MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ

ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ

ಶಾಸಕ ಜಿ.ಟಿ.ದೇವೇಗೌಡರು ಮೈಸೂರು ಭಾಗದಲ್ಲಿ ತಾವೇ ಏಕಾಂಗಿಯಾಗಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದಾಗಿ ಹೇಳುವ ಮೂಲಕ ದಳಪತಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮ್ಮನ್ನು ಬೆಳೆಸಿದವರೇ ಕಳೆದ ಚುನಾವಣೆಯಲ್ಲಿ ವಿರೋಧ ಮಾಡಿದರು, ಆದರೂ ಕ್ಷೇತ್ರದ ಜನ ಕೈಬಿಡಲಿಲ್ಲ ಎಂದಿದ್ದಾರೆ.

2 Min read
Author : Mahmad Rafik
Published : Mar 18 2026, 09:37 AM IST
Share this Photo Gallery
  • FB
  • TW
  • Linkdin
  • Whatsapp
15
ದಳಪತಿಗಳ ವಿರುದ್ಧ ಜಿಟಿಡಿ ಅಸಮಾಧಾನ
Image Credit : GT Devegowda FB

ದಳಪತಿಗಳ ವಿರುದ್ಧ ಜಿಟಿಡಿ ಅಸಮಾಧಾನ

ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಏಕಾಂಗಿ ಜೆಡಿಎಸ್ ಪಕ್ಷವನ್ನ ಕಟ್ಟಿದ್ದೇನೆ. ಸಾ ರಾ ಮಹೇಶ್ ಬಿಜೆಪಿಯಲ್ಲಿದ್ರು, ಮಹದೇವ್ ವೆಂಕಟೇಶ್ ಜೊತೆಯಲ್ಲಿದ್ರು, ಅಶ್ವಿನ್ ಊರಿನಲ್ಲೇ ಇರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಒಂದೇ ಒಂದು ಸಣ್ಣ ಚುನಾವಣೆಯಲ್ಲೂ ಸೋತಿಲ್ಲ ಎಂದು ಹೇಳುವ ಮೂಲಕ ದಳಪತಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಟಾಂಗ್ ಕೊಟ್ಟಿದ್ದಾರೆ.

25
ಹೆಚ್‌ಡಿಡಿ ಹೀಗೆ ಹೇಳಿದ್ರಾ?
Image Credit : GT Devegowda FB

ಹೆಚ್‌ಡಿಡಿ ಹೀಗೆ ಹೇಳಿದ್ರಾ?

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಗ್ರಾಮದಲ್ಲಿ ಮಾತನಾಡಿರುವ ಜಿ.ಟಿ.ದೇವೇಗೌಡರು, 25 ಜನ ದೆಹಲಿಗೆ ಹೋಗಿ ಎಚ್.ಡಿ ದೇವೇಗೌಡರನ್ನ ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಜಿ.ಟಿ ದೇವೇಗೌಡ ವಿರೋದ ಪಕ್ಷದ ನಾಯಕರಾಗಿದ್ರೆ ಯಾವ ರೀತಿ ಮಾತನಾಡುತ್ತಿದ್ರ ಎಂಬುದು ಗೊತ್ತಿದೆ. ನಮ್ಮ ಪಕ್ಷದ ಧ್ವನಿ ಸದನದೊಳಗೆ ಇಲ್ಲ ಎಂಬುದನ್ನು ದೇವೇಗೌಡರ ಹೇಳಿದ್ದಾರೆ. ಜಿ.ಟಿ ದೇವೇಗೌಡರ ಬಗ್ಗೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಎಚ್.ಡಿ ದೇವೇಗೌಡರೇ ಬೇಸರ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದ್ರು.

Related Articles

Related image1
ಚಾಮುಂಡೇಶ್ವರಿ ಮುಸ್ಲಿಮರ ಆಸ್ತಿಯೇ? ಕ್ರಿಶ್ಚಿಯನ್ನರ ಆಸ್ತಿಯೇ ? : ಶಾಸಕ ಚನ್ನಬಸಪ್ಪ
Related image2
ಪ್ರತಾಪ್ ಸಿಂಹ ಕಣ್ಣಿಟ್ಟ ಚಾಮರಾಜ ಕ್ಷೇತ್ರಕ್ಕೆ ನಿಖಿಲ್ ಎಂಟ್ರಿ? ಜಿಟಿ ದೇವೇಗೌಡ ಪಕ್ಷದಿಂದ ಔಟ್‌? ಸಾ.ರಾ ಮಹೇಶ್‌ ಚಾಮುಂಡೇಶ್ವರಿ ಕ್ಷೇತ್ರ!
35
ಮತದಾರರು ನನ್ನನ್ನು ಕೈ ಬಿಟ್ಟಿಲ್ಲ
Image Credit : GT Devegowda FB

ಮತದಾರರು ನನ್ನನ್ನು ಕೈ ಬಿಟ್ಟಿಲ್ಲ

ನನ್ನ ಕ್ಷೇತ್ರದ ಜನ ನನ್ನನ್ನ ಎಂದಿಗೂ ಕೈ ಬಿಟ್ಟಿಲ್ಲ. ಜೊತೆಯಲ್ಲಿದ್ದವರು ಕೈ ಬಿಟ್ಟರು ಕ್ಷೇತ್ರದ ಮತದಾರರು ಕೈ ಬಿಟ್ಟಿಲ್ಲ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆ ನಿಂತಾಗ ಜನ ಕೈ ಬಿಡಲಿಲ್ಲ. ಕಳೆದ ಚುನಾವಣೆಯಲ್ಲಿ ನಾನು ಬೆಳೆಸಿದವರೇ ನನ್ನ ವಿರುದ್ಧ ಚುನಾವಣೆ ಮಾಡಿದ್ರು. ಅವಾಗಲೂ ಮತದಾರರು ನನ್ನ ಕೈ ಬಿಟ್ಟಿಲ್ಲ. ಜಿ.ಪಂ ಚುನಾವಣೆಯಲ್ಲಿ ಕೆ.ಅರ್ ನಗರದಿಂದ ಗೆದಿದ್ದು ಜೆಡಿಎಸ್ ಬರಿ ಎರಡು ಕ್ಷೇತ್ರ, ಚಾಮುಂಡೇಶ್ವರಿ ಕ್ಷೇತ್ರದಿಂದ 7 ಸ್ಥಾನ ಗೆಲ್ಲಿಸಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಟಾಂಗ್ ನೀಡಿದರು.

45
ಹುಣಸೂರಿನಿಂದಲೇ ಮಗನ ಸ್ಪರ್ಧೆ?
Image Credit : GT Devegowda FB

ಹುಣಸೂರಿನಿಂದಲೇ ಮಗನ ಸ್ಪರ್ಧೆ?

ಚಾಮುಂಡೇಶ್ವರಿ ಕ್ಷೇತ್ರವನ್ನ ಮಗನಿಗೆ ಜಿ.ಟಿ ದೇವೇಗೌಡರು ಬಿಟ್ಟು ಕೊಡುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿದೆ. ಹುಣಸೂರಿನಲ್ಲಿ 25-30 ವರ್ಷ ದುಡಿದಿರುವ ಕಾರಣ ಹರೀಶ್ ಗೌಡ ಶಾಸಕರಾಗಿದ್ದಾರೆ. ಹುಣಸೂರಿನಲ್ಲಿ ಜನರು ಹರೀಶ್ ಗೌಡನ ರಿಜೆಕ್ಟ್ ಮಾಡಿಲ್ಲ. ಮುಂದಿನ ಬಾರಿಯೂ ಹುಣಸೂರಿನಲ್ಲಿ ಹರೀಶ್ ಗೌಡ ಎಂಎಲ್ಎ ಆಗುತ್ತಾರೆ ಎಂದು ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿ, ಮಗ ಚಾಮುಂಡೇಶ್ವರಿಗೆ ಬರಲ್ಲ ಎಂಬುದರ ಸುಳಿವು ನೀಡಿದರು.

ಇದನ್ನೂ ಓದಿ: ಏನ್ ಮಾಡಕತ್ತೀ ಮೇಂಬರವ್ವಾ ಅಂತಾ ಮಂದಿ ಮನೀಗೆ ಬರ್ತಾರಿ: ಪಂಚಾಯಿತಿ ಸಭೆಯಲ್ಲಿ ಆಕ್ರೋಶ

55
ಕುಮಾರಸ್ವಾಮಿಗೆ ಕುಮಾರಪರ್ವ
Image Credit : GT Devegowda FB

ಕುಮಾರಸ್ವಾಮಿಗೆ ಕುಮಾರಪರ್ವ

ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ಚುನಾವಣೆಗೆ ನಿಲ್ಲಿ ಎಂದರೇ ನಿಲ್ಲುತ್ತೇನೆ ಬೇಡ ಎಂದರೇ ಬಿಟ್ಟು ಬಿಡುತ್ತೇನೆ. ದಳ ಬಿಟ್ಟು ಬಿಜೆಪಿಗೆ ಹೋದಾಗ ಯಡಿಯೂರಪ್ಪ ಸಿಎಂ ಆಗಬೇಕು ಎಂದು ಘೋಷಣೆ ಮಾಡಿದ್ದೆ, ಹಾಗೆಯೇ ಯಡಿಯೂರಪ್ಪ ಸಿಎಂ ಆದ್ರು. ಸಿದ್ದರಾಮಯ್ಯ ಕುಮಾರಸ್ವಾಮಿಗೂ ಅಷ್ಟೆ. ಕುಮಾರಸ್ವಾಮಿಗೆ ಕುಮಾರ ಪರ್ವ ಮಾಡಿದ್ದೇನೆ. ನಾನು ಹೇಳಿದ ಹಾಗೇ ಜನರು ನನಗೆ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜಿ. ಟಿ. ದೇವೇಗೌಡ
ಜನತಾದಳ (ಜಾತ್ಯತೀತ)
ಹೆಚ್.ಡಿ. ಕುಮಾರಸ್ವಾಮಿ
ಕರ್ನಾಟಕ ರಾಜಕೀಯ
Latest Videos
Recommended Stories
Recommended image1
ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ
Recommended image2
ಸಿಎಂ ಇದ್ದಾಗಲೇ ಸ್ಪೀಕರ್‌ ಸಭಾತ್ಯಾಗ, ಇದು ಆಡಳಿತ ಅಸಮರ್ಥತೆಗೆ ಸಾಕ್ಷಿ: ಜೋಶಿ
Recommended image3
ಶಾಸಕರ ಎಲ್ಲ ಪ್ರಶ್ನೆಗೆ ಉತ್ತರಿಸಿ: ಸಚಿವರಿಗೆ ಸಿಎಂ ಸಿದ್ದು ಸೂಚನೆ
Related Stories
Recommended image1
ಚಾಮುಂಡೇಶ್ವರಿ ಮುಸ್ಲಿಮರ ಆಸ್ತಿಯೇ? ಕ್ರಿಶ್ಚಿಯನ್ನರ ಆಸ್ತಿಯೇ ? : ಶಾಸಕ ಚನ್ನಬಸಪ್ಪ
Recommended image2
ಪ್ರತಾಪ್ ಸಿಂಹ ಕಣ್ಣಿಟ್ಟ ಚಾಮರಾಜ ಕ್ಷೇತ್ರಕ್ಕೆ ನಿಖಿಲ್ ಎಂಟ್ರಿ? ಜಿಟಿ ದೇವೇಗೌಡ ಪಕ್ಷದಿಂದ ಔಟ್‌? ಸಾ.ರಾ ಮಹೇಶ್‌ ಚಾಮುಂಡೇಶ್ವರಿ ಕ್ಷೇತ್ರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved