MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • CJ Roy Tragedy: ಸಾವಿಗೆ ಶರಣಾದ ಸಿಜೆ ರಾಯ್ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಭಾರೀ ವೈರಲ್; ಏನಿದೆ ಅಂತದ್ದು ಅದ್ರಲ್ಲಿ..?

CJ Roy Tragedy: ಸಾವಿಗೆ ಶರಣಾದ ಸಿಜೆ ರಾಯ್ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಭಾರೀ ವೈರಲ್; ಏನಿದೆ ಅಂತದ್ದು ಅದ್ರಲ್ಲಿ..?

ಸಿಜೆ ರಾಯ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯುವಜನತೆಯನ್ನು ಉದ್ದೇಶಿಸಿ ಒಂದು ಪೋಸ್ಟ್ ಮಾಡಿದ್ದರು- ಜೀವನ ಮತ್ತು ವ್ಯವಹಾರದಲ್ಲಿ ಗೆಲ್ಲಲು ಒಂದು ಅದ್ಭುತವಾದ 'ಸಕ್ಸಸ್ ಮಂತ್ರ'ವನ್ನು ಹಂಚಿಕೊಂಡಿದ್ದರು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರಣವೇನು? 

2 Min read
Author : Shriram Bhat
Published : Jan 31 2026, 11:42 AM IST
Share this Photo Gallery
  • FB
  • TW
  • Linkdin
  • Whatsapp
17
Image Credit : instagram

ಬೇರೆಯವರನ್ನ ಕಾಪಿ ಮಾಡ್ಬೇಡಿ!

ಕೇರಳ ಮೂಲದ ಕರ್ನಾಟಲದ ಉದ್ಯಮಿ ಸಿಜೆ ರಾಯ್ (CJ Roy) ಅವರು ಆತ್ಮ*ಹತ್ಯೆ ಮಾಡಿಕೊಂಡಿರುವ ಸಂಗತಿ ಈಗ ಇಡೀ ಭಾರತವನ್ನು ಬೆಚ್ಚಿ ಬೀಳಿಸಿದೆ. ಇದೀಗ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಹಲವು ಪೋಸ್ಟ್‌ಗಳು ಇದೀಗ ವೈರಲ್ ಅಗುತ್ತಿವೆ. ತಮ್ಮ ಸಂಸ್ಥೆಗೆ 'ಕಾನ್ಫಿಡೆಂಟ್' ಎಂದು ಹೆಸರು ಇಟ್ಟುಕೊಂಡಿದ್ದ, ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ಯುವಜನತೆಗೆ ಸಂದೇಶ ಕೊಡುತ್ತಿದ್ದ ವಿಐಪಿ ವ್ಯಕ್ತಿ ಸಿಜೆ ರಾಯ್ ಸಾವಿಗೆ ಶರಣಾಗಿದ್ದಾರೆ.

27
Image Credit : Instagram

ಹಾಗಿದ್ದರೆ ಸಿಜೆ ರಾಯ್ ಅವರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಏನಂತ ಸಂದೇಶ ಕೊಟ್ಟಿದ್ದರು ನೋಡಿ.. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಯಶಸ್ಸಿನ ಬೆನ್ನತ್ತಿ ಓಡುತ್ತಿದ್ದಾರೆ. ಆದರೆ ನಿಜವಾದ ಯಶಸ್ಸು ಸಿಗುವುದು ಯಾರಿಗೆ? ಯಾರು ತಮ್ಮದೇ ಆದ ವಿಶಿಷ್ಟ ಹಾದಿಯನ್ನು ನಿರ್ಮಿಸಿಕೊಳ್ಳುತ್ತಾರೋ ಅವರಿಗೆ ಮಾತ್ರ ಜಯ ಲಭಿಸುತ್ತದೆ. ಸಿಜೆ ರಾಯ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯುವಜನತೆಯನ್ನು ಉದ್ದೇಶಿಸಿ ಒಂದು ಪೋಸ್ಟ್ ಮಾಡಿದ್ದರು- ಜೀವನ ಮತ್ತು ವ್ಯವಹಾರದಲ್ಲಿ ಗೆಲ್ಲಲು ಒಂದು ಅದ್ಭುತವಾದ 'ಸಕ್ಸಸ್ ಮಂತ್ರ'ವನ್ನು ಹಂಚಿಕೊಂಡಿದ್ದರು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

Related Articles

Related image1
ಸಾವಿಗೆ ಶರಣಾದ ಸಿಜೆ ರಾಯ್-ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ-11' ವೇದಿಕೆ ಅದೇನು ಮಾತಾಡಿದ್ರು ಗೊತ್ತಾ?
Related image2
CJ Roy Self Death: ಸಿಜೆ ರಾಯ್ ಆತ್ಮ*ಹತ್ಯೆ, ಬೆಳಿಗ್ಗೆಯಿಂದ ಲ್ಯಾಂಗ್‌ಫೋರ್ಡ್‌ ಆಫೀಸ್‌ನಲ್ಲಿ ಏನೇನಾಯ್ತು? ಸೀಕ್ರೆಟ್ ಇಲ್ಲಿದೆ!
37
Image Credit : Instagram

ನನ್ನ ನಿಯಮಗಳೇ ನನಗೆ ದಾರಿ:

"ನಾನು ಯಾವಾಗಲೂ ನನ್ನದೇ ಆದ ನಿಯಮಗಳನ್ನು ರೂಪಿಸಿಕೊಳ್ಳುತ್ತೇನೆ. ನನ್ನ ಜೀವನದ ದಾರಿಯನ್ನು ನಾನೇ ನಿರ್ಧರಿಸುತ್ತೇನೆ" ಎಂದು ಹೇಳುವ ಮೂಲಕ ಅವರು ತಮ್ಮ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅಂದರೆ, ಬೇರೆಯವರು ಹಾಕಿಕೊಟ್ಟ ಹಳೆಯ ಮಾದರಿಗಳಿಗಿಂತ, ಸ್ವಂತ ಆಲೋಚನೆ ಮತ್ತು ಶ್ರಮದ ಮೇಲೆ ನಂಬಿಕೆ ಇಡುವುದು ಮುಖ್ಯ ಎಂಬುದು ಇವರ ವಾದ. ಕೇವಲ ಸಿನಿಮಾ ರಂಗ ಮಾತ್ರವಲ್ಲದೆ, ವ್ಯವಹಾರದಲ್ಲೂ (Business) ಅಪ್ರತಿಮ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ಯುವಕರಿಗೆ ಇದು ದೊಡ್ಡ ಪ್ರೇರಣೆಯಾಗಿದೆ.

47
Image Credit : Instagram

ಸಿಜೆ ರಾಯ್ ಸೋಷಿಯಲ್ ಮೀಡಿಯಾ ಫೊಸ್ಟ್ ಹೀಗೆದೆ:-

ನಾನು ನನ್ನದೇ ಆದ ನಿಯಮಗಳನ್ನು ರೂಪಿಸಿಕೊಳ್ಳುತ್ತೇನೆ. ವ್ಯವಹಾರದಲ್ಲಿ ಯಶಸ್ವಿಯಾಗಲು ನಿಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳಿ ಎಂಬುದು ಯುವಜನತೆಗೆ ನಾನು ನೀಡುವ ಸಂದೇಶ. ಗುಂಪನ್ನು ಅನುಸರಿಸಬೇಡಿ. (I write my own rules. My Message to youngsters is make your own rules to be Successful in Business. Do not follow the crowd)

57
Image Credit : Instagram

ಗುಂಪನ್ನು ಅನುಸರಿಸಬೇಡಿ (Do not follow the crowd):

ಸಾಮಾನ್ಯವಾಗಿ ಎಲ್ಲರೂ ಮಾಡುವ ಕೆಲಸವನ್ನೇ ಮಾಡುವುದು ಸುಲಭ. ಆದರೆ, "ಗುಂಪನ್ನು ಅನುಸರಿಸಬೇಡಿ" ಎನ್ನುವ ಇವರ ಮಾತು ಇಂದು ಬಹಳ ಪ್ರಸ್ತುತವಾಗಿದೆ. ಇನ್ನೊಬ್ಬರು ಮಾಡಿದ್ದನ್ನೇ ಕಾಪಿ ಮಾಡುವುದರಿಂದ ನೀವು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗುತ್ತೀರಿ. ಆದರೆ ನಿಮ್ಮದೇ ಆದ ಹೊಸ ಆಲೋಚನೆಗಳನ್ನು ಜಾರಿಗೆ ತಂದಾಗ ಮಾತ್ರ ನೀವು ಒಬ್ಬ 'ಬ್ರಾಂಡ್' ಆಗಿ ಬೆಳೆಯಲು ಸಾಧ್ಯ. ಕುರಿಗಳಂತೆ ಗುಂಪಿನ ಹಿಂದೆ ಹೋಗುವ ಬದಲು, ಸಿಂಹದಂತೆ ನಿಮ್ಮದೇ ಹಾದಿಯನ್ನು ಕಂಡುಕೊಳ್ಳಿ ಎಂಬ ಕಿವಿಮಾತು ಈ ಸಂದೇಶದಲ್ಲಿದೆ.

67
Image Credit : instagram

ಯುವಜನತೆಗೆ ಖಡಕ್ ಸಂದೇಶ:

"ವ್ಯವಹಾರದಲ್ಲಿ ನೀವು ಉತ್ತುಂಗಕ್ಕೆ ಏರಬೇಕಾದರೆ, ಅಲ್ಲಿರುವ ಹಳೆಯ ನಿಯಮಗಳನ್ನು ಪಾಲಿಸುವ ಬದಲು, ನಿಮ್ಮದೇ ಆದ ಹೊಸ ಮತ್ತು ಪರಿಣಾಮಕಾರಿ ನಿಯಮಗಳನ್ನು ರೂಪಿಸಿಕೊಳ್ಳಿ" ಎಂಬುದು ಇವರು ಯುವಜನತೆಗೆ ನೀಡಿದ ಪ್ರಮುಖ ಸಂದೇಶ. ನಿಮ್ಮಲ್ಲಿರುವ ವಿಶಿಷ್ಟತೆ ಅಥವಾ 'ಯುನಿಕ್ ಐಡಿಯಾ'ಗಳೇ ನಿಮ್ಮನ್ನು ಇತರರಿಗಿಂತ ಭಿನ್ನವಾಗಿ ಗುರುತಿಸುವಂತೆ ಮಾಡುತ್ತವೆ.

77
Image Credit : fb

ಒಟ್ಟಿನಲ್ಲಿ, ಯಶಸ್ಸು ಎನ್ನುವುದು ಬೇರೆಯವರ ಹೆಜ್ಜೆಗುರುತನ್ನು ಅನುಸರಿಸುವುದರಲ್ಲಿ ಇಲ್ಲ, ಬದಲಾಗಿ ನಮ್ಮದೇ ಆದ ಹೊಸ ಹೆಜ್ಜೆಗುರುತನ್ನು ಮೂಡಿಸುವುದರಲ್ಲಿ ಇದೆ. ಈ ಸ್ಪೂರ್ತಿದಾಯಕ ಮಾತುಗಳು ಈಗ ಸಾವಿರಾರು ಯುವ ಮನಸ್ಸುಗಳಲ್ಲಿ ಹೊಸ ಚೈತನ್ಯ ತುಂಬಿವೆ. ಸೋಲು-ಗೆಲುವಿನ ಲೆಕ್ಕಾಚಾರದ ನಡುವೆ, ತನ್ನತನವನ್ನು ಬಿಟ್ಟುಕೊಡದೆ ಸಾಗುವವನೇ ನಿಜವಾದ ವಿಜೇತ ಎಂಬ ಸತ್ಯ ಈ ಮಾತಿನಿಂದ ಮತ್ತೊಮ್ಮೆ ಸಾಬೀತಾಗಿದೆ. ಆದರೆ, ಈ ಮಾತು ಹೇಳಿದ್ದ ವ್ಯಕ್ತಿಯೇ ಈಗ ಸಮಸ್ಯೆಯನ್ನು ಎದುರಿಸಲಾಗದೇ ಸಾವಿಗೆ ಶರಣಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸಿ.ಜೆ. ರಾಯ್
ಸುದ್ದಿ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
CJ Roy: ಕೋಟಿ ಕೋಟಿ ಆಸ್ತಿ ಇದ್ದರೂ ಸಾವಿಗೆ ಶರಣಾಗಿದ್ದು ಯಾಕೆ? ಈ ನಿಗೂಢ ರಹಸ್ಯಕ್ಕೆ 'ಅದೇ' ನಿಜವಾದ ಕಾರಣವಾ?
Recommended image2
ಸಿ.ಜೆ ರಾಯ್ ಸಾವು: ಕೊಠಡಿ ಹೊರಗಡೆ ನಿಂತಿದ್ದ ಸಿಬ್ಬಂದಿಗೆ ಗುಂಡಿನ ಶಬ್ಧ ಕೇಳಿಸಲಿಲ್ಲ! ಯಾಕೆ?
Recommended image3
ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ ಕೊಡ್ತೇನೆ : ಸಚಿವರ ಸವಾಲ್
Related Stories
Recommended image1
ಸಾವಿಗೆ ಶರಣಾದ ಸಿಜೆ ರಾಯ್-ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ-11' ವೇದಿಕೆ ಅದೇನು ಮಾತಾಡಿದ್ರು ಗೊತ್ತಾ?
Recommended image2
CJ Roy Self Death: ಸಿಜೆ ರಾಯ್ ಆತ್ಮ*ಹತ್ಯೆ, ಬೆಳಿಗ್ಗೆಯಿಂದ ಲ್ಯಾಂಗ್‌ಫೋರ್ಡ್‌ ಆಫೀಸ್‌ನಲ್ಲಿ ಏನೇನಾಯ್ತು? ಸೀಕ್ರೆಟ್ ಇಲ್ಲಿದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved