ಸಚ್ಚಿದಾನಂದ ಆಶ್ರಮದ ಶುಕವನಕ್ಕೆ ನಟ ದರ್ಶನ್ ಭೇಟಿ!
ಜನತಾ ಕರ್ಫ್ಯೂ ಸಮಯದಲ್ಲಿ ಚಾಲೆಂಜಿಂಗ್ ದರ್ಶನ್ ಮೈಸೂರು ಸಮೀಪದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶುಕವನಕ್ಕೆ ಭೇಟಿ ನೀಡಿದ್ದಾರೆ.
ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ನಟ ದರ್ಶನ್.
ಈ ವೇಳೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ನಟ ದರ್ಶನ್ ಹಾಗೂ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಗಿಳಿಗಳ ಆರೈಕೆ ಮಾಡಿದ್ದಾರೆ.
ಗಣಪತಿ ಸಚ್ಚಿದಾನಂದ ಶ್ರೀಗಳ ಜೊತೆ ಸಮಯ ಕಳೆದು, ಕುಶಲೋಪರಿ ಆರೋಗ್ಯ ವಿಚಾರಿಸಿದ್ದಾರೆ.
ದರ್ಶನ್ಗೆ ಪ್ರಾಣಿ-ಪಕ್ಷಗಳೆಂದರೆ ತುಂಬಾನೇ ಇಷ್ಟ.
ಬಿಡುವಿನ ಸಮಯದಲ್ಲಿ ತಮ್ಮ ತೋಟದ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ, ಇಲ್ಲವಾದರೆ ಅರಣ್ಯಕ್ಕೆ ಭೇಟಿ ನೀಡುತ್ತಾರೆ.