MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಭದ್ರಿನಾಥನ ಸನ್ನಿಧಿಯಲ್ಲಿ ನಟಿ ಕೃತಿಕಾ ರವೀಂದ್ರ… ದರ್ಶನ ಪಡೆದ ನಾನೇ ಪುಣ್ಯವತಿ ಎಂದ ನಟಿ

ಭದ್ರಿನಾಥನ ಸನ್ನಿಧಿಯಲ್ಲಿ ನಟಿ ಕೃತಿಕಾ ರವೀಂದ್ರ… ದರ್ಶನ ಪಡೆದ ನಾನೇ ಪುಣ್ಯವತಿ ಎಂದ ನಟಿ

ನಟಿ ಕೃತಿಕಾ ರವೀಂದ್ರ ಆಧ್ಯಾತ್ಮಿಕ ಯಾತ್ರೆ ಮಾಡುತ್ತಲೇ ಇರುತ್ತಾರೆ. ಇತ್ತಿಚೆಗೆ ಕೇದರನಾಥನ ದರ್ಶನ ಪಡೆದ ನಟಿ, ಇದೀಗ ಭದ್ರಿನಾಥನ ದರ್ಶನ ಪಡೆದು ಬಂದಿದ್ದು, ದೇವರ ಮುಂದೆ ಹತ್ತು ನಿಮಿಷ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿರುವುದಕ್ಕೆ ನಾನೇ ಪುಣ್ಯವತಿ ಎಂದಿದ್ದಾರೆ ನಟಿ. 

1 Min read
Author : Pavna Das
Published : May 23 2026, 10:49 AM IST
Share this Photo Gallery
  • FB
  • TW
  • Linkdin
  • Whatsapp
16
ಕೃತಿಕಾ ರವೀಂದ್ರ
Image Credit : Instagram

ಕೃತಿಕಾ ರವೀಂದ್ರ

ಕನ್ನಡ ಕಿರುತೆರೆಯಲ್ಲಿ ‘ರಾಧಾ ಕಲ್ಯಾಣ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಕೃತಿಕಾ ರವೀಂದ್ರ, ಬಳಿಕ ‘ಭೂಮಿಗೆ ಬಂದ ಭಗವಂತ’ ಮೂಲಕ ಮತ್ತೆ ಕನ್ನಡಿಗರಿಗೆ ಹತ್ತಿರವಾದರು. ಸಿನಿಮಾಗಳಲ್ಲೂ ಅಭಿನಯಿಸಿದ್ದರು ನಟಿ. ಸದ್ಯ ಎಲ್ಲದರಿಂದ ಬ್ರೇಕ್ ಪಡೆದು ತಮ್ಮ ಸ್ಪಿರೀಚುವಲ್ ಜರ್ನಿ ಮೂಲಕ ಜನರಿಗೆ ಪ್ರೇರಣೆ ನೀಡುತ್ತಾ, ಜನಪ್ರಿಯತೆ ಪಡೆಯುತ್ತಿದ್ದಾರೆ.

Add Asianetnews Kannada as a Preferred SourcegooglePreferred
26
ಆಧ್ಯಾತ್ಮಿಕ ಯಾತ್ರೆ
Image Credit : Instagram

ಆಧ್ಯಾತ್ಮಿಕ ಯಾತ್ರೆ

ಕೃತಿಕಾ ರವೀಂದ್ರ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಮೂಲಕ ಪೂರ್ತಿಯಾಗಿ ನಟನೆಯಿಂದ ಬ್ರೇಕ್ ತೆಗೆದುಕೊಂಡು ಆಧ್ಯಾತ್ಮಿಕ ಯಾತ್ರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೆಚ್ಚಾಗಿ ಸೋಲೋ ಟ್ರಾವೆಲ್ ಮಾಡುವ ಕೃತಿಕಾ ರವೀಂದ್ರ, ಒಂದೇ ವರ್ಷದಲ್ಲಿ 12 ಜ್ಯೋತಿರ್ಲಿಂಗ್ ದರ್ಶನ ಪಡೆದು ಬಂದಿದ್ದಾರೆ.

Related Articles

Related image1
Kedarnath Yatra: ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಶುರು, ಈ ಬಾರಿ ನಿಯಮಗಳು ಫುಲ್ ಸ್ಟ್ರಿಕ್ಟ್!
Related image2
Actress Urvashi Rautela: ಕೆಂಪು ರತ್ನಗಂಬಳಿ ಮೇಲೆ ಸೀರೆಯುಟ್ಟು ಮಿಂಚಿದ 'ಐರಾವತ' ನಟಿ ಊರ್ವಶಿ ರೌಟೇಲಾ
36
ಭದ್ರಿನಾಥನ ಸನ್ನಿಧಿಯಲ್ಲಿ ಕೃತಿಕಾ
Image Credit : Instagram

ಭದ್ರಿನಾಥನ ಸನ್ನಿಧಿಯಲ್ಲಿ ಕೃತಿಕಾ

ಇತ್ತೀಚೆಗೆ ನಟಿ ಕೇದಾರನಾಥನ ದರ್ಶನ ಪಡೆದು ಬಂದಿದ್ದರು. ಆದಾದ ಬಳಿಕ ಇದೀಗ ಭದ್ರಿನಾಥ ಕ್ಷೇತ್ರಕ್ಕೆ ತೆರಳಿದ್ದು, ಅಲ್ಲಿ ಭದ್ರಿನಾಥನ ಮುಂದೆ ಹತ್ತು ನಿಮಿಷ ಕುಳಿತುಕೊಳ್ಳುವ ಅವಕಾಶ ಪಡೆದುದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಪುಣ್ಯವತಿ ಎಂದಿದ್ದಾರೆ. ಈ ಕುರಿತು ನಟಿ ಏನು ಹೇಳಿದ್ರು ನೋಡಿ.

46
ಆದಿ ಶಂಕರಾಚಾರ್ಯರು ಸ್ಥಾಲಿಸಿದ ಧಾಮ
Image Credit : Instagram

ಆದಿ ಶಂಕರಾಚಾರ್ಯರು ಸ್ಥಾಲಿಸಿದ ಧಾಮ

ಭದ್ರಿನಾಥ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ಚಾರ್‌ಧಾಮಗಳಲ್ಲಿ ಒಂದು. ಇದು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ, ನಿರ್ದಿಷ್ಟವಾಗಿ ಬದರಿನಾರಾಯಣನ ರೂಪದಲ್ಲಿ, ಅಲ್ಲಿ ಅವನು ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ ಎಂದು ಕೃತಿಕಾ ಭದ್ರಿನಾಥ ದೇಗುಲದ ಸೌಂದರ್ಯ ಹಾಗೂ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದ್ದಾರೆ.

56
ಯಾವ ಜನ್ಮದ ಪುಣ್ಯ
Image Credit : Instagram

ಯಾವ ಜನ್ಮದ ಪುಣ್ಯ

ಭದ್ರಿನಾಥ ಧಾಮದ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿರುವ ನಟಿ, ಅಲ್ಲಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಗರ್ಭಗುಡಿಯ ಮುಂದೇನೆ 10 ನಿಮಿಷ ಕೂರೊ ಹಾಗೆ ಮಾಡಿ, ಕಣ್ತುಂಬ ನಿನ್ನ ನೋಡೋ ಹಾಗೆ ಮಾಡಿದ್ದಕ್ಕೆ ಧನ್ಯೋಸ್ಮಿ. ಎಷ್ಟು ಜನ್ಮದ ಪುಣ್ಯಾನೋ ಏನೋ ನಂದು. ಜೈ ಬದ್ರಿ ವಿಶಾಲ್ ಎಂದು ಕೃತಿಕಾ ಬರೆದುಕೊಂಡು ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

66
ಕೃತಿಕಾ ರವೀಂದ್ರ ಕರಿಯರ್
Image Credit : Instagram

ಕೃತಿಕಾ ರವೀಂದ್ರ ಕರಿಯರ್

ಅಂದ ಹಾಗೇ ಕೃತಿಕಾ ಇತ್ತೀಚೆಗಷ್ಟೇ ತಮ್ಮ ಗೃಹಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಅಲ್ಲದೇ ಅವರು ‘ರಾಜನಿವಾಸ’ ಎನ್ನುವ ಸಿನಿಮಾದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ನಟಿಸಿದ್ದು, ಸಿನಿಮಾ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಹೊಚ್ಚ ಹೊಸ ಧಾರಾವಾಹಿಯಲ್ಲೂ ನಟಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಟಿ
ಸೀರಿಯಲ್ ಶೂಟಿಂಗ್
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?
Recommended image2
ಕರ್ಣ ಧಾರಾವಾಹಿ ನಿಧಿಯಂತೆ ಸೀರೆಯಲ್ಲಿ ಕ್ಲಾಸಿ, ರಾಯಲ್‌ ಆಗಿ ಕಾಣ್ಬೇಕಾ? Tips ಇದು
Recommended image3
ಮಾಲ್ಡೀವ್ಸ್’ನಲ್ಲಿ ‘ಕರ್ಣ’ ಸೀರಿಯಲ್ ಬ್ಯೂಟಿ ನಮೃತಾ ಗೌಡ… ಸೀರೆಯಲ್ಲಿ ಮಿಂಚಿಂಗ್
Related Stories
Recommended image1
Kedarnath Yatra: ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಶುರು, ಈ ಬಾರಿ ನಿಯಮಗಳು ಫುಲ್ ಸ್ಟ್ರಿಕ್ಟ್!
Recommended image2
Actress Urvashi Rautela: ಕೆಂಪು ರತ್ನಗಂಬಳಿ ಮೇಲೆ ಸೀರೆಯುಟ್ಟು ಮಿಂಚಿದ 'ಐರಾವತ' ನಟಿ ಊರ್ವಶಿ ರೌಟೇಲಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved