MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಕೆಟ್ಟ ವೈವಾಹಿಕ ಜೀವನ ಕೊನೆಗೊಳಿಸಲು ಜನರು 4 ವರ್ಷ ಕಾಯೋದ್ಯಾಕೆ?

ಕೆಟ್ಟ ವೈವಾಹಿಕ ಜೀವನ ಕೊನೆಗೊಳಿಸಲು ಜನರು 4 ವರ್ಷ ಕಾಯೋದ್ಯಾಕೆ?

ಸಂಬಂಧವು ನಿಮಗೆ ಹೊರೆಯಾದರೆ, ಅದನ್ನು ಕೊನೆಗೊಳಿಸುವುದು ಉತ್ತಮ. ಆದರೆ ಅಂತಹ ಸಂಬಂಧವನ್ನು ಕೊನೆಗೊಳಿಸಲು ಜನರು 4 ವರ್ಷಗಳವರೆಗೆ ಕಾಯುತ್ತಾರೆ. ಕೆಟ್ಟ ಸಂಬಂಧದಿಂದ ಹೊರ ಬರಲು ಜನರು ನಾಲ್ಕು ವರ್ಷ ಕಾಯೋದು ಯಾಕೆ? ಅನ್ನೋದನ್ನು ನೋಡೋಣ.  

2 Min read
Suvarna News
Published : Jan 03 2023, 02:21 PM IST
Share this Photo Gallery
  • FB
  • TW
  • Linkdin
  • Whatsapp
18

ಯಾವುದೇ ಸಂಬಂಧವೂ ಪರ್ಫೆಕ್ಟ್ ಅಲ್ಲ, ಅದರಲ್ಲಿ ಸುಧಾರಣೆಗೆ ಯಾವಾಗಲೂ ಅವಕಾಶವಿರುತ್ತದೆ. ಆದರೆ ನಿಮ್ಮ ಸಂಬಂಧದಲ್ಲಿ ಯಾವುದೇ ಭರವಸೆ ಉಳಿದಿಲ್ಲದಿದ್ದರೆ, ನೀವು ನಿಮ್ಮ ಸಂಗಾತಿಯೊಂದಿಗೆ ಇರಬೇಕೇ? ಇದಕ್ಕೆ ಉತ್ತರ ಖಂಡಿತಾ ಅವರ ಜೊತೆ ಬಾಳಬೇಕಾಗಿಲ್ಲ. ಆದರೆ ನೀವು ಮಾತ್ರ ಅದನ್ನು ಮಾಡುವುದಿಲ್ಲ. ವಾಸ್ತವವಾಗಿ, ಒಬ್ಬ ವ್ಯಕ್ತಿಯು ಕೆಟ್ಟ ಸಂಬಂಧವನ್ನು (bad relationship) ಮುರಿಯುವ ಮೊದಲು ಸುಮಾರು ನಾಲ್ಕು ವರ್ಷಗಳವರೆಗೆ ಕಾಯುತ್ತಾರಂತೆ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಅವರು ತನ್ನ ಜೀವನವನ್ನು ಏಕಾಂಗಿಯಾಗಿ ಕಳೆಯಲು ಹೆದರುತ್ತಾರೆ.

28

ಅಂತಾರಾಷ್ಟ್ರೀಯ ಸಂಬಂಧ ತಾಣದ ಸಂಶೋಧನೆಯ ಪ್ರಕಾರ, ಎರಡು ಮಿಲಿಯನ್ ಜನರು ತುಂಬಾ ಕೆಟ್ಟದಾದ ಸಂಬಂಧದಲ್ಲಿ ಕಷ್ಟಪಟ್ಟು ಜೀವಿಸುತ್ತಿದ್ದಾರೆ. ಇದರ ಹೊರತಾಗಿಯೂ, 4 ರಲ್ಲಿ ಒಬ್ಬರು ಮಾತ್ರ ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸುತ್ತಾರೆ. ಅದರಲ್ಲೂ ಹೆಚ್ಚಿನ ಜನರು ಒಬ್ಬಂಟಿಯಾಗಿರಲು ಹೆದರಿ ನಾಲ್ಕು ವರ್ಷ ಕಷ್ಟಪಟ್ಟು ಸಂಬಂಧವನ್ನು ಸಹಿಸಿಕೊಂಡು ಬಳಿಕವಷ್ಟೆ ಅದರಿಂದ ಹೊರಬರುತ್ತಾರೆ. 

38

ಹೆಚ್ಚಿನ ಜನರು ಕೆಟ್ಟ ಸಂಬಂಧದಲ್ಲೇ ಮುಂದುವರೆದುಕೊಂಡು ಹೋಗಲು ಮುಖ್ಯ ಕಾರಣಗಳೆಂದರೆ ಒಬ್ಬಂಟಿಯಾಗಿರುವುದರ ಭಯ, ಕುಟುಂಬ ಸದಸ್ಯರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಭಯ ಮತ್ತು ಸಂಗಾತಿ (life partner) ಮೇಲಿನ ದಯೆ ಈ ಎಲ್ಲಾ ಕಾರಣದಿಂದಾಗಿ ಇಷ್ಟವಿಲ್ಲದಿದ್ದರೂ ಸಹ ಸಂಗಾತಿ ಜೊತೆ ಬಾಳುತ್ತಾರೆ. 

48
ಸಂಶೋಧನೆ ಏನು ಹೇಳುತ್ತೆ?

ಸಂಶೋಧನೆ ಏನು ಹೇಳುತ್ತೆ?

ಸಂಶೋಧನೆಯಲ್ಲಿ ಭಾಗವಹಿಸಿದವರಲ್ಲಿ ಸುಮಾರು ಅರ್ಧದಷ್ಟು ಜನರು ಭವಿಷ್ಯದಲ್ಲಿ ತಮ್ಮ ಸಂಗಾತಿಯೊಂದಿಗೆ ತಮ್ಮನ್ನು ತಾವು ನೋಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವು ಜನರು ತಮ್ಮ ವೈವಾಹಿಕ ಜೀವನದಿಂದ (married life) ಇನ್ನೂ ಹೆಚ್ಚಿನದನ್ನು ಬಯಸುತ್ತಾರೆ ಎಂದು ಹೇಳಿದರು. ಉಳಿದ 20 ಪ್ರತಿಶತದಷ್ಟು ಜನರು ಇನ್ನು ಮುಂದೆ ತಮ್ಮ ಸಂಗಾತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.

58
ಮತ್ತೊಂದು ಸಂಬಂಧ ಬೆಳೆಸಲು ಆತುರ

ಮತ್ತೊಂದು ಸಂಬಂಧ ಬೆಳೆಸಲು ಆತುರ

ತಮ್ಮ ಸಂಗಾತಿ ತಮಗೆ ಸೂಕ್ತವಲ್ಲ ಎಂದು ತಿಳಿದ ನಂತರವೂ ಅನೇಕ ಜನರು ಸಂಬಂಧದಲ್ಲಿ ಬಲವಂತವಾಗಿ ಉಳಿಯುತ್ತಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಇದು ಅವರ ಆತ್ಮವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ(negative effect)  ಬೀರುವುದಲ್ಲದೆ, ಅವರು ಎಂದಿಗೂ ಒಟ್ಟಿಗೆ ಸಂತೋಷವಾಗಿರುವುದಿಲ್ಲ. 

68

ಮೊದಲ ಸಂಗಾತಿಯಿಂದ ಕೆಟ್ಟ ಅನುಭವವನ್ನು ಪಡೆದಂತಹ ಜನರು ಮೊದಲ ಸಂಬಂಧದ ದುಃಖವನ್ನು ಮರೆತು ಹೊಸ ಸಂಬಂಧವನ್ನು ಬಹಳ ಬೇಗನೆ ಸೇರುತ್ತಾರೆ. ಆದರೆ ಅಂತಹ ಜನರು ಒಂದು ಸಂಬಂಧದಿಂದ ಇನ್ನೊಂದಕ್ಕೆ ಹೋಗುವ ಆತುರಪಡುವುದನ್ನು ತಪ್ಪಿಸಬೇಕು ಮತ್ತು ಅವರ ಸಂತೋಷದ ಬಗ್ಗೆ ಯೋಚಿಸಬೇಕು. ಆತುರದಿಂದ ತೆಗೆದುಕೊಂಡ ನಿರ್ಧಾರ ಮತ್ತೆ ಸಮಸ್ಯೆಯನ್ನು ಉಂಟು ಮಾಡಬಹುದು.

78
ಬ್ರೇಕಪ್ ಮಾಡುವುದು ಕಷ್ಟ

ಬ್ರೇಕಪ್ ಮಾಡುವುದು ಕಷ್ಟ

ದೀರ್ಘಕಾಲದವರೆಗೆ ಸಂಬಂಧದಲ್ಲಿ ಉಳಿಯುವ ಜನರು ಬೇರ್ಪಡುವುದು (breaking up) ಕಷ್ಟ. ಆದರೆ ನೀವು ಉತ್ತಮ ಭಾವನೆಯನ್ನು ಉಂಟುಮಾಡದ ಸಂಬಂಧದಲ್ಲಿ ಬಂಧಿಸಲ್ಪಟ್ಟಿದ್ದರೆ, ಅದರಿಂದ ಬೇರ್ಪಡುವುದರಲ್ಲಿ ಯಾವುದೇ ಹಾನಿಯಿಲ್ಲ. ಅಂತಹ ಸಂಬಂಧದಲ್ಲಿ ಕಷ್ಟಪಟ್ಟು ಜೀವಿಸೋದಕ್ಕಿಂತ ಬೇರೆಯಾಗೋದೆ ಉತ್ತಮ. 

88

ಕೆಟ್ಟ ಸಂಬಂಧದಿಂದ ಹೊರ ಬಂದು ಹೊಸ ಸಂಬಂಧವನ್ನು ಹೊಂದಿದ ಅನೇಕ ಜನರು ನಮ್ಮ ಜೊತೆ ಇದ್ದಾರೆ.. ಅಂತಹ ಜನರು ಹಿಂದಿನ ಸಂಬಂಧಕ್ಕಿಂತ ಹೆಚ್ಚು ಸಂತೋಷವಾಗಿದ್ದಾರೆ ಎಂದು ಕಂಡುಬಂದಿದೆ. ಆದರೆ ಎರಡನೆ ಬಾರಿ ಸಂಗಾತಿಯನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಮತ್ತು ನಿಮ್ಮನ್ನು ಅರ್ಥ ಮಾಡಿಕೊಳ್ಳುವವರು ಬೇಕು. ಹಾಗಾದಾಗ ಮಾತ್ರ ನಿಮ್ಮ ಸಂಬಂಧ ಉತ್ತಮವಾಗಿರುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ದಂಪತಿಗಳು
ವಿಚ್ಛೇದನ

Latest Videos
Recommended Stories
Recommended image1
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
Recommended image2
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
Recommended image3
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved