MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • CJ Roy: ಕೋಟಿ ಕೋಟಿ ಆಸ್ತಿ ಇದ್ದರೂ ಸಾವಿಗೆ ಶರಣಾಗಿದ್ದು ಯಾಕೆ? ಈ ನಿಗೂಢ ರಹಸ್ಯಕ್ಕೆ 'ಅದೇ' ನಿಜವಾದ ಕಾರಣವಾ?

CJ Roy: ಕೋಟಿ ಕೋಟಿ ಆಸ್ತಿ ಇದ್ದರೂ ಸಾವಿಗೆ ಶರಣಾಗಿದ್ದು ಯಾಕೆ? ಈ ನಿಗೂಢ ರಹಸ್ಯಕ್ಕೆ 'ಅದೇ' ನಿಜವಾದ ಕಾರಣವಾ?

ಜೀವನದಲ್ಲಿ ಎಲ್ಲವೂ ಇದ್ದ ಮೇಲೆ ಇನ್ನೇನು ಬೇಕು? ಹಣ, ಅಂತಸ್ತು, ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ.. ಹೀಗೆ ಒಬ್ಬ ಸಾಮಾನ್ಯ ಮನುಷ್ಯ ಕನಸು ಕಾಣುವ ಎಲ್ಲಾ ಸುಖಭೋಗಗಳು ಸಿಜೆ ರಾಯ್ (CJ Roy) ಬಳಿ ಇತ್ತು. ಆದರೆ, ಇಷ್ಟೆಲ್ಲಾ ಇದ್ದರೂ ಅವರು ಸಾವಿನ ಹಾದಿ ಹಿಡಿದಿದ್ದು ಯಾಕೆ? ಸೀಕ್ರೆಟ್ ಇಲ್ಲಿದೆ..

2 Min read
Author : Shriram Bhat
Published : Jan 31 2026, 12:26 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಕೋಟಿ ಕೋಟಿ ಆಸ್ತಿ ಇದ್ದರೂ ಸಿಗದ ನೆಮ್ಮದಿ: ಸಿಜೆ ರಾಯ್ (CJ Roy) ಸಾವಿನ ಹಿಂದೆ ಅಡಗಿದೆಯೇ 'ಈ' ಸಿದ್ಧಾಂತ?

ಬೆಂಗಳೂರು: ಜೀವನದಲ್ಲಿ ಎಲ್ಲವೂ ಇದ್ದ ಮೇಲೆ ಇನ್ನೇನು ಬೇಕು? ಹಣ, ಅಂತಸ್ತು, ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ.. ಹೀಗೆ ಒಬ್ಬ ಸಾಮಾನ್ಯ ಮನುಷ್ಯ ಕನಸು ಕಾಣುವ ಎಲ್ಲಾ ಸುಖಭೋಗಗಳು ಸಿಜೆ ರಾಯ್ (CJ Roy) ಅವರ ಬಳಿ ಇತ್ತು. ಆದರೆ, ಇಷ್ಟೆಲ್ಲಾ ಇದ್ದರೂ ಅವರು ಸಾವಿನ ಹಾದಿ ಹಿಡಿದಿದ್ದು ಯಾಕೆ? ಅವರ ಈ ದಾರುಣ ಅಂತ್ಯದ ಹಿಂದೆ ಯಾವುದೋ ನಿಗೂಢ ರಹಸ್ಯ ಅಡಗಿದೆಯೇ? 

27
Image Credit : instagram

ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ. ಅದಕ್ಕೆ ಕೇಳಿ ಬರುತ್ತಿರುವ ಒಂದೇ ಉತ್ತರ 'ಕರ್ಮ ಸಿದ್ಧಾಂತ' (Principle of Karma)!

ಹಣವಿದ್ದರೂ ಕಾಡಿದೆಯೇ ಮಾನಸಿಕ ಸಂಘರ್ಷ?

ನಮಗೆಲ್ಲಾ ತಿಳಿದಿರುವಂತೆ ಹಣದಿಂದ ಸುಖವನ್ನು ಕೊಳ್ಳಬಹುದು, ಆದರೆ ನೆಮ್ಮದಿಯನ್ನಲ್ಲ. ಸಿಜೆ ರಾಯ್ ಅವರ ವಿಷಯದಲ್ಲಿ ಇದೇ ನಿಜವಾಯಿತೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಗಲಿರುಳು ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಹೊರಜಗತ್ತಿಗೆ ಅವರು ಅತ್ಯಂತ ಯಶಸ್ವಿ ವ್ಯಕ್ತಿಯಾಗಿ ಕಂಡರೂ, ಅಂತರಂಗದಲ್ಲಿ ಯಾವುದೋ ಒಂದು ದೊಡ್ಡ ನೋವು ಅಥವಾ ಆತಂಕ ಅವರನ್ನು ಕಾಡುತ್ತಿತ್ತು ಎಂಬುದು ಈಗ ಬಯಲಾಗುತ್ತಿದೆ.

Related Articles

Related image1
CJ Roy Tragedy: ಸಾವಿಗೆ ಶರಣಾದ ಸಿಜೆ ರಾಯ್ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಭಾರೀ ವೈರಲ್; ಏನಿದೆ ಅಂತದ್ದು ಅದ್ರಲ್ಲಿ..?
Related image2
Niveditha Gowda: ಈ ಫೋಟೋಗಳೇ ನೂರು ಕಥೆಯಾ ಹೇಳಿವೆ.. ಡಿವೋರ್ಸ್ ಬಳಿಕ ಗಟ್ಟಿಗಿತ್ತಿಯಾದ್ರಾ ನಿವೇದಿತಾ ಗೌಡ?
37
Image Credit : cj roy instagram

ಏನಿದು ಕರ್ಮದ ಲೆಕ್ಕಾಚಾರ?

ಸಾವಿನ ನಂತರ ಅನೇಕರು ಚರ್ಚಿಸುತ್ತಿರುವ ವಿಷಯವೆಂದರೆ 'ಕರ್ಮ ಫಲ'. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಒಂದು ಪ್ರತಿಕ್ರಿಯೆ ಇರುತ್ತದೆ ಎನ್ನುವುದೇ ಈ ಸಿದ್ಧಾಂತದ ಸಾರ. ಸಿಜೆ ಸಿಜೆ ರಾಯ್ ಅವರ ಬದುಕಿನ ಯಾವುದೋ ಒಂದು ಹಂತದಲ್ಲಿ ನಡೆದ ಘಟನೆಗಳು ಅಥವಾ ಅವರು ಅನುಸರಿಸಿದ ಹಾದಿ ಅವರ ಈ ಅಂತ್ಯಕ್ಕೆ ಕಾರಣವಾಯಿತೇ? "ಬಿತ್ತಿದಂತೆ ಬೆಳೆ" ಎನ್ನುವ ಗಾದೆಯಂತೆ, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಕರ್ಮದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

47
Image Credit : Asianet News

ಶ್ರೀಮಂತಿಕೆ ಮತ್ತು ಶೂನ್ಯತೆ:

ಇಂದಿನ ಗ್ಲಾಮರ್ ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಅಳೆಯಲಾಗುತ್ತದೆ. ಆದರೆ ಸಿಜೆ ರೇ ಪ್ರಕರಣವು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಕಣ್ಣಿಗೆ ಕಾಣುವ ಕೋಟಿ ಕೋಟಿ ಆಸ್ತಿಗಿಂತ, ಕಣ್ಣಿಗೆ ಕಾಣದ ಮನಸ್ಸಿನ ಶಾಂತಿ ಅತೀ ಮುಖ್ಯ. ಜೀವನದ ಸಂಕೀರ್ಣತೆಗಳು ಮತ್ತು ವ್ಯವಹಾರದ ಒತ್ತಡಗಳ ನಡುವೆ ಅವರು ತಮ್ಮ ಅಸ್ಮಿತೆಯನ್ನು ಕಳೆದುಕೊಂಡರೇ? ಅಥವಾ ವಿಧಿಯ ಆಟದ ಮುಂದೆ ಅಸಹಾಯಕರಾದರೇ?

57
Image Credit : instagram

ಒಟ್ಟಿನಲ್ಲಿ, ಸಿಜೆ ರೇ ಅವರ ಸಾವು ಕೇವಲ ಒಂದು ಸುದ್ದಿಯಾಗಿ ಉಳಿದಿಲ್ಲ. ಇದು ಮನುಷ್ಯನ ಅತಿ ಆಸೆ, ಕರ್ಮದ ಫಲ ಮತ್ತು ಜೀವನದ ನಶ್ವರತೆಯ ಬಗ್ಗೆ ದೊಡ್ಡ ಪಾಠವನ್ನು ಕಲಿಸಿದೆ. ಆಸ್ತಿ-ಅಂತಸ್ತು ಮಣ್ಣು ಪಾಲಾದರೂ, ನಾವು ಮಾಡಿದ ಕರ್ಮ ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆ ಎಂಬ ಕಹಿ ಸತ್ಯ ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ನಿಗೂಢ ಸಾವಿನ ಹಿಂದಿನ ಅಸಲಿ ಸತ್ಯ ಏನೇ ಇರಲಿ, ಕರ್ಮದ ಲೆಕ್ಕಾಚಾರ ಮಾತ್ರ ಎಂದಿಗೂ ತಪ್ಪುವುದಿಲ್ಲ ಎಂಬುದು ಜನರ ನಂಬಿಕೆ.

67
Image Credit : instagram

ಆದರೆ, ಇದು ಸಾರ್ವಜನಿಕರಲ್ಲಿ ನಡೆಯುವ, ನಡೆಯುತ್ತಿರುವ ಸದ್ಯದ ಚರ್ಚೆ. ಸಾವಿನ ನಿಗೂಢ ರಹಸ್ಯ ತನಿಖೆಯ ಬಳಿಕ ಹೊರಬರಲಿದೆ. ನಮ್ಮ ಸಮಾಜದಲ್ಲಿ ಸಹಜವಾಗಿಯೇ ಕರ್ಮ ಸಿದ್ಧಾಂತದ ಬಗ್ಗೆ ನಂಬಿಕೆಯಿದೆ. 

77
Image Credit : instagram

ಅನಿರೀಕ್ಷಿತವಾಗಿ ಹೀಗೆ ಯಾವುದೇ ದುರಂತದ ಘಟನೆ ಆದಾಗ, ಅದಕ್ಕೆ ಸಮಾಧಾನಕರ ಉತ್ತರ ಎಂಬಂತೆ, ಹಲವರು ಈ ಕರ್ಮ ಸಿದ್ಧಾಂತದ ಮೂಲಕ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲೂ ಅದೇ ಆಗಿದೆ. ತನಿಖೆ ಬರುವ ಈ ಘಟನೆಗೆ ನಿಖರ ಕಾರಣ ತಿಳಿಯಲಿದೆ ತನಿಖೆ ಬಳಿಕ ಎಂಬ ಕುತೂಹಲವೂ ಎಲ್ಲರಲ್ಲಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸುದ್ದಿ
ಕ್ರೈಮ್ ನ್ಯೂಸ್
ಜ್ಯೋತಿಷ್ಯ
ಜೀವನಶೈಲಿ

Latest Videos
Recommended Stories
Recommended image1
ಚಳಿಗಾಲ ಮುಗೀತು, ಸ್ವೆಟರ್ಸ್ ಹೊಸದಾಗಿರುವಂತೆ ಕಾಣಲು ಹೇಗೆ ಮೆಂಟೈನ್ ಮಾಡಬೇಕು?
Recommended image2
ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆಂದ ರಚಿತಾ ರಾಮ್​! ಡಿಕೆಶಿ ಎದುರೇ ರಚ್ಚು ಘೋಷಣೆ
Recommended image3
ಇನ್ನು ಗಂಟೆಗಟ್ಟಲೇ ಕಷ್ಟಪಡಬೇಕಾಗಿಲ್ಲ, ಮ್ಯಾಜಿಕ್ ಟ್ರಿಕ್ಸ್ ನಿಂದ ನಿಮಿಷದಲ್ಲಿ ಬೆಳ್ಳುಳ್ಳಿ ಸಿಪ್ಪೆ ಸುಲಿಯಿರಿ
Related Stories
Recommended image1
CJ Roy Tragedy: ಸಾವಿಗೆ ಶರಣಾದ ಸಿಜೆ ರಾಯ್ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಭಾರೀ ವೈರಲ್; ಏನಿದೆ ಅಂತದ್ದು ಅದ್ರಲ್ಲಿ..?
Recommended image2
Niveditha Gowda: ಈ ಫೋಟೋಗಳೇ ನೂರು ಕಥೆಯಾ ಹೇಳಿವೆ.. ಡಿವೋರ್ಸ್ ಬಳಿಕ ಗಟ್ಟಿಗಿತ್ತಿಯಾದ್ರಾ ನಿವೇದಿತಾ ಗೌಡ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved