- Home
- Entertainment
- Sandalwood
- ನೆಪೋಟಿಸಂ: ಅಣ್ಣಾವ್ರ ಕುಟುಂಬದ ಬಗ್ಗೆ ಸುದೀಪ್ ಹೇಳಿದ ಮಾತಿಗೆ ಶಿವಣ್ಣ ಕೊಟ್ಟ ರಿಯಾಕ್ಷನ್ ನೋಡಿ
ನೆಪೋಟಿಸಂ: ಅಣ್ಣಾವ್ರ ಕುಟುಂಬದ ಬಗ್ಗೆ ಸುದೀಪ್ ಹೇಳಿದ ಮಾತಿಗೆ ಶಿವಣ್ಣ ಕೊಟ್ಟ ರಿಯಾಕ್ಷನ್ ನೋಡಿ
ನೆಪೋಟಿಸಂ ಕುರಿತು ಪತ್ರಕರ್ತರ ಪ್ರಶ್ನೆಗೆ, ತನ್ನನ್ನು ಮಾತ್ರ ಯಾಕೆ ಕೇಳುತ್ತೀರಿ, ಶಿವಣ್ಣನನ್ನೂ ಕೇಳಿ ಎಂದು ಸುದೀಪ್ ಹೇಳಿದ್ದರು. ಇದೀಗ ಸುದೀಪ್ ಎದುರೇ ಈ ಪ್ರಶ್ನೆ ಎದುರಿಸಿದ ಶಿವರಾಜ್ಕುಮಾರ್, ಪ್ರತಿಭೆ ಇದ್ದವರು ಚಿತ್ರರಂಗಕ್ಕೆ ಬರುತ್ತಾರೆ ಎಂದು ಖಡಕ್ ಉತ್ತರ ನೀಡಿದ್ದಾರೆ.

ಸಿನಿ ಇಂಡಸ್ಟ್ರಿಯಲ್ಲಿ ನೆಪೋಟಿಸಂ
ಸುದೀಪ್ ಅಕ್ಕನ ಮಗ ಸಂಚಿತ್ 'ಮ್ಯಾಂಗೋ ಪಚ್ಚ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಪ್ರಚಾರದ ಸಮಯದಲ್ಲಿ, ಕಿಚ್ಚ ಸುದೀಪ್ (Kichcha Sudeep) ಅವರಿಗೆ ಪತ್ರಕರ್ತರು ನೆಪೋಟಿಸಂ ಬಗ್ಗೆ ಪ್ರಶ್ನೆ ಕೇಳಿದ್ದರು. ಈಗ ಇಂಡಸ್ಟ್ರಿಯಲ್ಲಿ ನೆಪೋಟಿಸಂ ಹೆಚ್ಚಾಗ್ತಿದೆ. ಅವರವರ ಮಕ್ಕಳೇ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ ಎನ್ನುವ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು.
ಶಿವಣ್ಣನ ಯಾಕೆ ಕೇಳಲ್ಲ ಎಂದಿದ್ದ ಸುದೀಪ್
ಇದಕ್ಕೆ ಗರಂ ಆಗಿದ್ದ ಸುದೀಪ್, ಈ ಪ್ರಶ್ನೆ ನನ್ನನ್ನು ಮಾತ್ರ ಯಾಕೆ ಕೇಳ್ತೀರಾ? ಇದೇ ಪ್ರಶ್ನೆಯನ್ನು ಶಿವರಾಜ್ ಕುಮಾರ್ ಅವರಿಗೂ ಕೇಳ್ತೀರಾ ಎಂದು ಪ್ರಶ್ನಿಸಿದ್ದಾರೆ. ನೆಪೋಟಿಸಂ ಅಣ್ಣಾವ್ರ ಕಾಲದಿಂದಲೇ ಶುರುವಾಗಿತ್ತಲ್ಲ. ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ. ರಾಜ್ಕುಮಾರ್ ಅವರ ಮಕ್ಕಳಿಗೂ ಕೇಳಬೇಕು, ಅಂಬಾನಿ ಅವರಿಗೂ ಕೇಳಬೇಕು. ನೀವು ಹಾಗೆ ಯಾಕೆ ಮಾಡಲ್ಲ ಎಂದ ಪ್ರಶ್ನಿಸಿದ್ದರು.
ಸುದೀಪ್ ಎದುರೇ ಶಿವಣ್ಣಗೆ ಪ್ರಶ್ನೆ
ಈಗ ಇದರ ಬಗ್ಗೆ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಅವರ ಎದುರೇ ಪ್ರಶ್ನೆ ಎದುರಾಗಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ ಒಟ್ಟಿಗೇ ಕಾಣಿಸಿಕೊಂಡಾಗ, ಈ ಪ್ರಶ್ನೆಯನ್ನು ಶಿವರಾಜ್ ಕುಮಾರ್ ಅವರಿಗೆ ಪ್ರಶ್ನಿಸಲಾಯಿತು.
ಶಿವರಾಜ್ ಕುಮಾರ್ ಕೋಪ
ಅದಕ್ಕೆ ಶಿವರಾಜ್ ಕುಮಾರ್ ಅವರು, ಅದನ್ನೆಲ್ಲಾ ನಾನು ನೋಡಿದ್ದೇನೆ. ಮೊದಲನೆಯದ್ದಾಗಿ ನೀವು ಆ ಪ್ರಶ್ನೆಯನ್ನು ಸುದೀಪ್ ಅವರಿಗೆ ಕೇಳಿದ್ದೇ ತಪ್ಪು ಎಂದು ಸ್ವಲ್ಪ ಸಿಟ್ಟಿನಿಂದಲೇ ನುಡಿದರು. ಟ್ಯಾಲೆಂಟ್ ಇದ್ದವರು ಇಂಡಸ್ಟ್ರಿಗೆ ಬರುತ್ತಾರೆ. ಇಲ್ಲಿ ಅವರ ಮಗ, ಇವರ ಮಗ ಎಂದು ಬರುವುದಿಲ್ಲ. ಯಾರಿಗೆ ಕಲೆ ಇರುತ್ತದೆಯೋ ಅವರು ಬರುತ್ತಾರೆ. ನೀವು ಇಂಥ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಹೇಳಿದರು.
ಸುದೀಪ್ ಏನು ಹೇಳಿದ್ರು?
ನಿನ್ನೆ ಕೂಡ ಸುದೀಪ್ ಅವರು ಇದೇ ಮಾತನ್ನು ಹೇಳಿದ್ದರು. ಬಾಂಬೆನಲ್ಲಿ ಹುಟ್ಟಿರೋ ಯಾವುದೋ ಒಂದು ಶಬ್ದ (ನೆಪೋಟಿಸಂ) ಇಲ್ಲಿ ಹೇಳೋದು ತಪ್ಪು. ಅಣ್ಣಾವ್ರ ಕಾಲದಿಂದಲೇ ಇದು ಇದೆ. ಯಾರ ಮಕ್ಕಳಿಗೆ ಕಲೆ ಒಲಿಯುತ್ತದೆಯೋ, ಯಾರನ್ನು ಜನರು ನೋಡಲು ಇಷ್ಟಪಡುತ್ತಾರೋ ಅವರು ಇಂಡಸ್ಟ್ರಿಗೆ ಬರುತ್ತಾರೆ. ಕನ್ನಡ ಜನ ಇಷ್ಟಪಟ್ಟರೆ ಮುಗೀತು. ಇದು ಯಾರ ಜಾಗ ಬೇಕಾದರೂ ಆಗಬಹುದು ಎಂದು ತಮ್ಮ ಮಾತಿಗೆ ಸುದೀಪ್ ಸ್ಪಷ್ಟನೆ ನೀಡಿದ್ದರು.
ಶಿವಣ್ಣ, ಅಪ್ಪು ಸ್ಫೂರ್ತಿ
ಇವತ್ತು ಶಿವಣ್ಣ ಮೇರು ನಟನಾಗಿ ಬೆಳೆದಿದ್ದಾರೆ. ನಾವು ಅವರಿಂದ ಸ್ಫೂರ್ತಿ ಪಡೆದು ಬೆಳೆದವರು. ಅಪ್ಪು ಅವರು ಎಂತಹ ಅದ್ಭುತ ಪ್ರತಿಭೆ ಎನ್ನುವುದು ಎಲ್ಲರಿಗೂ ಗೊತ್ತು. ಇವುಗಳಿಗೆ ನೆಪೋಟಿಸಂ ಅನ್ನೋದು ಬರಬಾರದು, ಅವರಿಂದ ಸ್ಫೂರ್ತಿ ಪಡೆದವರು ಸಾಕಷ್ಟು ಜನ ಇದ್ದಾರೆ ಎಂದು ಸುದೀಪ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

