MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹುಬ್ಬಳ್ಳಿ ಲವ್ ಜಿಹಾದ್: ತಮ್ಮ ಸಮೀರ್‌ಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದಳಾ ಅಕ್ಕ ತೈಸೀಮ್? ಸ್ಫೋಟಕ ಮಾಹಿತಿ!

ಹುಬ್ಬಳ್ಳಿ ಲವ್ ಜಿಹಾದ್: ತಮ್ಮ ಸಮೀರ್‌ಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದಳಾ ಅಕ್ಕ ತೈಸೀಮ್? ಸ್ಫೋಟಕ ಮಾಹಿತಿ!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದಡಿ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣದಲ್ಲಿ ಆತನ ಸಹೋದರಿ ತೈಸೀಮ್ ಮುಲ್ಲಾಳೇ ಕಿಂಗ್‌ಪಿನ್ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರನಿಗೆ ಪರಿಚಯಿಸಿ, ಪಾರ್ಟಿಗಳಲ್ಲಿ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನಲಾಗಿದೆ.

2 Min read
Author : Sathish Kumar KH
Published : Apr 03 2026, 09:37 PM IST
Share this Photo Gallery
  • FB
  • TW
  • Linkdin
  • Whatsapp
15
ಲವ್ ಜಿಹಾದ್ ಕೇಸಿಗೆ ಅಕ್ಕನೇ ಕಿಂಗ್‌ಪಿನ್?
Image Credit : Asianet News

ಲವ್ ಜಿಹಾದ್ ಕೇಸಿಗೆ ಅಕ್ಕನೇ ಕಿಂಗ್‌ಪಿನ್?

ಧಾರವಾಡ/ಹುಬ್ಬಳ್ಳಿ (ಏ.03): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದಡಿ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಪ್ರೀತಿಯ ನಾಟಕವಾಡಿ ಅತ್ಯಾ*ಚಾರ ಎಸಗಿದ್ದಲ್ಲದೆ, ಈತ ಅನೇಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿದ್ದ ಎನ್ನುವ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. ಅಚ್ಚರಿಯ ವಿಷಯವೆಂದರೆ, ಈತನ ಈ ಕೃತ್ಯಗಳಿಗೆ ಸ್ವತಃ ಈತನ ಸಹೋದರಿಯೇ ಸಾಥ್ ನೀಡುತ್ತಿದ್ದಳು ಎಂಬ ದೂರು ಕೇಳಿಬಂದಿದೆ.

25
ಸಹೋದರಿಯೇ ಕಿಂಗ್‌ಪಿನ್?
Image Credit : Asianet News

ಸಹೋದರಿಯೇ ಕಿಂಗ್‌ಪಿನ್?

ಈ ಪ್ರಕರಣದಲ್ಲಿ ಸಮೀರ್ ಮುಲ್ಲಾ ಎನ್ನುವ ಆರೋಪಿಗೆ ಆತನ ಸಹೋದರಿ ತೈಸೀಮ್ ಮುಲ್ಲಾ ಪ್ರಮುಖವಾಗಿ ಸಾಥ್ ನೀಡುತ್ತಿದ್ದಳು ಎನ್ನಲಾಗಿದೆ. ಸಂತ್ರಸ್ತೆ ಯುವತಿ ಮೊದಲು ತೈಸೀಮ್ ಮುಲ್ಲಾಳನ್ನು ಏರೋಬಿಕ್ಸ್ ಕ್ಲಾಸ್‌ನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಅಲ್ಲಿಂದ ಶುರುವಾದ ಇವರ ಸ್ನೇಹವನ್ನು ತೈಸೀಮ್ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದ್ದಾಳೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರ ಸಮೀರ್‌ಗೆ ಪರಿಚಯಿಸಿದ್ದೇ ಈ ತೈಸೀಮ್ ಎಂದು ಹೇಳಲಾಗುತ್ತಿದೆ.

Related Articles

Related image1
ಹುಬ್ಬಳ್ಳಿ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಸಮೀರನ ಅತ್ಯಾ*ಚಾರ, ಬ್ಲ್ಯಾಕ್‌ಮೇಲ್ ತಂತ್ರ ಬಿಚ್ಚಿಟ್ಟ ಸಂತ್ರಸ್ತ ಯುವತಿ!
Related image2
ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!
35
ಪಾರ್ಟಿಗಳಲ್ಲಿ ಯುವತಿಯನ್ನು ಬಿಟ್ಟು ಹೋಗುತ್ತಿದ್ದಳು!
Image Credit : Asianet News

ಪಾರ್ಟಿಗಳಲ್ಲಿ ಯುವತಿಯನ್ನು ಬಿಟ್ಟು ಹೋಗುತ್ತಿದ್ದಳು!

ತೈಸೀಮ್ ಮುಲ್ಲಾ ಸಂತ್ರಸ್ತ ಯುವತಿಯೊಂದಿಗೆ ಅತಿಯಾದ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಯಾವುದೇ ಬರ್ತ್‌ಡೇ ಪಾರ್ಟಿ ಇರಲಿ ಅಥವಾ ಹೋಟೆಲ್‌ಗಳಿಗೆ ಹೋಗುವ ಸಂದರ್ಭವಿರಲಿ, ತೈಸೀಮ್ ಸಂತ್ರಸ್ತೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ತನ್ನ ಸಹೋದರ ಸಮೀರ್‌ನನ್ನು ಕರೆಸಿ, ಅವರಿಬ್ಬರ ನಡುವೆ ಸಂಬಂಧ ಬೆಳೆಯುವಂತೆ ಮಾಡುತ್ತಿದ್ದಳು. ಪಾರ್ಟಿಯ ಮಧ್ಯದಲ್ಲಿ ತೈಸೀಮ್ ತನ್ನ ಪತಿಯೊಂದಿಗೆ ಅಲ್ಲಿಂದ ಹೊರಟು ಹೋಗಿ, ಸಂತ್ರಸ್ತ ಯುವತಿಯನ್ನು ಸಮೀರ್ ಜೊತೆ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

45
ಮೊಬೈಲ್‌ನಲ್ಲಿ ನೂರಾರು ಯುವತಿಯರ ಫೋಟೋಗಳು!
Image Credit : Asianet News

ಮೊಬೈಲ್‌ನಲ್ಲಿ ನೂರಾರು ಯುವತಿಯರ ಫೋಟೋಗಳು!

ಪೊಲೀಸರು ವಶಕ್ಕೆ ಪಡೆದಿರುವ ಸಮೀರ್ ಮುಲ್ಲಾನ ಮೊಬೈಲ್ ಫೋನ್ ಈಗ ಹತ್ತಾರು ರಹಸ್ಯಗಳನ್ನು ಹೊರಹಾಕುತ್ತಿದೆ. ಈತನ ಮೊಬೈಲ್‌ನಲ್ಲಿ ಹತ್ತಾರು ಹಿಂದೂ ಯುವತಿಯರ ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಕೇವಲ ಒಬ್ಬ ಯುವತಿಯಲ್ಲದೆ, ಜಿಮ್‌ಗೆ ಬರುತ್ತಿದ್ದ ಮತ್ತು ಇತರ ಸಂಪರ್ಕಗಳ ಮೂಲಕ ಪರಿಚಯವಾಗಿದ್ದ ಹಲವಾರು ಹಿಂದೂ ಯುವತಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ ಎಂಬ ಸಂಶಯ ದಟ್ಟವಾಗಿದೆ.

55
ವಿಡಿಯೋಗಳು ಬಯಲು:
Image Credit : Asianet News

ವಿಡಿಯೋಗಳು ಬಯಲು:

ಈಗಾಗಲೇ ಸಾರ್ವಜನಿಕವಾಗಿರುವ ಕೆಲವು ವಿಡಿಯೋಗಳಲ್ಲಿ ತೈಸೀಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಸಂತ್ರಸ್ತ ಯುವತಿ ಒಟ್ಟಾಗಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗಳು ಈ ಪ್ರಕರಣದಲ್ಲಿ ತೈಸೀಮ್ ಮತ್ತು ಆಕೆಯ ಪತಿಯ ಪಾತ್ರವಿರುವುದನ್ನು ಪುಷ್ಟೀಕರಿಸುವಂತಿದೆ. ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ಸೆಳೆದು, ನಂತರ ಅತ್ಯಾ*ಚಾರ ಎಸಗಿ ಬ್ಲ್ಯಾಕ್‌ಮೇಲ್ ಮಾಡುವ ಈ ವ್ಯವಸ್ಥಿತ ಜಾಲದ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ. ಹಿಂದೂ ಸಂಘಟನೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮೀರ್ ಮಾತ್ರವಲ್ಲದೆ ಆತನಿಗೆ ಸಾಥ್ ನೀಡಿದ ಕುಟುಂಬಸ್ಥರನ್ನೂ ಬಂಧಿಸಬೇಕೆಂದು ಒತ್ತಾಯಿಸಿವೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಹುಬ್ಬಳ್ಳಿ
ಪ್ರೀತಿ
ಲವ್ ಜಿಹಾದ್

Latest Videos
Recommended Stories
Recommended image1
ಬಿಜೆಪಿಗರಿಗೆ ಧೈರ್ಯ ಇದ್ದರೆ ಹಿಂದಿ ಜಾರಿ ಮಾಡ್ತೇವೆ ಎನ್ನಲಿ: ಸಚಿವ ಮಧು ಬಂಗಾರಪ್ಪ ಸವಾಲು
Recommended image2
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹತ್ತಿದ ಪೊಲೀಸ್ ಪೇದೆ ಕಾರ್; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
Recommended image3
ಸಚಿವ ವಿ. ಸೋಮಣ್ಣ ಭಾಷಣಕ್ಕೆ ಬಾಗಲಕೋಟೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ; ಉಪ ಚುನಾವಣೆಯಲ್ಲಿ ವಾಗ್ವಾದ!
Related Stories
Recommended image1
ಹುಬ್ಬಳ್ಳಿ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಸಮೀರನ ಅತ್ಯಾ*ಚಾರ, ಬ್ಲ್ಯಾಕ್‌ಮೇಲ್ ತಂತ್ರ ಬಿಚ್ಚಿಟ್ಟ ಸಂತ್ರಸ್ತ ಯುವತಿ!
Recommended image2
ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved