MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕದಂಬ ನೌಕಾನೆಲೆಗೆ 'ಐಎನ್‌ಎಸ್ ಮಾಲ್ವಾಣ್' ಸೇರ್ಪಡೆ; ಸಮುದ್ರದಾಳದ ಶತ್ರುಗಳಿಗೆ ಸಿಂಹಸ್ವಪ್ನ ಈ ಸ್ವದೇಶಿ ಯುದ್ಧನೌಕೆ!

ಕದಂಬ ನೌಕಾನೆಲೆಗೆ 'ಐಎನ್‌ಎಸ್ ಮಾಲ್ವಾಣ್' ಸೇರ್ಪಡೆ; ಸಮುದ್ರದಾಳದ ಶತ್ರುಗಳಿಗೆ ಸಿಂಹಸ್ವಪ್ನ ಈ ಸ್ವದೇಶಿ ಯುದ್ಧನೌಕೆ!

ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ 'ಐಎನ್‌ಎಸ್ ಮಾಲ್ವಾಣ್' (INS Malvan) ಯುದ್ಧನೌಕೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ನಿರ್ಮಿಸಲಾದ ಈ ನೌಕೆಯು, ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

2 Min read
Author : Sathish Kumar KH
Published : Jul 22 2026, 10:03 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಉತ್ತರ ಕನ್ನಡ/ಕಾರವಾರ (ಜು.22): ಭಾರತೀಯ ನೌಕಾಪಡೆಯ (Indian Navy) ಶಕ್ತಿಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂಬ ಖ್ಯಾತಿಯ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ (INS Kadamba Naval Base) ಸ್ವದೇಶಿ ನಿರ್ಮಿತ 'ಐಎನ್‌ಎಸ್ ಮಾಲ್ವಾಣ್' (INS Malvan) ಯುದ್ಧನೌಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಆತ್ಮನಿರ್ಭರ ಭಾರತದ ಶಕ್ತಿ (Strength of Atmanirbhar Bharat):

ಈ ಯುದ್ಧನೌಕೆಯು ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' (Make in India) ಅಭಿಯಾನದಡಿ ಕೇರಳದ ಕೊಚ್ಚಿ ಶಿಪ್ ಯಾರ್ಡ್‌ನಲ್ಲಿ (Kochi Shipyard) ನಿರ್ಮಾಣವಾಗಿದೆ. ವಿಶೇಷವೆಂದರೆ, ಈ ನೌಕೆಯಲ್ಲಿ ಶೇಕಡಾ 80 ರಷ್ಟು ಸ್ವದೇಶಿ ತಂತ್ರಜ್ಞಾನವನ್ನು (Indigenous Technology) ಬಳಸಲಾಗಿದ್ದು, ಇದು ಭಾರತದ ರಕ್ಷಣಾ ವಲಯದ ಸ್ವಾವಲಂಬನೆಗೆ ಸಾಕ್ಷಿಯಾಗಿದೆ.

Related Articles

Related image1
Warship: ಸೈಪ್ರಸ್ ರಕ್ಷಣೆಗೆ ಹೊರಟ ಬ್ರಿಟನ್ ಯುದ್ಧನೌಕೆ; ರಾಯಲ್ ನೇವಿ ವಾರ್‌ಶಿಪ್ ಶಕ್ತಿಗೆ ಬೆಚ್ಚಿಬಿದ್ದ ಜಗತ್ತು!!
Related image2
ದಾಳಿಗಿಳಿದ ಐಎನ್‌ಎಸ್‌ ವಿಕ್ರಾಂತ್ ಯುದ್ಧನೌಕೆ: ಕರಾಚಿಯ ಬಂದರು ಪುಡಿಪುಡಿ
36
Image Credit : Asianet News

ತಾಂತ್ರಿಕ ವಿಶೇಷತೆಗಳು (Technical Specifications):

'ಐಎನ್‌ಎಸ್ ಮಾಲ್ವಾಣ್' ಕೇವಲ ಗಾತ್ರದಲ್ಲಿ ಮಾತ್ರವಲ್ಲ, ವೇಗ ಮತ್ತು ದಾಳಿಯ ಸಾಮರ್ಥ್ಯದಲ್ಲೂ ಅತ್ಯಂತ ಬಲಿಷ್ಠವಾಗಿದೆ.

ಅಳತೆ: ಈ ನೌಕೆಯು 78 ಮೀಟರ್ ಉದ್ದ (Length), 11.26 ಮೀಟರ್ ಅಗಲ ಹಾಗೂ 2.7 ಮೀಟರ್ ಆಳವನ್ನು ಹೊಂದಿದೆ.

ವೇಗ: ಸಮುದ್ರದಲ್ಲಿ ಗಂಟೆಗೆ 25 ನಾಟಿಕಲ್ ಮೈಲ್ (Nautical Miles) ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಹಡಗಿಗಿದೆ.

46
Image Credit : Asianet News

ಈ ಯುದ್ಧನೌಕೆಯಲ್ಲಿ 7 ಅಧಿಕಾರಿಗಳು ಸೇರಿದಂತೆ ಒಟ್ಟು 57 ಸೇಲರ್ಸ್‌ಗಳು (Sailors) ಏಕಕಾಲಕ್ಕೆ ಕಾರ್ಯನಿರ್ವಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಮಲ್ವಾನ್ ಯುದ್ಧ ನೌಕೆಯ ವೇಳೆ ನೌಕಾಪಡೆಯ ವಿವಿಧ ಗಣ್ಯರು ಹಾಗೂ ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.

56
Image Credit : Asianet News

ಜಲಾಂತರ್ಗಾಮಿಗಳ ಬೇಟೆಗಾರ (The Submarine Hunter):

ಈ ನೌಕೆಯ ಪ್ರಮುಖ ಉದ್ದೇಶ ಸಮುದ್ರದ ಆಳದಲ್ಲಿ ಅವಿತಿರುವ ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳನ್ನು (Submarines) ಪತ್ತೆ ಹಚ್ಚಿ ಹೊಡೆದುರುಳಿಸುವುದಾಗಿದೆ. ಇದಕ್ಕಾಗಿ ಹಡಗಿನ ತಳಭಾಗದಲ್ಲಿ ಅತ್ಯಾಧುನಿಕ 'ಅಭಯ್ ಸೋನಾರ್' (Abhay Sonar) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸಮುದ್ರದಲ್ಲಿ ಧ್ವನಿ ತರಂಗಗಳನ್ನು (Sound Waves) ಬಿಡುವ ಮೂಲಕ ಶತ್ರುಗಳ ಜಲಾಂತರ್ಗಾಮಿ ಇರುವಿಕೆಯನ್ನು ನಿಖರವಾಗಿ ಗುರುತಿಸುತ್ತದೆ.

66
Image Credit : Asianet News

ಆತ್ಮರಕ್ಷಣೆ ಮತ್ತು ದಾಳಿ (Defense and Attack):

ಸಮುದ್ರದ ಮೇಲ್ಮೈನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ಆತ್ಮರಕ್ಷಣೆಗಾಗಿ ಈ ನೌಕೆಯಲ್ಲಿ 30 ಮಿ.ಮೀ ನೇವಲ್ ಸರ್ಫೇಸ್ ಗನ್ (Naval Surface Gun) ಅಳವಡಿಸಲಾಗಿದೆ. ಜಲಾಂತರ್ಗಾಮಿ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಉಪಕರಣಗಳನ್ನು ಹೊಂದಿರುವ ಈ ನೌಕೆಯು ಭಾರತದ ಕರಾವಳಿ ಭದ್ರತೆಗೆ (Coastal Security) ದೊಡ್ಡ ಬಲ ತುಂಬಲಿದೆ.

ಕಾರವಾರದ ನೌಕಾನೆಲೆಗೆ ಈ ಯುದ್ಧನೌಕೆಯ ಸೇರ್ಪಡೆಯಿಂದಾಗಿ ಹಿಂದೂ ಮಹಾಸಾಗರ ವಲಯದಲ್ಲಿ (Indian Ocean Region) ಭಾರತದ ಕಣ್ಗಾವಲು ಮತ್ತು ರಕ್ಷಣಾ ವ್ಯವಸ್ಥೆ ಇನ್ನಷ್ಟು ಹರಿತವಾಗಲಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತೀಯ ನೌಕಾಪಡೆ
ಉತ್ತರ ಕನ್ನಡ
ಭಾರತೀಯ ಸೇನೆ

Latest Videos
Recommended Stories
Recommended image1
ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗ ಮಂಜೂರಾತಿಗೆ ಸಚಿವ ವಿ ಸೋಮಣ್ಣ ಭರವಸೆ
Recommended image2
ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಕೇಸ್; ತಲೆಮರೆಸಿಕೊಂಡಿದ್ದ ಬಸವರಾಜ್ ಸೇರಿ 11 ಜನರೂ ಅರೆಸ್ಟ್!
Recommended image3
Alamatti Dam: ನೀರಾವರಿಗೆ ಹರಿಯುತ್ತಾ ಕೃಷ್ಣಾ ನೀರು? ರಾಮಲಿಂಗಾ ರೆಡ್ಡಿ ಹೇಳಿದ್ದೇನು?
Related Stories
Recommended image1
Warship: ಸೈಪ್ರಸ್ ರಕ್ಷಣೆಗೆ ಹೊರಟ ಬ್ರಿಟನ್ ಯುದ್ಧನೌಕೆ; ರಾಯಲ್ ನೇವಿ ವಾರ್‌ಶಿಪ್ ಶಕ್ತಿಗೆ ಬೆಚ್ಚಿಬಿದ್ದ ಜಗತ್ತು!!
Recommended image2
ದಾಳಿಗಿಳಿದ ಐಎನ್‌ಎಸ್‌ ವಿಕ್ರಾಂತ್ ಯುದ್ಧನೌಕೆ: ಕರಾಚಿಯ ಬಂದರು ಪುಡಿಪುಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved