ಮನೆಯಲ್ಲಿಯೇ ಗಣೇಶ ಮೂರ್ತಿ ತಯಾರಿಸಿದ ವಿಜಯಲಕ್ಷ್ಮಿ ದರ್ಶನ್, ಪುತ್ರ ವಿನೀಶ್!
ಇಡೀ ರಾಜ್ಯವೇ ಇಂದು ಆಚರಿಸುತ್ತಿರುವ ಗಣೇಶ್ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಾಡಬೇಕು ಎಂದು ತೀರ್ಮಾನಿಸಿದೆ. ಇದರ ಸಲುವಾಗಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿಯೇ ಪುತ್ರನೊಟ್ಟಿಗೆ ಗಣೇಶ ತಯಾರಿಸಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೇಶ್..
ಮನೆಯಲ್ಲಿಯೇ ಮಣ್ಣಿನ ಗಣೇಶ ತಯಾರಿಸಿದ್ದಾರೆ.
ಟ್ಟಿಟರ್ನಲ್ಲಿ ಗಣೇಶ ತಯಾರಿಸುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
'ಯಾತಕ್ಕೆ ಖರೀದಿ ಮಾಡಬೇಕು? ನೀವು ಇಷ್ಟೊಂದು ಸುಲಭವಾಗಿ ಮನೆಯಲ್ಲಿಯೇ ಸುಂದರವಾದ ಗಣೇಶ ತಯಾರಿಸಬಹುದಾಗ' ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಈ ಎರಡು ಗಣೇಶದಲ್ಲಿ ಯಾವುದು ಚೆನ್ನಾಗಿದೆ ಎಂದೂ ಅಭಿಮಾನಿಗಳನ್ನು ಕೇಳಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಮನೆಯಲ್ಲಿ ಗಣೇಶ ತಯಾರಿಸಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.
ಸ್ವಾತಂತ್ರ್ಯ ದಿನಾಚರಣೆ ದಿನದಂದು ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ.
ರೈತರಿಂದ ಗ್ರಾಹಕರಿಗೆ ನೇರವಾಗಿ ತಾಜಾ ತರಕಾರಿ ಹಾಗೂ ಹಣ್ಣು ಮಾರಾಟ ಮಾಡುತ್ತಾರೆ.
ತಮ್ಮ ಉದ್ಯಮಕ್ಕೆ 'ಫ್ರೆಶ್ ಬ್ಯಾಕ್ಸಕೇಟ್' ಎಂದು ಹೆಸರಿಟ್ಟಿದ್ದಾರೆ.