MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • ಬದುಕಿಗೆ ಸ್ಪೂರ್ತಿ ನೀಡುವ ಕತ್ತೆ ಕಥೆ; ಜನ ಏನ್‌ ಅಂತಾರೆ ಅನ್ನೋದನ್ನ ಬಿಟ್ಟುಬಿಡಿ!

ಬದುಕಿಗೆ ಸ್ಪೂರ್ತಿ ನೀಡುವ ಕತ್ತೆ ಕಥೆ; ಜನ ಏನ್‌ ಅಂತಾರೆ ಅನ್ನೋದನ್ನ ಬಿಟ್ಟುಬಿಡಿ!

ನಮ್ಮಲ್ಲಿ ಬಹಳಷ್ಟು ಮಂದಿ, ಬದುಕಿನಲ್ಲಿ ಜನ ಏನ್‌ ಅಂತಾರೆ ಅನ್ನೋದನ್ನೇ ಯೋಚನೆ ಮಾಡುತ್ತಾ ಇರುತ್ತೇವೆ. ಯಾವಾಗಲೂ ಅವರ ಟೆನ್ಶನ್‌ನಲ್ಲೇ ಇರುತ್ತೇವೆ, ಆದರೆ, ಈ ಕತ್ತೆ ಕಥೆ ಓದಿದರೆ, ನಿಮ್ಮ ಯೋಚನೆ ಬದಲಾಗೋದು ಪಕ್ಕಾ, ಈ ಕಥೆ ಇಲ್ಲಿದೆ.

2 Min read
Santosh Naik
Published : Feb 11 2025, 06:54 PM IST
Share this Photo Gallery
  • FB
  • TW
  • Linkdin
  • Whatsapp
13

ಜೀವನದಲ್ಲಿ ನಮಗೋಸ್ಕರ ಅಲ್ಲ, ನಾಲ್ಕು ಜನಕ್ಕೋಸ್ಕರ ಬದುಕಬೇಕು ಅಂತಾ ಹಲವರು ಹೇಳುತ್ತಾರೆ. ಇದರಲ್ಲಿ ಸ್ವಲ್ಪ ಸತ್ಯ ಇದೆ. ಆದರೆ, ನಾಲ್ಕು ಜನ ನಾಲ್ಕು ರೀತಿಯಲ್ಲಿ ಮಾತಾಡ್ತಾರೆ ಅಂತ ಬೇಜಾರ್ ಮಾಡ್ಕೊಂಡ್ರೆ ಜೀವನದಲ್ಲಿ ಮುಂದೆ ಹೋಗೋಕೆ ಆಗಲ್ಲ. ಜನ ಏನ್ ಅಂತಾರೆ ಅಂತ ಚಿಂತೆ ಮಾಡ್ಕೊಂಡ್ರೆ ನಮ್ಮ ಜೀವನ ಸುಖವಾಗಿರಲ್ಲ. ನೀವು ಕೂಡ ಹೀಗೆ ಚಿಂತೆ ಮಾಡ್ತಿದ್ರೆ ಈ ಕತ್ತೆ ಕಥೆ ಓದಿ, ನಿಮ್ಮ ಯೋಚನೆ ಬದಲಾಗುತ್ತೆ.

23

ಒಂದು ದಿನ ಗಂಡ ಹೆಂಡ್ತಿ ಕತ್ತೆ ಮೇಲೆ ಕೂತ್ಕೊಂಡು ಬೇರೆ ಊರಿಗೆ ಪ್ರವಾಸ ಮಾಡುತ್ತಿದ್ದರು. ಆಗ ಅಲ್ಲಿ ನಾಲ್ಕು ಜನ ಮಾತಾಡ್ಕೊಳ್ತಾ, 'ಇವ್ರಿಗೆ ಬುದ್ದಿ ಇದ್ಯಾ.? ಮಾನವೀಯತೆ ಇಲ್ದೆ ಕತ್ತೆ ಮೇಲೆ ಕೂತ್ಕೊಂಡು ಹೋಗ್ತಾ ಇದ್ದಾರೆ. ಕತ್ತೆಗೆ ಎಷ್ಟು ಭಾರ ಅಂತ ಯೋಚನೆನೇ ಇಲ್ವಾ? ಒಬ್ಬರಾದರೂ ನಡ್ಕೊಂಡು ಹೋದ್ರೆ ಏನಾಗುತ್ತೆ' ಎಂದಿದ್ದರು.

ಇದನ್ನ ಕೇಳಿದ ಗಂಡ ಕೆಳಗೆ ಇಳಿದು ಹೆಂಡ್ತಿನ ಮಾತ್ರ ಕತ್ತೆ ಮೇಲೆ ಕೂರಿಸಿ ನಡ್ಕೊಂಡು ಹೋಗ್ತಾನೆ. ಮತ್ತೊಂದು ಜಾಗಕ್ಕೆ ಹೋದಾಗ ಅಲ್ಲಿನ ಜನ, 'ಇದೇನು ವಿಚಿತ್ರ, ಹೆಂಡ್ತಿನ ಕತ್ತೆ ಮೇಲೆ ಕೂರಿಸಿ ಗಂಡ ನಡ್ಕೊಂಡು ಹೋಗ್ತಾ ಇದ್ದಾನೆ. ಹೆಂಡ್ತಿ ಅಂದ್ರೆ ಅವ್ನಿಗೆ ಎಷ್ಟು ಭಯ' ಎಂದು ಹೇಳುತ್ತಾರೆ.

ಕರೀನಾ ಕಪೂರ್‌ ಬಾಳಲ್ಲೂ ಬಿರುಗಾಳಿ? ಮದುವೆ, ವಿಚ್ಛೇದನದ ಬಗ್ಗೆ ಬರೆದುಕೊಂಡ ಸೈಫ್‌ ಅಲಿ ಖಾನ್‌ ಪತ್ನಿ!

33

ಇದನ್ನ ಕೇಳಿದ ಗಂಡ, ಹೆಂಡ್ತಿನ ನಡೆಸಿಕೊಂಡು ಹೋಗಿ ತಾನು ಕತ್ತೆ ಮೇಲೆ ಕೂರ್ತಾನೆ. ಸ್ವಲ್ಪ ದೂರ ಹೋದ್ಮೇಲೆ ಮತ್ತೊಂದು ಊರಿನ ಜನ ಗಂಡನಿಗೆ ಬೈಯ್ಯೋಕೆ ಶುರು ಮಾಡ್ತಾರೆ. 'ಗಂಡಸಾಗಿ ಹೆಣ್ಣನ್ನ ನಡೆಸಿಕೊಂಡು ಹೋಗ್ತಾ ಇದ್ದಾನೆ. ಇವನು ಮನುಷ್ಯನಾ' ಎಂದು ಹೇಳಿದ್ದಾರೆ. ಆಗ ಗಂಡ ಹೆಂಡ್ತಿ ಇಬ್ರೂ ಕತ್ತೆನ ನಡೆಸಿಕೊಂಡು ಹೋಗ್ತಾರೆ. 

ಮತ್ತೊಂದು ಊರಿಗೆ ಹೋದಾಗ ಅಲ್ಲಿನ ಜನ, 'ಇವ್ರಿಗೆ ಬುದ್ದಿ ಇದ್ಯಾ.? ಕತ್ತೆ ಇದ್ರೂ ನಡ್ಕೊಂಡು ಹೋಗ್ತಾ ಇದ್ದಾರೆ. ಇವ್ರು ಎಂಥಾ ಮೂರ್ಖರು' ಅಂತ ಬೈಯ್ಯುತ್ತಾರೆ. 

ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!

ನೀತಿ: ಈ ಕಥೆಯಲ್ಲಿ ಒಂದು ಒಳ್ಳೆ ಸಂದೇಶ ಇದೆ. ನಾವು ಏನ್ ಮಾಡಿದ್ರೂ ಏನಾದ್ರೂ ಮಾತಾಡೋ ಜನ ಇರ್ತಾರೆ. ಅದಕ್ಕೆ ಜನರ ಮಾತು ಕೇಳ್ಕೊಳ್ಳದೆ ನಿಮಗೆ ಯಾವುದು ಸರಿ ಅನ್ನಿಸುತ್ತೋ ಅದನ್ನ ಮಾಡಿ. ಆದ್ರೆ ಯಾರಿಗೂ ತೊಂದ್ರೆ ಆಗದ ಹಾಗೆ, ಪ್ರಾಮಾಣಿಕವಾಗಿ ಬದುಕಿ. 

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಪ್ರೇರಣಾದಾಯಕ ಕಥೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved