ವೀರಬಾಹು ಎಂಪಿ ಶಂಕರ್ ಜನ್ಮದಿನದ ಸವಿನೆನಪು!
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಅದ್ಬುತ ಅಭಿನಯದ ಮೂಲಕ ಎಂದೂ ಮರೆಯಲಾಗದ ಖಳ ನಾಯಕ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದವರು ಇವರು. ವನ್ಯಜೀವಿ ,ಕಾಡು,ಪರಿಸರ ಕಾಳಜಿ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದ ಈ ಅಪರೂಪದ ವ್ಯಕ್ತಿ ಪೋಷಕ ಪಾತ್ರಗಳಿಂದಲೂ ಜನಪ್ರಿಯರಾಗಿದ್ದ ಮೇರು ಕಲಾವಿದ. ಇಂದು ಈ ಶ್ರೇಷ್ಠ ವ್ಯಕ್ತಿತ್ವದ ಹುಟ್ಟು ಹಬ್ಬವಾಗಿದ್ದು ಅವರ ಸವಿನೆನಪಿನಲ್ಲಿ ಒಂದಷ್ಟು ಮಾಹಿತಿ ತಿಳಿಯೋಣ.

<p>ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಮೈಸೂರು ಪುಟ್ಟಲಿಂಗಪ್ಪ ಶಂಕರ್ ಅವರು 1935 ಆಗಸ್ಟ್ 20 ರಂದು ಜನಿಸಿದರು. </p>
ಕನ್ನಡ ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಮೈಸೂರು ಪುಟ್ಟಲಿಂಗಪ್ಪ ಶಂಕರ್ ಅವರು 1935 ಆಗಸ್ಟ್ 20 ರಂದು ಜನಿಸಿದರು.
<p>ಖ್ಯಾತ ಖಳನಾಯಕನ ಪಟ್ಟ ಅಲಂಕರಿಸಿದ್ದ ಇವರು ರಂಗಭೂಮಿ ನಂಟು ಹೊಂದಿದ್ದರು. </p>
ಖ್ಯಾತ ಖಳನಾಯಕನ ಪಟ್ಟ ಅಲಂಕರಿಸಿದ್ದ ಇವರು ರಂಗಭೂಮಿ ನಂಟು ಹೊಂದಿದ್ದರು.
<p>ಪರಿಸರ, ಕಾಡು ಹಾಗು ವನ್ಯಜೀವಿ ಸಂರಕ್ಷಣೆಯ ಸಂಬಂಧ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದ ಹೆಗ್ಗಳಿಕೆ ಇವರದು. </p>
ಪರಿಸರ, ಕಾಡು ಹಾಗು ವನ್ಯಜೀವಿ ಸಂರಕ್ಷಣೆಯ ಸಂಬಂಧ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದ ಹೆಗ್ಗಳಿಕೆ ಇವರದು.
<p>ಡಾ ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರದ ವೀರಬಾಹು ಪಾತ್ರ ಇವರನ್ನು ಹೆಚ್ಚು ಜನಪ್ರಿಯರನ್ನಾಗಿಸಿದೆ. </p>
ಡಾ ರಾಜ್ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರದ ವೀರಬಾಹು ಪಾತ್ರ ಇವರನ್ನು ಹೆಚ್ಚು ಜನಪ್ರಿಯರನ್ನಾಗಿಸಿದೆ.
<p>ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಪರಿಣಿತರಾಗಿದ್ದ ಇವರು ನಟನೆಯ ಜೊತೆಗೆ,ದಿಗ್ದರ್ಶನ,ಚಿತ್ರನಿರ್ಮಾಣ,ವಿತರಣೆ ಹೀಗೆ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು. </p>
ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ಪರಿಣಿತರಾಗಿದ್ದ ಇವರು ನಟನೆಯ ಜೊತೆಗೆ,ದಿಗ್ದರ್ಶನ,ಚಿತ್ರನಿರ್ಮಾಣ,ವಿತರಣೆ ಹೀಗೆ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು.
<p>ಸತ್ಯಹರಿಶ್ಚಂದ್ರ , ಗಂಧದಗುಡಿ , ಬಂಗಾರಮನುಷ್ಯ , ಭೂತಯ್ಯನ ಮಗ ಅಯ್ಯು ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಗಮನ ಸೆಳೆದಿದ್ದರು. </p>
ಸತ್ಯಹರಿಶ್ಚಂದ್ರ , ಗಂಧದಗುಡಿ , ಬಂಗಾರಮನುಷ್ಯ , ಭೂತಯ್ಯನ ಮಗ ಅಯ್ಯು ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಗಮನ ಸೆಳೆದಿದ್ದರು.
<p> ಸಿನಿಮಾ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದ ಎಂಪಿ ಶಂಕರ್ ಅವರು ತಮ್ಮ ಸಂಸ್ಥೆಯಿಂದ 16 ಯಶಸ್ವಿ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರಿಗೆ ನೀಡಿದ್ದಾರೆ. </p>
ಸಿನಿಮಾ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದ ಎಂಪಿ ಶಂಕರ್ ಅವರು ತಮ್ಮ ಸಂಸ್ಥೆಯಿಂದ 16 ಯಶಸ್ವಿ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರಿಗೆ ನೀಡಿದ್ದಾರೆ.
<p>ಗಿಡ್ಡುದಾದ ಮತ್ತು ನಾರದ ವಿಜಯ ಎಂಬ ಹಾಸ್ಯ ಪ್ರಧಾನ ಸಿನಿಮಾಗಳನ್ನು ತಯಾರಿಸಿದ್ದು ಕೂಡ ಮತ್ತೊಂದು ವಿಶೇಷ. </p>
ಗಿಡ್ಡುದಾದ ಮತ್ತು ನಾರದ ವಿಜಯ ಎಂಬ ಹಾಸ್ಯ ಪ್ರಧಾನ ಸಿನಿಮಾಗಳನ್ನು ತಯಾರಿಸಿದ್ದು ಕೂಡ ಮತ್ತೊಂದು ವಿಶೇಷ.
<p>ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿದ್ದ " ಕಲ್ಲರಳಿ ಹೂವಾಗಿ "ಎಂಪಿ ಶಂಕರ್ ಅವರ ಕೊನೆಯ ಸಿನಿಮಾವಾಗಿತ್ತು. </p>
ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿದ್ದ " ಕಲ್ಲರಳಿ ಹೂವಾಗಿ "ಎಂಪಿ ಶಂಕರ್ ಅವರ ಕೊನೆಯ ಸಿನಿಮಾವಾಗಿತ್ತು.
<p>ನಟಶಾರ್ದೂಲ,ಕಲಾಶಾರ್ದೂಲ,ಮೈಸೂರುಹುಲಿ,ಕಲಾಸೇವಾಧುರೀಣ,ಕನ್ನಡಭೂಷಣ,ಸಾಹಸೀಚಿತ್ರರತ್ನ,ಕರುಣಾರತ್ನ ಎಂಬ ಅನೇಕ ಬಿರುದುಗಳನ್ನು ಪಡೆದಿದ್ದಾರೆ.</p>
ನಟಶಾರ್ದೂಲ,ಕಲಾಶಾರ್ದೂಲ,ಮೈಸೂರುಹುಲಿ,ಕಲಾಸೇವಾಧುರೀಣ,ಕನ್ನಡಭೂಷಣ,ಸಾಹಸೀಚಿತ್ರರತ್ನ,ಕರುಣಾರತ್ನ ಎಂಬ ಅನೇಕ ಬಿರುದುಗಳನ್ನು ಪಡೆದಿದ್ದಾರೆ.