MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಉತ್ತರ ಭಾರತದಲ್ಲಿ ರಾತ್ರಿ, ದಕ್ಷಿಣದಲ್ಲಿ ಹಗಲಿನಲ್ಲಿ ಮದುವೆ ನಡೆಯೋದು ಯಾಕೆ?

ಉತ್ತರ ಭಾರತದಲ್ಲಿ ರಾತ್ರಿ, ದಕ್ಷಿಣದಲ್ಲಿ ಹಗಲಿನಲ್ಲಿ ಮದುವೆ ನಡೆಯೋದು ಯಾಕೆ?

North vs South Indian wedding: ಉತ್ತರ ಭಾರತದಲ್ಲಿ ಹೆಚ್ಚಾಗಿ ರಾತ್ರಿ ವೇಳೆ ಹಾಗೂ ದಕ್ಷಿಣ ಭಾರತದಲ್ಲಿ ಹಗಲಿನಲ್ಲಿ ಮದುವೆ ನಡೆಯುವುದನ್ನು ನೀವು ನೋಡಿರಬಹುದು. ಆದರೆ ಒಂದೇ ದೇಶದಲ್ಲಿ ಹೀಗೆ ಬೇರೆ ಬೇರೆ ಸಂಪ್ರದಾಯಗಳಲ್ಲಿ ಮದುವೆ ನಡೆಯೋದು ಯಾಕೆ? ಇದಕ್ಕೆ ಕಾರಣ ಏನು ತಿಳಿಯಿರಿ.

1 Min read
Author : Pavna Das
Published : Jul 23 2026, 09:02 PM IST
Share this Photo Gallery
  • FB
  • TW
  • Linkdin
  • Whatsapp
16
ಉತ್ತರ ಭಾರತದಲ್ಲಿ ರಾತ್ರಿ ದಕ್ಷಿಣ ಭಾರತದಲ್ಲಿ ಹಗಲು ಮದುವೆ ನಡೆಯೋದು ಯಾಕೆ?
Image Credit : AI

ಉತ್ತರ ಭಾರತದಲ್ಲಿ ರಾತ್ರಿ-ದಕ್ಷಿಣ ಭಾರತದಲ್ಲಿ ಹಗಲು ಮದುವೆ ನಡೆಯೋದು ಯಾಕೆ?

ಸಾಮಾನ್ಯವಾಗಿ ನಾವು ನೋಡಿದಂತೆ ಉತ್ತರ ಭಾರತದ ಸಂಪ್ರದಾಯದಲ್ಲಿ ಹೆಚ್ಚಾಗಿ ರಾತ್ರಿ ವೇಳೆ ಮದುವೆಯಾದರೆ, ದಕ್ಷಿಣ ಭಾರತದ ಸಂಪ್ರದಾಯದಂತೆ ಹಗಲಿನ ವೇಳೆ ಮದುವೆಯಾಗುತ್ತದೆ. ಇದಕ್ಕೆ ಕಾರಣ ಏನು ಎಂದು ನೀವು ಎಂದಾದರೂ ಯೋಚನೆ ಮಾಡಿದ್ದೀರಾ? ಇಲ್ಲ ಅಂದಾದ್ರೆ ಇವತ್ತೆ ಆ ರಹಸ್ಯದ ಬಗ್ಗೆ ತಿಳಿಯಿರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದಕ್ಷಿಣ ಭಾರತದ ವೈದಿಕ ಸಂಪ್ರದಾಯ
Image Credit : Gemini

ದಕ್ಷಿಣ ಭಾರತದ ವೈದಿಕ ಸಂಪ್ರದಾಯ

ಹಿಂದೂ ಧರ್ಮದ ಪ್ರಾಚೀನ ಶಾಸ್ತ್ರಗಳು ಹಾಗೂ ವೈದಿಕ ನಿಯಮಗಳ ಪ್ರಕಾರ, ಮದುವೆ ಸಂಸ್ಕಾರವು ಹಗಲಿನಲ್ಲಿ ಸೂರ್ಯನ ಬೆಳಕಿನಲ್ಲೇ ನಡೆಯಬೇಕು. ಸಪ್ತಪದಿ ತುಳಿಯುವಾಗ ಅಗ್ನಿ ದೇವನ ಜೊತೆಗೆ ಸೂರ್ಯ ದೇವ ಹಾಗೂ ದೇವತೆಗಳ ಸಾಕ್ಷಿ ಇರಬೇಕು ಎಂಬುದು ನಂಬಿಕೆ. ಹಗಲಿನ ಸಮಯವನ್ನು ದೇವತೆಗಳ ಸಕ್ರಿಯ ಸಮಯ ಮತ್ತು ಸಾತ್ವಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

Related Articles

Related image1
Aamir Khan and Gauri Spratt Wedding: ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ; ಆಪ್ತರಿಗಷ್ಟೇ ಆಹ್ವಾನ!
Related image2
Wedding Temples: 30 ದಾಟಿದ್ರೂ ಮದುವೆ ಆಗಿಲ್ವಾ? ಈ ದೇಗುಲಗಳಿಗೆ ಹೋದ್ರೆ ತಿಂಗಳಲ್ಲಿ ಕಂಕಣ ಭಾಗ್ಯ!
36
ಬೆಳಗ್ಗಿನ ಶುಭ ಮುಹೂರ್ತದಲ್ಲಿ ಮದುವೆ
Image Credit : Vijay Devarakonda - Rashmika\Instagram

ಬೆಳಗ್ಗಿನ ಶುಭ ಮುಹೂರ್ತದಲ್ಲಿ ಮದುವೆ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಂದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ವೈದಿಕ ಸಂಪ್ರದಾಯವನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಹಾಗಾಗಿ ಇಲ್ಲಿ ಹೆಚ್ಚಾಗಿ ಬೆಳಿಗ್ಗೆ ಅಥವಾ ಮಧ್ಯಾಹ್ನದ ಶುಭ ಮುಹೂರ್ತದಲ್ಲೇ ಮದುವೆ ನೆರವೇರಿಸಲಾಗುತ್ತದೆ. ರಾತ್ರಿ ಹೊತ್ತು ಮದುವೆ ನಡೆಯುವುದಿಲ್ಲ.

46
ಉತ್ತರಭಾರತದಲ್ಲಿ ರಾತ್ರಿ ಹೊತ್ತು ಮದುವೆಗೆ ಕಾರಣ ಆಕ್ರಮಣಕಾರರ ಭಯ
Image Credit : Getty

ಉತ್ತರಭಾರತದಲ್ಲಿ ರಾತ್ರಿ ಹೊತ್ತು ಮದುವೆಗೆ ಕಾರಣ ಆಕ್ರಮಣಕಾರರ ಭಯ

ಉತ್ತರ ಭಾರತದಲ್ಲಿ ರಾತ್ರಿ ಮದುವೆ ಮಾಡುವ ಪದ್ಧತಿಯು ವೈದಿಕ ಧರ್ಮಕ್ಕಿಂತ ಹೆಚ್ಚಾಗಿ ಆತ್ಮರಕ್ಷಣೆಮತ್ತು ಐತಿಹಾಸಿಕ ಕಾರಣಗಳಿಂದ ಆರಂಭವಾಯಿತು. ಮಧ್ಯಕಾಲೀನ ಭಾರತದಲ್ಲಿ ವಿದೇಶಿ ಆಕ್ರಮಣಕಾರರು ಮತ್ತು ಮೊಘಲರ ದಾಳಿಗಳ ಸಮಯದಲ್ಲಿ ಹಗಲಿನಲ್ಲಿ ಮದುವೆ ಮಾಡುವುದು ಅಪಾಯಕಾರಿಯಾಗಿತ್ತು. ಲೂಟಿ, ಅಪಹರಣ ಹಾಗೂ ಗಲಾಟೆಗಳನ್ನು ತಡೆಯಲು ಜನರು ರಾತ್ರಿಯ ಕತ್ತಲಲ್ಲಿ ಗೌಪ್ಯವಾಗಿ ಮದುವೆ ನಡೆಸುತ್ತಿದ್ದರು.

56
ವಧು ವರರ ರಕ್ಷಣೆಯ ಹಿನ್ನೆಲೆ
Image Credit : Getty

ವಧು ವರರ ರಕ್ಷಣೆಯ ಹಿನ್ನೆಲೆ

ಆ ಸಮಯದಲ್ಲಿ ವರನ ಜೊತೆ ಬರುವ 'ಬಾರಾತ್' ಕೇವಲ ಸಂಭ್ರಮಕ್ಕೆ ಮಾತ್ರವಾಗಿರದೆ, ಆಯುಧಗಳನ್ನು ಹಿಡಿದು ವಧು-ವರರನ್ನು ರಕ್ಷಿಸುವ ಯೋಧರ ಗುಂಪಾಗಿತ್ತು. ಕಾಲಕ್ರಮೇಣ ಈ ತುರ್ತು ವ್ಯವಸ್ಥೆಯೇ ಉತ್ತರ ಭಾರತದಲ್ಲಿ ಒಂದು ಸಂಪ್ರದಾಯವಾಗಿ ನೆಲೆನಿಂತಿತು.

66
ಧ್ರುವ ನಕ್ಷತ್ರ ಮತ್ತು ಚಂದ್ರ
Image Credit : Instagram

ಧ್ರುವ ನಕ್ಷತ್ರ ಮತ್ತು ಚಂದ್ರ

ಉತ್ತರ ಭಾರತೀಯ ಜ್ಯೋತಿಷ್ಯ ಪದ್ಧತಿಯಲ್ಲಿ ರಾತ್ರಿಯ ಸಮಯದಲ್ಲಿ ಧ್ರುವ ನಕ್ಷತ್ರದ ದರ್ಶನ ಮತ್ತು ಚಂದ್ರನ ಸಾಕ್ಷಿಯೊಂದಿಗೆ ಮದುವೆ ಮಾಡುವುದು ಸ್ಥಿರತೆ ಹಾಗೂ ಸೌಮ್ಯತೆಯ ಸಂಕೇತವಾಗಿದೆ. ಇದಲ್ಲದೇ ಬಿಸಿಲಿನಿಂದ ರಕ್ಷಿಸಲು ಹಾಗೂ ತಂಪಾದ ವಾತಾವರಣದ ಹಿನ್ನೆಲೆಯಲ್ಲೂ ರಾತ್ರಿ ಹೊತ್ತು ಮದುವೆ ಮಾಡುವುದು ಅನುಕೂಲವಾಗಿತ್ತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮದುವೆ
ಮದುವೆ
ಸಂಬಂಧಗಳು
ಜೀವನಶೈಲಿ
Latest Videos
Recommended Stories
Recommended image1
Chanakya Niti: ಪತಿ-ಪತ್ನಿಯರ ಯಶಸ್ವಿ ದಾಂಪತ್ಯಕ್ಕೆ ಆಚಾರ್ಯ ಚಾಣಕ್ಯ ತಿಳಿಸಿದ 3 ಗೋಲ್ಡನ್ ರೂಲ್ಸ್
Recommended image2
'ಆ ಪ್ರಸಾದ ಕಟ್ಟಿದ್ರೆ ಅಮ್ಮ ಬದುಕಿರ್ತಿದ್ರೇನೋ..': ತಾಯಿ ಚನ್ನಮ್ಮನ ನೆನೆದು ಕಣ್ಣೀರಿಟ್ಟ ಹೆಚ್.ಡಿ. ರೇವಣ್ಣ!
Recommended image3
ಮಧುಚಂದ್ರದ ರಕ್ತ ಕಥೆ: ಸೋನಂ ಜಾಮೀನು ರದ್ದು- 3 ವಾರಗಳ ಒಳಗೆ ಶರಣು; 'ಸುಪ್ರೀಂ'​ ಹೇಳಿದ್ದೇನು?
Related Stories
Recommended image1
Aamir Khan and Gauri Spratt Wedding: ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ; ಆಪ್ತರಿಗಷ್ಟೇ ಆಹ್ವಾನ!
Recommended image2
Wedding Temples: 30 ದಾಟಿದ್ರೂ ಮದುವೆ ಆಗಿಲ್ವಾ? ಈ ದೇಗುಲಗಳಿಗೆ ಹೋದ್ರೆ ತಿಂಗಳಲ್ಲಿ ಕಂಕಣ ಭಾಗ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved