ನಾಳೆ ಫೋನ್ ಮಾಡ್ತೇನೆ ಅಂತ ಸಹಜವಾಗಿ ಹೇಳಿ ಮರೆಯೋ ನಿಮ್ಮ ಮಾತಿಗೂ ಕರ್ಮದ ನಂಟಿದೆ
ಕರ್ಮ ಪದದ ಅರ್ಥ ಆಳವಾಗಿದೆ. ಗುಡುಗು – ಸಿಡಿಲಿನಂತೆ ಅಬ್ಬರಿಸೋದಿಲ್ಲ.ಕಷ್ಟ ಬಂದಾಗ ಕರ್ಮಫಲ ಅನುಭವಿಸ್ಲೇಬೇಕು ಅಂತ ಜನ ಹೇಳ್ತಾರೆ. ನಿತ್ಯ ಮಾಡುವ ಸಣ್ಣಪುಟ್ಟ ತಪ್ಪು, ಅಭ್ಯಾಸಗಳು ಕರ್ಮವಾಗಿ ಬದಲಾಗುತ್ತೆ. ನೀವು ಮಾಡುವ ಯಾವೆಲ್ಲ ಕೆಲ್ಸ ಕರ್ಮವಾಗಿ ಬದಲಾಗುತ್ತೆ ಎಂಬ ವಿವರ ಇಲ್ಲಿದೆ.

ಆಂತರಿಕ ಧ್ವನಿ ನಿರ್ಲಕ್ಷ್ಯ
ನಮ್ಮೊಳಗೆ ಒಂದು ಚಿಕ್ಕ ಧ್ವನಿ ಇರುತ್ತದೆ. ಅದು ಸರಿಯಾದುದು–ತಪ್ಪಾದುದನ್ನು ಬೇಗನೆ ಹೇಳುತ್ತದೆ. ಆದರೆ ನಾವು ಅದನ್ನು ಕೇಳುವುದಿಲ್ಲ. ತಪ್ಪು ಅನ್ನಿಸಿದ ಪರಿಸ್ಥಿತಿಗಳಲ್ಲೇ ಇರುತ್ತೇವೆ, ದಣಿಗೊಳಿಸುವ ಮಾತುಗಳಿಗೆ ಒಪ್ಪುತ್ತೇವೆ, “ತರ್ಕವೇ ಚೆನ್ನ” ಎಂದು ಮನಸ್ಸಿನ ಮಾತನ್ನು ಕಡೆಗಣಿಸುತ್ತೇವೆ. ನಮ್ಮೊಳಗಿನ ಧ್ವನಿಯನ್ನು ನಿರ್ಲಕ್ಷ್ಯ ಮಾಡುವುದು ಗಾಳಿಗೆ ವಿರುದ್ಧವಾಗಿ ನಡೆಯುವಂತೆ. ತುಂಬಾ ದಣಿವಾಗುತ್ತದೆ, ಗೊಂದಲವಾಗುತ್ತದೆ, ಪ್ರತಿಯೊಂದು ಹೆಜ್ಜೆಯೂ ಭಾರವಾಗಿ ಅನಿಸುತ್ತದೆ.
ಯೋಚಿಸದೆ ಮಾತನಾಡುವುದು
ಆಡಿದ ಮಾತು, ಒಡೆದ ಮುತ್ತು ಮತ್ತೆ ಬರೋದಿಲ್ಲ. ಕ್ಷಣ, ದಿನ, ವರ್ಷ ಕಳೆದ ನಂತರವೂ ಪದಗಳು ಶಕ್ತಿಯನ್ನು ಉಳಿಸಿಕೊಳ್ಳುತ್ತವೆ. ಗಾಸಿಪ್, ಕೋಪದಲ್ಲಿ ಮಾತನಾಡುವ ಕಠಿಣ ಮಾತುಗಳು, ಉದ್ದೇಶಿಸಿದ್ದಕ್ಕಿಂತ ಹೆಚ್ಚು ನೋವುಂಟು ಮಾಡುವ ಹಾಸ್ಯಗಳು ಕರ್ಮದ ಅಲೆಗಳನ್ನು ಸೃಷ್ಟಿಸುತ್ತವೆ. ನಾಲಿಗೆ ಮನಸ್ಸಿಗಿಂತ ವೇಗವಾಗಿ ಚಲಿಸುವುದ್ರಿಂದ ಇದು ಸಂಭವಿಸುತ್ತದೆ. ಅನೇಕ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ, ಅನಗತ್ಯ ಸಂಭಾಷಣೆಯನ್ನು ಪ್ರಮುಖ ಕರ್ಮದ ಸೋರಿಕೆ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಅಸಡ್ಡೆ ಪದವು ಆ ಕ್ಷಣಕ್ಕೆ ನಿಮ್ಮನ್ನು ಬಂಧಿಸುವ ದಾರವಾಗುತ್ತದೆ, ನಂತರ ಗುಣಪಡಿಸುವ ಅಗತ್ಯವಿರುತ್ತದೆ.
ಕೊಡುವುದಕ್ಕಿಂತ ಹೆಚ್ಚಿನದನ್ನು ತೆಗೆದುಕೊಳ್ಳುವುದು
ಸಂಬಂಧಗಳಲ್ಲಿ ಸಮತೋಲನ ಕಳೆದುಕೊಂಡಾಗ ಸಮಸ್ಯೆ ಶುರುವಾಗುತ್ತದೆ. ಯಾರಿಗಾದರೂ ಭಾವನಾತ್ಮಕ ಬೆಂಬಲಕ್ಕಾಗಿ ನಾವು ಅವಲಂಬಿತರಾಗಿರಬಹುದು, ಆದರೆ ನಾವು ಅದೇ ರೀತಿ ಹಿಂದಿರುಗಿಸುವುದಿಲ್ಲ. ಪ್ರೀತಿ, ಗಮನ, ಸಮಯ ಅಥವಾ ಗೌರವವನ್ನು ತೆಗೆದುಕೊಳ್ಳುತ್ತೇವೆ, ಆದರೆ ಸಮಾನವಾಗಿ ಕೊಡುವುದಿಲ್ಲ. ಇದು ಕೇವಲ ಸಂಬಂಧಗಳಲ್ಲಷ್ಟೇ ಅಲ್ಲ. ಪ್ರಕೃತಿಯಿಂದಲೂ ನಾವು ಹೆಚ್ಚು ತೆಗೆದುಕೊಳ್ಳುತ್ತೇವೆ. ಆಹಾರ, ನೀರು, ಸಣ್ಣ ಸಣ್ಣ ವಸ್ತುಗಳನ್ನು ವ್ಯರ್ಥ ಮಾಡುತ್ತೇವೆ. ಇದಕ್ಕೂ ಪರಿಣಾಮ ಇರುತ್ತದೆ. ಜೀವನಕ್ಕೆ ಸಮತೋಲನ ಬೇಕು. ನಾವು ಯಾವಾಗಲೂ ಒಂದೇ ಕಡೆ ಹೆಚ್ಚು ಜೂಕಿದರೆ, ಜೀವನವೇ ಒಮ್ಮೆ ನಮ್ಮನ್ನು ಹಿಂದಕ್ಕೆ ತಳ್ಳುತ್ತದೆ.
ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು
ಅನೇಕರು ಭಾವನೆಗಳನ್ನು ಎಲ್ಲರ ಮುಂದೆ ಬಿಚ್ಚಿಡೋದಿಲ್ಲ. ಕೋಪವನ್ನು ನಿಗ್ರಹಿಸುತ್ತಾರೆ, ಕಣ್ಣೀರನ್ನು ತಡೆಹಿಡಿಯುತ್ತಾರೆ, ಅಸಮಾಧಾನವನ್ನು ಹೂತುಹಾಕುತ್ತಾರೆ. ಇವುಗಳನ್ನು ನಿಯಂತ್ರಿಸಬಹುದು ಆದ್ರೆ ಮನಸ್ಸಿನಿಂದ ದೂರ ಮಾಡಲು ಸಾಧ್ಯವಿಲ್ಲ. ಅವು ಕರ್ಮದ ಅವಶೇಷಗಳಾಗಿ ಮಾರ್ಪಡುತ್ತವೆ, ನಿಮ್ಮ ಶಕ್ತಿ ಕ್ಷೇತ್ರದ ಮೂಲೆಗಳಲ್ಲಿ ನೆಲೆಗೊಳ್ಳುತ್ತವೆ. ಕಾಲಾನಂತರದಲ್ಲಿ, ವ್ಯಕ್ತಪಡಿಸದ ಭಾವನೆಗಳು ಚಡಪಡಿಕೆ, ಆಯಾಸ, ಆತಂಕ ಅಥವಾ ಹಾನಿಗೊಳಗಾದ ಸಂಬಂಧಗಳ ರೂಪದಲ್ಲಿ ವಾಪಸ್ ಆಗುತ್ತವೆ. ನೀವು ಭಾವನೆಗಳನ್ನು ಬಿಡುಗಡೆ ಮಾಡದಿದ್ದಾಗ, ನೀವು ಅವುಗಳನ್ನು ಮುಂದಕ್ಕೆ ತಳ್ಳುತ್ತೀರಿ. ನೀವು ಸ್ವೀಕರಿಸಲು ನಿರಾಕರಿಸಿದ ಹೊರೆಯನ್ನು ಬೇರೊಬ್ಬರು ತೆಗೆದುಕೊಳ್ಳುತ್ತಾರೆ ಮತ್ತು ಆ ಚಕ್ರವು ಸ್ವಯಂಚಾಲಿತವಾಗಿ ಹೊಸ ಕರ್ಮವನ್ನು ಸೃಷ್ಟಿಸುತ್ತದೆ.
ಕೊಟ್ಟ ಮಾತು ಮರೆಯುವುದು
ನೀವು ನೀಡಿದ ಭರವಸೆ ದೊಡ್ದಡಾಗಿರಬೇಕಾಗಿಲ್ಲ. “ನಂತರ ಕರೆ ಮಾಡ್ತೀನಿ”, “ನಾಳೆ ಮುಗಿಸ್ತೀನಿ”, “ಬರುತ್ತಿದ್ದೇನೆ” ಎನ್ನುವ ಚಿಕ್ಕ ಮಾತುಗಳನ್ನೇ ನಾವು ಸುಲಭವಾಗಿ ಮರೆತುಬಿಡುತ್ತೇವೆ. ಆದರೆ ಇವು ನಿಧಾನವಾಗಿ ಕರ್ಮದ ಭಾರವಾಗುತ್ತವೆ. ನಿಜವಾದ ಪ್ರಾಮಾಣಿಕತೆ ಎಂದರೆ ಎಲ್ಲರನ್ನೂ ಖುಷಿಪಡಿಸುವುದು ಅಲ್ಲ, ನಮ್ಮ ಮಾತು ನಮ್ಮ ಕೆಲಸಕ್ಕೆ ಹೊಂದಿಕೊಳ್ಳಬೇಕು ಎಂಬುದು. ಪ್ರತಿ ದಿನ ಮುರಿಯುವ ಇಂಥ ವಾಗ್ದಾನ ನಮ್ಮೊಳಗೆ ಅಸಮತೋಲನ ತರುತ್ತದೆ. ಅದರ ಪರಿಣಾಮವಾಗಿ ಗೊಂದಲ, ಅಪರಾಧಭಾವ ಅಥವಾ ಒಂಟಿತನ ಅನುಭವವಾಗುತ್ತದೆ.ಚಿಕ್ಕ ಚಿಕ್ಕ ವಿಷಯಗಳಲ್ಲಾದರೂ ವಾಗ್ದಾನ ಉಳಿಸುವುದು, ನಾವು ಊಹಿಸುವುದಕ್ಕಿಂತ ಹೆಚ್ಚು ಕರ್ಮದ ಭಾರವನ್ನು ಕಡಿಮೆ ಮಾಡುತ್ತದೆ.
ಅಸೂಯೆ ನಿಯಂತ್ರಣ
ಅಸೂಯೆ ಒಂದು ಸೂಕ್ಷ್ಮ ಕರ್ಮದ ವಿಷ. ಅದು ಹೊರಗೆ ಸ್ಫೋಟಗೊಳ್ಳುವುದಿಲ್ಲ. ಒಳಗೇ ನಮ್ಮನ್ನು ನಿಧಾನವಾಗಿ ಕುಗ್ಗಿಸುತ್ತದೆ. ಯಾರದೋ ಸಂತೋಷ, ಯಶಸ್ಸು ಅಥವಾ ಆರಾಮವನ್ನು ನೋಡಿ ಅಸೂಯೆ ಪಟ್ಟಾಗ, ನಾವು ನಮ್ಮದೇ ಬೆಳವಣಿಗೆಯನ್ನು ತಡೆಯುತ್ತೇವೆ. ಅಸೂಯೆಯಿಂದ ನಾವು ಸದಾ ಇತರರ ಜೀವನವನ್ನೇ ಹೋಲಿಸುತ್ತಿರುತ್ತೇವೆ. ನಮ್ಮ ದಾರಿಯನ್ನು ನೋಡುವುದೇ ಮರೆತು ಹೋಗುತ್ತದೆ. ಇದರಿಂದ ಜೀವನಕ್ಕೆ ನಾನು ಇನ್ನೂ ಸಿದ್ಧನಿಲ್ಲ ಎಂಬ ಸಂದೇಶ ಹೋಗುತ್ತದೆ. ಅಸೂಯೆಯನ್ನು ಬಿಡಲು ಬಲವಂತದ ಪಾಸಿಟಿವಿಟಿ ಬೇಕಾಗಿಲ್ಲ.
ಅರಿವಿನ ಬದಲು ಭಯ
ಭಯದಿಂದ ತೆಗೆದುಕೊಳ್ಳುವ ನಿರ್ಧಾರಗಳು ಸರಿ ಅನಿಸುತ್ತವೆ. ಜವಾಬ್ದಾರಿಯಂತೆಯೂ ತೋರುತ್ತವೆ. ಆದರೆ ಭಯವೇ ನಮ್ಮನ್ನು ನಡೆಸಿದಾಗ, ನಾವು ಸದಾ ಚಿಕ್ಕದಾಗಿಯೇ ಉಳಿಯುತ್ತೇವೆ. ರಿಸ್ಕ್ ತೆಗೆದುಕೊಳ್ಳುವುದಿಲ್ಲ, ಕಂಫರ್ಟೇಬಲ್ ವಲಯದಲ್ಲೇ ಅಂಟಿಕೊಂಡಿರುತ್ತೇವೆ, ಇತರರನ್ನು ಖುಷಿಪಡಿಸಲು ನಮ್ಮನ್ನೇ ಮರೆತಿಬಿಡುತ್ತೇವೆ. ಜೀವನವು ಧೈರ್ಯಕ್ಕಾಗಿ ಅವಕಾಶಗಳನ್ನು ನೀಡುತ್ತಲೇ ಇರುತ್ತದೆ. ಅರಿವಿನಿಂದ ವರ್ತಿಸುವುದು ಎಂದರೆ ನಿರ್ಭೀತರಾಗಿರುವುದು ಎಂದಲ್ಲ; ಇದರರ್ಥ ಭಯವನ್ನು ಗುರುತಿಸುವುದು ಆದರೆ ಅದು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡದಿರುವುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

