MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಇದು ನಿಜಕ್ಕೂ ಹೃದಯವಿದ್ರಾವಕ: ಆರ್‌ಸಿಬಿ ದುರಂತಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಕಣ್ಣೀರು

ಇದು ನಿಜಕ್ಕೂ ಹೃದಯವಿದ್ರಾವಕ: ಆರ್‌ಸಿಬಿ ದುರಂತಕ್ಕೆ ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಕಣ್ಣೀರು

ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿ ಸಿಗಲಿ. ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು.

1 Min read
Govindaraj S
Published : Jun 06 2025, 06:07 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಕ್ರಿಕೆಟ್‌ ಜೊತೆ ಜೊತೆಗೇ ಗುರುತಿಸಿಕೊಳ್ಳುವ ಸಿನಿಮಾ ಕ್ಷೇತ್ರದಲ್ಲಿ ‘ಆರ್‌ಸಿಬಿ’ ಸಂಭ್ರಮಾಚರಣೆಯ ದುರಂತ ತಿರುವಿಗೆ ಆಘಾತ ವ್ಯಕ್ತವಾಗಿದೆ. ಸಿನಿಮಾರಂಗದ ಅನೇಕರು ಅಮಾಯಕರ ನೋವಿಗೆ ಮಿಡಿದಿದ್ದಾರೆ.

26
Image Credit : others

ಶಿವರಾಜ್‌ ಕುಮಾರ್‌, ‘ಗೆಲುವಿನ ಸಂಭ್ರಮಕ್ಕೆ ಸಾವಿನ ಸೂತಕ ತುಂಬಾ ನೋವಿನ ಸಂಗತಿ. ನೊಂದ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿ ಸಿಗಲಿ. ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು. ನಿಮ್ಮ ಅಭಿಮಾನ, ನಿಮ್ಮ ಪ್ರೀತಿ ಎಲ್ಲರನ್ನು ಕಾಪಾಡುತ್ತದೆ. ನಿಮ್ಮ ಕುಟುಂಬದವರನ್ನು ನೀವು ಮಾತ್ರ ಕಾಪಾಡಲು ಸಾಧ್ಯ’ ಎಂದಿದ್ದಾರೆ.

Related Articles

Related image1
Firefly: ಫೈರ್‌ಫ್ಲೈ ಯಂಗ್‌ ಟೀಮ್‌ನ ಸುಂದರ ದೃಶ್ಯಕಾವ್ಯ: ನಿವೇದಿತಾ ಶಿವರಾಜ್‌ ಕುಮಾರ್‌ ಸಂದರ್ಶನ
Related image2
ಮಾರ್ನಮಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ ರಮ್ಯಾ: ಚೈತ್ರಾ ಆಚಾರ್ ರೋಲ್ ರಿವೀಲ್!
36
Image Credit : our own

ನಟಿ ರಮ್ಯಾ, ‘ಸಂಭ್ರಮವೊಂದು ಹೇಗೆ ದುರಂತವಾಗಿ ತಿರುವು ಪಡೆದುಕೊಂಡಿತು! ಇದು ನಿಜಕ್ಕೂ ಹೃದಯವಿದ್ರಾವಕ’ ಎಂದಿದ್ದಾರೆ. ಕಲಾವಿದರಾದ ಸಪ್ತಮಿ ಗೌಡ, ನಿಶ್ವಿಕಾ ನಾಯ್ಡು, ರಘು ದೀಕ್ಷಿತ್‌ ಮೊದಲಾದವರು ಕಂಬನಿ ಮಿಡಿದಿದ್ದಾರೆ.

46
Image Credit : Instagram

ಉಸಿರುಗಟ್ಟಿದ ಅನುಭವ, ದೈವವಶಾತ್‌ ಪಾರಾದೆ, ಚಂದನ್‌ ಶೆಟ್ಟಿ: ನಾನು ಆರ್‌ಸಿಬಿ ಸಂಭ್ರಮಾಚರಣೆಗೆ ಒಬ್ಬ ಸಾಮಾನ್ಯ ಫ್ಯಾನ್‌ ಆಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದೆ. ಆರಂಭದಲ್ಲಿ ಎಲ್ಲ ಸರಿಯಿತ್ತು.

56
Image Credit : Asianet News

ಒಂದು ಹಂತದಲ್ಲಿ ಜನಸಂದಣಿ ಹೆಚ್ಚಾಗತೊಡಗಿತು. ಜನ ನನ್ನ ಜೊತೆ ಸೆಲ್ಫಿಗೆ ಮುಗಿಬಿದ್ದರು. ಏನಾಗ್ತಿದೆ ಅನ್ನೋದನ್ನೇ ಮರೆತರು. ನನಗೆ ಉಸಿರು ಕಟ್ಟತೊಡಗಿತು. ಆದರೂ ಜನ ಅಲ್ಲಾಡುತ್ತಿಲ್ಲ, ಬದಲಿಗೆ ಹೆಚ್ಚೆಚ್ಚು ಮಂದಿ ನೆರೆಯುತ್ತಿದ್ದಾರೆ. ದೂರ ನಿಲ್ಲಿ ಅಂತ ನಾನೇ ಜನರನ್ನು ತಳ್ಳಬೇಕಾಯಿತು.

66
Image Credit : Asianet News

ಕೊನೆಗೆ ನನ್ನ ಸ್ನೇಹಿತ ಹೇಗೋ ಅಲ್ಲಿಂದ ಪಾರುಮಾಡಿ ಪಕ್ಕದಲ್ಲಿದ್ದ ಮೆಟ್ರೋ ಸ್ಟೇಶನ್‌ಗೆ ಕರೆತಂದೆ. ಅಲ್ಲಿ ಗಾಯಗೊಂಡ ಕೆಲವರಿದ್ದರು. ಮೆಟ್ರೋ ಸಿಬ್ಬಂದಿ ನಮ್ಮ ಸಹಾಯಕ್ಕೆ ಬಂದರು. ನಾವು ಕ್ರೌಡ್‌ ಮ್ಯಾನೇಜ್‌ಮೆಂಟ್‌ ಕಲಿಯಲೇಬೇಕಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಆರ್‌ಸಿಬಿ
ಕಾಲ್ತುಳಿತ
ಡಾ. ಶಿವರಾಜಕುಮಾರ್
ರಮ್ಯಾ
ಸ್ಯಾಂಡಲ್‌ವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved