MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಹೀಗೆ ಮಾಡಿದ್ರೆ ನನ್ನ ಪತಿ ನನ್ನ ಮಾತಿಗೆ No ಹೇಳೋದಿಲ್ಲ; Infosys ಸುಧಾ ಮೂರ್ತಿ ಬಿಚ್ಚಿಟ್ಟ ರಹಸ್ಯ ಏನು?

ಹೀಗೆ ಮಾಡಿದ್ರೆ ನನ್ನ ಪತಿ ನನ್ನ ಮಾತಿಗೆ No ಹೇಳೋದಿಲ್ಲ; Infosys ಸುಧಾ ಮೂರ್ತಿ ಬಿಚ್ಚಿಟ್ಟ ರಹಸ್ಯ ಏನು?

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ತಮ್ಮ ಸರಳ ಜೀವನ ಹಾಗೂ ಅನ್ಯೋನ್ಯ ದಾಂಪತ್ಯಕ್ಕೆ ಹೆಸರುವಾಸಿ. ತಮಗೆ ಬೇಕಾದ್ದನ್ನು ಗಂಡನ ಬಳಿ ಯಾವ ಸಮಯದಲ್ಲಿ ಕೇಳಬೇಕು ಎಂದು ಸುಧಾಮೂರ್ತಿ ಇತ್ತೀಚೆಗೆ ತಿಳಿಸಿದ್ದಾರೆ. ತಾವೂ ಕೂಡ ನಾರಾಯಣ ಮೂರ್ತಿ ಬಳಿ ಇದೇ ರೀತಿ ಕೇಳುವುದಾಗಿ ಹೇಳಿಕೊಂಡಿದ್ದಾರೆ.

2 Min read
Author : Padmashree Bhat
Published : Apr 26 2026, 09:53 AM IST
Share this Photo Gallery
  • FB
  • TW
  • Linkdin
  • Whatsapp
14
ಸಿಕ್ಕಾಪಟ್ಟೆ ಸಿಂಪಲ್‌ ಇರೋ ಸುಧಾ ಮೂರ್ತಿ
Image Credit : Social Media

ಸಿಕ್ಕಾಪಟ್ಟೆ ಸಿಂಪಲ್‌ ಇರೋ ಸುಧಾ ಮೂರ್ತಿ

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಕೋಟ್ಯಧಿಪತಿಗಳಾಗಿದ್ದರೂ ತಮ್ಮ ಸರಳ ಜೀವನಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇನ್ಫೋಸಿಸ್‌ನಲ್ಲಿ ಈ ದಂಪತಿ ಮತ್ತು ಅವರ ಮಕ್ಕಳ ಒಟ್ಟು ಷೇರು ಮೌಲ್ಯ ಸುಮಾರು 30 ಸಾವಿರ ಕೋಟಿ ರೂಪಾಯಿ. ಆದರೂ ಅವರು ತುಂಬಾ ಸಾಮಾನ್ಯ ಜೀವನ ನಡೆಸುತ್ತಾರೆ. ಸುಧಾ ಮೂರ್ತಿ ಸರಳ ಸೀರೆಗಳನ್ನು ಉಡುತ್ತಾರೆ, 

ಚಿನ್ನದ ಆಭರಣಗಳನ್ನು ಧರಿಸುವುದಿಲ್ಲ. ಎಷ್ಟೇ ಹಣ, ಆಸ್ತಿ, ಅಂತಸ್ತು ಇದ್ದರೂ ಅದನ್ನು ಪ್ರದರ್ಶಿಸದೆ, ತಮ್ಮ ಸರಳ ಜೀವನದಲ್ಲೇ ಸಂತೋಷ ಕಂಡುಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಕೋಟಿಗಟ್ಟಲೆ ಮೌಲ್ಯದ ವಜ್ರಾಭರಣಗಳನ್ನು ಧರಿಸಬಹುದು, ಆದರೆ ಆಡಂಬರದಿಂದ ಅವರು ಸದಾ ದೂರ.

24
ಗಂಡ ಪೇಪರ್‌ ಓದುವಾಗ..
Image Credit : pinterest

ಗಂಡ ಪೇಪರ್‌ ಓದುವಾಗ..

ಸುಧಾಮೂರ್ತಿ ಆಗಾಗ ಸಂತೋಷದ ದಾಂಪತ್ಯ ಜೀವನಕ್ಕೆ ಕೆಲವು ಸಲಹೆಗಳನ್ನು ನೀಡುತ್ತಿರುತ್ತಾರೆ. ಇತ್ತೀಚೆಗೆ ಅವರು ಒಂದು ತಮಾಷೆಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಪತ್ನಿಯರ ಮಾತುಗಳನ್ನು ಕೇಳದೆಯೇ ಗಂಡಂದಿರು ಯಾವಾಗ 'ಸರಿ' ಎನ್ನುತ್ತಾರೆ ಎಂಬುದನ್ನು ಅವರು ಹೇಳಿದ್ದಾರೆ. 

ಸುಧಾ ಮೂರ್ತಿ ಅವರ ಪ್ರಕಾರ, ಗಂಡ ಪೇಪರ್ ಓದುತ್ತಿರುವಾಗ ಪತ್ನಿ ಏನು ಕೇಳಿದರೂ ಅವರು ಗಮನ ಕೊಡುವುದಿಲ್ಲವಂತೆ. ಅವರ ಪೂರ್ತಿ ಗಮನ ಪೇಪರ್ ಓದುವುದರ ಮೇಲೆಯೇ ಇರುತ್ತದೆ. ಹಾಗಾಗಿ ಪತ್ನಿ ಏನಾದರೂ ಕೇಳಿದರೆ ತಕ್ಷಣ 'ಸರಿ' ಎನ್ನುತ್ತಾರಂತೆ. ತಾನೂ ಕೂಡ ಹೀಗೆ ಹಲವು ಬಾರಿ ಮಾಡಿದ್ದೇನೆ ಎಂದು ಸುಧಾಮೂರ್ತಿ ಹೇಳಿಕೊಂಡಿದ್ದಾರೆ.

Related Articles

Related image1
ಈ ಒಂದು ಕಾರಣಕ್ಕೆ ಮಾಳವಿಕಾ ಅವಿನಾಶ್’ಗೆ ಸೀರೆ ಉಡುಗೊರೆಯಾಗಿ ಕೊಟ್ಟ ಸುಧಾ ಮೂರ್ತಿ
Related image2
ಸಹಸ್ರಾರು ಕೋಟಿ ಒಡೆಯ ನಾರಾಯಣ- ಸುಧಾ ಮೂರ್ತಿ ದಂಪತಿಯ ಆಡಂಬರವಿಲ್ಲದ ಮನೆಯ ಒಳಗಿನ ನೋಟ ಇಲ್ಲಿದೆ
34
3 ಕೋಟಿ ರೂಪಾಯಿ ಆಭರಣ ಬೇಕು ಎಂದೆ
Image Credit : pinterest

3 ಕೋಟಿ ರೂಪಾಯಿ ಆಭರಣ ಬೇಕು ಎಂದೆ

ಆದರೆ, ಒಮ್ಮೆ ಇದೇ ಟ್ರಿಕ್ ಬಳಸಿ ನಾರಾಯಣ ಮೂರ್ತಿ ಪೇಪರ್ ಓದುತ್ತಿದ್ದಾಗ ಒಂದು ಗಿಫ್ಟ್ ಕೇಳಿದೆ, ಆದರೆ ಅವರಿಂದ 'ಸರಿ' ಎನ್ನಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸುಧಾಮೂರ್ತಿ ಒಂದು ತಮಾಷೆಯ ಘಟನೆಯನ್ನು ಹಂಚಿಕೊಂಡಿದ್ದಾರೆ. 'ಎಂದಿನಂತೆ ಮೂರ್ತಿ ಪೇಪರ್ ಓದುತ್ತಿದ್ದಾಗ ನಾನು ಮೂರು ಕೋಟಿ ರೂಪಾಯಿ ಮೌಲ್ಯದ ಆಭರಣ ಕೊಳ್ಳುತ್ತೇನೆ ಎಂದು ಹೇಳಿದೆ. ಆದರೆ ಈ ಬಾರಿ ನಾನು ಅಂದುಕೊಂಡಿದ್ದು ನಡೆಯಲಿಲ್ಲ. 

ನನ್ನ ಮಾತು ಕೇಳಿದ ತಕ್ಷಣ ಮೂರ್ತಿ ಪೇಪರ್ ಪಕ್ಕಕ್ಕಿಟ್ಟು ನನಗೆ ಚಿಕ್ಕದಾಗಿ ಕ್ಲಾಸ್ ತೆಗೆದುಕೊಂಡರು. ಇಷ್ಟು ದುಡ್ಡು ಕೊಟ್ಟು ಕೊಂಡರೆ ನಷ್ಟವೇನಿಲ್ಲ, ಆದರೆ ನೀನು 30 ರೂಪಾಯಿ ವಸ್ತು ಕೊಳ್ಳುವುದಕ್ಕೂ ಯೋಚಿಸುತ್ತೀಯಾ. ಅಂಥಾದ್ರಲ್ಲಿ 3 ಕೋಟಿ ರೂಪಾಯಿ ಆಭರಣ ಕೊಳ್ಳುತ್ತೀಯಾ? ಖಂಡಿತಾ ಕೊಳ್ಳಲ್ಲ ಬಿಡು' ಎಂದರಂತೆ ಎಂದು ಸುಧಾಮೂರ್ತಿ ವಿವರಿಸಿದ್ದಾರೆ.

44
ಇನ್ನೊಬ್ಬರು ಸೈಲೆಂಟ್‌ ಇರಬೇಕು
Image Credit : instagram

ಇನ್ನೊಬ್ಬರು ಸೈಲೆಂಟ್‌ ಇರಬೇಕು

ದಾಂಪತ್ಯ ಜೀವನದ ಬಗ್ಗೆ ಸುಧಾ ಮೂರ್ತಿ ಈ ಹಿಂದೆ ಒಂದು ಉತ್ತಮ ಸಲಹೆ ನೀಡಿದ್ದರು. ಗಂಡ-ಹೆಂಡಿರ ಜಗಳದಲ್ಲಿ ಒಬ್ಬರು ಕೋಪಗೊಂಡಾಗ, ಇನ್ನೊಬ್ಬರು ಶಾಂತವಾಗಿರಬೇಕು. ಬಾಯಿಯೇ ತೆರೆಯಬಾರದು. 

'ಮೂರ್ತಿ (ನಾರಾಯಣ್) ಕೋಪಗೊಂಡಾಗ, ನಾನು ಮೌನವಾಗಿರುತ್ತೇನೆ. ಅವರು ಏನು ಹೇಳಬೇಕೆಂದುಕೊಂಡಿದ್ದಾರೋ ಅದನ್ನು ಹೇಳಲು ಬಿಡುತ್ತೇನೆ. ನಾನು ಮಾತ್ರ ಮಾತನಾಡುವುದಿಲ್ಲ' ಎಂದು ಸುಧಾಮೂರ್ತಿ ಹೇಳಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸಂಬಂಧಗಳು
ಮದುವೆ
ಮದುವೆ
ದಂಪತಿಗಳು

Latest Videos
Recommended Stories
Recommended image1
ಸ್ವರ್ಗ ತೋರಿಸ್ತೇವೆಂದು ಹನಿಟ್ರ್ಯಾಪ್​: ವಿವಸ್ತ್ರಗೊಳಿಸಿ ವಿಡಿಯೋ- ಜಾಸ್ಮಿನ್​ ಬಲೆಯಲ್ಲಿ ಪುರುಷರು
Recommended image2
Romantic Hero ಯಾರು? 71ರ ರೇಖಾ ಉತ್ತರಕ್ಕೆ ಬಾಲಿವುಡ್​ ತತ್ತರ! ಅಂದ್ಕೊಂಡಿದ್ದೇ ಒಂದು, ಹೇಳಿದ್ದೇ ಇನ್ನೊಂದು
Recommended image3
ಗಂಡ ನಿಮ್ಮ ಮಾತು ಕೇಳದೇ ಬೇಡಿಕೆ ಈಡೇರಿಸಬೇಕಾ? ಬೆಸ್ಟ್​ ಟೈಂ ಇದಂತೆ ನೋಡಿ: ಸುಧಾ ಮೂರ್ತಿ ಟಿಪ್ಸ್​
Related Stories
Recommended image1
ಈ ಒಂದು ಕಾರಣಕ್ಕೆ ಮಾಳವಿಕಾ ಅವಿನಾಶ್’ಗೆ ಸೀರೆ ಉಡುಗೊರೆಯಾಗಿ ಕೊಟ್ಟ ಸುಧಾ ಮೂರ್ತಿ
Recommended image2
ಸಹಸ್ರಾರು ಕೋಟಿ ಒಡೆಯ ನಾರಾಯಣ- ಸುಧಾ ಮೂರ್ತಿ ದಂಪತಿಯ ಆಡಂಬರವಿಲ್ಲದ ಮನೆಯ ಒಳಗಿನ ನೋಟ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved