MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ರಮ್ಯಾ ನಾಯರ್ 8 ದಿನಗಳ ಬ್ಯೂಟಿಷಿಯನ್ ಕೋರ್ಸ್ ಹಿಂದಿದೆ ವಂಚನೆ ಜಾಲ; ಪೊಲೀಸ್ ಠಾಣೆಗೆ ದೂರು!

ರಮ್ಯಾ ನಾಯರ್ 8 ದಿನಗಳ ಬ್ಯೂಟಿಷಿಯನ್ ಕೋರ್ಸ್ ಹಿಂದಿದೆ ವಂಚನೆ ಜಾಲ; ಪೊಲೀಸ್ ಠಾಣೆಗೆ ದೂರು!

ಬೆಂಗಳೂರಿನ ನಾಗರಭಾವಿಯಲ್ಲಿರುವ ರಮ್ಯಾ ನಾಯರ್ ಮೇಕಪ್ ಅಕಾಡೆಮಿ ವಿರುದ್ಧ 8 ದಿನಗಳ ಬ್ಯೂಟಿಷಿಯನ್ ತರಬೇತಿಯ ಹೆಸರಿನಲ್ಲಿ ಮೋಸ ಮಾಡುತ್ತಿರುವ ಆರೋಪದ ಮೇಲೆ ಮಹಿಳಾ ಬ್ಯೂಟಿಷಿಯನ್ ಸಂಘವು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

2 Min read
Author : Sathish Kumar KH
Published : Jul 21 2025, 12:13 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Instagram

ಬೆಂಗಳೂರು (ಜು.21): ಮಹಿಳೆಯರ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಾ ಹಣವನ್ನು ಸುಲಿಗೆ ಮಾಡುತ್ತಿರುವ ಬ್ಯೂಟಿಷಿಯನ್ ತರಬೇತಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ವಂಚನೆ ಕೇಸ್ ದಾಖಲಿಸಲಾಗಿದೆ. ಇದೀಗ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ನಾಗರಭಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 'ರಮ್ಯಾ ನಾಯರ್ ಮೇಕಪ್ ಅಕಾಡೆಮಿ' ವಿರುದ್ಧ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಬ್ಯೂಟಿಷಿಯನ್ ಮಹಿಳೆಯರ ಸಂಘ ದೂರು ಸಲ್ಲಿಸಿದೆ.

28
Image Credit : Instagram

ಶಿವಮೊಗ್ಗ ಮೂಲದ ರಮ್ಯಾ ಎಂಬ ಯುವತಿ ಈ ಅಕಾಡೆಮಿಯನ್ನು ಆರಂಭಿಸಿ, ಕೇವಲ 8 ದಿನಗಳ 'ಕ್ರ್ಯಾಶ್ ಕೋರ್ಸ್' ಮೂಲಕ ಬ್ಯೂಟಿಷಿಯನ್ ಮತ್ತು ಮೇಕಪ್ ತರಬೇತಿ ನೀಡುತ್ತಿರುವುದಾಗಿ ಜಾಹೀರಾತು ಮಾಡುತ್ತಿದ್ದಾರೆ. ₹7200 ರೂಪಾಯಿ ಫೀಸ್‌ನೊಂದಿಗೆ ಪ್ರಸಾರ ಮಾಧ್ಯಮಗಳಲ್ಲಿ ಆಕರ್ಷಕ ಜಾಹೀರಾತುಗಳ ಮೂಲಕ ಮಹಿಳೆಯರನ್ನು ಸೆಳೆಯುತ್ತಿದ್ದಾರೆ.

Related Articles

Related image1
ಮೇಕಪ್ ಸರಿಯಾಗಿ ತೊಳೆಯದೇ ಅಲರ್ಜಿ; ಮುಖದ ಮೇಲೆ ಸಾವಿರಾರು ಇರುವೆ ಓಡಾಡಿದಂತೆ ಭಾಸ!
Related image2
ದೆವ್ವ ಬಿಡಿಸುವುದಾಗಿ ಕೋಲಿನಿಂದ ಹೊಡೆತ; ಶಿವಮೊಗ್ಗ ಮಹಿಳೆ ದಾರುಣ ಸಾವು!
38
Image Credit : Instagram

ಹೀಗಾಗಿ, ವೃತ್ತಿಪರ ತರಬೇತಿಗೆ ಅಗತ್ಯವಿರುವ ಸಮಯ, ಗುಣಮಟ್ಟ, ಅನುಭವ ಈ ಎಲ್ಲಾ ಅಂಶಗಳನ್ನು ನಿರ್ಲಕ್ಷಿಸಿ, ' ಕೇವಲ 8 ದಿನದ ಕೋರ್ಸ್ ಮೂಲಕ ಸ್ವತಂತ್ರವಾಗಿ ಮತ್ತು ಸುಲಭವಾಗಿ ಬ್ಯೂಟೀಷಿಯನ್ ತರಬೇತಿ ಪೂರ್ಣಗೊಳಿಸಬಹುದು' ಎಂಬ ಅಭಿಪ್ರಾಯ ಬಿತ್ತಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

48
Image Credit : Instagram

30ಕ್ಕೂ ಹೆಚ್ಚು ಮಹಿಳೆಯರಿಂದ ದೂರು

ಈ ಕುರಿತಾಗಿ, 30ಕ್ಕೂ ಹೆಚ್ಚು ಮಹಿಳೆಯರು ರಮ್ಯಾ ನಾಯರ್ ಅಕಾಡೆಮಿಯ ವಿರುದ್ಧ ದೂರು ನೀಡಿದ್ದಾರೆ. ಅವರ ಪ್ರಕಾರ, ಬ್ಯೂಟೀಷಿಯನ್ ಕೋರ್ಸ್‌ನಲ್ಲಿ ಪೂರ್ಣ ಕೌಶಲ್ಯ ಸಾಧಿಸಲು ಕನಿಷ್ಠ 3 ತಿಂಗಳು ಅಥವಾ 6 ತಿಂಗಳ ತರಬೇತಿ ಅವಶ್ಯಕ. ಆದರೆ, ಇಂಥ ತಾತ್ಕಾಲಿಕ ಕೋರ್ಸ್‌ಗಳು ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ಇವು ಮಹಿಳೆಯರ ಭವಿಷ್ಯ ನಾಶ ಪಡಿಸುತ್ತವೆ ಎಂದು ಸಂಘದ ಸದಸ್ಯರು ಕಿಡಿಕಾರಿದ್ದಾರೆ.

58
Image Credit : Instagram

'ಬ್ಯೂಟಿಷಿಯನ್ ತರಬೇತಿ ಸುಲಭ ವಿಷಯವಲ್ಲ. ಕೇವಲ 8 ದಿನದಲ್ಲಿ ಯಾವುದೇ ವೃತ್ತಿಪರ ಕೌಶಲ್ಯವನ್ನು ಸಂಪೂರ್ಣವಾಗಿ ಕಲಿಯಲು ಸಾಧ್ಯವಿಲ್ಲ. ಇದು ಕೇವಲ ಹಣ ಗಳಿಸುವ ಗಿಮಿಕ್' ಎಂದು ಸಂಘದ ಅಧ್ಯಕ್ಷೆ ಆಕ್ರೋಶ ವ್ಯಕ್ತಪಡಿಸಿದರು.

68
Image Credit : Instagram

ಅವಾಚ್ಯ ನಿಂದನೆಗೂ ಒಳಗಾದ ಆರೋಪಿಗಳು:

ಮಾಹಿತಿಯ ಪ್ರಕಾರ, ರಮ್ಯಾ ನಾಯರ್ ಅಕಾಡೆಮಿಗೆ ವಿರೋಧ ವ್ಯಕ್ತಪಡಿಸಿದ ಮಹಿಳೆಯರು ಅವಾಚ್ಯ ನಿಂದನೆಗೂ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

78
Image Credit : Instagram

ಸರ್ಕಾರದ ಮೆಟ್ಟಿಲು ಏರಿದ ಸಂಘ

ಇಂತಹ ಅನಧಿಕೃತ ಅಕಾಡೆಮಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಬ್ಯೂಟಿಷಿಯನ್ ಟ್ರಸ್ಟ್ ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಮನವಿ ಸಲ್ಲಿಸಿದ್ದು, ಅಂಗೀಕೃತ ತರಬೇತಿ ವ್ಯವಸ್ಥೆ ಮತ್ತು ಮಾನ್ಯತಾ ಪ್ರಮಾಣಪತ್ರಗಳ ಕಡ್ಡಾಯ ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿದೆ.

88
Image Credit : Instagram

ಸಾರಾಂಶ:

  • ಸ್ಥಳ: ನಾಗರಭಾವಿ, ಬೆಂಗಳೂರು
  • ಆರೋಪಿತರು: ರಮ್ಯಾ ನಾಯರ್
  • ಅಕಾಡೆಮಿ ಹೆಸರು: Ramya Nair Makeup Academy
  • ದೂರು ನೀಡಿದವರು: ಮಹಿಳಾ ಬ್ಯೂಟಿಷಿಯನ್ ಸಂಘ
  • ಆರೋಪ: ಕೇವಲ 8 ದಿನಗಳ ತರಬೇತಿ ನೀಡುವ ಮೂಲಕ ಜನರಿಗೆ ಮೋಸ, ತಪ್ಪು ಮಾಹಿತಿ, ನಿಂದನೆ
  • ದೂರು ದಾಖಲು: ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ವ್ಯಾಪಾರ ಸುದ್ದಿ
ಕ್ರೈಮ್ ನ್ಯೂಸ್
ಮೇಕಪ್
ಶಿವಮೊಗ್ಗ

Latest Videos
Recommended Stories
Recommended image1
ಪುತ್ತೂರು ಬಿಜೆಪಿ ನಾಯಕನ ಪುತ್ರನಿಂದ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ: ಆತ್ಮ*ಹತ್ಯೆಗೆ ಯತ್ನಿಸಿದ ಮಗುವಿನ ತಾಯಿ
Recommended image2
ಲಾಡ್-ಜಕ್ಕಪ್ಪನವರ ಜಟಾಪಟಿ: 120 ಎಕರೆ ಭೂಮಿ ಹುಡುಕಾಟದಲ್ಲಿ ಹೈರಾಣದ್ರು ಅಧಿಕಾರಿಗಳು
Recommended image3
ದರ್ಶನ್- ರೇಣುಕಾಸ್ವಾಮಿ ಕೇಸ್: ಪೊಲೀಸರ ವಿರುದ್ಧವೇ ಸುಳ್ಳು ಸಾಕ್ಷ್ಯ ಸೃಷ್ಟಿಸಿರುವ ಆರೋಪ
Related Stories
Recommended image1
ಮೇಕಪ್ ಸರಿಯಾಗಿ ತೊಳೆಯದೇ ಅಲರ್ಜಿ; ಮುಖದ ಮೇಲೆ ಸಾವಿರಾರು ಇರುವೆ ಓಡಾಡಿದಂತೆ ಭಾಸ!
Recommended image2
ದೆವ್ವ ಬಿಡಿಸುವುದಾಗಿ ಕೋಲಿನಿಂದ ಹೊಡೆತ; ಶಿವಮೊಗ್ಗ ಮಹಿಳೆ ದಾರುಣ ಸಾವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved