MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಹರೀಶ್‌ ರಾಜ್‌ ಸಿನಿ ಪಯಣಕ್ಕೆ 25 ವರ್ಷ;ಪ್ರತಿಭಾವಂತ ನಟನಿಗೆ ಗಿರೀಶ್‌ ಕಾಸರವಳ್ಳಿ ಶುಭಾಶಯ!

ಹರೀಶ್‌ ರಾಜ್‌ ಸಿನಿ ಪಯಣಕ್ಕೆ 25 ವರ್ಷ;ಪ್ರತಿಭಾವಂತ ನಟನಿಗೆ ಗಿರೀಶ್‌ ಕಾಸರವಳ್ಳಿ ಶುಭಾಶಯ!

ಪ್ರತಿಭಾವಂತ ನಟನಿಗೆ ಶುಭ ಹಾರೈಕೆ ಮಾಡಿದ ಗಿರೀಶ್‌ ಕಾಸರವಳ್ಳಿ. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಇನ್ನೆಚ್ಚು ಹತ್ತಿರವಾದ ನಟ..... 

2 Min read
Vaishnavi Chandrashekar
Published : Aug 04 2022, 11:38 AM IST
Share this Photo Gallery
  • FB
  • TW
  • Linkdin
  • Whatsapp
110

ಯಾವುದೇ ಥರದ ಪಾತ್ರಗಳನ್ನು ಕೊಟ್ಟರೂ ಲೀಲಾಜಾಲವಾಗಿ ನಟಿಸಬಲ್ಲ ಪ್ರತಿಭಾವಂತ ನಟ ಹರೀಶ್‌ ರಾಜ್‌ ಸಿನಿಮಾದಲ್ಲಿ ನಟನೆ ಶುರು ಮಾಡಿ 25 ವರ್ಷ ಆಗಿದೆ. 

210

ಈ ವರ್ಷ ಅವರೊಳಗಿನ ನಟನಿಗೆ ಬೆಳ್ಳಿಹಬ್ಬ ಸಂಭ್ರಮ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ‘ದೋಣಿ ಸಾಗಲಿ’ ಚಿತ್ರದಲ್ಲಿ ಸೌಂದರ್ಯ ತಮ್ಮನ ಪಾತ್ರದಲ್ಲಿ ನಟಿಸಿದ್ದರಿಂದ ಆರಂಭಿಸಿ ಕನ್ನಡ, ತಮಿಳು, ಮಲಯಾಳಂ ಹೀಗೆ ಅನೇಕ ಭಾಷೆಯ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

310

19ಕ್ಕೂ ಹೆಚ್ಚು ಧಾರಾವಾಹಿಗಳ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಕೊನೆಯ ಕ್ಷಣದವರೆಗೂ ಇದ್ದು ರಂಜಿಸಿದ್ದು ಇವರ ಪ್ರತಿಭೆಗೆ ಸಿಕ್ಕ ಮನ್ನಣೆ.

410


ತಮ್ಮ ಸಿನಿಮಾ ಜರ್ನಿಯಲ್ಲಿ ಭಾಗಿಯಾದವರಿಗೆಲ್ಲಾ ಕೃತಜ್ಞತೆ ಸಲ್ಲಿಸಲು ಹರೀಶ್‌ ರಾಜ್‌ ಸಂತೋಷ ಕಾರ್ಯಕ್ರಮ ಆಯೋಜಿಸಿದ್ದರು. 

510

ಈ ವೇಳೆ ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ‘ಸಾಮಾನ್ಯವಾಗಿ ನಾನು ನನ್ನ ಸಿನಿಮಾದಲ್ಲಿ ಒಮ್ಮೆ ಒಬ್ಬರನ್ನು ನಟನಾಗಿ ಆಯ್ಕೆ ಮಾಡಿಕೊಂಡ ಮೇಲೆ ಇನ್ನೊಂದು ಚಿತ್ರಕ್ಕೆ ಆಯ್ಕೆ ಮಾಡುವುದಿಲ್ಲ. 

610

ಒಬ್ಬರನ್ನು ಒಂದು ಪಾತ್ರದಲ್ಲಿ ಮಾತ್ರ ಊಹಿಸಬಲ್ಲೆ ನಾನು. ಇಬ್ಬರು ಅದಕ್ಕೆ ಹೊರತಾದವರು. ಒಬ್ಬರು ಉಮಾಶ್ರೀ. ಇನ್ನೊಬ್ಬರು ಹರೀಶ್‌ ರಾಜ್‌. ಹರೀಶ್‌ ನನ್ನ 3 ಸಿನಿಮಾದಲ್ಲಿ ನಟಿಸಿದ್ದಾರೆ. 

710

ತಾಯಿ ಸಾಹೇಬ, ದ್ವೀಪ ಮತ್ತು ಕೂರ್ಮಾವತಾರ. ದ್ವೀಪ ಚಿತ್ರದ ಇವರ ನಟನೆ ರಾಷ್ಟ್ರಪ್ರಶಸ್ತಿಯ ಪ್ರಮುಖ ಸುತ್ತಿಗೆ ಹೋಗಿತ್ತು. ಅಶುತೋಶ್‌ ಗೋವಾರಿಕರ್‌ ಮೆಚ್ಚಿಕೊಂಡಿದ್ದರು. ಹರೀಶ್‌ ಒಬ್ಬ ಒಳ್ಳೆಯ ನಟ. ಅವರ ಹೆಸರು ಕೇಳಿದ ತಕ್ಷಣ ಲವಲವಿಕೆಯ ಹುಡುಗನ ಚಿತ್ರ ಮುಖದ ಮೇಲೆ ಬರುತ್ತದೆ’ ಎಂದರು.

810

ಹರೀಶ್‌ ರಾಜ್‌, ‘ರಂಗಭೂಮಿಯಲ್ಲಿದ್ದವ ಚಿತ್ರರಂಗಕ್ಕೆ ಬಂದೆ. ನಟನೆ ಶುರು ಮಾಡಿ 25 ವರ್ಷವೇ ಆಯಿತು. ಈ ಪಯಣದಲ್ಲಿ ಚಿತ್ರರಂಗದ ಹಲವಾರು ಬದಲಾವಣೆಗಳನ್ನು ಕಂಡಿದ್ದೇನೆ. 

910

ಉತ್ತಮ ಅವಕಾಶಗಳು ದೊರೆತಿವೆ. ಬೇರೆ ಭಾಷೆಗಳಲ್ಲೂ ಕರೆದು ಕೆಲಸ ಕೊಟ್ಟಿದ್ದಾರೆ. ಇವತ್ತು ಮಲಯಾಳಂನಲ್ಲಿ ನನಗೆ ಗೌರವ ತೋರಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನನ್ನ ಬೇರು. ನನ್ನ ಕರ್ನಾಟಕ. ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದರು.

1010

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ ಮಾ ಹರೀಶ್‌, ದೋಣಿ ಸಾಗಲಿ ಸಿನಿಮಾ ನಿರ್ಮಾಪಕ ಮಧುಸೂದನ್‌, ನಟ-ನಿರ್ಮಾಪಕ ಸುನೀಲ್‌ ರಾವ್‌ ಇದ್ದರು.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಸ್ಯಾಂಡಲ್‌ವುಡ್
ಬಿಗ್ ಬಾಸ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved