MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಬರಹಗಾರರು ನಿರ್ದೇಶನಕ್ಕೆ ಬರಬೇಕು, ಆಗಲೇ ಸ್ಟ್ರಾಂಗ್‌ ಕಂಟೆಂಟ್‌ ಬರಲು ಸಾಧ್ಯ: ಗೋಲ್ಡನ್‌ ಸ್ಟಾರ್‌ ಗಣೇಶ್‌

ಬರಹಗಾರರು ನಿರ್ದೇಶನಕ್ಕೆ ಬರಬೇಕು, ಆಗಲೇ ಸ್ಟ್ರಾಂಗ್‌ ಕಂಟೆಂಟ್‌ ಬರಲು ಸಾಧ್ಯ: ಗೋಲ್ಡನ್‌ ಸ್ಟಾರ್‌ ಗಣೇಶ್‌

‘ಲವ್‌ ಇನ್‌ ಮಂಡ್ಯ’ ಖ್ಯಾತಿಯ ಅರಸು ಅಂತಾರೆ ನಿರ್ದೇಶನದ, ಹೆಸರಿಡದ ಸಿನಿಮಾಕ್ಕೆ ಗಣೇಶ್‌ ನಾಯಕ. ಈ ವರ್ಷವೇ ಬಿಡುಗಡೆ ಎಂದು ಮುಹೂರ್ತ ಸಮಾರಂಭದಲ್ಲಿ ನಟ ಹೇಳಿಕೆ. ಸಿನಿಮಾ ಟೈಟಲ್‌ ಶೀಘ್ರದಲ್ಲೇ ಬಿಡುಗಡೆ ಮಾಡ್ತೀವಿ ಎಂದ ಅಂತಾರೆ.

1 Min read
Govindaraj S
Published : Apr 09 2025, 11:12 AM IST| Updated : Apr 09 2025, 11:36 AM IST
Share this Photo Gallery
  • FB
  • TW
  • Linkdin
  • Whatsapp
16

‘ಹಾಸ್ಯ ನಟ ರವಿಶಂಕರ ಗೌಡ ನನಗೆ ಬಹಳ ಕಾಲದಿಂದ ಆತ್ಮೀಯ. ನನಗೆ ಜನಪ್ರಿಯತೆ ತಂದುಕೊಟ್ಟ ಕಾಮಿಡಿ ಟೈಮ್‌ ನಿರೂಪಣೆಗೆ ಮೊದಲು ಕರೆ ಹೋಗಿದ್ದು ರವಿಶಂಕರ್‌ಗೆ. ಆದರೆ ಆತ ಸಿಲ್ಲಿಲಲ್ಲಿ ಸೀರಿಯಲ್‌ನಲ್ಲಿ ಬ್ಯುಸಿ ಇದ್ದ ಕಾರಣ ನನ್ನ ನಂಬರ್‌ ಕೊಟ್ಟಿದ್ದಾನೆ. ಹೀಗೆ ನನಗೆ ಮನರಂಜನಾ ಮಾಧ್ಯಮಕ್ಕೆ ಬರಲು ಅವಕಾಶ ಸಿಕ್ಕಿತು’ ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೇಳಿದ್ದಾರೆ.

26

ಅರಸು ಅಂತಾರೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಗಣೇಶ್‌ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಸಂದರ್ಭದಲ್ಲಿ ಗಣೇಶ್‌, ರವಿಶಂಕರ್‌ ಮೂಲಕ ನನಗೆ ಬಂದ ಈ ಆಫರ್‌ ಬಗ್ಗೆ ಹಿಂದೆಲ್ಲೂ ಹೇಳಿಲ್ಲ. ಆತ ಹಾಗೂ ನನ್ನ ನಡುವಿನ ಸ್ನೇಹ ಇಂದೂ ಹಾಗೇ ಇದೆ. 

36

ಆದರೆ ಆತನ ನಟನೆಯ ಸಿನಿಮಾ ಸಂಖ್ಯೆ ಸಾವಿರದ ಸಮೀಪ ಬಂದಿವೆ. ನಾನಿನ್ನೂ ನಲವತ್ತೈದರ ಆಸುಪಾಸಿನಲ್ಲಿದ್ದೇನೆ ಎಂದರು. ಉತ್ತಮ ಬರಹಗಾರ ನಿರ್ದೇಶಕನಾಗಿ ಸಿಗಲು ಕಲಾವಿದರಿಗೆ ಯೋಗ ಇರಬೇಕು. ಅರಸು ಅಂತಾರೆ ಅದ್ಭುತ ಬರಹಗಾರ. ಅವರು 2019ರಲ್ಲಿ ಸಿನಿಮಾ ಮಾಡುವ ಬಗ್ಗೆ ನನಗೆ ಮೆಸೇಜ್‌ ಮಾಡಿದ್ದರು. 

46

ಈಗ ಅವರೊಂದಿಗೆ ಸಿನಿಮಾ ಮಾಡಲು ಕಾಲ ಕೂಡಿಬಂದಿದೆ. ಹೆಚ್ಚು ಹೆಚ್ಚು ಬರಹಗಾರರು ನಿರ್ದೇಶನ ಕ್ಷೇತ್ರಕ್ಕೆ ಬರಬೇಕು. ಆಗಲೇ ಸ್ಟ್ರಾಂಗ್‌ ಕಂಟೆಂಟ್‌ ಬರಲು ಸಾಧ್ಯ, ಆ ಮೂಲಕ ಈ ಕಾಲದ ಪ್ರೇಕ್ಷಕರನ್ನು ಥೇಟರಿಗೆ ಕರೆತರಲು ಸಾಧ್ಯ ಎಂದು ಗಣೇಶ್‌ ಹೇಳಿದರು.

56

‘ಹನುಮಾನ್’ ಖ್ಯಾತಿಯ ನಟಿ ಅಮೃತಾ ಅಯ್ಯರ್‌, ಗಣೇಶ್‌ ಅವರಂಥಾ ಸ್ಟಾರ್‌ ನಟನೊಂದಿಗೆ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಖುಷಿ ಇದೆ. ಮನಸ್ಸಿಗೆ ಮುದ ನೀಡುವಂಥಾ ಈ ಸಿನಿಮಾದ ಕಥೆ ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ ಎಂದರು.

66

ನಿರ್ದೇಶಕ ಅರಸು ಅಂತಾರೆ, ‘ಸಿನಿಮಾದ ಟೈಟಲ್‌ ಅನ್ನು ಶೀಘ್ರ ಟೀಸರ್‌ ಮೂಲಕ ರಿವೀಲ್‌ ಮಾಡಲಾಗುವುದು ಎಂದರು. ರವಿ ಭದ್ರಾವತಿ ನಿರ್ಮಾಪಕರು. ನಿರ್ಮಾಪಕ ಉದಯ್‌ ಮೆಹ್ತಾ, ಕಲಾವಿದರಾದ ರಂಗಾಯಣ ರಘು, ರವಿಶಂಕರ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಸ್ಯಾಂಡಲ್‌ವುಡ್
ಕನ್ನಡ ಚಲನಚಿತ್ರಗಳು
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved