MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಬೆಂಗಳೂರು ಅಬಕಾರಿ ಇಲಾಖೆಯಿಂದ ₹39 ಲಕ್ಷ ಮೌಲ್ಯದ ಫಾರಿನ್ ಬ್ರ್ಯಾಂಡ್ ಮದ್ಯ ನಾಶ

ಬೆಂಗಳೂರು ಅಬಕಾರಿ ಇಲಾಖೆಯಿಂದ ₹39 ಲಕ್ಷ ಮೌಲ್ಯದ ಫಾರಿನ್ ಬ್ರ್ಯಾಂಡ್ ಮದ್ಯ ನಾಶ

ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹39 ಲಕ್ಷ ಮೌಲ್ಯದ ವಿದೇಶಿ ಮದ್ಯವನ್ನು ಜಪ್ತಿ ಮಾಡಿ ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ 516 ಲೀಟರ್ ಮದ್ಯ, ಖಾಲಿ ಬಾಟಲಿಗಳು ಮತ್ತು ಸಿಗರೇಟು ಬಾಕ್ಸ್‌ಗಳನ್ನು ನಾಶಪಡಿಸಲಾಗಿದೆ.

1 Min read
Sathish Kumar KH
Published : Jun 13 2025, 07:54 PM IST| Updated : Jun 13 2025, 08:00 PM IST
Share this Photo Gallery
  • FB
  • TW
  • Linkdin
  • Whatsapp
13
Image Credit : Asianet News

ಬೆಂಗಳೂರು (ಜೂನ್ 13): ಅಕ್ರಮವಾಗಿ ಸಾಗಣೆ ಮಾಡಲಾಗಿದ್ದ ಮೌಲ್ಯದ ವಿದೇಶಿ ಮದ್ಯವನ್ನು ಜಪ್ತಿ ಮಾಡಿ, ಅದನ್ನು ನಾಶಪಡಿಸಿರುವ ಮೂಲಕ ಅಬಕಾರಿ ಇಲಾಖೆ ಬೃಹತ್ ಮಟ್ಟದ ಕಾನೂನು ಅನುಷ್ಠಾನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

23
Image Credit : Asianet News

ಈ ಮೂಲಕ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹30 ಲಕ್ಷ ನಷ್ಟವಾಗುವದು ತಡೆಯಲ್ಪಟ್ಟಿದೆ. ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಜಂಟಿ ಆಯುಕ್ತ ಫಿರೋಜ್ ಖಾನ್ ಖಿಲ್ಲೇದಾರ್, ನಗರ ಜಿಲ್ಲೆ-3ರ ಉಪ ಆಯುಕ್ತ ಡಾ. ಕೆ.ಎಸ್. ಮುರಳಿ, ಉಪವಿಭಾಗ 05ರ ಉಪ ಅಧೀಕ್ಷಕ ಸಿ. ಲಕ್ಷ್ಮೀಶ, ಕೆ.ಎಸ್.ಬಿ.ಸಿ.ಎಲ್, ಕಂದಾಯ ಹಾಗೂ ಇತರ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ಜೂನ್ 12ರಂದು ಈ ಮದ್ಯವನ್ನು ನಾಶಪಡಿಸಲಾಯಿತು.

Related Articles

Related image1
Most Expensive Whiskey: ಇದು ವಿಶ್ವದ ಅತ್ಯಂತ ದುಬಾರಿ ಮದ್ಯ, ರೇಟ್ ಕೇಳದೇ 30 ಮಿಲಿ ಪೆಗ್ ಕುಡಿದ್ರೆ ನಿಮ್ಮ ಇಡೀ ಆಸ್ತಿಯೇ ಮಾರಬೇಕಾಗುತ್ತೆ!
Related image2
ಕುಡುಕರಿಗೆ ಖುಷಿ ಸುದ್ದಿ, ಈ ದೇಶದಲ್ಲಿ ನಡೆಯುತ್ತಿದೆ ಮದ್ಯ ಸೇವಕರ ಭರ್ತಿ
33
Image Credit : Asianet News

ಈ ಸಂದರ್ಭದಲ್ಲಿ ಅಲೈಡ್ ಬ್ಲೆಂಡರ್ಸ್ ಅಂಡ್ ಡಿಸ್ಟಿಲರೀಸ್ ಪರಾಂಗಣದಲ್ಲಿ ವಿದೇಶಿ ಮದ್ಯದ 516 ಬಾಟಲಿಗಳಲ್ಲಿ ಇದ್ದ 516 ಲೀಟರ್ ಮದ್ಯವನ್ನು ನಾಶಪಡಿಸಲಾಯಿತು. ಜೊತೆಗೆ, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಖಾಲಿ ಬಾಟಲ್‌ಗಳು ಹಾಗೂ ಸಿಗರೇಟು ಬೋಕ್ಸ್‌ಗಳನ್ನು ಸಹ ನಾಶಪಡಿಸಲಾಯಿತು. ನಾಶಪಡಿಸಿದ ವಸ್ತುಗಳ ಒಟ್ಟು ಮೌಲ್ಯ ರೂ. 39 ಲಕ್ಷ ಆಗಿದೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಮಾನವನ ಸೇವನೆಗೆ ಸೂಕ್ತವಲ್ಲದ 362.14 ಲೀಟರ್ ಮದ್ಯ, ವೈನ್ ಮತ್ತು ಬಿಯರ್ ಅನ್ನು ಸಹ ನಾಶಪಡಿಸಲಾಗಿದೆ ಎಂದು ನಗರ ಜಿಲ್ಲೆ-3ರ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಮದ್ಯ
ವಿದೇಶ ಪ್ರವಾಸ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved