MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅಮೃತಾ ಬಳಿಕ 'ಆದಿಲಕ್ಷ್ಮೀ ಪುರಾಣ'ದಿಂದ ಇಬ್ಬರು ಔಟ್… ಹೊಸ ನಟರ ಎಂಟ್ರಿ

ಅಮೃತಾ ಬಳಿಕ 'ಆದಿಲಕ್ಷ್ಮೀ ಪುರಾಣ'ದಿಂದ ಇಬ್ಬರು ಔಟ್… ಹೊಸ ನಟರ ಎಂಟ್ರಿ

Adilakshmi Purana: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿಯಿಂದ ಇಬ್ಬರು ನಟರು ಔಟ್ ಆಗಿದ್ದಾರೆ. ಈಗಾಗಲೆ ಮತ್ತಿಬ್ಬರು ಹೊಸ ನಟರ ಆಗಮನವೂ ಆಗಿದೆ. ಹಾಗಿದ್ರೆ ಧಾರಾವಾಹಿಯಿಂದ ಹೊರ ಬಂದವರು ಯಾರು? ಅದಕ್ಕೇ ಕಾರಣ ಏನು ನೋಡೋಣ.

2 Min read
Author : Pavna Das
Published : Mar 31 2026, 04:21 PM IST
Share this Photo Gallery
  • FB
  • TW
  • Linkdin
  • Whatsapp
16
ಆದಿಲಕ್ಷ್ಮೀ ಪುರಾಣ
Image Credit : Instagram

ಆದಿಲಕ್ಷ್ಮೀ ಪುರಾಣ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ‘ಆದಿಲಕ್ಷ್ಮೀ ಪುರಾಣ’. ಒಲ್ಲದ ಮದುವೆಗೆ ತಲೆ ಒಡ್ಡಿ, ಇಷ್ಟ ಇಲ್ಲದೇ ಇದ್ದರೂ, ಒಟ್ಟಿಗೆ ವಾಸಿಸುವ, ಒಂದೇ ಕಾಲೇಜಿಗೆ ಹೋಗುವ ಆದಿ ಮತ್ತು ಲಕ್ಷ್ಮಿಯ ಕತೆ ಇದಾಗಿದೆ. ಇದೀಗ ಧಾರಾವಾಹಿಯಿಂದ ಇಬ್ಬರು ನಟರು ಹೊರ ಬಂದಿದ್ದಾರೆ.

26
ಇಬ್ಬರು ನಟರು ಔಟ್
Image Credit : Instagram

ಇಬ್ಬರು ನಟರು ಔಟ್

ಹೌದು, ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಇತ್ತೀಚೆಗಷ್ಟೇ ಅಮೃತಾ ಪಾತ್ರ ಬದಲಾಗಿತ್ತು, ಇದೀಗ ಮತ್ತೆ ಇಬ್ಬರು ಮುಖ್ಯ ಪಾತ್ರಧಾರಿಗಳು ಔಟ್ ಆಗಿದ್ದಾರೆ. ಈಗಾಗಲೇ ಅವರ ಜಾಗಕ್ಕೆ ಇನ್ನಿಬ್ಬರು ಹೊಸ ನಟರ ಎಂಟ್ರಿ ಕೂಡ ಆಗಿದೆ ಎನ್ನುವ ಮಾಹಿತಿ ಕೂಡ ಇದೆ. ಹಾಗಿದ್ರೆ ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಹೊರ ನಡೆದ ನಟರು ಯಾರ್ಯಾರು?

Related Articles

Related image1
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Related image2
Aadi Lakshmi Purana: ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು: ಆ ಘಟನೆ ನೆನೆದ ನಟಿ
36
ಇಬ್ಬರು ನಟರು ಔಟ್, ಹೊಸ ನಟರು ಇನ್
Image Credit : Instagram

ಇಬ್ಬರು ನಟರು ಔಟ್, ಹೊಸ ನಟರು ಇನ್

ಅಂದ ಹಾಗೇ ಆದಿ ಲಕ್ಷ್ಮೀ ಪುರಾಣದಿಂದ ಆದಿ ತಾಯಿ ವಿಮಲಾ ಪಾತ್ರಧಾರಿ ರಶ್ಮಿ ಗೌಡ ಹಾಗೂ ಆದಿ ತಂದೆಯಾಗಿ ನಟಿಸುತ್ತಿದ್ದ ಗಿರಿ ಪಾತ್ರಧಾರಿ ಕೈಲಾಶ್ ಅವರು ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇಬ್ಬರು ಸ್ವ ಇಚ್ಚೆಯಿಂದ ಧಾರಾವಾಹಿಯಿಂದ ಹೊರ ನದೆದಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆದಿ ತಾಯಿ ವಿಮಲಾ ಪಾತ್ರಕ್ಕೆ ಶಾಲಿನಿ ರಾವ್ ಎಂಟ್ರಿ ಕೊಟ್ಟಿದ್ದಾರೆ ಹಾಗೂ ಆದಿ ತಂದೆಯ ಪಾತ್ರಕ್ಕೆ ರಾಜೇಶ್ ರಾವ್ ಎಂಟ್ರಿಯಾಗಿದೆ. ಈ ಇಬ್ಬರೂ ಕೂಡ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವಂತಹ ನಟರಾಗಿದ್ದಾರೆ.

46
ರಶ್ಮಿ ಗೌಡ ಹೇಳಿದ್ದೇನು?
Image Credit : Instagram

ರಶ್ಮಿ ಗೌಡ ಹೇಳಿದ್ದೇನು?

ನಟಿ ರಶ್ಮಿ ಗೌಡ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ‘ಆದಿಲಕ್ಷ್ಮೀ ಪುರಾಣ’ದಲ್ಲಿ ವಿಮಲ ಪಾತ್ರ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಈ ಪಾತ್ರದ ಅವಕಾಶ ನೀಡಿದ ಸಂತೋಷ್ ಕೋಟಿ ಸರ್, ಜನಾರ್ಧನ್‌ ಸರ್‌ ಮತ್ತು ಆರೂರು ಜಗದೀಶ್ ಸರ್‌ ಮತ್ತು ಜೀ ಕನ್ನಡ ವಾಹಿನಿಗೆ ಧನ್ಯವಾದಗಳು. ಮತ್ತೊಂದು ಹೊಸ ತ್ರದ ಮೂಲಕ ಶೀಘ್ರದಲ್ಲೇ ಬರ್ತಿನಿ” ಎಂದಿದ್ದಾರೆ.

56
ಅಮೃತಾ ಪಾತ್ರಧಾರಿಯೂ ಔಟ್
Image Credit : Instagram

ಅಮೃತಾ ಪಾತ್ರಧಾರಿಯೂ ಔಟ್

ಕೆಲವು ದಿನಗಳ ಹಿಂದೆಯಷ್ಟೇ ಆದಿಯ ಅಕ್ಕ ಹಾಗೂ ಸಂಜೀವನ ಪತ್ನಿ ಅಮೃತಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ರಕ್ಷಿತಾ ಹೊರ ಬಂದಿದ್ದರು. ನಾನು ಇಷ್ಟಪಟ್ಟು ನಟಿಸಿದ್ದ ಪಾತ್ರ, ಈ ಪಾತ್ರದಲ್ಲಿ ಇನ್ನು ತುಂಬಾ ಸಮಯ ಇರುವ ಬಯಕೆ ಇತ್ತು. ಆದರೆ ಕಾರಣಾಂತರಗಳಿಂದ ಪಾತ್ರದಲ್ಲಿ ಮುಂದುವರೆಯಲು ಸಾಧ್ಯ ಆಗಲಿಲ್ಲ ಎಂದು ರಕ್ಷಿತಾ ಹೇಳಿದ್ದರು.

66
ಯಾರೆಲ್ಲಾ ನಟಿಸುತ್ತಿದ್ದಾರೆ?
Image Credit : Instagram

ಯಾರೆಲ್ಲಾ ನಟಿಸುತ್ತಿದ್ದಾರೆ?

ಆದಿಲಕ್ಷ್ಮೀ ಪುರಾಣದಲ್ಲಿ ಆಶಾ ಅಯ್ಯನಾರ್, ರಜನೀಶ್, ಮಂಜುನಾಥ್ ಹೆಗಡೆ, ಅಶೋಕ್ ಶರ್ಮಾ, ಮಾನ್ಸಿ ಜೋಷಿ, ಸುಷ್ಮಾ, ಮಾಲತಿ ಸಿರ್ದೇಶಪಾಂಡೆ, ಜ್ಯೋತಿ, ಸವಿತಾ ಕೃಷ್ಣಮೂರ್ತಿ ಮತ್ತು ಭಾಗ್ಯಶ್ರೀ ರಾವ್ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆದಿ ಲಕ್ಷ್ಮಿ ಪುರಾಣ
ಮನರಂಜನಾ ಸುದ್ದಿ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ತುಂಬು ಗರ್ಭಿಣಿ ಲಕ್ಷ್ಮೀ ನಿವಾಸ ನಟಿ ಮಾನಸ ಮನೋಹರ್ Baby Shower Photos
Recommended image2
Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ
Recommended image3
ಗುಡ್ ನ್ಯೂಸ್ ಕೊಟ್ಟು, ತೆಲುಗು ಧಾರಾವಾಹಿಯಿಂದ ಹೊರ ನಡೆದ ಕನ್ನಡ ನಟಿ ಲಾವಣ್ಯ !
Related Stories
Recommended image1
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Recommended image2
Aadi Lakshmi Purana: ತಾಳಿ ಕಟ್ಟುವಾಗ ಅಪ್ಪಿತಪ್ಪಿ 3 ಗಂಟು ಹಾಕಿಬಿಟ್ರೆ ಎನ್ನೋ ಭಯ ಇತ್ತು: ಆ ಘಟನೆ ನೆನೆದ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved