MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • BSNLನಿಂದ ಕ್ರಾಂತಿಕಾರಿ ಮೊಬೈಲ್ ಆವಿಷ್ಕಾರ; ನೆಟ್‌ವರ್ಕ್‌ ಬೇಡವೇ ಬೇಡ, ಬೆಲೆ ಮಾತ್ರ 1.34 ಲಕ್ಷ!

BSNLನಿಂದ ಕ್ರಾಂತಿಕಾರಿ ಮೊಬೈಲ್ ಆವಿಷ್ಕಾರ; ನೆಟ್‌ವರ್ಕ್‌ ಬೇಡವೇ ಬೇಡ, ಬೆಲೆ ಮಾತ್ರ 1.34 ಲಕ್ಷ!

BSNL ತನ್ನ ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ಫೋನ್ ಲಾಂಚ್ ಮಾಡಿದೆ. ಬೆಲೆ ಬರೋಬ್ಬರಿ 1.34 ಲಕ್ಷ ರೂಪಾಯಿ ಆಗಿದೆ. ಹಾಗಂತ ಈ ಫೋನ್ ಎಲ್ಲರೂ ಖರೀದಿಸುವಂತಿಲ್ಲ. ಒಂದು ವೇಳೆ ಖರೀದಿಸಿದ್ರೂ ಅದಕ್ಕೆ ಅದರದ್ದೇ ಆದ ನೀತಿ, ನಿಯಮಗಳು ಇವೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ. 

1 Min read
Author : Ganesh Mabla Gowda
Published : Jul 09 2026, 03:44 PM IST
Share this Photo Gallery
  • FB
  • TW
  • Linkdin
  • Whatsapp
15
ಸಾಮಾನ್ಯ ಫೋನ್‌ಗಳಿಗಿಂತ ಭಿನ್ನ
Image Credit : bsnl

ಸಾಮಾನ್ಯ ಫೋನ್‌ಗಳಿಗಿಂತ ಭಿನ್ನ

ನೀವು ಕಾಡು, ಬೆಟ್ಟ ಅಥವಾ ಮೊಬೈಲ್ ನೆಟ್‌ವರ್ಕ್ ಇಲ್ಲದ ಕುಗ್ರಾಮದಲ್ಲಿದ್ದೀರಾ? ಅಲ್ಲಿ ಯಾರಿಗಾದರೂ ತುರ್ತು ಕರೆ ಮಾಡಬೇಕೆಂದರೆ ಸಾಧ್ಯವಿಲ್ಲವೇ? ಈ ಸಮಸ್ಯೆಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ (BSNL) ಪರಿಹಾರ ಕಂಡುಕೊಂಡಿದೆ. ಭಾರತದಲ್ಲಿ ಬಿಎಸ್ಎನ್ಎಲ್ ಹೊಸ ಸ್ಯಾಟಲೈಟ್ ಫೋನ್ (Satellite Phone) ಪರಿಚಯಿಸಿದೆ. ಇದರ ಬೆಲೆ ಮತ್ತು ಫೀಚರ್‌ಗಳು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿವೆ.

ಬೆಲೆ ಎಷ್ಟು?

ಈ ಸ್ಯಾಟಲೈಟ್ ಫೋನ್ ಬೆಲೆಯನ್ನು ಬಿಎಸ್ಎನ್ಎಲ್ 1,34,166 ರೂಪಾಯಿ (ತೆರಿಗೆ ಸೇರಿದಂತೆ) ಎಂದು ನಿಗದಿಪಡಿಸಿದೆ. ಇದು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಂತೆ ಅಗ್ಗವಾಗಿಲ್ಲ, ಏಕೆಂದರೆ ಇದು ವಿಶೇಷ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹೇಗೆ ಕೆಲಸ ಮಾಡುತ್ತದೆ?
Image Credit : bsnl

ಹೇಗೆ ಕೆಲಸ ಮಾಡುತ್ತದೆ?

ಸಾಮಾನ್ಯ ಫೋನ್‌ಗಳು ನಮ್ಮ ಹತ್ತಿರದ ಮೊಬೈಲ್ ಟವರ್‌ಗಳಿಂದ ಸಿಗ್ನಲ್ ಪಡೆಯುತ್ತವೆ. ಈ ಸ್ಯಾಟಲೈಟ್ ಫೋನ್ ಯಾವುದೇ ಟವರ್‌ಗಳ ಮೇಲೆ ಅವಲಂಬಿತವಾಗಿಲ್ಲ. ಇದು ಭೂಮಿಯ ಸುತ್ತ ಸುತ್ತುತ್ತಿರುವ ಉಪಗ್ರಹಗಳ (Satellites) ಮೂಲಕ ನೇರವಾಗಿ ಸಂಪರ್ಕ ಸಾಧಿಸುತ್ತದೆ. ಇನ್ಮಾರ್ಸಾಟ್ (Inmarsat) ನಂತಹ ಜಾಗತಿಕ ಸ್ಯಾಟಲೈಟ್ ನೆಟ್‌ವರ್ಕ್ ಕಂಪನಿಗಳ ಸಹಯೋಗದೊಂದಿಗೆ ಈ ಸೇವೆಯನ್ನು ನೀಡಲಾಗುತ್ತಿದೆ.

Related Articles

Related image1
ಜಸ್ಟ್ 76 ರನ್‌ಗೆ ಮಕಾಡೆ ಮಲಗಿದ್ಕೆ ಕುಂಬ್ಳೆ ಕಿಡಿ ಕಿಡಿ -ಮ್ಯಾನೇಜ್ಮೆಂಟ್ ವಿರುದ್ಧ ಸ್ಫೋಟಕ ಹೇಳಿಕೆ
Related image2
'ಬರ್ತೀನಿ ಅಂದ್ರೆ..' ರಾಜ್ಯ ರಾಜಕಾರಣಕ್ಕೆ ಎಂಟ್ರಿ ಬಗ್ಗೆ ಕುಮಾರಸ್ವಾಮಿ ಮಹತ್ವದ ಹೇಳಿಕೆ
35
ಈ ಫೋನಿನ ವಿಶೇಷತೆಗಳು
Image Credit : bsnl

ಈ ಫೋನಿನ ವಿಶೇಷತೆಗಳು

  • ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲೂ ವಾಯ್ಸ್ ಕರೆ ಮಾಡಬಹುದು.
  • ಸಂಕಷ್ಟದ ಸಮಯದಲ್ಲಿ ತುರ್ತು ನೆರವು ಪಡೆಯಲು ಎಸ್‌ಒಎಸ್ ಬಟನ್ ನೀಡಲಾಗಿದೆ
  • ಚಾರ್ಜಿಂಗ್ ವ್ಯವಸ್ಥೆ ಇಲ್ಲದ ಕಡೆಗಳಲ್ಲೂ ದೀರ್ಘಕಾಲ ಬಳಸಲು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ
  • ಕಠಿಣ ವಾತಾವರಣ, ಮಳೆ ಅಥವಾ ಧೂಳಿನಲ್ಲೂ ಕೆಲಸ ಮಾಡುವಂತೆ ವಿನ್ಯಾಸ
45
ಯಾರು ಈ ಫೋನ್ ಖರೀದಿಸಬಹುದು?
Image Credit : Getty

ಯಾರು ಈ ಫೋನ್ ಖರೀದಿಸಬಹುದು?

ಬಿಎಸ್ಎನ್ಎಲ್ ಈ ಫೋನ್ ಅನ್ನು ಸಾಮಾನ್ಯ ಬಳಕೆದಾರರಿಗಿಂತ ಹೆಚ್ಚಾಗಿ ಗಂಭೀರ ಕೆಲಸಗಳಲ್ಲಿ ತೊಡಗಿರುವವರಿಗಾಗಿ ಬಿಡುಗಡೆ ಮಾಡಿದೆ.

  • ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವ ಸೈನಿಕರು
  • ಪ್ರವಾಹ ಅಥವಾ ಭೂಕಂಪದ ಸಮಯದಲ್ಲಿ ನೆಟ್‌ವರ್ಕ್ ಕಡಿತಗೊಂಡಾಗ
  • ಕಾಡು ಅಥವಾ ಸಮುದ್ರದ ಮಧ್ಯೆ ಕೆಲಸ ಮಾಡುವವರು
  • ಹಿಮಾಲಯದಂತಹ ದುರ್ಗಮ ಪ್ರದೇಶಗಳಿಗೆ ಹೋಗುವ ಪ್ರವಾಸಿಗರು
55
ಖರೀದಿಸಲು ರೂಲ್ಸ್..?
Image Credit : Getty

ಖರೀದಿಸಲು ರೂಲ್ಸ್..?

ಯಾರು ಬೇಕಾದರೂ ಸುಮ್ಮನೆ ಇದನ್ನು ಖರೀದಿಸಲು ಸಾಧ್ಯವಿಲ್ಲ. ಇದನ್ನು ಖರೀದಿಸುವ ಮೊದಲು ಕೇಂದ್ರ ದೂರಸಂಪರ್ಕ ಇಲಾಖೆಯಿಂದ (DoT) ಕಡ್ಡಾಯವಾಗಿ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿಯಿಲ್ಲದೆ ಸ್ಯಾಟಲೈಟ್ ಫೋನ್ ಹೊಂದುವುದು ಅಥವಾ ಬಳಸುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

GM
Ganesh Mabla Gowda
ಬಿಎಸ್ಎನ್ಎಲ್
ಸುದ್ದಿ
ಮೊಬೈಲ್
ಸ್ಮಾರ್ಟ್‌ಫೋನ್

Latest Videos
Recommended Stories
Recommended image1
OTP Security: ಫೋನ್‌ಗೆ ಬರೋ 6-ಅಂಕಿಯ OTP ಯಾಕಿಷ್ಟು ಮುಖ್ಯ? ಇದರ ಅಸಲಿ ಕೆಲಸವೇನು?
Recommended image2
BSNL vs Jio vs Airtel: ಏರ್ಟೆಲ್ ಜಿಯೋ ಬಿಎಸ್ ಎನ್ ನಲ್ಲಿ ಯಾವ ಕಂಪನಿ 51 ರೂ.ಗೆ ನೀಡ್ತಿದೆ ಬೆಸ್ಟ್ ಪ್ಲಾನ್ ?
Recommended image3
ಮಳೆ ಬಂದಾಗ ಮೊದಲು ಮಿಂಚು, ನಂತರ ಗುಡುಗು... ಇದರ ಹಿಂದಿನ ರಹಸ್ಯ ಏನು?
Related Stories
Recommended image1
ಜಸ್ಟ್ 76 ರನ್‌ಗೆ ಮಕಾಡೆ ಮಲಗಿದ್ಕೆ ಕುಂಬ್ಳೆ ಕಿಡಿ ಕಿಡಿ -ಮ್ಯಾನೇಜ್ಮೆಂಟ್ ವಿರುದ್ಧ ಸ್ಫೋಟಕ ಹೇಳಿಕೆ
Recommended image2
'ಬರ್ತೀನಿ ಅಂದ್ರೆ..' ರಾಜ್ಯ ರಾಜಕಾರಣಕ್ಕೆ ಎಂಟ್ರಿ ಬಗ್ಗೆ ಕುಮಾರಸ್ವಾಮಿ ಮಹತ್ವದ ಹೇಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved