MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • Bengaluru: ಹ್ಯಾಂಡ್‌ಸಮ್ ಹುಡುಗ ಅಂತ ಪರಿಚಯ ಮಾಡಿಕೊಳ್ಳುವ ಮುನ್ನ ಈ ಸುದ್ದಿ ಓದಿ!

Bengaluru: ಹ್ಯಾಂಡ್‌ಸಮ್ ಹುಡುಗ ಅಂತ ಪರಿಚಯ ಮಾಡಿಕೊಳ್ಳುವ ಮುನ್ನ ಈ ಸುದ್ದಿ ಓದಿ!

ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆಯರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 571 ಗ್ರಾಂ ಚಿನ್ನ ಮತ್ತು 25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

1 Min read
Author : Mahmad Rafik
Published : Apr 07 2026, 12:19 PM IST
Share this Photo Gallery
  • FB
  • TW
  • Linkdin
  • Whatsapp
15
Bengaluru Blackmail Case
Image Credit : Asianet News

Bengaluru Blackmail Case

ಮಹಿಳೆಯರ ನ*ಗ್ನ ಫೋಟೋ ಮತ್ತು ಖಾಸಗಿ ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮಹಿಳೆಯರನ್ನು ಇವರು ಪರಿಚಯ ಮಾಡಿಕೊಳ್ಳುತ್ತಿದ್ದರು.

25
ಚೆನ್ನೂರು ಮಹೇಶ್, ವನ್ನೂರು ಸ್ವಾಮಿ
Image Credit : Chat gpt

ಚೆನ್ನೂರು ಮಹೇಶ್, ವನ್ನೂರು ಸ್ವಾಮಿ

ಮಹಿಳೆಯ ದೂರು ಆಧರಿಸಿ ಆಂಧ್ರಪ್ರದೇಶ ಮೂಲದ ಚೆನ್ನೂರು ಮಹೇಶ್, ವನ್ನೂರು ಸ್ವಾಮಿ ಎಂಬವರನ್ನು ಕೆಆರ್‌ ಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ವಿವಾಹಿತ ಮಹಿಳೆಗೆ ಇಬ್ಬರು ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದು ಬಂದಿ

Related Articles

Related image1
ಬೆಂಗಳೂರಿನ ಯುವತಿ ಜೊತೆ ಮದುವೆಯಾದ IIT ಬಾಬಾ ಅಭಯ್; ಪತ್ನಿಯೊಂದಿಗೆ ಊರಿಗೆ ಎಂಟ್ರಿ
Related image2
ರಾತ್ರಿ ಗಸ್ತಿನಲ್ಲಿದ್ದ PSI ನಾಗಮ್ಮ, ಚಾಲಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ, ಧಮ್ಕಿ
35
ಒಂದೂವರೆ ವರ್ಷದ ಹಿಂದೆ ಪರಿಚಯ
Image Credit : X

ಒಂದೂವರೆ ವರ್ಷದ ಹಿಂದೆ ಪರಿಚಯ

ಒಂದೂವರೆ ವರ್ಷದ ಹಿಂದೆ ಮಹಿಳೆಗೆ ಸ್ನ್ಯಾಪ್‌ ಚಾಟ್ ಮೂಲಕ ಆರೋಪಿಗಳು ಪರಿಚಯವಾಗಿದ್ದರು. ನಂತರ ಪರಸ್ಪರ ಮೊಬೈಲ್‌ ನಂಬರ್ ಬದಲಾಯಿಸಿಕೊಂಡು ಮಾತುಕತೆ ಆರಂಭಿಸಿದ್ದರು. ವಾಟ್ಸಪ್ ವಿಡಿಯೋ ಕಾಲಿಂಗ್ ವೇಳೆ ಸ್ಕ್ರೀನ್ ಶಾಟ್ ತಗೆದಿಟ್ಟುಕೊಂಡಿದ್ದರು.

45
ಚಿನ್ನಾಭರಣ, ಹಣ ಪಡೆದ ಆರೋಪಿಗಳು
Image Credit : Freepik

ಚಿನ್ನಾಭರಣ, ಹಣ ಪಡೆದ ಆರೋಪಿಗಳು

ಈ ಸ್ಕ್ರೀನ್ ಶಾಟ್‌ಗಳನ್ನು ತೋರಿಸಿ ನಿನ್ನ ಗಂಡ, ಫ್ಯಾಮಿಲಿ, ಸೋಷಿಯಲ್ ಮಿಡೀಯಾದಲ್ಲಿ ಫೊಟೋ, ವಿಡಿಯೋ ಪೋಸ್ಟ್ ಮಾಡಿಕೊಳ್ಳುತ್ತವೆ. ಫೋಟೋ, ವಿಡಿಯೋಗಳು ಲೀಕ್ ಆಗಬಾರದು ಅಂದ್ರೆ ಕೇಳಿದಷ್ಟು ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದರು. ಆರೋಪಿಗಳು ಬ್ಲ್ಯಾಕ್ ಮೇಲ್ ಮಾಡಿ ಹಂತಹಂತವಾಗಿ ಚಿನ್ನಾಭರಣ, ಹಣ ಪಡೆದುಕೊಂಡಿದ್ದರು.

ಇದನ್ನೂ ಓದಿ: ಪತ್ನಿಯನ್ನು ಕೊನೆಯ ಬಾರಿಯೂ ನೋಡಲು ಬಿಡದ ಕ್ರೂರ ವಿಧಿ: ಪತಿ ದುರ್ಮರಣ, ಮಕ್ಕಳು ಅನಾಥ

55
571 ಗ್ರಾಂ ಚಿನ್ನಾಭರಣ ಮತ್ತು 25 ಲಕ್ಷ ನಗದು ವಶಕ್ಕೆ
Image Credit : Freepik

571 ಗ್ರಾಂ ಚಿನ್ನಾಭರಣ ಮತ್ತು 25 ಲಕ್ಷ ನಗದು ವಶಕ್ಕೆ

ಆರೋಪಿಗಳು ಪದೇ ಪದೇ ಹಣಕ್ಕೆ ಡಿಮ್ಯಾಂಡ್‌ ಮಾಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 571 ಗ್ರಾಂ ಚಿನ್ನಾಭರಣ ಮತ್ತು 25 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಮೊಬೈಲ್ ನಲ್ಲಿ ಹಲವು ಮಹಿಳೆಯರು, ಯುವತಿಯರ ಫೋಟೋ, ವಿಡಿಯೋಗಳ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: 40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಕ್ರೈಮ್ ನ್ಯೂಸ್

Latest Videos
Recommended Stories
Recommended image1
Karnataka 2nd PUC result 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ದಿನಾಂಕ ಫಿಕ್ಸ್, ರಿಸಲ್ಟ್ ನೋಡೋದು ಸುಲಭ, ಇಲ್ಲಿದೆ ಲಿಂಕ್
Recommended image2
Karnataka Bypolls: ಭದ್ರಕೋಟೆ ಉಳಿಸಿಕೊಳ್ಳುತ್ತಾ ಕಾಂಗ್ರೆಸ್? ಮೊದಲ ಬಾರಿ ಅರಳುತ್ತಾ ಕಮಲ? ಇಲ್ಲಿದೆ ಪಕ್ಕಾ ಲೆಕ್ಕಾಚಾರ!
Recommended image3
Iran-India Love story: ಮಧ್ಯಪ್ರಾಚ್ಯ ಯುದ್ಧದಿಂದ ವಿಮಾನ ರದ್ದು, ಕೊಡಗಿನಲ್ಲಿ ಸಿಲುಕಿದ ಇರಾನ್ ದಂಪತಿ!
Related Stories
Recommended image1
ಬೆಂಗಳೂರಿನ ಯುವತಿ ಜೊತೆ ಮದುವೆಯಾದ IIT ಬಾಬಾ ಅಭಯ್; ಪತ್ನಿಯೊಂದಿಗೆ ಊರಿಗೆ ಎಂಟ್ರಿ
Recommended image2
ರಾತ್ರಿ ಗಸ್ತಿನಲ್ಲಿದ್ದ PSI ನಾಗಮ್ಮ, ಚಾಲಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ, ಧಮ್ಕಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved