜ್‌ಗಳು ಇವೆ, ಪೇಜ್‌ಗಳು ಇರೋದರಿಂದ ಶೋ ಇಲ್ಲ ಎಂದು ಕರಣ್‌ ಕೆ ಆರ್‌ ( Amruthadhaare Serial Actor karan kr ) ಹೇಳಿದ್ದಾರೆ.

45
ಪಾರ್ಥ ಪಾತ್ರವನ್ನು ಕಡೆಗಾಣಿಸಿದ್ರಿ
Image Credit : karan kr instagram

ಪಾರ್ಥ ಪಾತ್ರವನ್ನು ಕಡೆಗಾಣಿಸಿದ್ರಿ

ಮೂರು ವರ್ಷದ ಜರ್ನಿಯಲ್ಲಿ ಮೊದಲಿನಿಂದಲೂ ಇದ್ದು, ಇನ್ನೂ ಆ ಪಯಣದ ಭಾಗಿ ಆಗಿರುವವರನ್ನು ಸಂಪೂರ್ಣವಾಗಿ ಬಿಟ್ಟು, ಇತ್ತೀಚೆಗೆ ಬಂದ ಪಾತ್ರಗಳನ್ನು ಮೂರು ವರ್ಷ ಅಂತ ತೋರಿಸೋದು ಕೃತಜ್ಞತೆ ಅಲ್ಲ. ನೀವು ನಮ್ಮನ್ನು ಸೇರಿಸಿ ಅಥವಾ ಬಿಡಿ, ಅದು ಸಂಬಂಧಪಟ್ಟಿಲ್ಲ. ಕಲಾವಿದನನ್ನು ಗುರುತಿಸೋದು ಇನ್‌ಸ್ಟಾಗ್ರಾಮ್‌ ಪೇಜ್‌ಗಳಿಂದಲ್ಲ ಎಂದು ಕರಣ್‌ ಕೆ ಆರ್‌ ಹೇಳಿದ್ದಾರೆ.

55
ಪಾರ್ಥ ಅಷ್ಟು ಬೇಗ ಮರೆತು ಹೋಗಲ್ಲ
Image Credit : karan kr instagram

ಪಾರ್ಥ ಅಷ್ಟು ಬೇಗ ಮರೆತು ಹೋಗಲ್ಲ

ಪಾರ್ಥ ಅಷ್ಟು ಸುಲಭವಾಗಿ ಮರೆತು ಹೋಗುವ ಪಾತ್ರ ಅಲ್ಲ. ಎಷ್ಟು ಪೋಸ್ಟರ್‌ಗಳಿಂದ ಹೈಡ್‌ ಮಾಡಿದರೂ ಪ್ರೇಕ್ಷಕರ ಮನಸ್ಸಿನಲ್ಲಿ ಅವನಿಗೆ ಜಾಗ ಇದೆ. ನಾನು ಆರೋಪ ಮಾಡುತ್ತಿಲ್ಲ. ಆದರೆ ಉದ್ದೇಶಪೂರ್ವಕ ಅಗೌರವ ಕಂಡಾಗ ಪ್ರತಿಕ್ರಿಯೆ ಇರಲೇಬೇಕು ಎಂದು ಕರಣ ಕೆ ಆರ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Bhagyalakshmi Serial ವಿದಾಯ: ಮೇಘನಾ ರಾಜ್​ ಜೊತೆ ನಟಿ ಸುಷ್ಮಾ ರಾವ್​ ಹೊಸ ಪಯಣ
Recommended image2
ಪುಟ್ಟ ತಮ್ಮನಿಗೆ ಬಂದ ದೊಡ್ಡ ಕಾಯಿಲೆ, ಛಲ ಬಿಡದ ಬೆಂಗಳೂರಿನ 17 ವರ್ಷದ ಅಕ್ಕ ಈಗ Forbes Under 30 ಸಾಧಕಿ!
Recommended image3
Amruthadhaare Serial: 2 ಕೊ*ಲೆ ಮಾಡಿದ್ದಾಯ್ತು; ಕೆಟ್ಟವ್ರಿಗೆ ಕಾಲ ಎನ್ನೋದು ಸುಳ್ಳಲ್ಲ ಬಿಡಿ! JD ಟೈಮ್‌ ಶುರು
Related Stories
Recommended image1
ಧಾರಾವಾಹಿಗೆ ಗುಡ್ ಬೈ ಹೇಳಿ ಹೊಸ ಬ್ಯುಸಿನೆಸ್ ಶುರು ಮಾಡಿದ ‘ಅಮೃತಧಾರೆ’ ನಟಿ
Recommended image2
ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved