MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಭೂಮಿಕಾ ಆಗ ಹಾಗೆ ಹೇಳಿ, ಈಗ ಹೀಗೆ ಹೇಳೋದ್ಯಾಕೆ? ಡೈರೆಕ್ಟರ್‌ ಸರ್‌, ಉತ್ತರ ಕೊಡಿ ಪ್ಲೀಸ್..!

Amruthadhaare Serial: ಭೂಮಿಕಾ ಆಗ ಹಾಗೆ ಹೇಳಿ, ಈಗ ಹೀಗೆ ಹೇಳೋದ್ಯಾಕೆ? ಡೈರೆಕ್ಟರ್‌ ಸರ್‌, ಉತ್ತರ ಕೊಡಿ ಪ್ಲೀಸ್..!

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್‌ ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಜಯದೇವ್‌ ಎಂಟ್ರಿ ಆಯ್ತು, ಈಗ ಭೂಮಿಕಾ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವೀಕ್ಷಕರಿಗೆ ಪ್ರಶ್ನೆ ಇದೆ. ಏನದು?  

2 Min read
Author : Padmashree Bhat
Published : Jan 02 2026, 01:33 PM IST
Share this Photo Gallery
  • FB
  • TW
  • Linkdin
  • Whatsapp
16
ಅಂದ್ಕೊಂಡಿದ್ದೊಂದು, ಈಗ ಅಗ್ತಿರೋದು ಒಂದು
Image Credit : zee5

ಅಂದ್ಕೊಂಡಿದ್ದೊಂದು, ಈಗ ಅಗ್ತಿರೋದು ಒಂದು

ಅಮೃತಧಾರೆ ಧಾರಾವಾಹಿಯಲ್ಲಿ ಹೀಗೆ ಆಗಬಹುದು ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಾಗಲೃ, ಸೀರಿಯಲ್‌ ತಂಡವು ಇನ್ನೊಂದು ಟ್ವಿಸ್ಟ್‌ ಸಿಗುತ್ತಿದೆ. ಭೂಮಿಕಾ ವಿದೇಶಕ್ಕೆ ಹೋಗುತ್ತಾಳೆ ಎಂದುಕೊಳ್ಳುತ್ತಿರುವಾಗ, ಮಗು ವಿಷಯ ಹೊರಬಿದ್ದಿದೆ.

26
ವಿದೇಶಕ್ಕೆ ಹೋಗಲು ಹಣ ಕೊಡೋರು ಯಾರು?
Image Credit : zee5

ವಿದೇಶಕ್ಕೆ ಹೋಗಲು ಹಣ ಕೊಡೋರು ಯಾರು?

ಆಸ್ತಿಗೋಸ್ಕರ ಜಯದೇವ್‌, ಆಕಾಶ್‌ನನ್ನು ಕಿಡ್ನ್ಯಾಪ್‌ ಮಾಡಿದ್ದನು. ಇದರಿಂದ ಬೇಸತ್ತ ಭೂಮಿಕಾ, ತನ್ನ ಮಗ ಆಕಾಶ್‌ ಜೊತೆ ವಿದೇಶಕ್ಕೆ ಹೊರಹೋಗುತ್ತಾಳೆ ಎನ್ನಲಾಗಿತ್ತು. ಟೀಚರ್‌ ಆಗಿದ್ದ ಭೂಮಿಗೆ ಮಗನನ್ನು ಓದಿಸೋದು, ಮನೆ ನಡೆಸೋದು, ಮಲ್ಲಿಗೆ ಓದೋಕೆ ಹಣ ನೀಡೋದು ಕಷ್ಟ ಆಗಿತ್ತು. ಈಗ ವಿದೇಶದಲ್ಲಿ ಮಗನನ್ನು ಓದಿಸೋದು, ತಾನು ಕೂಡ ಮನೆ ಮಾಡಿಕೊಂಡಿರೋದು ಸುಲಭವೇ? ಅಷ್ಟು ಸುಲಭಕ್ಕೆ ಭೂಮಿಗೆ ಅಲ್ಲಿ ಕೆಲಸ ಸಿಗುತ್ತಾ? ಇದನ್ನು ಸೀರಿಯಲ್‌ ತಂಡದವರು ಹೇಳಬೇಕು.

Related Articles

Related image1
Amruthadhaare Serial: ದೇಶಾಂತರ ಹೋಗುತ್ತಿದ್ದ ಭೂಮಿಗೆ ಮಹಾಸತ್ಯ ಗೊತ್ತಾಯ್ತು; ಈಗಿದೆ ರಣರೋಚಕ ಟ್ವಿಸ್ಟ್
Related image2
Amruthadhaare ರೋಚಕ ಟ್ವಿಸ್ಟ್​: ಮಗ ಆಕಾಶ್​ ಹೇಳಿದ ಆ ಒಂದು ಸತ್ಯಕ್ಕೆ ಕುಸಿದು ಹೋದ ಭೂಮಿಕಾ! ಬಡಿದ ಬರಸಿಡಿಲು
36
ಮಗಳ ಸತ್ಯ ಗೊತ್ತಾಯ್ತು
Image Credit : zee5

ಮಗಳ ಸತ್ಯ ಗೊತ್ತಾಯ್ತು

ಈಗ ಸೀರಿಯಲ್‌ನಲ್ಲಿ ತನ್ನ ಮಗಳು ಬದುಕಿದೆ ಎಂದು ಭೂಮಿಗೆ ಗೊತ್ತಾಗಿದೆ. ಭೂಮಿಯು ಮಲ್ಲಿ ಜೊತೆ ಮಾತನಾಡಿದ್ದು ಸಾಕಷ್ಟು ಗೊಂದಲಮಯವಾಗಿತ್ತು. ಮನೆಯಿಂದ ದೂರ ಇದ್ದರೆ ಮಾತ್ರ ನಿನ್ನವರು ಚೆನ್ನಾಗಿರುತ್ತಾರೆ ಎಂದು ಶಕುಂತಲಾ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕೆ ಭೂಮಿ ಇಷ್ಟುವರ್ಷಗಳಿಂದ ಎಲ್ಲರಿಂದ ದೂರ ಇದ್ದಳು ಎಂದು ತೋರಿಸಲಾಗಿತ್ತು. ಈಗ ಕಥೆ ಇನ್ನೊಂದು ಥರ ಹೋದಂತಿದೆ.

46
ತಪ್ಪಾಗಿ ತಿಳಿದುಕೊಂಡೆ
Image Credit : Instagram

ತಪ್ಪಾಗಿ ತಿಳಿದುಕೊಂಡೆ

ಗೌತಮ್‌ ಇಷ್ಟು ವರ್ಷಗಳಿಂದ ಭೂಮಿಯನ್ನು ಹುಡುಕುತ್ತಿದ್ದನು, ಮಗಳನ್ನು ಹುಡುಕುತ್ತಿದ್ದನು ಎಂದು ಮಲ್ಲಿ ಹೇಳಿದ್ದಳು. ಆಗ ಭೂಮಿ, “ನಾನು ಯಾರದ್ದೋ ಮಾತು ಕೇಳಿಕೊಂಡು ಅವರನ್ನು ತಪ್ಪಾಗಿ ತಿಳಿದುಕೊಂಡೆ, ಅವರನ್ನು ದೂರ ಇಡಬಾರದಿತ್ತು. ನಾನು ಗೌತಮ್‌ ಅವರನ್ನು ಮಾತಾಡಿಸ್ತೀನಿ” ಎಂದು ಹೇಳಿದ್ದಾಳೆ.

56
ಭೂಮಿ ಮನಸ್ಸಿನಲ್ಲಿ ಏನಿತ್ತು?
Image Credit : zee5

ಭೂಮಿ ಮನಸ್ಸಿನಲ್ಲಿ ಏನಿತ್ತು?

ನಾನು ಮನೆಯಿಂದ ದೂರ ಇದ್ದರೆ ನನ್ನವರು ಚೆನ್ನಾಗಿರುತ್ತಾರೆ ಎಂದು ಭೂಮಿ ಅಂದುಕೊಂಡಿದ್ದಳಾ? ಇದು ತಪ್ಪು ತಿಳುವಳಿಕೆಯಾ? ಅಥವಾ ಗೌತಮ್‌ನಿಂದ ಮಗಳು ಕಳೆದುಹೋದಳು ಎಂಬ ಬೇಸರಕ್ಕೆ ದೂರ ಇದ್ದಳಾ? ಇದರಲ್ಲಿ ಸತ್ಯ ಯಾವುದು? ಪದೇ ಪದೇ ನನ್ನವರು ಚೆನ್ನಾಗಿರಬೇಕು ಎಂದು ಎಲ್ಲರಿಂದ ದೂರ ಇದ್ದೀನಿ ಅಂತ ಭೂಮಿ ಹೇಳುತ್ತಿದ್ದಿದ್ದು ಯಾಕೆ? ಒಟ್ಟಿನಲ್ಲಿ ಭೂಮಿಕಾ ಉದ್ದೇಶ ಏನಾಗಿತ್ತು ಎಂದು ಸೀರಿಯಲ್‌ ತಂಡ ಸ್ಪಷ್ಟನೆ ನೀಡಿದರೆ ಒಳ್ಳೆಯದು.

66
ನಾನು ಸಹಾಯ ಮಾಡ್ತೀನಿ: ಭೂಮಿ
Image Credit : Zee Kannada Facebook

ನಾನು ಸಹಾಯ ಮಾಡ್ತೀನಿ: ಭೂಮಿ

ಈಗ ಭೂಮಿಯು, ಗೌತಮ್‌ ಬಳಿ ಬಂದು, “ನಮ್ಮ ಮಗು ಸತ್ತಿಲ್ಲ, ಬದುಕಿದೆ ಎಂದು ಹೇಳಬಹುದಿತ್ತು ಅಲ್ವಾ? ಎಷ್ಟು ದೊಡ್ಡ ಮನಸ್ಸು ನಿಮ್ಮದು. ನನಗೆ ನೋವು ಆಗಬಾರದು ಎಂದು ನೀವು ನೋವು ನುಂಗಿದಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲ, ನಿಮ್ಮನ್ನು ಹರ್ಟ್‌ ಮಾಡಿದೆ, ನೋವು ಕೊಟ್ಟೆ” ಎಂದು ಹೇಳಿದ್ದಾಳೆ.

ಆಗ ಗೌತಮ್‌ “ಆ ಮಗುವನ್ನು ನಾನು ಹುಡುಕಿ ನಿಮ್ಮ ಮುಂದೆ ನಿಲ್ಲಿಸುವೆ. ಇದು ಗ್ಯಾರಂಟಿ” ಎಂದಿದ್ದಾಳೆ. ಆಗ ಭೂಮಿ, “ನಾನು ನಿಮ್ಮ ಜೊತೆಗೆ ಇರುವೆ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
BBK 12: ಗಿಲ್ಲಿ ಜೊತೆ ಜಗಳ ಆಡಿ ತಪ್ಪು ಮಾಡಿದ್ರಾ ಧ್ರುವಂತ್? ಕ್ಷಮೆ ಕೇಳಿದ್ರೂ ವೋಟು ಬದಲಿಸಿದ ವೀಕ್ಷಕರು !
Recommended image2
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘Lakshmi Nivasa’ ನಟಿ ಮಾನಸ‌ ಮನೋಹರ್
Recommended image3
Karna Serial: ಕರ್ಣನ ಖುಷಿಗೆ ಕೊಳ್ಳಿ ಇಡೋಕೆ ಸಜ್ಜಾದ ರಮೇಶ್;‌ ಬರೀ ಇದೇ ಆಯ್ತಲ್ರೋ...!
Related Stories
Recommended image1
Amruthadhaare Serial: ದೇಶಾಂತರ ಹೋಗುತ್ತಿದ್ದ ಭೂಮಿಗೆ ಮಹಾಸತ್ಯ ಗೊತ್ತಾಯ್ತು; ಈಗಿದೆ ರಣರೋಚಕ ಟ್ವಿಸ್ಟ್
Recommended image2
Amruthadhaare ರೋಚಕ ಟ್ವಿಸ್ಟ್​: ಮಗ ಆಕಾಶ್​ ಹೇಳಿದ ಆ ಒಂದು ಸತ್ಯಕ್ಕೆ ಕುಸಿದು ಹೋದ ಭೂಮಿಕಾ! ಬಡಿದ ಬರಸಿಡಿಲು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved