ಬದುಕಿಗೆ ಸ್ಪೂರ್ತಿ ನೀಡುವ ಕತ್ತೆ ಕಥೆ; ಜನ ಏನ್ ಅಂತಾರೆ ಅನ್ನೋದನ್ನ ಬಿಟ್ಟುಬಿಡಿ!
ನಮ್ಮಲ್ಲಿ ಬಹಳಷ್ಟು ಮಂದಿ, ಬದುಕಿನಲ್ಲಿ ಜನ ಏನ್ ಅಂತಾರೆ ಅನ್ನೋದನ್ನೇ ಯೋಚನೆ ಮಾಡುತ್ತಾ ಇರುತ್ತೇವೆ. ಯಾವಾಗಲೂ ಅವರ ಟೆನ್ಶನ್ನಲ್ಲೇ ಇರುತ್ತೇವೆ, ಆದರೆ, ಈ ಕತ್ತೆ ಕಥೆ ಓದಿದರೆ, ನಿಮ್ಮ ಯೋಚನೆ ಬದಲಾಗೋದು ಪಕ್ಕಾ, ಈ ಕಥೆ ಇಲ್ಲಿದೆ.

ಜೀವನದಲ್ಲಿ ನಮಗೋಸ್ಕರ ಅಲ್ಲ, ನಾಲ್ಕು ಜನಕ್ಕೋಸ್ಕರ ಬದುಕಬೇಕು ಅಂತಾ ಹಲವರು ಹೇಳುತ್ತಾರೆ. ಇದರಲ್ಲಿ ಸ್ವಲ್ಪ ಸತ್ಯ ಇದೆ. ಆದರೆ, ನಾಲ್ಕು ಜನ ನಾಲ್ಕು ರೀತಿಯಲ್ಲಿ ಮಾತಾಡ್ತಾರೆ ಅಂತ ಬೇಜಾರ್ ಮಾಡ್ಕೊಂಡ್ರೆ ಜೀವನದಲ್ಲಿ ಮುಂದೆ ಹೋಗೋಕೆ ಆಗಲ್ಲ. ಜನ ಏನ್ ಅಂತಾರೆ ಅಂತ ಚಿಂತೆ ಮಾಡ್ಕೊಂಡ್ರೆ ನಮ್ಮ ಜೀವನ ಸುಖವಾಗಿರಲ್ಲ. ನೀವು ಕೂಡ ಹೀಗೆ ಚಿಂತೆ ಮಾಡ್ತಿದ್ರೆ ಈ ಕತ್ತೆ ಕಥೆ ಓದಿ, ನಿಮ್ಮ ಯೋಚನೆ ಬದಲಾಗುತ್ತೆ.
ಒಂದು ದಿನ ಗಂಡ ಹೆಂಡ್ತಿ ಕತ್ತೆ ಮೇಲೆ ಕೂತ್ಕೊಂಡು ಬೇರೆ ಊರಿಗೆ ಪ್ರವಾಸ ಮಾಡುತ್ತಿದ್ದರು. ಆಗ ಅಲ್ಲಿ ನಾಲ್ಕು ಜನ ಮಾತಾಡ್ಕೊಳ್ತಾ, 'ಇವ್ರಿಗೆ ಬುದ್ದಿ ಇದ್ಯಾ.? ಮಾನವೀಯತೆ ಇಲ್ದೆ ಕತ್ತೆ ಮೇಲೆ ಕೂತ್ಕೊಂಡು ಹೋಗ್ತಾ ಇದ್ದಾರೆ. ಕತ್ತೆಗೆ ಎಷ್ಟು ಭಾರ ಅಂತ ಯೋಚನೆನೇ ಇಲ್ವಾ? ಒಬ್ಬರಾದರೂ ನಡ್ಕೊಂಡು ಹೋದ್ರೆ ಏನಾಗುತ್ತೆ' ಎಂದಿದ್ದರು.
ಇದನ್ನ ಕೇಳಿದ ಗಂಡ ಕೆಳಗೆ ಇಳಿದು ಹೆಂಡ್ತಿನ ಮಾತ್ರ ಕತ್ತೆ ಮೇಲೆ ಕೂರಿಸಿ ನಡ್ಕೊಂಡು ಹೋಗ್ತಾನೆ. ಮತ್ತೊಂದು ಜಾಗಕ್ಕೆ ಹೋದಾಗ ಅಲ್ಲಿನ ಜನ, 'ಇದೇನು ವಿಚಿತ್ರ, ಹೆಂಡ್ತಿನ ಕತ್ತೆ ಮೇಲೆ ಕೂರಿಸಿ ಗಂಡ ನಡ್ಕೊಂಡು ಹೋಗ್ತಾ ಇದ್ದಾನೆ. ಹೆಂಡ್ತಿ ಅಂದ್ರೆ ಅವ್ನಿಗೆ ಎಷ್ಟು ಭಯ' ಎಂದು ಹೇಳುತ್ತಾರೆ.
ಕರೀನಾ ಕಪೂರ್ ಬಾಳಲ್ಲೂ ಬಿರುಗಾಳಿ? ಮದುವೆ, ವಿಚ್ಛೇದನದ ಬಗ್ಗೆ ಬರೆದುಕೊಂಡ ಸೈಫ್ ಅಲಿ ಖಾನ್ ಪತ್ನಿ!
ಇದನ್ನ ಕೇಳಿದ ಗಂಡ, ಹೆಂಡ್ತಿನ ನಡೆಸಿಕೊಂಡು ಹೋಗಿ ತಾನು ಕತ್ತೆ ಮೇಲೆ ಕೂರ್ತಾನೆ. ಸ್ವಲ್ಪ ದೂರ ಹೋದ್ಮೇಲೆ ಮತ್ತೊಂದು ಊರಿನ ಜನ ಗಂಡನಿಗೆ ಬೈಯ್ಯೋಕೆ ಶುರು ಮಾಡ್ತಾರೆ. 'ಗಂಡಸಾಗಿ ಹೆಣ್ಣನ್ನ ನಡೆಸಿಕೊಂಡು ಹೋಗ್ತಾ ಇದ್ದಾನೆ. ಇವನು ಮನುಷ್ಯನಾ' ಎಂದು ಹೇಳಿದ್ದಾರೆ. ಆಗ ಗಂಡ ಹೆಂಡ್ತಿ ಇಬ್ರೂ ಕತ್ತೆನ ನಡೆಸಿಕೊಂಡು ಹೋಗ್ತಾರೆ.
ಮತ್ತೊಂದು ಊರಿಗೆ ಹೋದಾಗ ಅಲ್ಲಿನ ಜನ, 'ಇವ್ರಿಗೆ ಬುದ್ದಿ ಇದ್ಯಾ.? ಕತ್ತೆ ಇದ್ರೂ ನಡ್ಕೊಂಡು ಹೋಗ್ತಾ ಇದ್ದಾರೆ. ಇವ್ರು ಎಂಥಾ ಮೂರ್ಖರು' ಅಂತ ಬೈಯ್ಯುತ್ತಾರೆ.
ಸೀರಿಯಲ್ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ನೀತಿ: ಈ ಕಥೆಯಲ್ಲಿ ಒಂದು ಒಳ್ಳೆ ಸಂದೇಶ ಇದೆ. ನಾವು ಏನ್ ಮಾಡಿದ್ರೂ ಏನಾದ್ರೂ ಮಾತಾಡೋ ಜನ ಇರ್ತಾರೆ. ಅದಕ್ಕೆ ಜನರ ಮಾತು ಕೇಳ್ಕೊಳ್ಳದೆ ನಿಮಗೆ ಯಾವುದು ಸರಿ ಅನ್ನಿಸುತ್ತೋ ಅದನ್ನ ಮಾಡಿ. ಆದ್ರೆ ಯಾರಿಗೂ ತೊಂದ್ರೆ ಆಗದ ಹಾಗೆ, ಪ್ರಾಮಾಣಿಕವಾಗಿ ಬದುಕಿ.