ಪ್ರಚಂಡ ಕುಳ್ಳ, ಸಾಹಸಿ ನಿರ್ಮಾಪಕ ದ್ವಾರಕೀಶ್ @78, ಹ್ಯಾಪಿ ಬರ್ತಡೆ
ಬೆಂಗಳೂರು( ಆ. 19) ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಎಂದಾಗ ತಕ್ಷಣ ನೆನಪಾಗುವುದು ನರಸಿಂಹರಾಜು ಹಾಸ್ಯ ಚಕ್ರವರ್ತಿಯ ನಂತರದ ಸ್ಥಾನದಲ್ಲಿದ್ದಾರೆ ಈ ಮಹಾನ್ ನಟ .ತಮ್ಮದೇ ಆದ ವಿಭಿನ್ನ ಹಾಸ್ಯ ಪ್ರಜ್ಞೆಯಿಂದ ಕನ್ನಡ ಸಿನಿ ಪ್ರೇಕ್ಷಕರನ್ನು ಅಂದಿನಿಂದ ಇಂದಿನವರೆಗೂ ನಗಿಸುತ್ತಲೇ ಇರುವ ನಟ,ನಿರ್ಮಾಪಕ ದ್ವಾರಕೀಶ್ ಅವರಿಗಿಂದು ಹುಟ್ಟು ಹಬ್ಬದ ಸಂಭ್ರಮ. ಹ್ಯಾಪಿ ಬರ್ತಡೆ ಪ್ರಚಂಡ ಕುಳ್ಳ
ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ
ದ್ವಾರಕೀಶ್ 1942 ಆಗಸ್ಟ್ 19 ರಂದು ಜನಿಸಿದರು.
ದ್ವಾರಕೀಶ್ ಅವರ ತಂದೆಯ ಹೆಸರು ಶಾಮ ರಾವ್ ಮತ್ತು ತಾಯಿಯ ಹೆಸರು ಜಯಮ್ಮ .
ಡಿಪ್ಲೋಮ ಮೆಕ್ಯಾನಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ಇವರು ಆರಂಭದ ದಿನಗಳಲ್ಲಿ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
1963 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಇವರು ತಮ್ಮ ವಿಭಿನ್ನ ಹಾಸ್ಯ ಪ್ರಜ್ಞೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಕನ್ನಡ ಸಿನಿಮಾ ಇತಿಹಾಸದಲ್ಲಿ ಕಳ್ಳ - ಕುಳ್ಳ ಎಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಜೋಡಿ ಪ್ರಸಿದ್ದಿ ಪಡೆದಿದೆ. ಸಿಂಗಪುರದಲ್ಲಿ ರಾಜಾ ಕುಳ್ಳ ಸಿನಿಮಾ ವೈಭವನ್ನು ಯಾರೂ ಮರೆಯುವಂತೆ ಇಲ್ಲ.
ದ್ವಾರಕೀಶ್ ಅವರು ನಟರಾಗಿ ಅಷ್ಟೇ ಅಲ್ಲದೇ ಚಿತ್ರಕಥೆ ರಚನೆ ಮತ್ತು ನಿರ್ಮಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಂಸ್ಥೆಯಿಂದ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಇತ್ತೀಚಿಗೆ ಚೌಕ ಮತ್ತು ಅಮ್ಮ ಐ ಲವ್ ಯು , ಆಯುಷ್ಮಾನ್ ಭವ ಸಿನಿಮಾಗಳನ್ನು ನಿರ್ಮಿಸಿ ಯಶಸ್ವಿಯಾಗಿದ್ದರು.
ದ್ವಾರಕೀಶ್ ಅವರಿಗೆ ಗಿರಿ ಮತ್ತು ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ.
ಈ ಮಹಾನ್ ನಟ ಫಿಲಂ ಫೇರ್ , ಐಫಾ ಉತ್ಸವಂ , ಜೀವಮಾನ ಸಾಧನೆ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಮತ್ತೊಮ್ಮೆ ಜನ್ಮದಿನದ ಶುಭಾಶಯ ಮಹಾನ್ ನಟನಿಗೆ