MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Karnataka Districts
  • ಹಾವು ಕಚ್ಚಿದಾಗ ಸೈಕಲ್ ತುಳಿದು ಆಸ್ಪತ್ರೆಗೆ ಹೋದ! 'ಇಂಥ ತಪ್ಪು ಜೀವಕ್ಕೆ ಕುತ್ತು' ಎಂದ ಉರಗ ತಜ್ಞ ಗೌರಿ ಕಾಳಿಂಗ

ಹಾವು ಕಚ್ಚಿದಾಗ ಸೈಕಲ್ ತುಳಿದು ಆಸ್ಪತ್ರೆಗೆ ಹೋದ! 'ಇಂಥ ತಪ್ಪು ಜೀವಕ್ಕೆ ಕುತ್ತು' ಎಂದ ಉರಗ ತಜ್ಞ ಗೌರಿ ಕಾಳಿಂಗ

ಅತ್ಯಂತ ವಿಷಕಾರಿ ಹಾವು ಕಚ್ಚಿದ ವ್ಯಕ್ತಿಯೊಬ್ಬರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ಬಗ್ಗೆ ಉರಗ ತಜ್ಞ ಗೌರಿ ಕಾಳಿಂಗ ಅವರು ಹಾವು ಕಡಿತದ ನಂತರ ಮಾಡಬಾರದ ತಪ್ಪುಗಳ ಬಗ್ಗೆ ಎಚ್ಚರಿಸಿದ್ದು, ಸರಿಯಾದ ಪ್ರಥಮ ಚಿಕಿತ್ಸೆ ಮತ್ತು ಕ್ರಮಗಳ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

2 Min read
Author : Sathish Kumar KH
Published : Sep 13 2026, 09:22 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : @GowriKalinga

ಬೆಂಗಳೂರು/ಭುವನೇಶ್ವರ (ಸೆ.13): ಹಾವು ಕಚ್ಚಿದರೆ ಮನುಷ್ಯ ಗಾಬರಿಯಾಗುವುದು ಸಹಜ. ಆದರೆ ಒಡಿಶಾದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ತನಗೆ ಕಚ್ಚಿದ ಹಾವನ್ನೇ ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡು, ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿದರೂ ಅವರ ಪರಿಸ್ಥಿತಿ ಈಗ ಗಂಭೀರವಾಗಿದೆ! ಇದಕ್ಕೆ ಕಾರಣವೇನು? ಹಾವು ಕಚ್ಚಿದಾಗ ಜನಸಾಮಾನ್ಯರು ಮಾಡುವ ಇಂತಹ ಪ್ರಮಾದಗಳೇನು ಎಂಬುದರ ಕುರಿತು ಖ್ಯಾತ ಉರಗ ತಜ್ಞ ಗೌರಿ ಕಾಳಿಂಗ ಮಹತ್ವದ ಎಚ್ಚರಿಕೆ ಹಾಗೂ ಸಲಹೆಗಳನ್ನು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : @GowriKalinga

ಏನಿದು ಘಟನೆ?

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಏತ ನೀರಾವರಿ ಯೋಜನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಗೆ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಆತ ಹಾವನ್ನು ಹುಡುಕಿ ಸಾಯಿಸಿ, ವೈದ್ಯರಿಗೆ ತೋರಿಸಲೆಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.

Related Articles

Related image1
ಭಾರತದಲ್ಲಿ ಕಾಣದ ಅಪರೂಪದ 'ಬ್ಯಾಂಡೆಡ್ ಕ್ರೇಟ್' ಹಾವು ತೆಲಂಗಾಣದಲ್ಲಿ ಪ್ರತ್ಯಕ್ಷ, ಇದರ ಕಡಿತಕ್ಕೆ ಬದುಕಿರೋರೇ ಇಲ್ಲ!
Related image2
100 ವರ್ಷದ ಸಾಧನೆ: ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡುಹಿಡಿದ ಬೆಂಗಳೂರು ಐಐಎಸ್‌ಸಿ ವಿಜ್ಞಾನಿಗಳು!
36
Image Credit : @GowriKalinga

ಸೈಕಲ್ ತುಳಿದಿದ್ದೇ ದೊಡ್ಡ ಪ್ರಮಾದವಾಗಿದ್ದು ಏಕೆ?

ಈ ಘಟನೆಯನ್ನು ವಿಶ್ಲೇಷಿಸಿರುವ ಉರಗ ತಜ್ಞ ಗೌರಿ ಕಾಳಿಂಗ, 'ವ್ಯಕ್ತಿ ಆದಷ್ಟು ಬೇಗ ಆಸ್ಪತ್ರೆ ತಲುಪಲು ಯತ್ನಿಸಿದ್ದು ಒಳ್ಳೆಯದೇ. ಆದರೆ, ಆತ ಸೈಕಲ್ ತುಳಿದುಕೊಂಡು ಹೋದದ್ದು ಆತನ ಜೀವಕ್ಕೇ ಕಂಟಕ ತಂದಿಟ್ಟಿದೆ. ಸೈಕಲ್ ತುಳಿಯುವಾಗ ಅಥವಾ ವೇಗವಾಗಿ ಓಡಿದಾಗ ನಮ್ಮ ಹೃದಯ ಬಡಿತ ಹಾಗೂ ರಕ್ತಪರಿಚಲನೆ ತೀವ್ರವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಹಾವಿನ ವಿಷವು ಅತಿ ವೇಗವಾಗಿ ಇಡೀ ದೇಹಕ್ಕೆ ಮತ್ತು ಪ್ರಮುಖ ಅಂಗಾಂಗಗಳಿಗೆ ಆವರಿಸುತ್ತದೆ. ಪರಿಣಾಮವಾಗಿ ಆ ವ್ಯಕ್ತಿ ಈಗ ಅತ್ಯಂತ ಗಂಭೀರ (ಕ್ರಿಟಿಕಲ್) ಸ್ಥಿತಿಗೆ ತಲುಪಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ಹಾವು ಕಚ್ಚಿದಾಗ ಏನು ಮಾಡಬೇಕು?:

ಹಾವು ಕಚ್ಚಿದ ತಕ್ಷಣ ಗಾಬರಿಯಾಗಬಾರದು. ಯಾವುದೇ ಕಾರಣಕ್ಕೂ ಓಡುವುದು, ಸೈಕಲ್ ತುಳಿಯುವುದು ಅಥವಾ ಅತಿಯಾದ ದೈಹಿಕ ಶ್ರಮ ಮಾಡಬಾರದು. ಕಡಿತಕ್ಕೊಳಗಾದ ಅಂಗವನ್ನು ಅಲುಗಾಡಿಸದೆ ಶಾಂತರಾಗಿರಬೇಕು. ಬೈಕ್, ಆಟೋ ಅಥವಾ ಕಾರಿನಂತಹ ವಾಹನದಲ್ಲಿ ಕುಳಿತು ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾಗಿ ಆ್ಯಂಟಿ-ವೆನಮ್ (Anti-venom) ಚಿಕಿತ್ಸೆ ಪಡೆಯಬೇಕು.

46
Image Credit : @GowriKalinga

ಸ್ವಯಂಘೋಷಿತ ಪರಿಸರವಾದಿಗಳು & ಸರ್ಕಾರದ ನೀತಿಯ ವಿರುದ್ಧ ಆಕ್ರೋಶ!

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಇತ್ತೀಚಿನ ಹಾವು ಸಂರಕ್ಷಣಾ ಆದೇಶದ ವಿರುದ್ಧವೂ ಗೌರಿ ಕಾಳಿಂಗ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅನುಭವಿ ಸ್ವತಂತ್ರ ಹಾವು ಸಂರಕ್ಷಕರು ಹಾವುಗಳನ್ನು ಹಿಡಿಯುವುದನ್ನು ನಿಲ್ಲಿಸಿದ್ದಾರೆ. ಕೇವಲ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಹಾವು ಹಿಡಿಯಬೇಕೆಂಬ ನಿಯಮ ಜಾರಿಗೆ ಬಂದಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವು ಸಿಗದೆ ಹಾವು ಕಡಿತದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ' ಎಂದಿದ್ದಾರೆ.

56
Image Credit : stockPhoto

ಕೀಬೋರ್ಡ್ ವಾರಿಯರ್ಸ್‌ಗೆ ತರಾಟೆ:

'ಹಾವಿನ ಬಗ್ಗೆ ಕನಿಷ್ಠ ಜ್ಞಾನವಿಲ್ಲದ, ಜೀವನದಲ್ಲಿ ಒಂದೇ ಒಂದು ಹಾವನ್ನೂ ರಕ್ಷಿಸದ, ಕೇವಲ ಮೊಬೈಲ್ ಮತ್ತು ಕಂಪ್ಯೂಟರ್ ಮುಂದೆ ಕುಳಿತು ಪರಿಸರ ರಕ್ಷಣೆ ಮಾತನಾಡುವ ಬೆಂಗಳೂರಿನಂತಹ ನಗರಗಳ 'ಸ್ವಯಂಘೋಷಿತ ಪರಿಸರವಾದಿಗಳು' ಇದಕ್ಕೆ ಪ್ರಮುಖ ಕಾರಣ. ಇವರು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿ, ಸರ್ಕಾರದ ಮೇಲೆ ಅನಗತ್ಯ ಒತ್ತಡ ತಂದು ನೈಜ ಉರಗ ರಕ್ಷಕರ ಕೈಕಟ್ಟಿ ಹಾಕಿದ್ದಾರೆ' ಎಂದು ಕಿಡಿಕಾರಿದ್ದಾರೆ.

66
Image Credit : @GowriKalinga

ಕೇರಳ, ತಮಿಳುನಾಡು ಮಾದರಿ ಅಗತ್ಯ:

'ಪಕ್ಕದ ಕೇರಳ ಮತ್ತು ತಮಿಳುನಾಡು ಸರ್ಕಾರಗಳನ್ನು ನೋಡಿ ಕಲಿಯಬೇಕಿದೆ. ಅಲ್ಲಿ ಸರ್ಕಾರವೇ ವಾಲಂಟಿಯರ್‌ಗಳನ್ನು (ಸ್ವಯಂಸೇವಕರು) ಒಗ್ಗೂಡಿಸಿಕೊಂಡು ‘ಸರ್ಪ’ (SARPA) ದಂತಹ ಮೊಬೈಲ್ ಆ್ಯಪ್ ರೂಪಿಸಿದೆ. ಆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡಲಾಗುತ್ತಿದೆ. ನಮ್ಮಲ್ಲೂ ಇಂತಹ ಪ್ರಾಯೋಗಿಕ ವ್ಯವಸ್ಥೆ ಬರಬೇಕಿದೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ, ಎಚ್ಚರದಿಂದಿರಿ, ಆಸ್ಪತ್ರೆಗೆ ಬೇಗ ದಾಖಲಾಗಿ ಜೀವ ಉಳಿಸಿಕೊಳ್ಳಿ' ಎಂದು ಗೌರಿ ಕಾಳಿಂಗ ಮನವಿ ಮಾಡಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಹಾವಿನ ವಿಷ
ಹಾವು
ಭಾರತ ಸುದ್ದಿ

Latest Videos
Recommended Stories
Recommended image1
ಮಳೆಗೆ ತಂದ ಛತ್ರಿ ಬಿಸಿಲಿಗೆ ಆಯ್ತು; ಅಂಕೋಲಾದಲ್ಲಿ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌
Recommended image2
Agumbe Ghat: ಕರಾವಳಿ–ಮಲೆನಾಡು, ಉತ್ತರ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಸುಗಮ
Recommended image3
SSLC ಟಾಪರ್ಸ್‌ಗಳಿಗೆ ಉಚಿತ ದೆಹಲಿ ಪ್ರವಾಸದ ಭಾಗ್ಯ; ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಗ್ಯಾರಂಟಿ!
Related Stories
Recommended image1
ಭಾರತದಲ್ಲಿ ಕಾಣದ ಅಪರೂಪದ 'ಬ್ಯಾಂಡೆಡ್ ಕ್ರೇಟ್' ಹಾವು ತೆಲಂಗಾಣದಲ್ಲಿ ಪ್ರತ್ಯಕ್ಷ, ಇದರ ಕಡಿತಕ್ಕೆ ಬದುಕಿರೋರೇ ಇಲ್ಲ!
Recommended image2
100 ವರ್ಷದ ಸಾಧನೆ: ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡುಹಿಡಿದ ಬೆಂಗಳೂರು ಐಐಎಸ್‌ಸಿ ವಿಜ್ಞಾನಿಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved