MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • ನಟ ಜಗ್ಗೇಶ್ ಫೋನ್ ಕಳೆದೋಯ್ತು, ಪೊಲೀಸರು ಹುಡುಕಿ ಸಂಜೆ ತಂದುಕೊಟ್ಟರು; ಜನಸಾಮಾನ್ಯರಿಗೆ ಈ ಸೇವೆ ಸಿಗುತ್ತಾ?

ನಟ ಜಗ್ಗೇಶ್ ಫೋನ್ ಕಳೆದೋಯ್ತು, ಪೊಲೀಸರು ಹುಡುಕಿ ಸಂಜೆ ತಂದುಕೊಟ್ಟರು; ಜನಸಾಮಾನ್ಯರಿಗೆ ಈ ಸೇವೆ ಸಿಗುತ್ತಾ?

ನಟ ಜಗ್ಗೇಶ್ ಸಹೋದರ ಕೋಮಲ್ ಅವರ ಐಫೋನ್ ಕಳೆದುಹೋಗಿ, ಪೊಲೀಸರು 150 ಸಿಸಿಟಿವಿ ಪರಿಶೀಲಿಸಿ ಕಳ್ಳನನ್ನು ಬಂಧಿಸಿ ಮೊಬೈಲ್ ವಾಪಸ್ ಕೊಟ್ಟಿದ್ದಾರೆ. ಈ ಘಟನೆ ಸಾಮಾನ್ಯ ಜನರಿಗೆ ಪೊಲೀಸರಿಂದ ಸಿಗುವ ಸೇವೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2 Min read
Sathish Kumar KH
Published : Jun 14 2025, 03:15 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಬೆಂಗಳೂರು (ಜೂನ್ 14): ಸಾಮಾನ್ಯರಿಗೆ ಒಂದು ರೀತಿಯ ಕಾನೂನು, ವಿಐಪಿಗಳಿಗೆ ಮತ್ತೊಂದು ಎಂಬ ಮಾತು ಈ ಘಟನೆಯಲ್ಲಿ ಅಕ್ಷರಶಃ ನಿಜವಾಗಿದೆ. ನಟ ಜಗ್ಗೇಶ್ ಅವರ ಸಹೋದರ ಕೋಮಲ್ ಅವರ ಐಫೋನ್ ಬೆಳಗ್ಗೆ ಕಳೆದು ಹೋಗಿದ್ದು, ತಕ್ಷಣ ದೂರು ಕೊಡಲಾಗಿದೆ. ತಕ್ಷಣ 150 ಸಿಸಿಟಿವಿ ಪತ್ತೆ ಮಾಡಿ ಮೊಬೈಲ್ ತೆಗೆದುಕೊಂಡು ಹೋದ ಕಳ್ಳನನ್ನು ಬಂಧಿಸಿ ಜಗ್ಗೇಶ್ ಮನೆಯವರ ಮೊಬೈಲ್ ಅನ್ನು ಸಂಜೆ ವೇಳೆಗೆ ವಾಪಸ್ ಕೊಟ್ಟು ಹೋಗಿದ್ದಾರೆ. ನಮ್ಮ ಪೊಲೀಸರು ಎಷ್ಟೊಂದು ದಕ್ಷರು ಆದರೆ, ಜನಸಾಮಾನ್ಯರ ಸೇವೆ ಮಾಡುವಲ್ಲಿ ತೀರಾ ನಿರ್ಲಕ್ಷ್ಯ ವಹಿಸುವರು ಎಂಬ ಆರೋಪ ಕೇಳಿಬಂದಿದೆ.

25
Image Credit : Asianet News

ಬೆಳಿಗ್ಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಸಹೋದರರ ನಟ ಕೋಮಲ್ ಅವರ ಜೇಬಿನಿಂದ ಐಫೋನ್ ಕೆಳಬಿದ್ದು ಹೋಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಅದನ್ನು ರಸ್ತೆಯಲ್ಲಿ ಎತ್ತಿಕೊಂಡು, ತಕ್ಷಣವಾಗಿ ಪೊಲೀಸ್ ಠಾಣೆಗೆ ಒಪ್ಪಿಸದೆ ತನ್ನ ಸ್ವಂತಕ್ಕೆ ಬಳಸಲು ತೆಗೆದುಕೊಂಡು ಹೋಗಿದ್ದನು. ಈ ಬಗ್ಗೆ ತಕ್ಷಣ ನಟ ಜಗ್ಗೇಶ್ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಆಗ ಪೊಲೀಸ್ ಅಧಿಕಾರಿಗಳು ಸುಮಾರು 150 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಎಲ್ಲಿಯೋ ಅಡಗಿ ಕುಳಿತಿದ್ದ ವ್ಯಕ್ತಿಯನ್ನು ಗುರುತಿಸಿ, ಸಂಜೆ ವೇಳೆಗೆ ಫೋನ್‌ನ್ನು ಹಿಂದಿರುಗಿಸಿದರು.

Related Articles

Related image1
ಅಮರಾವತಿ ಪೋಲೀಸ್ ಸ್ಟೇಷನ್‌ನಲ್ಲಿ ಕಾಣಿಸಿಕೊಂಡ ಧರ್ಮ ಕೀರ್ತಿರಾಜ್-ಗುರುರಾಜ್ ಜಗ್ಗೇಶ್: ಯಾಕೆ ಗೊತ್ತಾ?
Related image2
'ಆನೆ ಮುಂದೆ ಬೊಗಳುವ ನಾಯಿಗಳು': ಟೀಕಾಕಾರರಿಗೆ ಜಗ್ಗೇಶ್ ತಿರುಗೇಟು
35
Image Credit : Asianet News

ನಟ ಜಗ್ಗೇಶ್ ಅವರು ಪೊಲೀಸರ ಕಾರ್ಯತತ್ಪರತೆಗೆ ಮೆಚ್ಚುಗೆ ಸೂಚಿಸಿ ತಮ್ಮ ಟ್ವೀಟ್‌ನಲ್ಲಿ ಮಲ್ಲೇಶ್ವರಂ ಠಾಣೆಯ ಸಿಪಿಐ ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಜೊತೆಗೆ, 'ಸಿಕ್ಕ ವಸ್ತುಗಳನ್ನು ಠಾಣೆಗೆ ಒಪ್ಪಿಸಿ' ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. 

ಆದರೆ ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುವುದಕ್ಕೆ ಕಾರಣವಾಗಿದೆ. ಪೊಲೀಸರಿಂದ ಎಲ್ಲ ಜನಸಾಮಾನ್ಯರಿಗೂ ಇದೇ ರೀತಿಯ ಸೇವೆ ಸಿಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ನಟ ಜಗ್ಗೇಶ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಾ, ತಮ್ಮ ಸ್ವಂತ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

45
Image Credit : Asianet News

ಒಬ್ಬ ನೆಟ್ಟಿಗರು 'ನಮ್ಮ ಮೊಬೈಲ್ ಕಳೆದು ಹೋಗಿ ಒಂದು ವಾರ ಆಯ್ತು, ಪೋಲಿಸ್ ಸ್ಟೇಷನ್‌ಗೆ ಹೋದರೆ ಕನಿಷ್ಠ ಸ್ಪಂದನೆಯೂ ಇಲ್ಲ. 'ವಿಐಪಿಗಳಿಗೆ ಬೇಕಾದ್ರೆ 150 ಸಿಸಿಟಿವಿ, ನಾವು ಪೊಲೀಸ್ ಠಾಣೆ ಅಲೆದಾಡಿ ದೂರು ಕೊಟ್ಟರೂ ಅದನ್ನು ಕನಿಷ್ಠ ದಾಖಲು ಕೂಡ ಮಾಡಿಕೊಳ್ಳುವುದಿಲ್ಲ. ಆದರೆ, 'ಒಬ್ಬ ನಟನಿಗೆ ಈ ಮಟ್ಟದ ಸೇವೆ ಸಿಗಬಹುದಾದರೆ, ನಮಗೇಕೆ ಇಲ್ಲ? ಪೊಲೀಸರ ಕರ್ತವ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

55
Image Credit : Asianet News

ಜನ ಸಾಮಾನ್ಯರ ಪ್ರಶ್ನೆಗಳು:

ಐಫೋನ್ ಇದ್ದರೆ ಮಾತ್ರವೇ ತನಿಖೆ ಸಿಗುತ್ತದೆಯಾ?

ವಿಐಪಿ ಜನರ ದೂರುಗಳಿಗೆ ಮಾತ್ರ ಪ್ರತಿಕ್ರಿಯೆ ಇದೆಯಾ?

ನಾವು ದೂರು ಕೊಟ್ಟಾಗ, ನಮ್ಮದು ಚೀನಾ ಫೋನ್ ಅನ್ನೋ ಕಾರಣಕ್ಕೆ ತುಚ್ಛವಾಗಿ ನೋಡುತ್ತೀರಾ? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಸ್ಯಾಂಡಲ್‌ವುಡ್
ಬೆಂಗಳೂರು
ಜೀ ಕನ್ನಡ
Latest Videos
Recommended Stories
Recommended image1
ನಿರೂಪಕಿ ಅನುಶ್ರೀ ಮದುವೆ ಕ್ಷಣವನ್ನು ಮತ್ತಷ್ಟು ಸುಂದರವಾಗಿಸಿದ ಕಲಾವಿದೆ ಹರ್ಷಿತಾ
Recommended image2
ನಿಮ್ಮನ್ನೆಲ್ಲ ಬಿಟ್ಟು, ನನ್ನ ಗಾಡೀಲಿ ಲಿಫ್ಟ್‌ ಕೇಳಿದ್ಳು: ಹೆಂಡ್ತಿ ವೀಣಾ ಬಗ್ಗೆ ಸುಂದರ್‌ ಹೀಗ್ಯಾಕೆ ಅಂದ್ರು?
Recommended image3
'ದಿ ಡೆವಿಲ್' ಸಿನಿಮಾ ರಿಲೀಸ್ ಡೇಟ್ ಬದಲಾಯ್ತು, ಡಿಸೆಂಬರ್ 12 ಅಲ್ಲ, ಬದಲಿಗೆ ಯಾವತ್ತು?
Related Stories
Recommended image1
ಅಮರಾವತಿ ಪೋಲೀಸ್ ಸ್ಟೇಷನ್‌ನಲ್ಲಿ ಕಾಣಿಸಿಕೊಂಡ ಧರ್ಮ ಕೀರ್ತಿರಾಜ್-ಗುರುರಾಜ್ ಜಗ್ಗೇಶ್: ಯಾಕೆ ಗೊತ್ತಾ?
Recommended image2
'ಆನೆ ಮುಂದೆ ಬೊಗಳುವ ನಾಯಿಗಳು': ಟೀಕಾಕಾರರಿಗೆ ಜಗ್ಗೇಶ್ ತಿರುಗೇಟು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved